Wednesday, 29 May 2019

8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


ಮೊದಲ ಫಲ - ಸೋತಾಪನ್ನ (ದ್ವೀತೀಯ ಆರ್ಯ)

ಆ ಜ್ಞಾನದ ನಂತರ 2 ಅಥವಾ 3 ಫಲಚಿತ್ತವು ಉದಯಿಸುತ್ತದೆ. ಅದು ಅದರ ಪರಿಣಾಮವಾಗಿದೆ. ಇವು ಆಸವಗಳ ನಾಶದಿಂದಾಗಿವೆ. ಕೆಲವರ ಪ್ರಕಾರ 1 ರಿಂದ 5 ಫಲಚಿತ್ತಗಳು ಬದಲಿಸುತ್ತದೆ. ಗೋತ್ರಭು ಜ್ಞಾನವು ಅನುಲೋಮ ಜ್ಞಾನದ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆ ಮಾಡಲಾರದು ಮತ್ತು ಏಕ ಸರಣಿಯ ರಭಸಗಳು ಹೆಚ್ಚೆಂದರೆ 7 ರಭಸಚಿತ್ತವನ್ನು ಹೊಂದಿರುತ್ತದೆ. ಪರಿಣಾಮವಾಗಿ ಆ ಸರಣಿಯಲ್ಲಿ 2 ಅನುಲೋಮ ಮತ್ತು 1 ಗೋತ್ರಭು ಮತ್ತು ಮಾರ್ಗಚಿತ್ತವು ನಾಲ್ಕನೆಯದಾಗಿದ್ದು 3 ಫಲಚಿತ್ತವನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ 2 ಅಥವಾ 3 ಫಲಚಿತ್ತವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಈ ಹಂತದಲ್ಲಿ ಶ್ರೋತದಲ್ಲಿ ಪ್ರವೇಶಿಸುವವನನ್ನು 2ನೆಯ ಆರ್ಯ ಎನ್ನುತ್ತಾರೆ. ಆತನು ಎಷ್ಟೋ ನಿರ್ಲಕ್ಷಿಸುವಂತಹವನೇ ಆಗಲಿ ಆತನು 7 ಜನ್ಮಕ್ಕಿಂತ ಹೆಚ್ಚು ಜನ್ಮ ಪಡೆಯಲಾರ. ಅದಕ್ಕಿಂತ ಮುಂಚೆಯೇ ಆತನು ದುಃಖ ವಿಮುಕ್ತನಾಗುತ್ತಾನೆ.
ಫಲಚಿತ್ತದ ಅಂತ್ಯದಲ್ಲಿ ಆತನು ಭವಂಗವನ್ನು ಪ್ರವೇಶಿಸುತ್ತಾನೆ. ನಂತರ ಮನೋದ್ವಾರ ಅವಜ್ಜನ ಉದಯಿಸುವುದು. ಅದು ಭವಂಗವನ್ನು ತಡೆಮಾಡಿ ಮಾರ್ಗವನ್ನು ವೀಕ್ಷಿಸುವಂತೆ ಮಾಡುವುದು. ಅದು ಅಳಿದ ನಂತರ 7 ರಭಸಗಳ ಮಾರ್ಗ ಅವಲೋಕನ ಉದಯಿಸಬಹುದು. ನಂತರ ಮತ್ತೆ ಭವಂಗ... ಇತ್ಯಾದಿ ನಂತರ ಮತ್ತೆ ಪುನರ್ ಅವಲೋಕಿಸುತ್ತಾನೆ. ಹೀಗೆ ಆತನು ಮತ್ತೆ ಮತ್ತೆ ಮಾರ್ಗವನ್ನು ಮತ್ತು ಫಲವನ್ನು ಪುನರ್ ಅವಲೋಕಿಸಿದ ನಂತರ ಆತನಿಗೆ ಬಂಧನಗಳು ಕಡಿಯಲ್ಪಟ್ಟಿರುವುದು ಮತ್ತು ಉಳಿದಿರುವ ಬಂಧನಗಳು ಗೋಚರಿಸುತ್ತದೆ ಮತ್ತು ಆತನು ನಿಬ್ಬಾಣವನ್ನು ವೀಕ್ಷಿಸುತ್ತಾನೆ.
ಸೋತಾಪನ್ನಾನಿಗೆ 5 ರೀತಿಯ ಪುನರ್ ಅವಲೋಕನವಿದೆ. ಹಾಗೆಯೇ ಸಕದಾಗಾಮಿ ಮತ್ತು ಅನಾಗಾಮಿಗಳನ್ನು ಸದಾ ಪುನರ್ ಅವಲೋಕನವಿದೆ. ಆದರೆ ಅರಹಂತರಿಗೆ ಯಾವ ಪುನರ್ ಅವಲೋಕನವಿಲ್ಲ. ಏಕೆಂದರೆ ಅವರಲ್ಲಿ ಯಾವ ಬಂಧನವಾಗಲಿ ಅಥವಾ ಕಶ್ಮಲಗಳಾಗಲಿ ಇರುವುದಿಲ್ಲ. ಒಟ್ಟು ಗರಿಷ್ಠ 19 ಪುನರ್ ಅವಲೋಕನಗಳಿರುತ್ತದೆ.
ಸಮುದ್ರದಲ್ಲಿ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕನು ದೂರದಿಂದ ಭೂ ಪ್ರದೇಶದ ಬೆಳಕನ್ನು ಕಂಡು ಮರೆಯಾದಂತೆ ಧ್ಯಾನಿಗೆ ಇಲ್ಲಿ ನಿಬ್ಬಾಣದ ದರ್ಶನವಾಗುತ್ತದೆ. ಮೊದಲಬಾರಿಗೆ ನಿಬ್ಬಾಣ ಸಾಕ್ಷಾತ್ಕರಿಸುವುದರಿಂದ, ನಿಬ್ಬಾಣದ ಹೊಳೆಯಲ್ಲಿ ಪ್ರವೇಶಿಸುವುದರಿಂದಾಗಿ ಆತನಿಗೆ ಸೋತಾಪನ್ನ ಎನ್ನುತ್ತಾರೆ.
ಈ ಹೊಳೆಯಲ್ಲಿ ಗೆದ್ದ ವಿಜಯಶಾಲಿ (ಸೋತಾಪನ್ನ) ಈಗ ಪ್ರಾಪಂಚಿಕನಲ್ಲ (ಪುತುಜ್ಜನ) ಬದಲಾಗಿ ಆರ್ಯನಾಗಿರುತ್ತಾನೆ (ಶ್ರೇಷ್ಠ).

ಆತನಲ್ಲಿ 3 ಸಂಕೋಲೆಗಳು ಕತ್ತರಿಸಲ್ಪಟ್ಟಿರುತ್ತದೆ. ಅವೆಂದರೆ :

1. ಸಕ್ಕಾಯದಿಟ್ಟಿ - ಅಂದರೆ ಆತ್ಮ ಇದೆ ಎನ್ನುವ ದೃಷ್ಟಿ ಮತ್ತು ಸಾವೇ ದೇಹದ ಕೊನೆ ಎಂಬ ದೃಷ್ಟಿಗಳು ನಾಶವಾಗುತ್ತದೆ.
2. ಸಂಶಯಗಳು - ತ್ರಿರತ್ನದಲ್ಲಿ ಮತ್ತು 3 ಕಾಲದಲ್ಲಿರುವ ಸಂಶಯಗಳೆಲ್ಲಾ ಆತನಲ್ಲಿ ನಾಶವಾಗುತ್ತದೆ.
3. ಸೀಲಬ್ಬತ ಪರಾಮಾಸ : ಅಂದರೆ ಮಿಥ್ಯಾ ಆಚರಣೆಗಳಿಗೆ ಮತ್ತು ಮಿಥ್ಯಾ ಸಮಾರಂಭಗಳಿಗೆ ಅಂಟಿರುವುದು.
ಇವೆಲ್ಲವೂ ಸೋತಾಪನ್ನಾನಲ್ಲಿ ಕತ್ತರಿಸಲ್ಪಟ್ಟಿರುತ್ತದೆ.
ಸೋತಾಪನ್ನರವರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ಅಪಾರ ಅಚಲ ಶ್ರದ್ಧೆಯಿಂದ ಕೂಡಿರುತ್ತಾರೆ.
ಸೋತಾಪನ್ನರವರು ಎಂದಿಗೂ ಪಂಚಶೀಲವನ್ನು ಭಂಗ ಮಾಡುವುದಿಲ್ಲ ಮತ್ತು ಅವರು ಅಪಾಯ ಲೋಕಗಳಾವುದರಲ್ಲೂ ಜನಿಸುವುದಿಲ್ಲ ಮತ್ತು ಅವರು ಬೋಧಿಗೆ ವಾಲಿರುವುದರಿಂದಾಗಿ ಹೆಚ್ಚೆಂದರೆ 7 ಜನ್ಮಗಳನ್ನು ಹೊಂದಿರುತ್ತಾರೆ. ಅದರ ಒಳಗೆಯೇ ನಿಬ್ಬಾಣವನ್ನು ಪಡೆಯುತ್ತಾರೆ ಮತ್ತು ಅವರಿಗೆ 7 ಸಂಕೋಲೆಗಳು ಮಾತ್ರ ಉಳಿದಿರುತ್ತದೆ. ಮೆತ್ತಾ ಕರುಣೆಯಿಂದ ಕೂಡಿರುವ ಅವರು ಪರರನ್ನು ಸೋತಾಪನ್ನ ಮಾಡಲು ಸದಾ ಪ್ರಯತ್ನಶೀಲರಾಗಿರುತ್ತಾರೆ ಹಾಗು ಸೋತಾಪನ್ನರಲ್ಲಿ ಈ 5 ದೋಷಗಳು ಇರುವುದಿಲ್ಲ.
1. ಬೇರೆಯವರು ಬೋಧನೆ ಮಾಡಿದರೆ ಬೇಸರಪಡುವುದು (ಮಾಕ್ಕೋ)
2. ತನ್ನನ್ನು ಶ್ರೇಷ್ಠರಿಗೆ ಹೋಲಿಸಿಕೊಳ್ಳುವುದು (ಫಲಿಸೋ)
3. ಅಸೂಯೆ (ಇಸ್ಸಾ)
4. ಸ್ವಾರ್ಥ (ಮಚ್ಚರಿಯ)
5. ಮಾಯಾವಿಯತೆ (ಮಾಯಾ) ಅಂದರೆ ಮೋಸ, ವಂಚನೆ.

ದ್ವಿತೀಯ ಮಾರ್ಗದ ಜ್ಞಾನ - 3ನೆಯ ಆರ್ಯ :

ಇಲ್ಲಿ ಸೋತಾಪನ್ನರವರು ಪದೇ ಪದೇ ಮಾರ್ಗವನ್ನು ವೀಕ್ಷಿಸಿ, ಇಂದ್ರೀಯ ಭೋಗಗಳಾದ ಲೋಭವನ್ನು ಮತ್ತು ದ್ವೇಷವನ್ನು ಕ್ಷಯಿಸುತ್ತಾರೆ, ದುರ್ಬಲಗೊಳಿಸುತ್ತಾರೆ ಮತ್ತು ಅವರು ಇಂದ್ರೀಯಗಳನ್ನು, ಬಲಗಳನ್ನು ಸಪ್ತಬೋಧಿ ಅಂಗಗಳನ್ನು ಬಲಿಷ್ಠಗೊಳಿಸಿ, ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣ ವೀಕ್ಷಿಸುತ್ತಾ, ಜ್ಞಾನಗಳಲ್ಲಿ ವೃದ್ಧಿಯಾಗುತ್ತಾ ಮುಂದುವರೆಯುತ್ತಾರೆ. ನಂತರ ಸಂಖಾರಗಳಲ್ಲಿ ಉಪೇಖ್ಖಾ ತಾಳಿ ಅನುಲೋಮ ನ್ಯಾನ ಪಡೆದು, ಗೋತ್ರಭು ಜ್ಞಾನ ಉದಯಿಸುತ್ತದೆ. ನಂತರ ಸಕದಾಗಾಮಿ (ಒಮ್ಮೆ ಮಾತ್ರ ಹಿಂತಿರುಗುವವ) ಮಾರ್ಗವು ಉದಯಿಸುತ್ತದೆ. ಸಕದಾಗಾಮಿಯ ಮಾರ್ಗದ ಜ್ಞಾನವು ಸಿಗುತ್ತದೆ.

ದ್ವಿತೀಯ ಫಲ - 4ನೆಯ ಆರ್ಯ : ಸಕದಾಗಾಮಿ :

ಇಲ್ಲಿ ಫಲವಿನ್ಯಾನವನ್ನು ಹಿಂದಿನ ಪ್ರಕ್ರಿಯೆಯಂತೆಯೆ ಅಥರ್ೈಸಿಕೊಳ್ಳುವುದು ಮತ್ತು ಇಲ್ಲಿ ಸಕದಾಗಾಮಿಯು (ಒಮ್ಮೆ ಮರಳುವವ) 4ನೇಯ ಆರ್ಯನಾಗಿದ್ದಾರೆ. ಅವರು ದುಃಖವನ್ನು ಅಂತ್ಯ ಮಾಡಲು ಒಮ್ಮೆ ಮಾತ್ರ ಲೋಕಕ್ಕೆ ಹಿಂತಿರುಗುತ್ತಾರೆ.
ಮುಂದೆ ಬರುವಂತಹ ಪುನರ್ ಅವಲೋಕನವನ್ನು ಹಿಂದೆಯೇ ವಿವರಿಸಲಾಗಿದೆ.
ಸಕದಾಗಾಮಿತ್ವವು ಎರಡನೆಯ ಹಂತದ ಸಂತತ್ವವಾಗಿದೆ. ಇಲ್ಲಿ ಇವರಲ್ಲಿ ಕಾಮರಾಗ ಮತ್ತು ಪಟಿಘ (ದ್ವೇಷ) ಬಹುಪಾಲು ನಾಶವಾಗಿರುತ್ತದೆ. ಇವರಿಗೆ ಒಮ್ಮೆ ಮರಳುವವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಮಾನವರಾಗಿ ಒಮ್ಮೆ ಮಾತ್ರ ಜನಿಸಿ ನಂತರ ಅರಹಂತರಾಗುತ್ತಾರೆ.

ತೃತೀಯ ಮಾರ್ಗದ ಜ್ಞಾನ - 5ನೆಯ ಆರ್ಯ :

ಈ ರೀತಿಯಾಗಿ ಪುನರ್ ಅವಲೋಕಿಸಿ ಇಲ್ಲಿ ಸಕಾದಗಾಮಿಯು ವಜರ್ಿಸುವ ಮಹತ್ಕಾರ್ಯದಲ್ಲಿ ತಲ್ಲೀನರಾಗುತ್ತಾರೆ. ಅವರು ದ್ವೇಷ ಮತ್ತು ಇಂದ್ರೀಯ ಸುಖಗಳಲ್ಲಿರುವ ಲೋಭವನ್ನು ಪೂರ್ಣವಾಗಿ ನಿಶ್ಶೇಶವಾಗಿ ಪರಿತ್ಯಜಿಸುತ್ತಾರೆ. ಅವರು ಪಂಚೇಂದ್ರಿಯಗಳನ್ನು, ಪಂಚಬಲಗಳನ್ನು ಮತ್ತು ಸಪ್ತಬೋಧಿ ಅಂಗಗಳನ್ನು ಒಟ್ಟುಗೊಳಿಸಿ ಪಂಚಖಂಧಗಳಲ್ಲಿ ತ್ರಿಲಕ್ಷಣ ಜ್ಞಾನ ಅರಿಯಲು ಪ್ರಾರಂಭಿಸುತ್ತಾರೆ ಮತ್ತು ನಿರಂತರ ಅಭಿವೃದ್ಧಿಪರ ಜ್ಞಾನಗಳನ್ನು ಅರಿಯುತ್ತಿರುತ್ತಾರೆ.
ಯಾವಾಗ ಅವರು ಈ ರೀತಿಯಾಗಿ ಮಾಡುವರೋ, ಅಗ ಸಂಖಾರಗಳಲ್ಲಿ ಉಪೇಕ್ಷೆ ತಾಳುತ್ತಾರೆ. ಅನುಲೋಮ ಜ್ಞಾನ ಮತ್ತು ಗೋತ್ರಭು ಜ್ಞಾನವು ಸಹಾ ಹಿಂದೆ ವಿವರಿಸಿದ್ದಂತೆಯೇ ಒಂದೇಬಾರಿ ಗಮನ ನೀಡಿದ್ದರಿಂದಾಗಿ ಉದಯಿಸುತ್ತದೆ. ಆಗ ಆನಾಗಾಮಿಯ ಮಾರ್ಗದ ಜ್ಞಾನವು ಗೋತ್ರಭು ಜ್ಞಾನದ ಹಿಂದೆಯೇ ಲಭಿಸುತ್ತದೆ. ಇದು ಅನಾಗಾಮಿ ಮಾರ್ಗದ ಜ್ಞಾನವಾಗಿದೆ.

ತೃತೀಯ ಫಲಜ್ಞಾನ - 6ನೆಯ ಉದಾತ್ತ ಪುರುಷ (ಆರ್ಯ) (ಅನಾಗಾಮಿ)

ಫಲಜ್ಞಾನವನ್ನು ಈ ಹಿಂದಿನಂತೆಯೇ ಆರ್ಥಮಾಡಿಕೊಳ್ಳಬೇಕು ಮತ್ತು ಈ ಸಂದರ್ಭದಲ್ಲಿ ಹಿಂತಿರುಗದವ (ಅನಾಗಾಮಿ)ಯ 6ನೇ ಆರ್ಯನೆಂದು ಕರೆಯುತ್ತಾರೆ. ಅವರ ಮರಣದ ನಂತರ ಯೋಗ್ಯ ಸ್ಥಳದಲ್ಲಿ ಹುಟ್ಟುತ್ತಾರೆ ಮತ್ತು ಅಲ್ಲಿ ಅವರು ಪೂರ್ಣವಾದ ಸಾಧನೆಯನ್ನು ಅಂದರೆ ಪೂರ್ಣ ಆರಿಹೋಗುವಿಕೆ ಪ್ರಾಪ್ತಿಮಾಡಿ ಮತ್ತೆ ಇಲ್ಲಿ ಬಾರದಂತಹ ಈ ಲೋಕಕ್ಕೆ ಬಾರದಂತಹ ಸ್ಥಿತಿಯನ್ನು ಪಡೆಯುತ್ತಾರೆ.
ಆನಾಗಾಮಿಗೆ ಎಂದಿಗೂ ಹಿಂತಿರುಗದವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಎಂದಿಗೂ ಮತ್ತೆ ಮಾನವರಾಗಿ ಹುಟ್ಟುವುದಿಲ್ಲ. ಅವರು ಕೇವಲ ಶುದ್ಧವಾಸವೆಂಬ ಅರೂಪಲೋಕದಲ್ಲಿ ಜನಿಸಿ ಅಲ್ಲಿಂದಲೇ ಅರಹಂತರಾಗುತ್ತಾರೆ. ಇವರಲ್ಲಿ ಕಾಮರಾಗ ಮತ್ತು ದ್ವೇಷಿಗಳು (ಪುಟಿಘ) ಪೂರ್ಣವಾಗಿ ನಶಿಸಿರುತ್ತದೆ.
ಒಂದುವೇಳೆ ಗೃಹಸ್ಥರಲ್ಲಿ ಯಾರಾದರೂ ಅನಾಗಾಮಿಯಾದರೆ ಅವರು ಪೂರ್ಣ ಬ್ರಹ್ಮಚಾರಿಯಾಗಿ ಜೀವಿಸುತ್ತಾರೆ.
ಅರಹಂತರಾಗುವುದು ಅಷ್ಟು ಸುಲಭವಲ್ಲ
ಕೆಲವು ಭಿಕ್ಷುಗಳು, ಶೀಲವಂತರಾಗಿದ್ದರು, ಸಮಾಧಿವಂತರು ಆಗಿದ್ದರು. ಜೊತೆಗೆ ಅನಾಗಾಮಿಗಳಾಗಿದ್ದರು. ಅವರು ಅಷ್ಟಕ್ಕೆ ತೃಪ್ತರಾದರು. ಅವರು ಸುಲಭವಾಗಿ ಅರಹಂತತ್ವವನ್ನು ಪ್ರಾಪ್ತಿ ಮಾಡಬಹುದೆಂದು ನಂಬಿದ್ದರು. ಅವರು ಬುದ್ಧರನ್ನು ಕಾಣಲು ಹೋದರು. ಆಗ ಭಗವಾನರು ಅವರನ್ನು ಕೇಳಿದರು ಭಿಕ್ಷುಗಳೇ ನೀವು ಅರಹತ್ವ ಪ್ರಾಪ್ತಿ ಮಾಡಿ ಆಯಿತೆ? ಆಗ ಅವರು ನಾವು ಯಾವಾಗ ಬೇಕಾದರೂ ಅರಹತ್ವ ಪ್ರಾಪ್ತಿ ಮಾಡಬಲ್ಲೆವು, ನಾವು ಅಂತಹ ಸ್ಥಿತಿಯಲ್ಲಿದ್ದೇವೆ.
ಆಗ ಭಗವಾನರು ಅವರಿಗೆ ಈ ಗಾಥೆಯನ್ನು ನುಡಿದರು.
ಕೇವಲ ಶೀಲದಿಂದಾಗಲಿ, ತಪಚ್ಚರ್ಯೆಯಿಂದಾಗಲಿ, ಬಹು ಶ್ರುತ (ಬಹಳ ಕೇಳಿ ತಿಳಿದಿರುವುದರಿಂದಾಗಲಿ) ದಿಂದಾಗಲಿ, ಸಮಾಧಿ ಲಾಭದಿಂದಾಗಲಿ, ಅಥವಾ ಏಕಾಂತವಾಸದಿಂದಾಗಲಿ, ಅಲೌಕಿಕ ಸುಖದಿಂದಾಗಲಿ, ಓ ಭಿಕ್ಷುಗಳೇ, ನೀವು ತೃಪ್ತಿ ತಾಳದಿರಿ. ಅಸವ ಕ್ಷಯ (ಅರಹತ್ವದಲ್ಲಿ) ಪ್ರಾಪ್ತಿಯವರೆಗೂ ತೃಪ್ತರಾಗಬೇಡಿ.
ಅಲ್ಲಿಯವರೆಗೂ ನೀವು ಅರಹಂತರ ಪರಿಶುದ್ಧ ಸುಖ ಪಡೆಯಲಾರಿರಿ.

ನಾಲ್ಕನೆಯ ಮಾರ್ಗದ ಜ್ಞಾನ - 7ನೆಯ ಆರ್ಯ :

ಈ ರೀತಿಯಾಗಿ ಪುನರಾವಲೋಕಿಸಿ, ತಮ್ಮ ಪರಿತ್ಯಾಗದಲ್ಲಿ ಪ್ರಯತ್ನಶೀಲತೆ ಆರಂಭಿಸುತ್ತಾರೆ. ರೂಪ ಲೋಕದಲ್ಲಿ ಮತ್ತು ಅರೂಪ ಲೋಕದಲ್ಲಿ ಅವರಿಗೆ ಇರುವಂತಹ ರಾಗವನ್ನು ತೊಡೆದುಹಾಕುತ್ತಾರೆ. ಪರಿತ್ಯಾಗ ಮಾಡುತ್ತಾರೆ. ಅಹಂಕಾರವನ್ನು ತೊರೆಯುತ್ತಾರೆ, ಅವಿಶ್ರಾಂತಿಯ ಸ್ಥಿತಿಗೆ ಅತೀತವಾಗಿ ಗೆಲ್ಲುತ್ತಾರೆ ಮತ್ತು ಅಜ್ಞಾನದಿಂದ ಪೂರ್ಣವಾಗಿ ಮುಕ್ತರಾಗುತ್ತಾರೆ. ಕುಶಲಸ್ಥಿತಿಗಳಾದ ಪಂಚೇಂದ್ರಿಯಗಳನ್ನು ಪಂಚಬಲಗಳನ್ನು ಸಪ್ತಬೋಧಿ ಅಂಗಗಳನ್ನು ಒಗ್ಗೂಡಿಸಿ ಸಾಧನೆ ಮಾಡುತ್ತಾರೆ. ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣಗಳನ್ನು ಅರಿಯುತ್ತಾರೆ ಮತ್ತು ಎಲ್ಲಾ ಜ್ಞಾನಗಳನ್ನು ಪಡೆಯುತ್ತಾರೆ.
ಯಾವಾಗ ಅವರು ಹಾಗೆ ಮಾಡುತ್ತಾರೋ, ಸಂಖಾರಗಳಲ್ಲಿ ಉಪೇಖ್ಖಾ ಭಾವನೆ ತಾಳುತ್ತಾರೋ, ಅನುಲೋಮ ಜ್ಞಾನವನ್ನು ಪಡೆಯುತ್ತಾರೋ ಆಗ ಗೋತ್ರಭು ಜ್ಞಾನವು ಒಂದೇಬಾರಿಯ ಗಮನಗೊಡುವಿಕೆಗೆ ಉದಯಿಸುತ್ತದೆ. ನಂತರ ಅರಹಂತರ ಮಾರ್ಗವು ಉದಯಿಸುತ್ತದೆ. ಇದು ಅರಹಂತರ ಮಾರ್ಗದ ಜ್ಞಾನವಾಗಿದೆ.

ನಾಲ್ಕನೆಯ ಫಲ - 8ನೆಯ ಆರ್ಯರು (ಅರಹಂತರು) :

ಮಾರ್ಗ ಜ್ಞಾನದ ನಂತರ ಫಲಚಿತ್ತವನ್ನು ಹಿಂದಿನಂತೆಯೇ ಅರ್ಥಮಾಡಿಕೊಳ್ಳಬೇಕು ಮತ್ತು ಈ ಹಂತದಲ್ಲಿರುವ ಅರಹಂತರಿಗೆ 8ನೆಯ ಆರ್ಯರು ಎನ್ನುತ್ತಾರೆ. ಅವರು ಅಸವಗಳನ್ನು ನಾಶಪಡಿಸಿರುವ ಪರಮಶ್ರೇಷ್ಠರಾಗಿದ್ದಾರೆ. ಅವರು ಅಂತಿಮ ಶರೀರಧಾರಿಗಳಾಗಿದ್ದಾರೆ. ಅವರು ಹೊರೆಯನ್ನು ಇಳಿಸಿದವರಾಗಿದ್ದಾರೆ. ತಮ್ಮ ಅಂತಿಮ ಗುರಿಯನ್ನು ತಲುಪಿದವರಾಗಿದ್ದಾರೆ ಮತ್ತು ತಮ್ಮ ತಡೆಗಳನ್ನು, ಬಂಧನಗಳನ್ನು ನಾಶಪಡಿಸಿದವರಾಗಿದ್ದಾರೆ. ಮತ್ತು ಅವರು ತಮ್ಮ ಪರಮಾರ್ಥ ಜ್ಞಾನದಿಂದಾಗಿ ಸರಿಯಾಗಿ ಮುಕ್ತರಾಗಿದ್ದಾರೆ. ಅವರು ಶ್ರೇಷ್ಠಮಟ್ಟದ ಪೂಜೆಗೆ, ಆತಿಥ್ಯಕ್ಕೆ, ದಾನಕ್ಕೆ ಅರ್ಹರು ಆಗಿದ್ದಾರೆ ಮತ್ತು ದೇವತೆಗಳಿಂದಲೂ ಮತ್ತು ಜಗತ್ತಿನ ಎಲ್ಲಾ ಜೀವಿಗಳಿಂದಲೂ ಗೌರವ, ಪೂಜೆಗೆ ಅರ್ಹರಾಗಿದ್ದಾರೆ.
ಈ ರೀತಿಯಾಗಿ ಜ್ಞಾನದರ್ಶನ ವಿಶುದ್ಧಿಯು 4 ಮಾರ್ಗಗಳನ್ನು ಮತ್ತು 4 ಫಲಗಳನ್ನು ಒಳಗೊಂಡಿದೆ.
ಅರಹಂತರು ರೂಪ ರಾಗ, ಅರೂಪರಾಗಗಳಲ್ಲಿ (ಸಮಥಾ ಧ್ಯಾನದ ಮತ್ತು ಅರೂಪ ಧ್ಯಾನದ ಅವಸ್ಥೆಗಳಲ್ಲಿ) ಆಸಕ್ತಿ ಪೂರ್ಣವಾಗಿ ತೊರೆದಿರುತ್ತಾರೆ ಮತ್ತು ಅವರು ಅಹಂಕಾರ ವಿಶ್ರಾಂತಿರಹಿತತೆ ಮತ್ತು ಅಜ್ಞಾನವನ್ನು ಪೂರ್ಣ ನಾಶಮಾಡಿ ಅರಹಂತತ್ವ ಪ್ರಾಪ್ತಿ ಮಾಡಿರುತ್ತಾರೆ.
ಇವರಿಗೆ ಅಸೇಖ ಎನ್ನುತ್ತಾರೆ, ಅಂದರೆ ಅವರಿಗೆ ಯಾವ ಶಿಕ್ಷಣದ ಅಗತ್ಯವಿಲ್ಲ ಎಂದರ್ಥ. ಮಿಕ್ಕ ಆರ್ಯರಾದ ಸೋತಾಪನ್ನ ಸಕದಾಗಾಮಿ ಮತ್ತು ಅನಾಗಾಮಿಗಳಿಗೆ ಸೇಖರೆನ್ನುತ್ತಾರೆ. ಏಕೆಂದರೆ ಅವರಿಗೆ ಶಿಕ್ಷಣದ ಅಗತ್ಯವಿದೆ.
ಅರಹಂತರು ಪೂರ್ಣವಾಗಿ ಮುಕ್ತರಾಗಿರುತ್ತಾರೆ. ಅವರಿಗೆ ಜನ್ಮವಿರುವುದಿಲ್ಲ. ಅವರ ಹಳೆಯ ಬಂಧನಗಳೆಲ್ಲ ನಾಶವಾಗಿರುತ್ತದೆ ಮತ್ತು ಹೊಸ ಯಾವ ಬಂಧನವನ್ನು ಅವರು ಉಂಟುಮಾಡಲಾರರು. ಎಲ್ಲಾ ವಿಧವಾದ ಬಂಧನಗಳು, ಕ್ಲೇಶಗಳು, ತನ್ಹಾಗಳು ಅವರಲ್ಲಿ ನಾಶವಾಗಿರುತ್ತದೆ. ಅವರು ನಿರೋಧ ಸಮಾಪತ್ತಿಯನ್ನು ತಡೆರಹಿತವಾಗಿ ಏಳು ದಿನಗಳ ಕಾಲ ವಿಹರಿಸುತ್ತಾರೆ. ನಿರೋಧ ಸಮಾಪತ್ತಿ ಸ್ಥಿತಿಯಲ್ಲಿ ಅವರು ಪರಮಸುಖದಲ್ಲಿ ನೆಲೆಸುತ್ತಾರೆ. ಆಗ ಅವರಲ್ಲಿ ಉಸಿರಾಟ ನಿಂತಿರುತ್ತದೆ. ಎಲ್ಲಾರೀತಿಯ ಗ್ರಹಿಕೆ ಮತ್ತು ವೇದನೆಗಳು ಸಹಾ ನಿರೋಧಕ್ಕೆ ಒಳಪಟ್ಟಿರುತ್ತದೆ. ಅಂದರೆ ಗ್ರಹಿಕೆಯಾಗಲಿ ಅಥವಾ ವೇದನೆಯಾಗಲಿ ಉದಯಿಸುವುದೇ ಇಲ್ಲ.

ಮರಣದ ನಂತರ ಅರಹಂತರು :

ಅರಹಂತರಲ್ಲಿ ಎಲ್ಲಾರೀತಿಯ ಆಕಾರ (ದೇಹ), ವೇದನೆಗಳು, ಗ್ರಹಿಕೆಗಳು, ಸಂಖಾರಗಳು ಮತ್ತು ವಿನ್ಯಾನವು ಪರಿತ್ಯಜಿಸಲ್ಪಟ್ಟಿರುತ್ತದೆ, ಬುಡಮೇಲಾಗಿರುತ್ತದೆ, ತಾಳೆಮರದ ಕಾಂಡವನ್ನು ಕತ್ತರಿಸಿ ಮರ ಉರುಳಿಸಿ ಮತ್ತೆ ಆ ಮರವು ಚಿಗುರದಂತೆ ಪಂಚಖಂಧಗಳನ್ನು ಕತ್ತರಿಸಿರುತ್ತಾರೆ. ಆದ್ದರಿಂದ ಅರಹಂತರನ್ನು ಪರಿನಿಬ್ಬಾಣದ ನಂತರ ನೋಡಲಾಗುವುದಿಲ್ಲ.
ಅವರು ಇದ್ದಾರೆ, ಇಲ್ಲ, ಇದ್ದೂ ಇಲ್ಲ, ಇಲ್ಲದೆಯೇ ಇದ್ದಾರೆ ಎಂಬ ಯಾವ ತರ್ಕವೂ ಅವರಿಗೆ ಹೊಂದಿಕೆಯಾಗುವುದಿಲ್ಲ. ಕೇವಲ ಪರಿನಿಬ್ಬಾಣ ಪಡೆದಿದ್ದಾರೆ ಎಂದು ಹೇಳಬಹುದು. ಯಾವ ಯಾವುದರಿಂದ ಅವರನ್ನು ಗುತರ್ಿಸಬಹುದೋ ಅವ್ಯಾವುವೂ ಅಲ್ಲಿರುವುದಿಲ್ಲ. ಅಂದರೆ ದೇಹದಿಂದಾಗಲಿ, ಸಂವೇದನೆಗಳಿಂದಾಗಲಿ, ವ್ಯಕ್ತಿತ್ವದಿಂದಾಗಲಿ, ಸಮಾಧಿ ಸ್ಥಿತಿಗಳಿಂದಾಗಲಿ, ಪ್ರಜ್ಞೆಯಿಂದಾಗಲಿ ಯಾವುದೇ ಚಿತ್ತ ಮತ್ತು ಚೇತಸಿಕಾಗಳಿಂದಾಗಲಿ ಅವರನ್ನು ಗುತರ್ಿಸಲು ಅಸಾಧ್ಯ. ಅದ್ಯಾವುದೂ ಅಲ್ಲಿರುವುದಿಲ್ಲ. ಪರಿನಿಬ್ಬಾಣ ಪಡೆದಿದ್ದಾರೆ ಎಂದು ಮಾತ್ರ ಹೇಳಬಹುದು.

ಖೀಣಾಸವ ಅರಹಂತರಲ್ಲಿ 10 ಗುಣಗಳು ಇರುವುದಿಲ್ಲ.

1. ಅವರು ಜೀವಹತ್ಯೆ ಮಾಡುವುದಿಲ್ಲ
2. ಅವರು ತನಗೆ ಸೇರದಿರುವುದನ್ನು ಸ್ವೀಕರಿಸುವುದಿಲ್ಲ.
3. ಬ್ರಹ್ಮಚಾರಿಗಳಾಗಿರುತ್ತಾರೆ.
4. ಸುಳ್ಳಾಡುವುದಿಲ್ಲ
5. ಹಣವನ್ನು (ಐಶ್ವರ್ಯ) ಬಳಸುವುದಿಲ್ಲ
6. ಪಕ್ಷಪಾತದಿಂದ ಕೂಡಿರುವುದಿಲ್ಲ
7. ಲೋಭದಿಂದ ಕೂಡಿರುವುದಿಲ್ಲ
8. ದ್ವೇಷದಿಂದ ಕೂಡಿರುವುದಿಲ್ಲ
9. ಮೋಹದಿಂದ ಕೂಡಿರುವುದಿಲ್ಲ
10. ಭಯದಿಂದ ಕೂಡಿರುವುದಿಲ್ಲ


Saturday, 21 April 2018

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿಯನ್ನು, ಕರುಣೆಯನ್ನು ಮುದಿತಾವನ್ನು ಹಾಗು ಉಪೇಕ್ಷವನ್ನು ಅಭಿವೃದ್ಧಿಗೊಳಿಸುವುದರಿಂದ ಅದರದೆ ವಿಶಿಷ್ಟ ಲಾಭ ಸಿಗುತ್ತದೆ.  ನಮ್ಮ ಅಭ್ಯುದಯದ ಸಾಮಥ್ರ್ಯದಂತೆ ನಮ್ಮ ದುಃಖವು ಕ್ಷೀಣವಾಗುತ್ತದೆ. ಹಾಗು ಪರರನ್ನು ನಾವು ದುಃಖದಿಂದ ಮುಕ್ತರಾಗಲು ಸಹಾಯ ಮಾಡಬಹುದು.
ಆದರೆ ಈ ದುಃಖವೇ ನಮಗೆ ಬೀಗದ ಕೈಯಾಗಿದೆ. ಬುದ್ಧರ ಬೋಧನೆಯಲ್ಲಿನ ಮೈತ್ರಿಯು ಕೇವಲ ಏನನ್ನೂ ಬೆಳೆಸುವಂತಹದಲ್ಲ, ಅಥವ ಅದು ಕೇಳಲು ಚೆನ್ನಾಗಿದೆ ಎಂದು ಅಥವಾ ಕುಟುಂಬದ ಮೌಲ್ಯವೆಂದಾಗಲಿ ಅಥವಾ ಸಂತುಷ್ಟತೆಯ ಯೋಚನೆಗಳಿಂದಾಗಲಿ ಅಲ್ಲ. ಈ ನಾಲ್ಕು ಬ್ರಹ್ಮವಿಹಾರಗಳು (ಪರಮ ದಿವ್ಯ ಸ್ಥಿತಿಗಳು) ಬುದ್ಧಭಗವಾನರ ನಾಲ್ಕು ಸತ್ಯಗಳಿಗೆ ಕೊಂಡೊಯ್ಯುವ ದಾರಿಯಾಗಿದೆ ಅದಕ್ಕೆ ತುಂಬ ಸಮೀಪವಾಗಿದೆ.
ಬುದ್ಧರ ಬೋಧನೆಯಲ್ಲಿ ದುಃಖವು ಈರೀತಿಯಿದೆ :
ಜನ್ಮ, ರೋಗ, ಮುಪ್ಪು, ಮರಣಗಳು ದುಃಖ,
ಶೋಕ, ನೋವು ಪಶ್ಚಾತ್ತಾಪ ಚಿಂತೆಗಳು ದುಃಖ
ಪ್ರಿಯರ ವಿಯೋಗ, ದುಃಖ
ಅಪ್ರಿಯದ ಆಗಮನ ದುಃಖ
ಒಟ್ಟಿನಲ್ಲಿ ದೇಹ ಮನಸ್ಸಿನ ಆಸಕ್ತಿಯೆ ದುಃಖ
ಈ ದುಃಖ ಅಥವಾ ಅತೃಪ್ತಿಕರವು ಬುದ್ಧಭಗವಾನರ ಅರ್ಥದಲ್ಲಿ ಪಾಪವೆಂದಲ್ಲ, ಆದರೆ ಅವು ಅಸುಖದೆಡೆಗೆ (ದುಃಖಕ್ಕೆ) ಕರೆದೊಯ್ಯುತ್ತದೆ.  ದುಃಖದ ನಾಶವನ್ನು ಮಾಡಬೇಕಾದರೆ, ದುಃಖದ ಸ್ವರೂಪವನ್ನು, ಅದರ ಉತ್ಪತ್ತಿಯನ್ನು, ಅದರ ನಿರೋಧವನ್ನು ಹಾಗು ಅದರ ಮಾರ್ಗವನ್ನು ಅರಿಯಬೇಕಾಗುತ್ತದೆ ಹಾಗು ಅದರಂತೆ ನಡೆಯಬೇಕಾಗುತ್ತದೆ.
ಇದರ ಪ್ರಧಾನ ಸಾಧನೆಯು ನಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸುವುದು ಮತ್ತು ಧ್ಯಾನದ ಮೂಲಕ ದುಃಖದ ಅಂತ್ಯಗೊಳಿಸುವುದು.
ಬೌದ್ಧರಲ್ಲಿ ಧ್ಯಾನವೆಂದರೆ ಕಠಿಣ ಚಿಂತನೆ (ಬಲಯುತ ಮಾನಸಿಕ ಸಂಘರ್ಷವಲ್ಲ)ಯಲ್ಲ. ಧ್ಯಾನದ ಅರ್ಥ ಶಾರೀರಿಕ ಹಾಗು ಮನಸ್ಸನ್ನು ಶಾಂತಗೊಳಿಸುವುದು ಹಾಗು ತನ್ನ ಆಂತರಿಕದ ಉತ್ಪತ್ತಿ ಹಾಗು ನಷ್ಟಗಳನ್ನು ಅರಿತು ನಿಸ್ಸಾರವನ್ನು ಮೀರಿ ಹೋಗುವುದು. 
ಅದರಲ್ಲಿ ಪ್ರಾಥಮಿಕವಾಗಿ ಉಸಿರಾಟ ಧ್ಯಾನ ಬರುತ್ತದೆ (ಪ್ರಾಣಾಯಮವಲ್ಲ). ಅದರಲ್ಲಿ ಮನಸ್ಸನ್ನು ಉಸಿರಿನ ಪ್ರವೇಶ ಹಾಗು ನಿರ್ಗಮನದ ಕಡೆಗೆ ಕೇಂದ್ರೀಕೃತಗೊಳಿಸಬೇಕಾಗುತ್ತದೆ. ನಂತರ ಹಾಗೆ ಮುಂದುವರೆದ ನಂತರ ಶಾರೀರದ ಹಾಗು ಮನಸ್ಸಿನ ಸೂಕ್ಷ್ಮಾತೀಸೂಕ್ಷ್ಮ ಕ್ರಿಯೆಗಳನ್ನು ಅರಿಯಬೇಕಾಗುತ್ತವೆ.
ಮೈತ್ರಿಯು ಧ್ಯಾನದ ಕ್ಷೇತ್ರದಲ್ಲಿ ಪ್ರಾಥಮಿಕ ಅವಸ್ಥೆಯಷ್ಟೆ. ಆದರೆ ಇದೇ ಪರಮೋತ್ತರ ಹಂತವಲ್ಲ. ಆದರೆ ಇದು ಅಲಕ್ಷ್ಯ ಮಾಡುವಂತಹುದು ಅಲ್ಲ. ಇದರಿಂದ ಶಾಂತತೆಯು ಆನಂದವು ಉಂಟಾಗಿ ಮುಖ್ಯವಾದ ಮಾನಸಿಕ ವಿಷವಾದ ಹಗೆತನ, ಹಿಂಸೆ, ಕೋಪಗಳನ್ನು ನಾಶ ಮಾಡುತ್ತದೆ. ಹಾಗು ಒಬ್ಬರು ಮಾನಸಿಕ ಸ್ಥಿತಿಗಳನ್ನು ಅರಿಯುತ್ತಾ ಅಂಟಿಕೊಳ್ಳುವಂತಹ ಮಹೋನ್ನತೆಗೇರುತ್ತಾನೆ.
ಮೈತ್ರಿಯಿಂದ ಸಾಮಾಜಿಕ ಲಾಭಗಳು ಆಗುವುದರ ಜೊತೆಗೆ ಸಾಧನೆಗಾರನಿಗೆ ಅಥವ ಸಾಧನೆಗಾತಿಗೆ ಮತ್ತು ಸರ್ವಜೀವಿಗಳ ದುಃಖದ ವಿಮುಕ್ತಿಯ ಮಾರ್ಗವು ಅರಿವಾಗುತ್ತದೆ. 

ಮೈತ್ರಿಧ್ಯಾನ

ಮೈತ್ರಿಧ್ಯಾನ


ಮೈತ್ರಿಯನ್ನು ಮೊದಲು ನಿಮ್ಮ ಮೇಲೆ ಪ್ರಸರಿಸಿಕೊಳ್ಳಿ. ನೀವು ನಿಮ್ಮ ಮೇಲೆ ಪ್ರೀತಿ (ಹಿತಭಾವ) ತಾಳದಿದ್ದರೆ ಪರರಿಗೆ ಹೇಗೆ ಪ್ರೀತಿಸಬಲ್ಲಿರಿ? ಆದ್ದರಿಂದ ಮೊದಲು ನಿಮಗೆ ನೀವು ಮಿತ್ರರಾಗಿ. ನಿಮ್ಮ ಮೇಲೆ ನೀವು ಅನಾರೋಗ್ಯಕರ ಪಾಪಯುತ ಕೀಳರಿಮೆ ಬೆಳೆಸಿಕೊಳ್ಳಬೇಡಿ.  ಮಾನವನ ಸ್ವರೂಪವು ಮಾನವನ ಸ್ವರೂಪವೇ. ಯಾರೊಬ್ಬರು ಪೂರ್ಣವಾಗಿ ಒಳ್ಳೆಯವರೆ ಅಲ್ಲ (ಬುದ್ಧ ಹಾಗು ಅರಹಂತರನ್ನು ಬಿಟ್ಟು). ಅಥವಾ ಯಾರು ಸಹಾ ಪೂರ್ಣವಾಗಿ ಪಾಪಿಗಳು ಅಲ್ಲ. ನೀವು ಏನಾದರೂ ತಪ್ಪು ಮಾಡಿದರೆ ನೀವು ಅದಕ್ಕೆ ಚಿಂತೆಪಟ್ಟು ನೀವು ಪಾಪಿಗಳಂತೆ ವ್ಯಕ್ತಿತ್ವ ನಿಮರ್ಾಣ ಮಾಡಬೇಕಾಗಿಲ್ಲ. ಬದಲಾಗಿ ಯೋಗ್ಯ ಅರಿವು ಪ್ರಾಪ್ತಿ ಮಾಡಿ ಸರಿಯಾದ ಅವಕಾಶದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಿ. ನೀವು ಹಿಂದಿನದಕ್ಕೆ ಪಶ್ಚಾತ್ತಾಪ ಪಡಬೇಡಿ. ಭವಿಷ್ಯದ ಬಗ್ಗೆ ಚಿಂತೆಯು ಪಡಬೇಡಿ. ನಿಮ್ಮ ಆಂತರಿಕದ ಕಡೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಕೀಳರಿಮೆ ಹಾಗು ಅಹಂಕಾರಗಳನ್ನು ನಾಶಮಾಡಿ. ನೀವು ಅಂತಹ ಸ್ಥಿತಿಯನ್ನು ತಲುಪಿ ಅಲ್ಲಿ ಕೆಟ್ಟ ಯೋಚನೆಗಳು ಉತ್ಪತ್ತಿಯೇ ಆಗದಿರಲಿ.
ನೀವು ಪರರಿಗೆ ನಿಮ್ಮಲ್ಲಿರುವುದನ್ನು ಮಾತ್ರ ಕೊಡಬಲ್ಲಿರಿ. ನೀವು ಅನುಭವಿಸಲಾಗದಂತಹುದು ನೀವು ಕೊಡಲಾರಿರಿ. ನಿಮ್ಮ ಮೇಲೆ ಮೈತ್ರಿಯನ್ನು ಪ್ರಸರಿಸಿದಲ್ಲಿ ನಿಮ್ಮ ಯೋಗ್ಯತೆ ಏರುತ್ತದೆ. ನಿಮ್ಮ ಉನ್ನತಿಯ ಸಂತುಷ್ಟತೆಯ ಜೊತೆಯಲ್ಲೇ ಪರರ ಉನ್ನತಿಯಲ್ಲಿ ಆನಂದಿಸಿ ಹಾಗು ಮಾನವ ಕುಲಕ್ಕೆ ಸೇವೆಮಾಡಿ. ಎಂದೂ ನೀವು ನಿಮ್ಮನ್ನು ಅತ್ಯುತ್ತಮವಾಗಬಲ್ಲಿರಿ ಎಂದು ಅರಿಯಬಲ್ಲಿರೋ ಹಾಗೆಯೇ ಪರರು ಸಹಾ ಅತ್ಯುತ್ತಮತೆಯನ್ನು ಸಾಧಿಸಬಲ್ಲರು ಎಂದು ಸಹಾ ಅರಿಯುವಿರಿ.
ಮೈತ್ರಿಯು ಕೋಪಕ್ಕೆ ಅತ್ಯುತ್ತಮ ಔಷಧ. ಮೈತ್ರಿಯು ತಮ್ಮಲ್ಲೇ ಕೋಪಗೊಳ್ಳುವವರಿಗೆ ಔಷಧವೂ ಸಹ. ನಾವು ನಮ್ಮ ಮೈತ್ರಿಯನ್ನು ಎಲ್ಲ ಜೀವಿಗಳ ಮೇಲೆ ಸ್ವತಂತ್ರವಾಗಿ, ಅತೀಮವಾಗಿ, ಅಗಾಧವಾಗಿ ಪ್ರಸರಿಸೋಣ.
ಮೈತ್ರಿಯು ಸ್ಥಿರವಾದದ್ದು. ಆದರೆ ಹಿಡಿದುಕೊಂಡಿರುವಂತದಲ್ಲ (ಅಂಟಿಕೊಳ್ಳುವುದಿಲ್ಲ).
ಮೈತ್ರಿಯು ಅಚಲವಾದುದು, ಆದರೆ ಬಂಧನಯುತವಲ್ಲ.
ಮೈತ್ರಿಯು ಗಂಭೀರ ಸಭ್ಯವಾದುದು, ಕಠಿಣವಾದುದಲ್ಲ.
ಮೈತ್ರಿಯು ಸಹಾಯಕರವಾದುದು, ಆದರೆ ತಲೆಹಾಕುವುದಂತಹುದಲ್ಲ.
ಮೈತ್ರಿಯು ಶ್ರೇಷ್ಠವಾದುದು (ಗಂಭೀರ) ಆದರೆ ಅಹಂಕಾರರಹಿತವಾದುದು.
ಮೈತ್ರಿಯು ಕ್ರಿಯಾತ್ಮಕವಾದುದು, ನಿರಾಶಜನಕವಲ್ಲ (ಅಕ್ರಿಯಾತ್ಮಕವಲ್ಲ).
ದ್ವೇಷವು ಸಂಕುಚಿತಗೊಳಿಸುವಂತಹುದು, ಆದರೆ ಮೈತ್ರಿಯು ಸ್ವತಂತ್ರಗೊಳಿಸುವಂತಹುದು.
ದ್ವೇಷವು ದುಃಖವನ್ನುಂಟುಮಾಡುತ್ತದೆ, ಆದರೆ ಮೈತ್ರಿಯು ಶಾಂತಿ (ಆನಂದ)ಯನ್ನು ನೀಡುತ್ತದೆ.
ದ್ವೇಷವು ಉದ್ರೇಕಿಸುತ್ತದೆ, ಆದರೆ ಮೈತ್ರಿಯು ಪ್ರಶಾಂತತೆಯನ್ನು ನೀಡುತ್ತದೆ.
ದ್ವೇಷವು ಬೇರ್ಪಡಿಸುತ್ತದೆ. ಆದರೆ ಮೈತ್ರಿಯು ಒಂದಾಗಿಸುತ್ತದೆ.
ದ್ವೇಷವು ಅಡಚಣೆಯನ್ನುಂಟು ಮಾಡುತ್ತದೆ, ಆದರೆ ಮೈತ್ರಿಯು ಸಹಾಯ ಮಾಡುತ್ತದೆ.
ಮೈತ್ರಿಯು ಶ್ರೇಷ್ಠ ದೃಷ್ಟಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಚಿಂತನೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠವಾಚಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಕಾರ್ಯಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಜೀವನಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಪ್ರಯತ್ನಶೀಲತೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಎಚ್ಚರಿಕೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಸಮಾಧಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ನಮಗೆ ಪರಸ್ಪರ ಸೇವೆ ಮತ್ತು (ಆತಿಥ್ಯ) ದಾನ ಮನೋಭಾವದಿಂದಿರಿ ಎಂದು ಬೋಧಿಸುತ್ತದೆ. ಮೈತ್ರಿಯು ನಮಗೆ ಸಿಹಿಯಾಗಿ (ಪ್ರಿಯವಾಗಿ) ಮತ್ತು ಸರ್ವರೂ ಒಪ್ಪುವಂತಹ ನುಡಿಗಳನ್ನು ಆಡುವಂತೆ ತಿಳಿಸುತ್ತದೆ. ಮೈತ್ರಿಯು ನಮಗೆ ಪರಸ್ಪರ ಹೊಡೆದಾಡದೆ ಜಗಳವಾಡದೆ, ಪರಸ್ಪರ ಉನ್ನತಿಗೆ ಶ್ರಮಿಸುವಂತೆ ಬೋಧಿಸುತ್ತದೆ. ನಾವು ನಮ್ಮ ಮೈತ್ರಿಯನ್ನು ನಮಗೆ ದ್ವೇಷಿಸುವಂತವರ ಮೇಲೆಯೂ ಪ್ರಶಂಸಿಸುತ್ತೇವೆ. ನಮ್ಮ ಈಗಿನ ಶತ್ರು ನಮಗೆ ಹಿಂದಿನ ಜನ್ಮದಲ್ಲಿ ಒಮ್ಮೆ ತಾಯಿಯಾಗಿರಬಹುದು, ತಂದೆಯಾಗಿರಬಹುದು, ಸೋದರಿ ಅಥವಾ ಸೋದರಿಯಾಗಿರಬಹುದು. ಆದ್ದರಿಂದ ನಾವು ಇದನ್ನು ಚಿಂತಿಸಬೇಕು.
ಈ ವ್ಯಕ್ತಿಯು ಹಿಂದೆ (ಹಿಂದಿನ ಜನ್ಮದಲ್ಲಿ) ತಾಯಿಯಾಗಿರುವಾಗ ನನ್ನನ್ನು ಹೆತ್ತಳು. ತನ್ನ ಗರ್ಭದಲ್ಲಿ ಕಾಪಾಡಿಕೊಂಡಿದ್ದಳು. ನಾನು ಮಗುವಾಗಿದ್ದಾಗ ಆಕೆ ಅಸಹ್ಯವಿಲ್ಲದೆ ನನಗೆ ಶುಚಿಗೊಳಿಸಿದ್ದಾಳೆ. ಆಕೆ ನನ್ನೊಂದಿಗೆ ಆಟವಾಡಿದ್ದಾಳೆ. ಪಾಲನೆ ಮಾಡಿದ್ದಾಳೆ ಮತ್ತು ನನ್ನನ್ನು ತನ್ನ ಬಾಹುಗಳಲ್ಲಿ ಪ್ರೀತಿಯಿಂದ ಎತ್ತಿಕೊಂಡಿದ್ದಾಳೆ.
ಹಾಗೆ ನನ್ನನ್ನು ಆಳವಾದ ಪ್ರೀತಿಯಿಂದ (ವಾತ್ಸಲ್ಯ) ಸಲಹಿದ್ದಾಳೆ.  ಈ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ನನಗೆ ತಂದೆಯಾಗಿರುವಾಗ, ಆತನು ನನಗಾಗಿ ಅತ್ಯಂತ ಶ್ರಮಪಟ್ಟು ಪ್ರಾಣವನ್ನು ಒತ್ತೆಯಿಟ್ಟು ಐಶ್ವರ್ಯ ದುಡಿದು ಸಲಹಿದ್ದಾನೆ. ನನಗೆ ಕ್ಷೇಮವನ್ನು ಕೊಟ್ಟಿದ್ದಾನೆ.
ನನಗೆ ಹಿಂದಿನ ಜನ್ಮಗಳಲ್ಲಿ ಇವರು ಸೋದರ, ಸೋದರಿ, ಮಗ ಅಥವಾ ಮಗಳು ಆಗಿದ್ದಾಗ ನನಗೆ ಮೈತ್ರಿಯಿಂದ ಕಂಡು, ಕಾಪಾಡಿ ಪ್ರತಿಕ್ಷಣದಲ್ಲೂ ನನ್ನ ಹಿತಕ್ಕಾಗಿ ಸಹಾಯಿಸಿದ್ದಾರೆ. ಆದ್ದರಿಂದ ನಾನು ಅವರ ಮೇಲೆ ಕೋಪಗೊಳ್ಳುವುದು ಅನ್ಯಾಯವಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಅವರು ಕ್ಷುಲ್ಲುಕವಾಗಿ ವತರ್ಿಸಿದ್ದಾರೆಂದು ಅವರು ಹಿಂದೆ ಮಾಡಿದ ಮೈತ್ರಿಯು ಮರೆಯಲಾರೆವು ಎಂದು ಚಿಂತಿಸಬೇಕಾಗುತ್ತದೆ.
ಕೋಪವು ಉತ್ಪತ್ತಿಯಾದಾಗ ನಾವು ಪ್ರತಿಯಾಗಿ ಅನಿತ್ಯತೆಯನ್ನು ಧ್ಯಾನಿಸಬೇಕಾಗುತ್ತದೆ ಹೀಗೆ :
ಆ ವ್ಯಕ್ತಿಯು ಈಗ ಪೂರ್ಣವಾಗಿ ಬದಲಿಸಿದ್ದಾನೆ, ದೇಹದಲ್ಲಿಯೂ ಹಾಗು ಮಾನಸಿಕವಾಗಿಯೂ. ನಾನು ಅಲ್ಲಿ ಯಾವುದರ ಮೇಲೆ ಕೋಪಗೊಳ್ಳಲಿ? ನಾನು ಉಗುರಿನ ಮೇಲೆ, ಕೂದಲಿನ ಮೇಲೆ, ಹಲ್ಲು ಅಥವಾ ಚರ್ಮದ ಮೇಲೆ ಕೋಪಗೊಳ್ಳಲೆ?
ಈ ವಿಧದಿಂದ ನಮಗೆ ಬೇರೊಬ್ಬನ ಮೆಲೆ ಕೋಪಿಸಿಕೊಳ್ಳಬಾರದು ಎಂದು ಅರಿವಾಗುತ್ತದೆ. ಆದರೆ ನಮ್ಮ ಯೋಚನೆಗಳು ಹಾಗು ವೇದನೆಗಳನ್ನು ಬದಲಿಸಬೇಕಾಗುತ್ತದೆ.  ಆದ್ದರಿಂದ ಮೈತ್ರಿಯನ್ನು ಮೊದಲು ನಮ್ಮ ಮೇಲೆ ಪ್ರಾರಂಭಿಸಿರಬೆಕು. ನೀವು ಹೀಗೆ ಧ್ಯಾನಿಸಿ :
ನಾನು ದುಃಖದಿಂದ ವಿಮುಕ್ತನಾಗಲಿ ಮತ್ತು ಸದಾ ಸುಖಿಯಾಗಿರಲಿ.
ನನ್ನ ಸುಖ ಕ್ಷೇಮ ಬಯಸುವ ಎಲ್ಲರೂ ಸಹಾ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ತಟಸ್ಥ (ಮಿತ್ರರೂ ಅಲ್ಲದೆ, ಶತ್ರುವು ಅಲ್ಲದೆ)ರಾಗಿರುವ ಎಲ್ಲರೂ ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ಯಾರು ದ್ವೇಷಿಸುವರೋ (ಶತ್ರು) ಅವರು ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ಈ ನಗರದಲ್ಲಿ ವಾಸಿಸುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ದೂರದಲ್ಲಿ (ಸುತ್ತಲಿನ ಸರ್ವರು) ವಾಸಿಸುತ್ತಿರುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಎಲ್ಲಾ ಜೀವಿಗಳು ಎಲ್ಲೇ ಇರಲಿ, ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ
ಇಡೀ ಬ್ರಹ್ಮಾಂಡ (ಪೂರ್ಣ ವಿಶ್ವ)ದಲ್ಲಿರುವ ಸಕಲ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ.
ಯಾವ ಯಾವ ಜೀವಿಗಳು ದುರ್ಬಲವಾಗಿವೆಯೋ, ಅಥವಾ ಬಲಿಷ್ಠವಾಗಿವೆಯೋ, ಸೂಕ್ಷ್ಮವಾಗಿವೆಯೋ ಅಥವಾ ಸ್ಥೂಲವಾಗಿವೆಯೋ, ಉದ್ಧವಾಗಿವೆಯೊ, ಅಗಲವಾಗಿವೆಯೋ, ಅಥವಾ ಮಧ್ಯಮ ಪ್ರಮಾಣದ್ದೂ. ಯಾವುವು ಕಣ್ಣಿಗೆ ಗೋಚರಿಸುವಂತಹುದೂ ಅಥವಾ ಅಗೋಚರವೋ, ಯಾವುವು ಹತ್ತಿರ ವಾಸಿಸುತ್ತಿವೆಯೋ ಅಥವಾ ದೂರ ವಾಸಿಸುತ್ತಿವೆಯೋ ಯಾವುವು ಜನ್ಮಿಸಿವೆಯೋ, ಅಥವಾ ಯಾವುದು ಜನ್ಮಿಸುವುವೋ ಅವೆಲ್ಲಾ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ. ಸುಖಕರ ಮನವನ್ನು ಹೊಂದುವಂತಾಗಲಿ.
ಯಾರೂ ಸಹ ಪರರಿಗೆ ವಂಚಿಸದಿರಲಿ, ಯಾರು ಯಾರಿಗೂ ಸಹಾ ಕೀಳಾಗಿ ಕಾಣದಿರಲಿ, ಕೋಪದಿಂದಾಗಲಿ ಅಥವಾ ದ್ರೋಹದಿಂದಾಗಲಿ, ಯಾರಿಗೂ ಸಹಾ ಹಿಂಸಾಯುತ (ಅಹಿತ)ವಾಗಿ ಯೋಚಿಸದಿರಲಿ.
ತಾಯಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಗುವನ್ನು ಹೇಗೆ ರಕ್ಷಿಸುವಳೊ, ಅದೇ ರೀತಿಯಾದ ಅಸೀಮ ಹೃದಯವನ್ನು ಸರ್ವಜೀವಿಗಳ ಮೇಲೆ ಬೆಳೆಸುವಂತಾಗಲಿ.
ಮೈತ್ರಿಯಿಂದ ಇಡೀ ಜಗತ್ತನ್ನೇ ಯಾವತಡೆ (ಅಪ್ರಿಯ)ವಿಲ್ಲದೆ ಮೇಲೆ, ಕೆಳಗೆ, ಸುತ್ತಲು (ಸೂರ್ಯನಂತೆ) ಪ್ರಸರಿಸಲಿ.
ಶ್ರೀಲಂಕ (ಸಿಂಹಳ)ದ ಸಂಪ್ರದಾಯದ ಮಂತ್ರವಂತೂ ಮೈತ್ರಿ ಸಾಧನೆಗೆ ಉತ್ತಮವಾದ ತಳಹದಿಯಾಗಿದೆ :
ಅಹಂ ಅವೇರೂ ಹೊಮಿ
ನಾನು ದ್ವೇಷದಿಂದ ಮುಕ್ತನಾಗಲಿ
ಅಬ್ಯಾಪಾಚ್ಚೊ ಹೊಮಿ
ನಾನು ಹಿಂಸೆ ಭಾವನೆಯಿಂದ ಮುಕ್ತನಾಗಲಿ
ಅನಿಘೋ ಹೊಮಿ
ನಾನು ಶಾರೀರಿಕ ಮತ್ತು ಮಾನಸಿಕ ಕ್ಲೇಷಗಳಿಂದ ಮುಕ್ತನಾಗಲಿ.
ಸುಖಿ ಅತ್ತನಂ ಪರಿಹರಾಮಿ
ನಾನು ನನ್ನ ಸುಖವನ್ನು ರಕ್ಷಿಸಿಕೊಳ್ಳಲಿ
ಸಬ್ಬೆ ಸತ್ತಾ ಅವೇರಾ ಹೊನ್ತು
ಸಬ್ಬೆ ಸತ್ತಾ ಅಬ್ಯಾಪಾಜೋ ಹೊನ್ತು
ಸಬ್ಬೆ ಸತ್ತಾ ಅನಿಪ್ಪೋ ಹೊನ್ತು
ಸಬ್ಬೆ ಸತ್ತಾ ಅತ್ತನಂ ಪರಿಹರಂತು
ಎಲ್ಲಾ ಜೀವಿಗಳೂ ದ್ವೇಷರಹಿತರಾಗಲಿ
ಎಲ್ಲಾ ಜೀವಿಗಳು ಹಿಂಸಾರಹಿತವಾಗಲಿ
ಎಲ್ಲಾ ಜೀವಿಗಳೂ ದುಃಖರಹಿತರಾಗಲಿ
ಎಲ್ಲಾ ಜೀವಿಗಳೂ ತಮ್ಮ ತಾವು (ಸುಖವನ್ನು) ರಕ್ಷಿಸಿಕೊಳ್ಳುವಂತಾಗಲಿ.
ಈ ಚಿಂತನೆಗಳು ಮತ್ತು ಧ್ಯಾನಗಳು ಬೌದ್ಧರ ಸಂಪ್ರದಾಯದಲ್ಲಿರು ವಂತಹುದು.
ನಾವು ಹೀಗೆ ಹೇಳಬಹುದು, ಏನೆಂದರೆ ಬೌದ್ಧರ ಶೀಲಕ್ಕೆ ಮೈತ್ರಿಯೇ ತಳಹದಿ. ಒಂದು ರೀತಿಯಲ್ಲಿ ಎಲ್ಲಾ ಮತಧರ್ಮಗಳು ಸಹಾ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹಾಗು ಸುಖದ ಯೋಚನೆಗಳನ್ನು ಪ್ರಸರಿಸುತ್ತದೆ. ಆದ್ದರಿಂದ ಇದು ಕೇವಲ ಬೌದ್ಧರಿಗೆ ಸೀಮಿತವಾಗಿಲ್ಲ. (ಆದರೆ ಬೌದ್ಧರಲ್ಲೆ ಅದು ಪೂರ್ಣ ಪರಿಶುದ್ಧ, ಪರಿಪೂರ್ಣ ರೂಪದಲ್ಲಿದೆ)
ಆದರೆ ಬುದ್ಧರ ಹಾದಿಯನ್ನು ಹಿಂಬಾಲಿಸುವವರು ದುಃಖವನ್ನು ಅಂತ್ಯಗೊಳಿಸುತ್ತಾರೆ. ಮೈತ್ರಿ ಧ್ಯಾನವು ತಳಹದಿಯಷ್ಟೇ ಅಲ್ಲದೆ, ಎಚ್ಚರಗೊಳಿಸಿ ದುಃಖದಿಂದ ಮುಕ್ತರಾಗಲು ಸಹಾಯಿಸುತ್ತದೆ.
ನಾವು ನಿಮಗೆ ಈ ಕೆಳಕಂಡ ಪವಿತ್ರ ವಾಕ್ಯಗಳನ್ನು ನಿಮ್ಮ ದಿನಚರಿಯಿಂದ ಪ್ರಾರಂಭಿಸಿ ಇದನ್ನು ಧ್ಯಾನಿಸಿ ಎನ್ನುವೆವು.
ಕರುಣಯುತ ಪ್ರೀತಿಯು ಹಂಚಿಕೊಳ್ಳುವಿಕೆ
ನಾನು ಸುಖಿಯಾಗಿರಲಿ, ಕ್ಷೇಮವಾಗಿರಲಿ, ಶಾಂತವಾಗಿರಲಿ, ಹಾಗು ಉನ್ನತನಾಗಲಿ.
ನನಗೆ ಯಾವ ಹಾನಿಯು ಸಂಭವಿಸದಿರಲಿ.
ನನಗೆ ಯಾವ ಕಷ್ಟಗಳು ಬಾರದಿರಲಿ
ನನಗೆ ಯಾವ ತೊಂದರೆಗಳೂ ಬರದಿರಲಿ
ಮತ್ತು ನಾನು ಯಶಸ್ಸನ್ನು ತಲುಪಲಿ
ನಾನು ಸಹನೆಯುಳ್ಳವನಾಗಲಿ,
ಧೈರ್ಯವಂತನಾಗಲಿ, ಜ್ಞಾನಿ ಯಾಗು ದೃಢನಾಗಲಿ ಮತ್ತು ಎಲ್ಲಾ ಕಷ್ಟಗಳನ್ನು ತೊಂದರೆಗಳನ್ನು ಹಾಗು ಸೋಲುಗಳನ್ನು ದಾಟಿಹೋಗಲಿ.
ನನ್ನ ಪೋಷಕರು ಸುಖಿಯಾಗಿರಲಿ, ಕ್ಷೇಮವಾಗಿರಲಿ,
ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಆಗದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಗುರುಗಳು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಕುಟುಂಬವು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಮಿತ್ರರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಯಾರು ನನಗೆ ಮಿತ್ರರಲ್ಲವೋ ಅವರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನಿಮ್ಮ ಧ್ಯಾನವನ್ನು ಮುಂದುವರಿಸಲು (ಅಭಿವೃದ್ಧಿಗೊಳಿಸಲು) ನೀವು ಈ ಮೇಲಿನ ಯೋಚನೆಯಲ್ಲಿ (ಭಾವನೆಯಲ್ಲಿ) ಮೈತ್ರಿಯಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಹಾಗು ಪ್ರತಿಯೊಂದು ಜೀವಿಗೂ ಪ್ರತಿಯೊಂದು ದಿಕ್ಕಿಗೂ ಹರಡಬೇಕು.
ನಾವು ಎಲ್ಲಾ ಜನರು ಈ ಮೈತ್ರಿಯ ಧ್ಯಾನ, ಆದರಣೆಯಿಂದ ಲಾಭ ಪಡೆಯಲೆಂದು ಆಶಿಸುತ್ತೇವೆ ಮತ್ತು ಈ ಬೌದ್ಧರ ಹಾರೈಕೆಯ ಗಾಥೆಯಿಂದ ಮುಕ್ತಾಯ ಮಾಡುತ್ತೇವೆ.
ದುಃಖವು ಇದ್ದರೂ ದುಃಖಿತನು ಇಲ್ಲದಿರಲಿ,
ಭಯವಿದ್ದರೂ, ಭೀತಿಗೊಳ್ಳುವವನು ಇಲ್ಲದಿರಲಿ,
ಶೋಕವು ಇದ್ದರೂ, ಶೋಕಪಡುವವನು ಇಲ್ಲದಿರಲಿ,
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ ಹಾಗು ಸುಖಿಯಾಗಿರಲಿ.

ಮೈತ್ರಿಯ 11 ಲಾಭಗಳು

ಮೈತ್ರಿಯ 11 ಲಾಭಗಳು

ಮೈತ್ರಿಯ ಲಾಭಗಳು
1. ಸುಖವಾಗಿ ನಿದ್ರಿಸುತ್ತಾನೆ (ಮಲಗಿದ ಒಂದೆರಡು ನಿಮಿಷದಲ್ಲೇ ನಿದ್ರೆ)
2. ಸುಖವಾಗಿ ಏಳುತ್ತಾನೆ (ಎದ್ದ ನಂತರ ಪ್ರಶಾಂತವಾಗಿ ಅಥವಾ ಆನಂದದಿಂದ ಇರುತ್ತಾನೆ)
3. ಕೆಟ್ಟ ಕನಸುಗಳನ್ನು ಕಾಣುವುದಿಲ್ಲ (ಸುಂದರವಾದ ಅತೀಂದ್ರಿಯ ಕನಸುಗಳು ಬೀಳಬಹುದು)
4. ಮನುಷ್ಯರಿಗೆ ಪ್ರಿಯನಾಗುತ್ತಾನೆ (ಜನಪ್ರಿಯ)
5. ಅಮನುಷ್ಯರಿಗೂ ಪ್ರಿಯವಾಗುತ್ತಾನೆ (ಪ್ರಾಣಿಗಳಿಗೆ ಮತ್ತು ಮುಂತಾದ ಜೀವಿಗಳಿಗೂ ಪ್ರಿಯನಾಗುತ್ತಾನೆ).
6. ದೇವ, ದೇವತೆಗಳಿಗೆ ಪ್ರಿಯನಾಗಿ ಅವರಿಂದ ರಕ್ಷಣೆ.
7. ಅಗ್ನಿ ವಿಷ ಮತ್ತು ಆಯುಧಗಳಿಂದ ಅಪಾಯವಿಲ್ಲ.
8. ಮನಸ್ಸು ಅತಿಬೇಗ ಏಕಾಗ್ರವಾಗುತ್ತದೆ.
9. ನಿಮ್ಮ ಮುಖಭಾವವು ಸುಂದರವಾಗುತ್ತದೆ ಮತ್ತು ಶಾಂತಿ ತೇಜಸ್ಸುಗಳಿಂದ ಕೂಡುತ್ತದೆ.
10. ಸಾಯುವಾಗ ಅಶಾಂತಿಯಿಂದ ಸಾಯುವುದಿಲ್ಲ.
11. ನಿಬ್ಬಾಣ ಪ್ರಾಪ್ತಿಗೆ ಸಹಾಯ. (ನಿಬ್ಬಾಣ ಪ್ರಾಪ್ತಿ ಇಲ್ಲವಾದರೆ ಬ್ರಹ್ಮ ಲೋಕ ಪ್ರಾಪ್ತಿ).

Sunday, 18 March 2018

ನಿಬ್ಬಾಣ nibbana in kannada

 ನಿಬ್ಬಾಣ

ನಿಬ್ಬಾಣಂ ಪರಮ ಸುಖಂ
ನಿಬ್ಬಾಣವು ಸರ್ವರ ಅಂತಿಮ ಗುರಿಯಾಗಿದೆ. ಬುದ್ಧರ ಸರ್ವ ಬೋಧನೆಯು ಪೂರ್ಣವಾಗಿ ತರ್ಕಭರಿತವಾಗಿದ್ದರೂ ನಿಬ್ಬಾಣವು ಮಾತ್ರ ತಕರ್ಾತೀತವಾಗಿದೆ. ಇದು ಲೋಕೋತ್ತರ ಧಮ್ಮವಾಗಿದ್ದು, ಗೋತ್ರಭು ಜ್ಞಾನವು ಮಾತ್ರ ನಿಬ್ಬಾಣವನ್ನು ಅರಿಯುತ್ತದೆ. ನಿಬ್ಬಾಣವು ಅನಿವರ್ಾಚ್ಯವಾಗಿದೆ. ಇದು ಮಾತಿನಿಂದ ಆಗಲಿ, ಪದಗಳಿಂದಾಗಲಿ, ವಾಕ್ಯಗಳಿಂದಾಗಲಿ, ಗ್ರಂಥಗಳಿಂದಾಗಲಿ ವಿವರಿಸಲಾಗದು. ಅದು ದೇಹಕ್ಕೆ ಅತೀತ, ಮನಸ್ಸಿಗೂ ಅತೀತ, ಇಂದ್ರೀಯಗಳಿಗೂ ಅತೀತ, ಸಮಾಧಿ ಸ್ಥಿತಿಗಳಿಗೂ ಅತೀತವಾದುದು. ಸರ್ವಲೋಕಗಳಿಗೂ ಅತೀತವಾದುದು. ಅದು ಸ್ವತಃ ಅನುಭವಿಸುವಂತಹುದು ಸ್ವತಃ ಅರಿಯುವಂತಹುದು, ಪದಗಳಿಂದ ವಿವರಿಸಿದಷ್ಟು ಅದನ್ನು ತಪ್ಪಾಗಿ ಅಥರ್ೈಸಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ನಿಬ್ಬಾಣವನ್ನು ಲೋಕೋತ್ತರ ಮಾರ್ಗದಲ್ಲಿರುವವರು ಮಾತ್ರ ಸಾಕ್ಷಾತ್ಕರಿಸಬಹುದು.
ನಿಬ್ಬಾಣವನ್ನು ಶೂನ್ಯತಾ ಎನ್ನುತ್ತಾರೆ. ಏಕೆಂದರೆ ಇದು ಲೋಭ, ದ್ವೇಷ ಮತ್ತು ಮೋಹಗಳಿಂದ ಶೂನ್ಯವಾಗಿರುತ್ತದೆ. ಅಷ್ಟೇ ಅಲ್ಲ, ಸ್ಥಿತಿಗಳಿಗೆ ಅತೀತವಾಗಿರುತ್ತದೆ. ಅಂದರೆ ಎಲ್ಲಾ ಸ್ಥಿತಿಗಳಿಗೆ 3 ಅವಸ್ಥೆಗಳಿರುತ್ತದೆ. ಉದಯಿಸುವಿಕೆ, ಅಳಿಯುವಿಕೆ ಮತ್ತು ಬದಲಾಗುವಿಕೆ. ಆದರೆ ನಿಬ್ಬಾಣದಲ್ಲಿ ಈ 3 ಅವಸ್ಥೆಗಳಿರುವುದಿಲ್ಲ. ಆದ್ದರಿಂದ ಇದು ಸ್ಥಿತಿಗೆ ಅತೀತ ಶೂನ್ಯವಾಗಿದೆ. ನಿಬ್ಬಾಣವನ್ನು ನಿಮಿತ್ತರಹಿತ (ಅನಿಮಿತ್ತ) ಎನ್ನುತ್ತಾರೆ. ಏಕೆಂದರೆ ಲೋಭ ನಿಮಿತ್ತವಾಗಲಿ, ದ್ವೇಷ ನಿಮಿತ್ತವಾಗಲಿ, ಮೋಹ ನಿಮಿತ್ತವಾಗಲಿ ಯಾವುದೇ ನಿಮಿತ್ತಗಳು ಅಲ್ಲಿರುವುದಿಲ್ಲ. ನಿಬ್ಬಾಣವನ್ನು ಅಪ್ಪನಿಹಿತೊ ಅಂದರೆ ಆಸೆರಹಿತ ಎನ್ನುತ್ತಾರೆ. ಇದು ಎಲ್ಲಾರೀತಿಯ ಬಯಕೆಗಳಿಂದ ತನ್ಹಾಗಳಿಂದ, ಯೋಚನೆಗಳಿಂದ, ಗ್ರಹಿಕೆಗಳಿಂದ, ವೇದನೆಗಳಿಂದ ಮುಕ್ತವಾಗಿದೆ.
ನಿಬ್ಬಾಣವು ವೀಕ್ಷಿಸುವಂತಹುದ್ದಾಗಿದೆ, ನಿಬ್ಬಾಣವು ಅಮರವಾದುದು, ಆನಂತವಾದುದು, ಸ್ಥಿತಿಗೆ ಅತೀತವಾದುದು ಮತ್ತು ಅನುಪಮೇಯವು ಅನುತ್ತರವು ಆಗಿದೆ.
ಒಟ್ಟಾರೆ ಅದನ್ನು ಹೀಗೆ ವಿವರಿಸಬಹುದು.
ನಿಬ್ಬಾಣದ ನಕಾರಾತ್ಮಕ ವರ್ಣನೆ (ನಿಬ್ಬಾಣದಲ್ಲಿ ಏನಿಲ್ಲ?)
* ನಿಬ್ಬಾಣವು ಪೂರ್ಣವಾಗಿ ದುಃಖರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಹಂರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಲೋಭರಹಿತವಾದುದು
ನಿಬ್ಬಾಣವು ಪೂರ್ಣವಾಗಿ ದ್ವೇಷರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಮೋಹರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಕಶ್ಮಲರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಜನ್ಮರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ತನ್ಹಾರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಸ್ತಿತ್ವರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅರಚಿತವಾದುದು
* ನಿಬ್ಬಾಣವು ಅಭೂತವಾದುದು (ಅನುಪತ್ತಿ)
* ನಿಬ್ಬಾಣವು ಅಜಾತವಾದುದು (ಹುಟ್ಟಿಲ್ಲದ)
* ನಿಬ್ಬಾಣವು ಅಕತವಾದುದು (ಸ್ಥಿತಾತೀತವಾದುದು) (ಅವಸ್ಥೆಗೆ ಅತೀತ/ಗತಿಗೆ ಅತೀತ) (ಅನವಲಂಬಿತ/ಅಕಾರಣಿಯ)
* ನಿಬ್ಬಾಣವು ಜನ್ಮರಹಿತವಾದುದು
* ನಿಬ್ಬಾಣವು ಜರಾರಹಿತವಾದುದು
* ನಿಬ್ಬಾಣವು ಜರೆರಹಿತವಾದುದು
* ನಿಬ್ಬಾಣವು ಮರಣರಹಿತವಾದುದು
* ನಿಬ್ಬಾಣವು ಭಯರಹಿತವಾದುದು
* ನಿಬ್ಬಾಣವು ಉಪಾದಿರಹಿತವಾದುದು (ಬಂಧಗಳಿಲ್ಲದುದು).
* ನಿಬ್ಬಾಣದಲ್ಲಿ ಆತ್ಮವಿಲ್ಲ, ಜೀವಾತ್ಮವಿಲ್ಲ, ಪರಮಾತ್ಮವೂ ಇಲ್ಲ (ಏಕೆಂದರೆ ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ದೇವರಿಲ್ಲ ಮತ್ತು ಇದು ದೇವರ ಜೊತೆ ಸಂಗಮವೂ ಅಲ್ಲ (ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ಬ್ರಹ್ಮನಾಗಲಿ ಅಥವಾ ಪರಬ್ರಹ್ಮನಾಗಲಿ ಇಲ್ಲ (ಇವೆಲ್ಲದಕ್ಕಿಂತ ಅತೀತ ಸ್ಥಿತಿ).
* ನಿಬ್ಬಾಣವೆಂದರೆ ಮೃತ್ಯುವೂ ಅಲ್ಲ, ಶಾಶ್ವತವಾಗಿ ಇರುವುದೂ ಅಲ್ಲ.
* ನಿಬ್ಬಾಣವೆಂದರೆ ಸ್ವರ್ಗವಲ್ಲ, ಬ್ರಹ್ಮನೊಂದಿಗೆ ಐಕ್ಯವೂ ಅಲ್ಲ.
ನಿಬ್ಬಾಣದ ಸಕಾರಾತ್ಮಕ ವರ್ಣನೆ :
* ನಿಬ್ಬಾಣವು ಪರಮಸುಖಕರವಾದುದು
* ನಿಬ್ಬಾಣವು ಧ್ರುವವಾದುದು
* ನಿಬ್ಬಾಣವು ಶುಭವಾದುದು
* ನಿಬ್ಬಾಣವು ಕ್ಷೇಮಕರವಾದುದು
* ನಿಬ್ಬಾಣವು ಕೇವಲ (ಅದ್ವಿತೀಯವಾದುದು)
* ನಿಬ್ಬಾಣವು ಅಮರವಾದುದು
* ನಿಬ್ಬಾಣವು ಅನಂತವಾದುದು
* ನಿಬ್ಬಾಣವು ಅನುಪಮೇಯವಾದುದು
* ನಿಬ್ಬಾಣವು ಅನುತ್ತರವಾದುದು
* ನಿಬ್ಬಾಣವು ಪಾರವು (ಆಚೆಯದು)
* ನಿಬ್ಬಾಣವು ಪರ (ಪರಮಶ್ರೇಷ್ಟವಾದುದು)
* ನಿಬ್ಬಾಣವು ಪರಾಯಣವಾದುದು (ಶರಣು ಹೊಂದುವಂತಹದು)
* ನಿಬ್ಬಾಣವು ತಾಣ (ರಕ್ಷಿತವಾದುದು)
* ನಿಬ್ಬಾಣವು ಸಿವ (ಸುಖಕರವಾದುದು)
* ನಿಬ್ಬಾಣವು ಅನಾಲಯ (ಆಲಯವಿಲ್ಲದುದು/ನಿವಾಸವಿಲ್ಲದುದು)
* ನಿಬ್ಬಾಣವು ಅಕ್ಷರವಾದುದು (ನಾಶರಹಿತ)
* ನಿಬ್ಬಾಣವು ವಿಶುದ್ಧವಾದುದು (ಪರಿಪೂರ್ಣ ಪರಿಶುದ್ಧವಾದುದು)
* ನಿಬ್ಬಾಣವು ಲೋಕೋತ್ತರವಾದುದು (ಲೋಕಗಳಿಗೆ ಅತೀತವಾದುದು)
* ನಿಬ್ಬಾಣವು ಮುಕ್ತಿ
* ನಿಬ್ಬಾಣವು ವಿಮುಕ್ತಿ
* ನಿಬ್ಬಾಣವು ಶಾಂತಿ
* ನಿಬ್ಬಾಣವು ಪರಮಶಾಂತಿ
ಬುದ್ಧರಿಂದ ನಿಬ್ಬಾಣದ ವರ್ಣನೆ
ಓ ಭಿಕ್ಷುಗಳೇ, ಹುಟ್ಟಿಲ್ಲದ (ಅಜಾತ), ಉದಯರಹಿತವಾದ (ಅಭೂತ), ಅನಿಮರ್ಿತ (ಅಕತ) ಮತ್ತು ಸ್ಥಿತಿಯಿಲ್ಲದ/ಅಕಾರಣಿಯ/ಅನವಲಂಬಿತ (ಅಸಂಖತ)ವಾದ ಸ್ಥಿತಿಯೊಂದಿದೆ. ಓ ಭಿಕ್ಷುಗಳೇ ಒಂದುವೇಳೆ ಅಜಾತವಾದ, ಅಭೂತವಾದ, ಅಕತವಾದ, ಅಸಂಖತವಾದ ಈ ಸ್ಥಿತಿಯು ಇಲ್ಲದಿದ್ದರೆ ಹುಟ್ಟಿನಿಂದ, ಉದಯಿಸುವಿಕೆಯಿಂದ, ನಿಮರ್ಿತವಾದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿರುತ್ತಿರಲಿಲ್ಲ. ಹುಟ್ಟಿಲ್ಲದ, ಉದಯರಹಿತವಾದ ಅನಿಮರ್ಿತ, ಅನವಲಂಬಿತ ಸ್ಥಿತಿಯಿಲ್ಲದ ಸ್ಥಿತಿ ಇರುವುದರಿಂದಲೇ ಹುಟ್ಟಿನಿಂದ, ಉದಯಿಸುವಿಕೆಯಿಂದ ನಿಮರ್ಿತಗಳಿಂದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿದೆ.
ಎಲ್ಲಿ ಭೌತಿಕವು ಇಲ್ಲವೋ, ಮಾನಸಿಕತೆಯು ಇಲ್ಲವೋ, ಅದು ಈ ಲೋಕವು ಅಲ್ಲ, ಪರಲೋಕವೂ ಅಲ್ಲವೋ, ಇವೆರಡೂ ಅಲ್ಲವೋ, ಸೂರ್ಯನಾಗಲಿ, ಚಂದ್ರನಾಗಲಿ ಅಲ್ಲವೋ, ಎಲ್ಲಿ ಉದಯಿಸುವಿಕೆ ಇಲ್ಲವೋ, ಮುಂದುವರೆಯುವಿಕೆಯು ಇಲ್ಲವೋ, ನಿರಂತರತೆ ಇಲ್ಲವೋ, ಎಲ್ಲಿ ಸಾವಿಲ್ಲವೋ ಅಥವಾ ಪುನರ್ಜನ್ಮವಿಲ್ಲವೋ, ಯಾವುದಕ್ಕೂ ಆಧಾರವಾಗಿಲ್ಲವೋ, ಯಾವುದೋ ಬೆಳವಣಿಗೆಯಿಲ್ಲವೋ, ಯಾವುದೇ ಬೆಂಬಲವಿಲ್ಲವೋ ಇದೇ ದುಃಖದ ಅಂತ್ಯವಾಗಿದೆ, ನಿಬ್ಬಾಣವಾಗಿದೆ.
ಎಲ್ಲಿ ಯಾವುದು ಇಲ್ಲವೊ, ಎಲ್ಲಿ ಏನನ್ನು ಹಿಡಿಯಲಾರರೋ....
ವಿಮುಕ್ತ ಚಿತ್ತವು ಯಾವುದಕ್ಕೂ ಅಂಟಲಾರದು ಅಂದರೆ ನಿಬ್ಬಾಣ.
ಎಲ್ಲಿ ಪೃಥ್ವಿಯಿಲ್ಲವೋ, ಜಲವಿಲ್ಲವೋ, ಅಗ್ನಿಯಿಲ್ಲವೋ, ಗಾಳಿಯಿಲ್ಲವೋ ಅನಂತ ಆಕಾಶವಿಲ್ಲವೋ, ಅರಿವಿನ ಅನಂತತೆಯಿಲ್ಲವೋ, ಏನೂ ಇಲ್ಲವೆಂಬ ಸಮಾಧಿ ಸ್ಥಿತಿ ಅಲ್ಲವೋ, ಗ್ರಹಿಕೆಯಿಲ್ಲ, ಗ್ರಹಿಕೆಯಿಲ್ಲದೆಯೂ ಇಲ್ಲ ಅಲ್ಲವೋ, ಅದು ಈ ಲೋಕವಲ್ಲ, ಪರಲೋಕವೂ ಅಲ್ಲ. ಚಂದ್ರನೂ ಅಲ್ಲ, ಸೂರ್ಯನೂ ಅಲ್ಲ, ಅಲ್ಲಿ ಬರುವಿಕೆ ಆಗಲಿ, ಹೋಗುವಿಕೆಯಾಗಲಿ ಇಲ್ಲ. ಅಥವಾ ನಿಲ್ಲುವಿಕೆಯೂ ಅಲ್ಲ, ಅದಕ್ಕೆ ಯಾವುದೇ ಆಧಾರವಿಲ್ಲ, ಯಾವುದೇ ಬೆಂಬಲವಿಲ್ಲ. ಇದೇ ದುಃಖದ ಅಂತ್ಯವಾಗಿದೆ (ನಿಬ್ಬಾಣ).
ಹೇಗೆ ಜ್ವಾಲೆಯು ಆರಿಹೋದಾಗ, ಜ್ವಾಲೆಯನ್ನು ವಿವರಿಸಲಾಗದೋ ಅದೇರೀತಿಯಲ್ಲಿ ಅರಹಂತರು ನಾಮರೂಪಗಳಿಂದ ಮುಕ್ತರಾದಾಗ ಅವರನ್ನು ವಿವರಿಸಲಾಗುವುದಿಲ್ಲ.
...ಅವರನ್ನು ಅಳತೆ ಮಾಡಲು ಆಗುವುದಿಲ್ಲ, ಯಾವಾಗ ಎಲ್ಲವೂ ಹೋಗುತ್ತದೋ, ಆಗ ಎಲ್ಲಾರೀತಿಯ ಗುತರ್ಿಸುವಿಕೆಗಳೂ ಹೋಗುತ್ತದೆ.
ಯಾವಾಗ ಹಳೆಯ ಸ್ಥಿತಿಗಳೆಲ್ಲವೋ ಆಳಿಸಲಾಗಿದೆಯೋ ಮತ್ತು ಹೊಸದು ಉದಯಿಸಲಾರವೋ ಅಂತಹ ಚಿತ್ತಕ್ಕೆ ಮುಂದಿನ ಜನ್ಮವಿರಲಾರದು. ಬೀಜವು ಸುಟ್ಟು ಹಾಕಲ್ಪಟ್ಟಿದೆ. ತನ್ಹಾವು ಉದಯಿಸಲಾರದು, ಅಂತಹ ಜ್ಞಾನಿಗಳು ದೀಪದಂತೆ ಆರಿ (ನಂದಿ) ಹೋಗುತ್ತಾರೆ.
ಕಾಯವು ಚೂರಾಗಿ, ಗ್ರಹಿಕೆಯು ಅಳಿಸಿಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಇಲ್ಲವಾಗಿ, ವಿನ್ಯಾನವು ತನ್ನ ಕೊನೆಯನ್ನು ಮುಟ್ಟುತ್ತದೆ.
ಸಾರಿಪುತ್ತರ ಹೇಳಿಕೆ
ಲೋಭದ ನಾಶ, ದ್ವೇಷದ ನಾಶ ಮತ್ತು ಮೋಹದ ನಾಶ, ಮಿತ್ರನೇ ಇದೇ ನಿಬ್ಬಾಣವಾಗಿದೆ.
ನಿಬ್ಬಾಣದ ವಿಧಗಳು :
ಕಿಲೇಶ ಪರಿನಿಬ್ಬಾಣ ಮತ್ತು ಖಂದ ಪರಿನಿಬ್ಬಾಣ ಎಂದು ಎರಡು ವಿದಗಳಿವೆ.
ಕಿಲೇಶ ಪರಿನಿಬ್ಬಾಣ : ಕಿಲೇಶ (ಕ್ಲೇಷ) ಪರಿನಿಬ್ಬಾಣದಲ್ಲಿ ಅರಹಂತರ ರಾಗ, ದ್ವೇಷ ಮತ್ತು ಮೋಹಗಳು ನಾಶವಾಗುತ್ತದೆ, ಇನ್ನಿಲ್ಲವಾಗುತ್ತದೆ. ಮತ್ತೆ ಹುಟ್ಟುವುದಿಲ್ಲ. ಆದರೆ ಪಂಚಖಂಧಗಳು (ದೇಹ ಮತ್ತು ಮನಸ್ಸು) ಇರುತ್ತದೆ. ಅಂದರೆ ಮರಣದವರೆಗೂ ಇರುತ್ತದೆ. ಇದಕ್ಕೆ ಇನ್ನೊಂದು ಹೆಸರಿದೆ (ಸ. ಉಪಾದಿಸೇಸ ನಿಬ್ಬಾಣ) ಉಪಾದಿಗಳು (ಪಂಚಖಂಧಗಳು) ಶೇಷವಿರುವ ನಿಬ್ಬಾಣ ಎನ್ನುತ್ತಾರೆ. ಅಥವಾ ಪರಿನಿಬ್ಬಾಣ ಎನ್ನುತ್ತಾರೆ.
ಖಂದ ಪರಿನಿಬ್ಬಾಣ : ಖಂದ ಪರಿನಿಬ್ಬಾಣದಲ್ಲಿ ಅರಹಂತರು ತಮ್ಮ ಅಂತಿಮಾವಸ್ಥೆಯಲ್ಲಿ ಪಂಚಖಂಧಗಳನ್ನು ಬಿಟ್ಟುಬಿಡುತ್ತಾರೆ. ಅವು ನಾಶವಾಗುತ್ತವೆ, ಇನ್ನಿಲ್ಲವಾಗುತ್ತದೆ, ಮತ್ತೆ ಹುಟ್ಟಲಾರದು. ಅವರಲ್ಲಿ ಈ ಮೊದಲೇ ಕ್ಲೇಶಗಳು (ರಾಗ, ದ್ವೇಷ ಮತ್ತು ಮೋಹಗಳು) ನಾಶವಾಗಿರುತ್ತದೆ. ಈಗ ಪಂಚಖಂಧಗಳು ಇನ್ನಿಲ್ಲವಾಗುತ್ತವೆ. ಮತ್ತೆ ಉದಯಿಸಲಾರದು. ಇದಕ್ಕೆ ಇನ್ನೊಂದು ಹೆಸರೇ (ಅನುಪಾದಿಸೇಸ ನಿಬ್ಬಾಣ ಅಥವಾ ಪರಿನಿಬ್ಬಾಣ ಎನ್ನುತ್ತಾರೆ).
ನಿಬ್ಬಾಣ ಸಂಬಂಧ ಪಟ್ಟ ಪ್ರಶ್ನೆಗಳು ಮತ್ತು ಉತ್ತರಗಳು :
1. ನಿಬ್ಬಾಣವೆಂದರೆ ಶಾಶ್ವತವಾಗಿ ಇರುವಿಕೆಯೇ?
ಖಂಡಿತವಾಗಿ ಅಲ್ಲ, ಏಕೆಂದರೆ ನಾನು ಎಂಬುದೇ ಇಲ್ಲದಿರುವಾಗ ಇದು ಅನ್ವಯಿಸುವುದಿಲ್ಲ.
2. ಹಾಗಾದರೆ ಮೃತ್ಯುವೇ ? ನಶಿಸುವಿಕೆಯೇ ?
ಖಂಡಿತವಾಗಿ ಅಲ್ಲ. ಮೃತ್ಯುವೆಂದರೆ ತಾತ್ಕಾಲಿಕ ಜೀವನದ ತಾತ್ಕಾಲಿಕ ಕೊನೆಯಾಗಿದೆ. ಇಲ್ಲಿ ಇದು ಅಮರತ್ವ ಆಗಿರುವಾಗ ಮೃತ್ಯುವಾಗಲಿ, ನಶಿಸುವಿಕೆಯಾಗಲಿ ಇಲ್ಲ.
3. ನಿಬ್ಬಾಣವು ಇಲ್ಲವಾಗುವಿಕೆಯೇ ? ಶೂನ್ಯವೇ ?
ಆಕಾಶ ಮತ್ತು ನಿಬ್ಬಾಣಗಳೆರಡು ಧ್ರುವವಾದುದು ಮತ್ತು ಬದಲಾಗದ್ದು, ಇದು ಶಾಶ್ವತವಾದದ್ದು. ಏಕೆಂದರೆ ಇವು ಏನನ್ನೂ ಒಳಗೊಂಡಿಲ್ಲ. ಇವು ಕಾಲಾತೀತವಾದದ್ದು. ಆಕಾಶ ಇಲ್ಲದ ಸ್ಥಿತಿಯಾದರೆ, ನಿಬ್ಬಾಣ ಇದೆ, ಇಲ್ಲದಿದ್ದರೆ ಇರುವ ಸ್ಥಿತಿಗಳಿಂದ ಮುಕ್ತಿಯಾಗುತ್ತಿರಲಿಲ್ಲ. ಆದರೆ ಇದೆ ಎಂದು ಪಂಚಖಂಧಗಳನ್ನು, ಸಮಾಧಿ ಸ್ಥಿತಿಗಳನ್ನು ನೆನಪಿಸಿಕೊಂಡರೆ ಅದು ಇಲ್ಲವೆನ್ನಬೇಕಾಗುತ್ತದೆ.
4. ನಿಬ್ಬಾಣವು ಪರಮಸುಖ ಹೇಗೆ ?
ನಿಬ್ಬಾಣವು ಪರಮಸುಖ. ಹೇಗೆಂದರೆ ದುಃಖವು ಇಲ್ಲದಿರುವುದರಿಂದಾಗಿ, ಹೊರತು ಇಂದ್ರೀಯ ಸುಖಗಳಿಲ್ಲ, ಸಮಾಧಿ ಸುಖಗಳು ಅಲ್ಲ. ಅಷ್ಟೇ ಅಲ್ಲ, ಇದು ಅನುಭವಿಸುವಂತಹುದು ಅಲ್ಲ. ಅಂದರೆ ವೇದನೆಯಲ್ಲ, ವೇದನೆಗೆ ಅತೀತ ಸ್ಥಿತಿಯಾಗಿದೆ. ಅನುಭವಿಸಲಾರದ ಸ್ಥಿತಿಯಾಗಿದ್ದರಿಂದಲೆ ಇದು ಪರಮ ಸುಖವಾಗಿದೆ. ಅಷ್ಟೇ ಅಲ್ಲ, ಯಾವುದೆಲ್ಲವನ್ನು ನಾವು ಅನುಭವಿಸುವೆವೋ ಆ ಎಲ್ಲಾ ಸುಖಗಳು ದುಃಖವೆಂದು ಆರ್ಯರಿಂದ ಪರಿಗಣಿಸಲ್ಪಡುತ್ತದೆ.
5. ನಿಬ್ಬಾಣಕ್ಕೆ ನಾವು ನಾನು ಎಂದು ಅಥವಾ ಆತ್ಮ ಅಥವಾ ದೇವರು ಎಂದು ಕರೆಯಬಹುದೇ ?
ಖಂಡಿತವಾಗಿಯೂ ತಪ್ಪು. ಏಕೆಂದರೆ ನಾನು ಅಥವಾ ದೇವರು ಅಥವಾ ಆತ್ಮಗ್ರಹಿಕೆ ಮಾಡುವವರು ಪಕ್ಷಪಾತಿಗಳಾಗಿರುತ್ತಾರೆ. ಅವರು ನಿಜವಾದ ಸತ್ಯವೀಕ್ಷಕ ರಾಗಿರುವುದಿಲ್ಲ. ಅಂದರೆ ಅವರಲ್ಲಿ ಲೋಭ ಮತ್ತು ಮೋಹವಿರುತ್ತದೆ. ಅಂತಹವರಿಗೆ ನಿಬ್ಬಾಣವೇ ದೊರಕುವುದಿಲ್ಲ. ಅಂತಹ ಎಲ್ಲಾ ದೃಷ್ಟಿಗಳು ಸಂಶಯ ದಾಟುವ ವಿಶುದ್ಧಿಯಲ್ಲೇ ತಡೆಯಲ್ಪಡುತ್ತವೆ ಮತ್ತು ಸತ್ಯ ವೀಕ್ಷಣೆಯ ಬಗ್ಗೆ ಮಜ್ಜಿಮ ನಿಕಾಯ 1ನೇ ಸುತ್ತದಲ್ಲೇ ಬಹು ಚೆನ್ನಾಗಿ ವಿವರಿಸಲಾಗಿದೆ.
6. ನಿಬ್ಬಾಣ ಎಲ್ಲಿದೆ ?
ನಿಬ್ಬಾಣವು ಎಲ್ಲಿಯೂ ಇಲ್ಲ, ಅದನ್ನು ಯಾರು ಎಲ್ಲೇ ಇರಲಿ, ಶೀಲ, ಸಮಾಧಿ, ಪ್ರಜ್ಞಾ ಸ್ಥಾಪಿಸಿದಾಗ ಅದನ್ನು ಸಾಕ್ಷಾತ್ಕರಿಸಬಹುದು. ಹೇಗೆ ಜ್ವಾಲೆಯು ಎಲ್ಲಿಯೂ ಇರುವುದಿಲ್ಲವೋ ಬೆಂಕಿಕಡ್ಡಿ ಗೀರಿದಾಗ ಹುಟ್ಟುವುದೋ ಹಾಗೇ ಕೆಲವು ಅಗತ್ಯ ಸ್ಥಿತಿಗಳು ಪೂರೈಕೆಯಾದಾಗ ನಿಬ್ಬಾಣ ದಶರ್ಿಸಬಹುದು.
7. ನಿಬ್ಬಾಣವನ್ನು ಪ್ರಾಪ್ತಿ ಮಾಡುವುದು ಯಾವುದು?
ಈ ಪ್ರಶ್ನೆಯು ಪಕ್ಕಕ್ಕೆ ಇಡುವಂತಹದ್ದಾಗಿದೆ. ಏಕೆಂದರೆ ನಾನು, ನನ್ನದು, ನನ್ನ ಆತ್ಮ ಈ ಎಲ್ಲಾ ಭಾವನೆಗಳ ಸಂಶಯ ನಿವಾರಣೆಯದಾಗಲೇ ನಿಬ್ಬಾಣ ಪ್ರಾಪ್ತಿಯಾಗುವುದು ಆ ಅರ್ಥದಲ್ಲಿ. ನಾನು ಎಂಬುದು ಇಲ್ಲ. ಆತ್ಮ ಎಂಬುದು ಇಲ್ಲ. ಇವೆಲ್ಲ ಈ ಹಿಂದಿನ ಹಂತಗಳಲ್ಲಿ ವಿವರಿಸಲಾಗಿದೆ. ವ್ಯಾವಹಾರಿಕವಾಗಿ ಹೇಳಬೇಕಾದರೆ ಅರಹಂತರು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಪಾರಮಾಥರ್ಿಕವಾಗಿ ಹೇಳಬೇಕಾದರೆ ನಿಬ್ಬಾಣವಿದೆ, ಆದರೆ ಮಾನವ ಅದರಲ್ಲಿ ಪ್ರವೇಶಿಸಲಾರ/ಹುಡುಕಲಾರ. ಮಾರ್ಗವಿದೆ, ಆದರೆ ಯಾವ ಪ್ರಯಾಣಿಕನಿಲ್ಲ ಎಂದು ಹೇಳಬೇಕಾಗುತ್ತದೆ.
8. ಪ್ರತಿಯೊಬ್ಬರ ಗುರಿ ನಿಬ್ಬಾಣವೇಕೆ ಆಗಬೇಕು?
ಇಲ್ಲಿ ಎಲ್ಲರಿಗೂ ನಿಬ್ಬಾಣ ಕಡ್ಡಾಯವಾಗಿ ಗುರಿ ಎಂದು ಹೇಳುತ್ತಿಲ್ಲ. ಅದು ವ್ಯಕ್ತಿಗತ ಸ್ವತಂತ್ರ್ಯವಾಗಿದೆ. ಯಾರು ಯಾವುದನ್ನು ಬೇಕಾದರೂ ಗುರಿ ಇಟ್ಟುಕೊಳ್ಳಬಹುದು. ಆದರೆ ಎಲ್ಲದರ ಪರಿಣಾಮ, ಫಲಿತಾಂಶ ಮೊದಲು ಸುಖ, ನಂತರ ದುಃಖ ಸಿಗುತ್ತಿರುತ್ತದೆ. ಅವರಿಗೆ ಅದೇ ಇಷ್ಟವಾದರೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಪ್ರಜ್ಞಾವಂತರ ಗುರಿ ಮಾತ್ರ ನಿಬ್ಬಾಣ ಆಗಿರುತ್ತದೆ. ಏಕೆಂದರೆ ಅವರು ಪುನಃ ದುಃಖ ಜಾಲಕ್ಕೆ ಸಿಲುಕಲು ಇಚ್ಛಿಸುವುದಿಲ್ಲ.
ನಿಬ್ಬಾಣದ ವಿಷಯದಲ್ಲಿ ಗೊಂದಲ ಮೂಡದಿರಲು ಒಂದು ಸಣ್ಣ ಕಥೆ
ಸದಾ ನೀರಿನಲ್ಲಿದ್ದ ಮೀನಿಗೆ ಒಮ್ಮೆ ದೂರದ ಪ್ರಾಂತ್ಯದ ಆಮೆಯು ಸಿಗುತ್ತದೆ. ಆ ಆಮೆಯು ತಾನು ನೆಲದಿಂದ ಬಂದೆ ಎಂದು ಹೇಳುತ್ತದೆ.
ಮೀನು : ಆ ನೆಲವು (ಭೂಮಿ) ಹೇಗಿರುತ್ತದೆ ?
ಆಮೆ : ಅದು ಒಣಗಿರುತ್ತದೆ.
ಮೀನು : ಅಂದರೆ ಅದರ ಅರ್ಥವೇನು ?
ಆಮೆ : ಅಲ್ಲಿ ತೇವಾಂಶವಿರುವುದಿಲ್ಲ
ಮೀನು : ಅಂದರೆ ಅಲ್ಲಿ ತಂಪಿರುತ್ತದೆಯೆ?
ಆಮೆ : ಹೌದು ಮತ್ತು ಅಲ್ಲ
ಮೀನು : ಏನು ನೀನು ಹೇಳುತ್ತಿರುವುದು ಅಸಂಬದ್ಧವಾಗಿದೆ. ಅಲ್ಲಿ ಅಲೆಗಳಿವೆಯೇ?
ಆಮೆ : ಇಲ್ಲ ಅಲ್ಲಿ ಈಜಾಡುವುದು ಸಾಧ್ಯವಿಲ್ಲ
ಮೀನು : ಈಜಾಡಲು ಸಾಧ್ಯವಿಲ್ಲವೇ? ಅಂತಹುದು ಯಾವುದೂ ಇಲ್ಲ. ಅಲ್ಲಿ ಮೀನುಗಳು ಇವೆಯೇ ?
ಆಮೆ : ಇಲ್ಲ, ಪ್ರಾಣಿಗಳು ಇವೆ ಮತ್ತು ಕಟ್ಟಡಗಳಿವೆ, ಮಾನವರಿದ್ದಾರೆ.
ಮೀನು : ಅವೆಂದರೆ ಏನು? ಹೋಗಲಿ ನೆಲದಲ್ಲಿ ತಂಪಿದೆಯೆ, ಮೃದುತನವಿದೆಯೇ ಹೇಳು.
ಆಮೆ : ಇಲ್ಲ, ಒರಟುತನವಿದೆ, ಕೆಲವೊಮ್ಮೆ ತಂಪು, ಕೆಲವೊಮ್ಮೆ ಬಿಸಿಲು ಇರುತ್ತದೆ.
ಮೀನು : ನಾನು ನಂಬುವುದೇ ಇಲ್ಲ. ನೀನು ದೊಡ್ಡ ಸುಳ್ಳುಗಾರ. ನೀನು ನನಗೆ ಮಾತನಾಡಿಸಬೇಡ.
ಆಗ ಆಮೆಯು ಇದರ ಬಳಿ ಚಚರ್ೆಯೆ ವ್ಯರ್ಥ ಎಂದು ತಿಳಿದು ನೆಲದೆಡೆ ಹೊರಟಿತು.
ಹೀಗೆ ನಿಬ್ಬಾಣವು ಅನುಭವ ವೇದ್ಯ ಹೊರತು ಚಚರ್ೆಯ ವಿಷಯವಲ್ಲ. ಸಾಕ್ಷಾತ್ಕರಿಸುವ ವಿಷಯವಾಗಿದೆ 

Thursday, 21 December 2017

ಆನಾಪಾನಾ ವೇದನಾನುಪಸ್ಸನಾ Anapana vedanaanupassana

                            ಆನಾಪಾನಾ ವೇದನಾನುಪಸ್ಸನಾ :

5. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಪೀತಿ (ಆನಂದ)ವನ್ನು ಅನುಭವಿಸುತ್ತಾ ಉಸಿರು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಇಲ್ಲಿ ಆನಂದವನ್ನು 2 ವಿಧದಲ್ಲಿ ಅನುಭವಿಸಬಹುದು.

1. ಧ್ಯಾನ ವಸ್ತು ವಿಷಯದಿಂದ (ಸಮಥದಿಂದ) 2. ಗೊಂದಲಾತೀತದಿಂದ (ವಿಪಶ್ಶನದಿಂದ) ಇಲ್ಲಿ ಧ್ಯಾನ ವಿಷಯದಿಂದ ಪ್ರಥಮ ಸಮಾಧಿ ಪ್ರಾಪ್ತಿಯಾದಾಗಿನಿಂದ ಆತನು ಆನಂದವನ್ನು ಅನುಭವಿಸಿರುತ್ತಾನೆ. ಇಲ್ಲಿ ಆತನು ಪ್ರಥಮ ಮತ್ತು ದ್ವಿತೀಯ ಧ್ಯಾನದಲ್ಲಿ ಅನುಭವಿಸಿದ ಆನಂದದಲ್ಲಿ ಅನಿತ್ಯತೆ ಕಾಣುತ್ತಾನೆ. ಹೀಗೆ ಆತನು ಗೊಂದಲಾತೀತನಾಗುತ್ತಾನೆ.
ಇಲ್ಲಿ ಆತನು 16 ರೀತಿಯಲ್ಲಿ ಆನಂದವನ್ನು ಉದಯಿಸುವಂತೆ ಮಾಡಬಹುದು. ಹೇಗೆಂದರೆ ಆತನು ಅನಾಪಾನಾಸತಿಯಲ್ಲಿ ಏಕಾಗ್ರತೆಯಿಂದ ಇದ್ದಾಗ, ಯಾವುದೇ ರೀತಿ ಭಂಗಬಾರದ ರೀತಿಯಲ್ಲಿ ಧ್ಯಾನಿಸುತ್ತಿರುವಾಗ ಅದನ್ನು (1) ಅರಿತಾಗ (2) ಗಮನಹರಿಸಿದಾಗ (3) ಗ್ರಹಿಸಿದಾಗ (4) ಸ್ಪಷ್ಟವಾಗಿ ನೋಡಿದಾಗ (5) ಪ್ರತಿಬಿಂಬಿಸಿದಾಗ (6) ನಿರ್ಧರಿಸಿದಾಗ (7) ಶ್ರದ್ಧೆಯಿಂದ ನಿರ್ಧರಿಸಿದಾಗ (8) ಪ್ರಯತ್ನಶೀಲದಿಂದ ಕೂಡಿದಾಗ (9) ಜಾಗ್ರತೆ ಸ್ಥಾಪಿಸಿದಾಗ (10) ಏಕಾಗ್ರತೆಯಲ್ಲಿ ನೆಲೆಸಿದಾಗ (11) ಪ್ರಜ್ಞೆಯಿಂದ ಅರಿತಾಗ (12) ಅಭಿಜ್ಞಾದಿಂದ ಕೂಡಿದಾಗ (13) ಯಾವುದನ್ನು ಅರಿಯಬೇಕೋ ಅದನ್ನು ಅರಿತಾಗ (14) ಯಾವುದನ್ನು ತ್ಯಜಿಸಬೇಕೋ ಅದನ್ನು ತ್ಯಜಿಸಿದಾಗ (15) ಯಾವುದನ್ನು ವೃದ್ಧಿಸಬೇಕೋ ಅದನ್ನು ವೃದ್ಧಿಸಿದಾಗ (16) ಯಾವುದನ್ನು ಸಾಕ್ಷಾತ್ಕರಿಸಬೇಕೋ ಅದನ್ನು ಸಾಕ್ಷಾತ್ಕರಿಸಿದಾಗ ಆನಂದ ಉದಯಿಸುತ್ತದೆ.
ಯಾವಾಗ ಆತನು ಸದಾ ಉದಾತ್ತವಾದ ಆನಂದದಿಂದ ಕೂಡಿರುವನೋ ಆಗ ಆತನಿಂದ ಯಾವುದೇ ಪಾಪ ಆಗುವುದಿಲ್ಲ. ಇದೇ ಆತನ ಶೀಲವಾಗಿರುತ್ತದೆ. ಆಗ ಆತನು ಅಭಂಗ ಏಕಾಗ್ರತೆಯಲ್ಲಿರುತ್ತಾನೆ. ಇದೇ ಆತನ ಸಮಾಧಿಯಾಗಿದೆ. ಈ ಆನಂದವು ಅನಿತ್ಯ, ಅನಾತ್ಮ ಎಂದು ಅರಿಯುತ್ತಾನೆ. ಇದೇ ಆತನ ಪ್ರಜ್ಞೆಯಾಗಿದೆ. ಹೀಗೆ ಆತನು ಸುಶಿಕ್ಷಣವನ್ನು ಪಡೆಯುತ್ತಾನೆ.

ಸಂಕ್ಷಿಪ್ತ ಆನಾಪಾನಾ ವೇದನಾನುಪಸ್ಸನಾ

. ಇಲ್ಲಿ ಸಾಧಕನು ಆನಂದವನ್ನು ಅರಿಯುತ್ತಾ ಅದರ ಅನಿತ್ಯತೆಯನ್ನು ಅರಿಯುತ್ತಾನೆ. ಅದು ಶಾಶ್ವತವಲ್ಲ ಎಂದು ಅರಿಯುತ್ತಾನೆ. ಆಗ ಆತನು ನಿತ್ಯವೆಂಬ ಗ್ರಹಿಕೆ (ನಿಚ್ಚ ಸನ್ಯಾ) ತ್ಯಜಿಸುತ್ತಾನೆ.
. ನಂತರ ವೇದನೆಗಳೆಲ್ಲವೂ ಅವು ಸುಖ ಪೂರ್ವಕವೇ ಆಗಿದ್ದರೂ ಜನ್ಮ ನೀಡುವುದರಿಂದ, ವಿಯೋಗವಾಗುವುದರಿಂದ ಮರೆಯಾಗುವುದರಿಂದಾಗಿ ಅವು ದುಃಖಕರ ಎಂದು ಅರಿತು ಸುಖವೆಂಬ ಗ್ರಹಿಕೆಯನ್ನು (ಸುಖಿ ಸನ್ಯಾ) ತ್ಯಜಿಸುತ್ತಾನೆ.
. ನಂತರ ಸಾಧಕನು ಯಾವುದೆಲ್ಲಾ ವೇದನೆಗಳು ಉದಯಿಸಿ ಮರೆಯಾಗುತ್ತವೆಯೋ ಮತ್ತು ದುಃಖಜಾತವು ಅಗಿರುವುದರಿಂದಾಗಿ ಅವು ನಾನಲ್ಲ, ನನ್ನದಲ್ಲ ಅವು ನನ್ನ ಆತ್ಮವಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಆತನು ಆನಂದವೇ ನನ್ನ ಆತ್ಮ ಎಂಬ ಮಿಥ್ಯಾ ಗ್ರಹಿಕೆಯನ್ನು (ಅತ್ತಸನ್ಯಾ) ತೊರೆಯುತ್ತಾನೆ.
. ಹೀಗಾಗಿ ಆತನು ವೇದನೆಗಳಲ್ಲಿ (ಆನಂದದಲ್ಲಿ) ಯಾವ ಸುಖವನ್ನು ಪಡೆಯಲಾರ. ಆತನು ಆನಂದಿಸುವ ಪ್ರವೃತ್ತಿ ತೊರೆಯುತ್ತಾನೆ.
. ಹೀಗೆ ಆತನು ವಿರಾಗಿಯಾಗುತ್ತಾನೆ, ವೇದನೆಗಳಲ್ಲಿ (ಆನಂದದಲ್ಲಿ) ವಿರಾಗ ಭಾವನೆ ತಾಳುತ್ತಾನೆ, ಹೀಗಾಗಿ ಆತನು ಭಾವೋದ್ರೇಕಗಳನ್ನೆಲ್ಲಾ ತೊರೆಯುತ್ತಾನೆ.
. ನಂತರ ಆತನು ಈ ವೇದನೆಗಳ ಅಂತ್ಯ ಮಾಡಲು ನಿರ್ಧರಿಸುತ್ತಾನೆ (ನಿರೋಧ) ಮತ್ತು ಆತನಲ್ಲಿ ವೇದನೆಗಳು ಉದಯಿಸಲಾರವು. ಏಕೆಂದರೆ ಆತನು ಅವುಗಳ ಸಮುದಾಯ (ಉತ್ಪತ್ತಿ)ವನ್ನೇ ನಿಲ್ಲಿಸಿದ್ದಾನೆ. ಆತನಲ್ಲಿ ಈಗ ಸ್ಪರ್ಶವಾದರೂ ವೇದನೆಗಳು ಉಂಟಾಗುವುದಿಲ್ಲ.
. ಹೀಗೆ ಆತನು ವೇದನೆಗಳನ್ನು (ಆನಂದವನ್ನು) ತ್ಯಜಿಸುತ್ತಾನೆ. ಅವುಗಳಲ್ಲಿ ಅಂಟುವುದಿಲ್ಲ. ಅವುಗಳಿಗೆ ಅತೀತನಾಗುತ್ತಾನೆ. ಹೀಗೆ ಆತನು ಆನಂದದಲ್ಲಿ ಅನುಭವಿಸುತ್ತಾ ಉಸಿರಾಟದ ಧ್ಯಾನದಲ್ಲಿ ವಿಹರಿಸುತ್ತಾನೆ.

6. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಸುಖ (ದಿವ್ಯವಾದ ಸುಖ)ವನ್ನು ಅನುಭವಿಸುತ್ತಾ ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರ ಬಿಡುತ್ತಿದ್ದೇನೆ.

ಆನಂದವು ಸ್ಥೂಲವಾದರೆ ಸುಖವು ಸೂಕ್ಷ್ಮವಾಗಿದೆ. ಆನಂದವನ್ನು ದ್ವಿತೀಯ ಧ್ಯಾನದವರೆಗೆ ಅನುಭವಿಸಿದರೆ, ಸುಖವನ್ನು ತೃತೀಯ ಧ್ಯಾನದವರೆಗೆ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ, ಸುಖವನ್ನು ವಿಪಶ್ಶನ ಧ್ಯಾನದಲ್ಲಿಯೂ ಅನುಭವಿಸಬಹುದಾಗಿದೆ.
ಆನಂದದಂತೆ ಸುಖವನ್ನು ಸಹ 16 ವಿಧದಲ್ಲಿ ಉದಯಿಸಬಹುದಾಗಿದೆ ಮತ್ತು ಸದಾ ಸುಖ ಪೂರ್ವಕದಲ್ಲಿ ಇರುವವನಲ್ಲಿ ಶೀಲ, ಸಮಾಧಿ ಮತ್ತು ಪ್ರಜ್ಞಾವು ನೆಲೆಸಿರುತ್ತದೆ.
ಇಲ್ಲಿ ಸಾಧನೆಯೆಲ್ಲವೂ ಹಿಂದಿನ ಹಂತದಂತೆಯೇ ಅಂದರೆ ಆನಂದವನ್ನು ಅನುಭವಿಸಿದ ರೀತಿಯಲ್ಲಿಯೇ. ಆದರೆ ವ್ಯತ್ಯಾಸವಿರುವುದು ಕೇವಲ ಹಿಂದಿನ ಸಾಧನೆಗೆ ಆನಂದವು ವಸ್ತು ವಿಷಯವಾಗಿತ್ತು. ಇಲ್ಲಿ ಸುಖವು ವಸ್ತು ವಿಷಯವಾಗಿದೆ.

7. ಚಿತ್ತ ಸಂಖಾರಗಳನ್ನು ಅನುಭವಿಸುತ್ತಾ ನಾನು ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರಬಿಡುತ್ತಿದ್ದೇನೆ. ಈ ರೀತಿ ಸುಶಿಕ್ಷಣ ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.

ಇಲ್ಲಿ ಸುಶಿಕ್ಷಣವೆಂದರೆ ಶೀಲ, ಸಮಾಧಿ, ಪ್ರಜ್ಞಾವೇ ಆಗಿದೆ. ಒಳ ಉಸಿರು, ಹೊರ ಉಸಿರಿನ ಜಾಗ್ರತೆಯೇ ಆನಾಪಾನಾಸತಿಯಾಗಿದೆ. ಇಲ್ಲಿ ಚಿತ್ತ ಸಂಖಾರಗಳನ್ನು ವೀಕ್ಷಿಸುವುದೇ ಪ್ರಜ್ಞಾವಾಗಿದೆ. ಇಲ್ಲಿ ಚಿತ್ತಸಂಖಾರಗಳೆಂದರೆ ವೇದನಾ ಮತ್ತು ಸನ್ಯಾ (ಸಞ್ಞಾ) ಆಗಿದೆ. ಈ ವೇದನಾ ಮತ್ತು ಸನ್ಯಾವು ಪಂಚಖಂಧಗಳಲ್ಲಿ ಎರಡಾಗಿದೆ. ಉಳಿದವುಗಳೆಂದರೆ ರೂಪ, ವಿನ್ಯಾನ, ಸಂಖಾರ.
ಇಂದ್ರಿಯ ಮತ್ತು ಇಂದ್ರೀಯಗಳ ಸ್ಪರ್ಶದ ನಂತರದ ಸ್ಥಿತಿಯೇ ವೇದನಾ ಆಗಿದೆ. ವೇದನೆಯೆಂದರೆ ಯಾವ ವೇದನೆಯೆಂದು ಪತ್ತೆಹಚ್ಚುವುದೇ ಸನ್ಯಾ (ಗ್ರಹಿಕೆ)ಯಾಗಿದೆ. ಹಾಗೆಯೇ ಮನಸ್ಸು ಮತ್ತು ಮನಸ್ಸಿನ ವಿಷಯಗಳು ಸಂಪಕರ್ಿಸಿದಾಗ ವೇದನೆ (ಸಂವೇದನೆ) ಉಂಟಾಗುತ್ತದೆ. ಧ್ಯಾನದಲ್ಲೂ ಕಾಯಾನುಪಸ್ಸನಾ ಮತ್ತು ವೇದನೆ ಆನಾಪಾನಾ ಮಾಡುವಾಗ ವೇದನೆಗಳು ಉಂಟಾಗುತ್ತದೆ. ಅವು ಮುಖ್ಯವಾಗಿ 3 ವಿಧವಾಗಿದೆ. ಪ್ರಿಯ (ಸುಖ) ವೇದನೆ, ದುಃಖ (ಅಪ್ರಿಯ) ವೇದನೆ ಮತ್ತು ಪ್ರಿಯ ಅಪ್ರಿಯವಲ್ಲದ (ಸುಖವೂ-ದುಃಖವೂ ಅಲ್ಲದ ವೇದನೆ) ವೇದನೆ. ಇವು ಯಾವ ವೇದನೆಯೆಂದು ಪತ್ತೆಹಚ್ಚುವುದೇ ಗ್ರಹಿಕೆಯಾಗಿದೆ.
ಧ್ಯಾನ ಆಳದಲ್ಲಿ ಸಂಖಾರಗಳು, ವಿನ್ಯಾನವು, ಯೋಚನೆಗಳು ಇರುವುದಿಲ್ಲ. ಆದರೆ ವೇದನೆ ಮತ್ತು ಸನ್ಯಾಗಳು ಇರುತ್ತದೆ. ಹೀಗಾಗಿ ಇವುಗಳ ವೀಕ್ಷಣೆಯೇ ಚಿತ್ತ ಸಂಖಾರಗಳ ವೀಕ್ಷಣೆ ಅಥವಾ ನಿಜವಾದ ವೇದನಾನುಪಸ್ಸನಾವಾಗಿದೆ. ಸನ್ಯಾವು ದೃಷ್ಟಿಗೆ (ಮಿಥ್ಯಾ ದೃಷ್ಟಿಗೆ) ಮೂಲವಾಗಿದೆ. ಉದಾಹರಣೆಗೆ : ಸುಂದರವಾಗಿದೆ ಎಂಬ ಶುಭದೃಷ್ಟಿ, ಸುಖವಾಗಿದೆ ಎಂಬ ಸುಖದೃಷ್ಟಿ, ಇದು ನಾನೇ ಎಂಬ ಆತ್ಮದೃಷ್ಟಿ, ಇದು ನಿತ್ಯ ಎಂಬ ನಿಚ್ಚ ದಿಟ್ಟಿ ಇವೆಲ್ಲವೂ ಗ್ರಹಿಕೆಯಿಂದಲೇ ಉಂಟಾಗುತ್ತದೆ. ಹಾಗೆಯೇ ಪ್ರಜ್ಞಾದಿಂದ ಅಶುಭಾ, ಅನಿತ್ಯಾ, ದುಃಖ ಮತ್ತು ಅನಾತ್ಮವು ಉಂಟಾಗುತ್ತದೆ.
ಇದು ಅಪ್ಪಟವಾದ ವಿಪಸ್ಸನಾ ಧ್ಯಾನವಾಗಿದೆ. ಇಲ್ಲಿ ಸಮಥದ ಪ್ರವೇಶವಿಲ್ಲವಾಗಿದೆ. ವೇದನಾದಿಂದ ಸನ್ಯಾವು ಉಂಟಾಗುತ್ತದೆ. ಹಾಗೆಯೇ ಸನ್ಯಾದಿಂದ ವೇದನಾವು ಸಹಾ ಉಂಟಾಗುತ್ತದೆ. ಸನ್ಯಾದಿಂದ ಮನೋಕ್ಲೇಶವಾದ ದಿಟ್ಟಿ ಉಂಟಾಗುತ್ತದೆ. ಆದರೆ ವೇದನಾದಿಂದ ಇಚ್ಛೆ ಉಂಟಾಗುತ್ತದೆ. ಈ ಇಚ್ಛೆಯೇ ಎಲ್ಲ ಕರ್ಮಗಳ ಮೂಲವಾಗಿದೆ. ಗ್ರಹಿಕೆ ಮತ್ತು ವೇದನೆಗಳು ಮನಸ್ಸಿಗೆ ಕಾರಣವಾಗಿದೆ ಹಾಗು ಸನ್ಯಾವು ಮಾತ್ರ ಮನಸ್ಸಿನ ಅಂತಿಮ ಸ್ಥಿತಿಯಾಗಿದೆ. ಇಲ್ಲಿ ಮತ್ತೊಮ್ಮೆ ವೇದನಾನುಪಸ್ಸನಾ ಆರಂಭವಾಗಬೇಕಾಗುತ್ತದೆ. ಇಲ್ಲಿ ಆನಂದವೇ ಆಗಿರಲಿ, ಸುಖವೇ ಆಗಿರಲಿ ಅದು ವೇದನೆಯೆಂದು ಪರಿಗಣಿಸಲ್ಪಡುತ್ತದೆ. ಅವುಗಳ ವೀಕ್ಷಣೆ ಇಲ್ಲಿ ಆಗುತ್ತದೆ. ಇಲ್ಲಿ ವೇದನೆಗಳ ಉದಯ, ಸ್ಥಾಪನೆ, ಅಳಿವು ಎಲ್ಲವನ್ನೂ ಸಾಧಕ ಅರಿಯುತ್ತಿರುತ್ತಾನೆ.

8. ಚಿತ್ತ ಸಂಖಾರಗಳನ್ನು ಶಾಂತಗೊಳಿಸುತ್ತ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಆತನು ಸುಶಿಕ್ಷಣ ಪಡೆದು ಸಾಧನೆ ಮಾಡುತ್ತಿರುತ್ತಾನೆ. 

ಇಲ್ಲಿ ಚಿತ್ತ ಸಂಖಾರಗಳಾದ ವೇದನೆ ಮತ್ತು ಗ್ರಹಿಕೆಗಳ ಕಡೆ ಕೇಂದ್ರೀಕರಿಸಿ ಆನಾಪಾನಾಸಾಧನೆ ಮಾಡುತ್ತಿರುತ್ತಾನೆ. ಆತನು ವೇದನೆಗಳಿಗೆ ಅನಿತ್ಯ, ಅತೃಪ್ತಿಕಾರಕ (ದುಃಖ) ಮತ್ತು ಅನಾತ್ಮ (ನಾನು ಅಲ್ಲ) ಕಂಡು ಆನಂದದಿಂದ ಮತ್ತು ಸುಖದಿಂದ ವಿಮುಖವಾಗುತ್ತಾನೆ. ಹಾಗೆಯೇ (ಮಿಥ್ಯಾ) ಸನ್ಯಾದಿಂದ ಅಂದರೆ ಶುಭ (ಸುಂದರ) ನಿತ್ಯ, ಸುಖ ಮತ್ತು ಇದೇ ನನ್ನ ಆತ್ಮ, ಇದೇ ನಾನು, ಇದೇ ನನ್ನದು ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ವೇದನೆಗಳ ಮತ್ತು ಸನ್ಯಾಗಳ ಉದಯ ಹೇಗೆ ಆಗುತ್ತವೆ ಎಂಬುದನ್ನು ಅರಿಯುತ್ತಾನೆ. ಹಾಗೆಯೇ ಅವುಗಳ ಅಪಾಯ ಅರಿಯುತ್ತಾನೆ. ಅವುಗಳಲ್ಲಿ ಆಸಕ್ತಿ ಕ್ಷೀಣಿಸಿ ಅವುಗಳಲ್ಲಿ ಆನಂದಿಸದೆ, ವಿರಾಗಿಯಾಗಿ ವೇದನೆಗಳ ಉದಯವನ್ನೇ ತಡೆದು ಈ ರೀತಿಯಾಗಿ ವೇದನೆಗಳ ಅಂತ್ಯಹಾಡಿ ತ್ಯಜಿಸುತ್ತಾನೆ. ಇರುವ ವೇದನೆಗಳನ್ನು ನಿಲ್ಲಿಸುತ್ತಾನೆ. ಹೊಸದಾಗಿ ವೇದನೆ ಉದಯಿಸದಂತೆ ಮಾಡುತ್ತಾನೆ. ಸಮಚಿತ್ತತೆಯನ್ನು ವೃದ್ಧಿಸಿ ವೇದನಾ ಸಮಚಿತ್ತತೆ ಸಾಧಿಸುತ್ತಾನೆ.

ಆನಾಪಾನಾ ವಿಪಸ್ಸನ ಧ್ಯಾನ Anapana vipasana dhyana

                                     ಆನಾಪಾನಾ ವಿಪಸ್ಸನ ಧ್ಯಾನ 


ಆನಾಪಾನಸತಿ ಸುತ್ತದ ವಿವರಣೆ

ಆನಾಪಾನಾ ಕಾಯಾನುಪಶ್ಶನ :

ಭಿಕ್ಷುಗಳೇ, ಆನಾಪಾನಸತಿ ಸಾಧನೆ ಮಾಡಿದರೆ ಮತ್ತು ವೃದ್ಧಿಸಿದರೆ ಅಕುಶಲ ಚೇತಸಿಕಾಗಳನ್ನೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಮಾಡುತ್ತದೆ. ಆನಾಪಾನಸತಿಯು ಶಾಂತಿಯುತವಾದುದು ಮತ್ತು ಉದಾತ್ತವಾದುದು. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ.
ಆನಾಪಾನಸತಿ ವೃದ್ಧಿಸಿದರೆ ಮತ್ತು ಸಾಧನೆ ಮಾಡಿದರೆ ಎಂದರೆ ಉಸಿರಾಟದ ಜಾಗರೂಕತೆಯಲ್ಲಿರುವ ಧ್ಯಾನ ಅಥವಾ ಉಸಿರಾಟದ ಧ್ಯಾನದಲ್ಲಿರುವ ಜಾಗರೂಕತೆ ಎಂದರ್ಥ. ಇದರಲ್ಲಿ ಪದೇ ಪದೇ ತಲ್ಲೀನನಾಗುವುದು ಎಂದು ಅರ್ಥವಾಗಿದೆ.
ಇದು ವೃದ್ಧಿಸಿದಾಗ ಅಕುಶಲ ಚೇತಿಸಿಕಾಗಳೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಯಾಗುತ್ತದೆ ಅಂದರೆ ಯಾವುದೆಲ್ಲವೂ ಅಕುಶಲ ಪ್ರವೃತ್ತಿಗಳು, ಯೋಚನೆಗಳು ಮತ್ತು ಅಕುಶಲ ಸ್ಥಿತಿಗಳು ಇವೆಯೋ ಒಂದೇಬಾರಿಗೆ ನಾಶಗೊಳ್ಳುತ್ತದೆ, ಸ್ತಬ್ದಗೊಳ್ಳುತ್ತದೆ. ಏಕೆಂದರೆ ಕುಶಲ ಚಿತ್ತಗಳ ಸಮಗ್ರತೆಯ ಪ್ರಶಾಂತತೆ ಅಷ್ಟು ಬಲಿಷ್ಠವಾಗಿರುತ್ತದೆ. ಅಷ್ಟು ಪರಿಣಾಮಕಾರಿಯಾದ ಕ್ರಿಯಾಶೀಲತೆ ಅಲ್ಲಿರುತ್ತದೆ.
ಆನಾಪಾನಸತಿಯು ಶಾಂತವಾದುದು ಮತ್ತು ಉದಾತ್ತವಾದುದು ಎಂದರೆ ಧ್ಯಾನದ ವಸ್ತುವಿನ (ವಿಷಯ) ಅರ್ಥದಲ್ಲಿ ಮತ್ತು ಧ್ಯಾನದ ಪರಿಣಾಮದ ಅರ್ಥದಲ್ಲಿ ಹೇಳಲಾಗಿದೆ. ಅಂದರೆ ಉದಾಹರಣೆಗೆ ಅಶುಭ ಧ್ಯಾನವೇ ತೆಗೆದುಕೊಳ್ಳಿ. ಅಲ್ಲಿ ಧ್ಯಾನದ ವಸ್ತುವು ಅಸಹ್ಯವಾಗಿರುತ್ತದೆ. ಕುರೂಪವಾಗಿರುತ್ತದೆ. ಆದರೆ ಪರಿಣಾಮ ಮಾತ್ರ ಅತ್ಯಂತ ಸುಲಾಭಕಾರಿಯಾಗಿದೆ. ಆದರೆ ಆನಾಪಾನಸತಿಯಲ್ಲಿ ಹಾಗಲ್ಲ, ಇಲ್ಲಿ ಧ್ಯಾನದ ವಿಷಯವು ಮತ್ತು ಪರಿಣಾಮವು ಶಾಂತವಾಗಿಯು ಇದೆ ಮತ್ತು ಉದಾತ್ತವಾಗಿಯು ಇದೆ. ಶಾಂತವೆಂದರೆ ಧ್ಯಾನದ ವಸ್ತುವು ಶಾಂತವಾಗಿ, ಸೂಕ್ಷ್ಮವಾಗಿ, ಸುಂದರವಾಗಿದೆ ಮತ್ತು ಶಾಂತತೆಯನ್ನು ನಿಮರ್ಿಸುತ್ತದೆ. ನಿಬ್ಬಾಣದ ಶಾಂತತೆಗೆ ಸಹಾಯಕಾರಿಯಾಗಿದೆ. ಹಾಗೆಯೇ ಶ್ರೇಷ್ಠ ಪರಿಣಾಮಗಳನ್ನು ನೀಡುವುದರಿಂದಾಗಿ ಉದಾತ್ತವಾಗಿದೆ. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ ಎಂದರೆ ನಿಜಕ್ಕೂ ಕಸಿನಾಗಳಂತೆ ಅಥವಾ ಅಶುಭಾ ಧ್ಯಾನಗಳಂತೆ ಬಾಹ್ಯ ವಸ್ತುವಿನ ಅಗತ್ಯವಿಲ್ಲ. ಇದು ವಿಶೇಷವಾಗಿದೆ. ಯಾವುದೇ ದೇವರ ಜಪವಾಗಲಿ, ರೂಪ ಕಲ್ಪನೆಯಾಗಲಿ ಅಗತ್ಯವಿಲ್ಲ. ಆದ್ದರಿಂದ ಇದು ಅಮಿಶ್ರಿತವಾಗಿದೆ, ವಿಶಿಷ್ಟವಾಗಿದೆ. ಆಹ್ಲಾದಕರ ವಿಹಾರ ಎಂದರೆ ಇದರಿಂದ ದೊರಕುವ ಸಮಾಧಿಯ ಸ್ಥಿತಿಯು ಅತ್ಯಂತ ಆಹ್ಲಾದಕರ ಸುಖಗಳಿಂದ ಕೂಡಿರುವುದರಿಂದಾಗಿ ಅಂತಹುದರಲ್ಲಿ ವಿಹರಿಸುವುದರಿಂದ ಇದನ್ನು ಆಹ್ಲಾದಕರ ವಿಹಾರ ಎಂದು ಹೇಳುತ್ತಾರೆ.
ಇಲ್ಲಿ ಭಿಕ್ಷುವು (ಸಾಧಕ)... ಪದ್ಮಾಸನದಲ್ಲಿ ಆಸೀನನಾಗಿ, ದೇಹವನ್ನು ಸ್ಥಿರವಾಗಿಟ್ಟುಕೊಂಡು, ನೇರವಾಗಿಟ್ಟುಕೊಂಡು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಾನೆ.
ಅಂದರೆ ಇಲ್ಲಿ ಸಾಧಕನು ಪದ್ಮಾಸನದಲ್ಲಿ (ಸುಖಾಸನ) ದೇಹವನ್ನು ನೇರವಾಗಿಟ್ಟು ಒಳ ಉಸಿರು ಮತ್ತು ಹೊರ ಉಸಿರಿನಲ್ಲಿಯೇ ಜಾಗರೂಕತೆಯನ್ನು ಪ್ರತಿಷ್ಠಾಪಿಸಿ ಧ್ಯಾನಿಸುತ್ತಿರುತ್ತಾನೆ ಎಂದರ್ಥ.

ಹಂತ-1 : ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 

ಅಂದರೆ ಇಲ್ಲಿ ಉಸಿರಾಟವು ಸಾಮಾನ್ಯವಾಗಿ ದೀರ್ಘವಾಗಿರಬಹುದು ಅಥವಾ ಓಡಿಬಂದು ಹಾಗೆಯೇ ಧ್ಯಾನಕ್ಕೆ ಕುಳಿತಿದ್ದರೆ ಆಗಲೂ ಉಸಿರಾಟ ದೀರ್ಘವಾಗಿರಬಹುದು ಅಥವ ಗಾಬರಿಯಿಂದ ಉಸಿರಾಟ ದೀರ್ಘವಾಗಿರಬಹುದು. ಅಂದರೆ ಉಸಿರನ್ನು ಕಿಬ್ಬೊಟ್ಟೆಯವರೆಗೆ ತೆಗೆದುಕೊಂಡಾಗ ಅದು ದೀರ್ಘ ಉಸಿರಾಟ ಎನಿಸುತ್ತದೆ. ಒಟ್ಟಿನಲ್ಲಿ ಉಸಿರಾಟ ಈ ರೀತಿಯ ದೀರ್ಘ ಉಸಿರಾಟವಿದ್ದಾಗ ಅದನ್ನು ಹಾಗೆಯೇ ಅದು ಇರುವ ಹಾಗೆ ಯತಾಭೂತವಾಗಿ ಹಾಗೆಯೇ ಅರಿಯುವುದು. ಆದರೆ ಯೋಚಿಸುವ ಹಾಗಿಲ್ಲ.
ಉಸಿರಾಟವು ಮೂಗಿನ ತುದಿಗೆ ಅಥವಾ ಮೇಲ್ತುಟಿಗೆ ಸ್ಪಶರ್ಿಸುತ್ತಿರುತ್ತದೆ. ಅಲ್ಲೇ ಅಬಾಧಿತ ಏಕಾಗ್ರತೆಯನ್ನು ನಿಲ್ಲಿಸಬಹುದು ಅಥವಾ ಕೆಲವು ಸಾಧಕರು ಕಿಬ್ಬೊಟ್ಟೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತಾರೆ. ಪ್ರತಿ ಒಳ ಉಸಿರು ಮತ್ತು ಹೊರ ಉಸಿರಿಗೂ ಕಿಬ್ಬೊಟ್ಟೆ ಏರಿಳಿತ ಮಾಡುತ್ತಿರುತ್ತದೆ. ಅಲ್ಲೂ ಸಹ ಮನಸ್ಸು ಕೇಂದ್ರೀಕರಿಸಬಹುದು. ಆಗ ಉತ್ಸಾಹ ಉಂಟಾಗುತ್ತಿರುತ್ತದೆ. ಆನಂದ ಉಂಟಾಗುತ್ತಿರುತ್ತದೆ. ಅವನ್ನೆಲ್ಲಾ ವೃದ್ಧಿ ಮಾಡಬೇಕು. ಆದರೆ ಮೂಗಿನ ತುದಿ ಅಥವಾ ಕಿಬ್ಬೊಟ್ಟೆ ಎಲ್ಲೇ ಆಗಲಿ ಒಂದುಕಡೆ ಮಾತ್ರ ಏಕಾಗ್ರತೆ ಬೆಳೆಸಬೇಕು. ಎರಡುಕಡೆ ಬೆಳೆಸಿದರೆ, ಮನಸ್ಸು ಚದುರಿ ಅಶಾಂತತೆ ಉಂಟಾಗುತ್ತದೆ. ಮಿಕ್ಕ ಎಲ್ಲಾ ವಿಷಯಗಳಿಂದ ಮನಸ್ಸು ವಿಮುಖಗೊಳಿಸಬೇಕು. ಉಸಿರಾಟದ ಗಮನದ ವಿನಃ ಬೇರಾವ ಯೋಚನೆ ಇರಬಾರದು. ಮುಂದೆ ಸಾಧನೆ ಮುಂದುವರೆದಂತೆ ಜಾಗ್ರತಾ ಸ್ಥಿತಿಯು ಸಹಜವಾಗುತ್ತಾ ಹೋಗುತ್ತದೆ.

ಹಂತ-2 : ಉಸಿರಾಟವು ಕಿರಿದಾಗಿದ್ದಾಗ ನಾನು ಕಿರಿದಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾರೆ. 

ಅಂದರೆ ಇಲ್ಲಿ ಉಸಿರಾಟ ಸಾಮಾನ್ಯವಾಗಿ ಕಿರಿದಾಗಿರಬಹುದು ಅಥವಾ ಇಲ್ಲಿ ಉಸಿರಾಟಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ ಅಥವಾ ಉಸಿರಾಟದ ಗಾತ್ರ ಕಿರಿದಾಗಿರಬಹುದು. ಅಂದರೆ ಬಲವಂತವಾಗಿ ಉಸಿರಾಟವನ್ನು ದೀರ್ಘ ಅಥವಾ ಕಿರಿದಾಗಿ ಮಾಡಬಾರದು. ಈ ರೀತಿ ಕಿರಿದಾಗಿ ಉಸಿರಾಟವು ನಡೆಯುತ್ತಿರುವಾಗ ದೇಹವು ಅತ್ಯಂತ ಸಮತೋಲನವಾಗಿ, ಸ್ಥಿರವಾಗಿರುತ್ತದೆ ಮತ್ತು ಅಲುಗಾಡುವುದಿಲ್ಲ. ಉಸಿರಾಟವನ್ನು ಆಡುತ್ತಿದ್ದರೂ ಸಹ ಅದರ ಚಲನೆಯನ್ನು ಬೇರೆಯವರು ಗಮನಿಸಲು ಆಗುವುದಿಲ್ಲ. ಅಂದರೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ಚಲನೆ ಕಾಣದ ರೀತಿ ನಡೆಯುತ್ತಿರುತ್ತದೆ. ಅದು ಹೇಗೇ ನಡೆಯುತ್ತಿರಲಿ ಅದನ್ನು ಹಾಗೆಯೇ ಗಮನಿಸುತ್ತಿರಬೇಕು. ಈ ಸ್ಥಿತಿಯಲ್ಲಿ ಯೋಚನೆಗಳು ನಿಂತಿರುತ್ತದೆ. ಭೂತಕಾಲದಲ್ಲಿಯಾಗಲಿ ಅಥವಾ ಭವಿಷ್ಯತ್ತಿನಲ್ಲಿ ಆಗಲಿ ಮನಸ್ಸು ಚಲಿಸುವುದಿಲ್ಲ.

ಹಂತ-3 : ಇಡೀ (ಉಸಿರಿನ) ದೇಹವನ್ನು ಅನುಭವಿಸಿ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. 

ಇಡೀ ಉಸಿರಿನ ಕಾಯವನ್ನು ಅನುಭವಿಸಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಸ್ಥಾಪಿಸುತ್ತಾನೆ. ಆತನು ಅತ್ಯಂತ ಜಾಗೃತನು ವಿಶ್ಲೇಷಣೆಯಿಂದ ಕೂಡಿರುತ್ತಾನೆ.  ಉಸಿರನ್ನು ಬಿಟ್ಟು ಬೇರೇನನ್ನು ಯೋಚಿಸಲಾರ, ಗ್ರಹಿಸಲಾರ, ಅರಿಯಲಾರ, ಅನುಭವಿಸಲಾರ. ಆತನು ಕೇವಲ ಉಸಿರಿನಲ್ಲೇ ಗಮನವಿಟ್ಟು ಉಸಿರಿನ ಆದಿ ಅಂತ್ಯ ಮತ್ತು ಮಧ್ಯದ ಪ್ರಕ್ರಿಯೆಯ ಎಲ್ಲವನ್ನು ಅರಿಯುತ್ತಾನೆ. ಉಸಿರು ಮೊದಲು ಮೂಗಿನ ತುದಿಯಲ್ಲಿ ಆರಂಭವಾಗುತ್ತದೆ ಮತ್ತು ನಾಭಿಯ ಬಳಿ ಅಂತಿಮವಾಗುತ್ತದೆ. ಮೂಗು ಮತ್ತು ನಾಭಿಯ ಮಧ್ಯದ ಭಾಗವೇ ಮಧ್ಯ (ಅಥವಾ ಹೃದಯ ಮತ್ತು ಪುಪ್ಪಸ). ಆತ ಮೂಗಿನ ತುದಿ ಮಾತ್ರವಲ್ಲ ಅಥವಾ ಎದೆಯ ಭಾಗ ಮಾತ್ರವಲ್ಲ ಅಥವಾ ನಾಬಿಯ ಭಾಗ ಮಾತ್ರವಲ್ಲ, ಆತ ಈ ಮೂರು ಅವಸ್ಥೆಯಲ್ಲೂ ಅಂದರೆ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿಯೂ ಪೂರ್ಣವಾಗಿ ಪ್ರಕ್ರಿಯೆ ಅರಿಯುತ್ತಾನೆ. ಹೀಗೆ ಆತನು ಉಸಿರಿನ ಕಾಯವನ್ನು ಅನುಭವಿಸಿ ಉಸಿರಾಟದಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾನೆ. ಉದಾಹರಣೆಗೆ ತಾಯಿಯು ಮಗುವನ್ನು ತೊಟ್ಟಿಲಲ್ಲಿ ತೂಗಾಡಿಸುತ್ತಾ ಇರುವಾಗ ಬಹಳ ಜಾಗ್ರತೆಯಿಂದ ಇರುತ್ತಾಳೆ. ಮಗುವು ನಿದ್ರಿಸಿದರೂ ಮತ್ತೆ ಎಚ್ಚರಗೊಂಡಾಗ ಎಲ್ಲಿ ಎದ್ದು ಅಥವಾ ನಿಂತು ತೊಟ್ಟಿಲಿನಿಂದ ಬೀಳುವುದೋ ಎಂದು ಮಮತೆಯಿಂದ ಪೂರ್ಣ ಜಾಗ್ರತೆಯಿಂದ ಕೂಡಿ ಕಾಪಾಡುತ್ತಾಳೆ. ತನ್ನ ಗಮನವೆಲ್ಲಾ ಆ ಮಗುವಿನ ಮೇಲೆಯೇ ಇಟ್ಟಿರುತ್ತಾಳೆ. ಆ ಮಗುವಿನ ತೊಟ್ಟಿಲಿನ ಪ್ರತಿ ಅವಸ್ಥೆಯಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾಳೆ. ಹಾಗೆಯೇ ನಾವು ಸಹ ಉಸಿರಾಟದ ಪ್ರತಿ ಸ್ಥಿತಿಯಲ್ಲೂ ಜಾಗ್ರತೆ ಸ್ಥಾಪಿಸಬೇಕಾಗಿದೆ. ಕಾಯವನ್ನು ಅನುಭವಿಸಿ ಅಂದರೆ ವಿಶಾಲ ಅರ್ಥದಲ್ಲಿ ಇಡೀ ಶರೀರದ ರೂಪಕಾಯದಲ್ಲಿ ಮತ್ತು ನಾಮಕಾಯ (ಮನಸ್ಸು)ದಲ್ಲಿ ಅನುಭವಿಸಿ ಉಸಿರಾಡುತ್ತಿದ್ದೇವೆ ಎಂದರ್ಥವಾಗುತ್ತದೆ. ಆದರೆ ಪರಿಣಿತರು ಕೇವಲ ಉಸಿರಿನ ಕಾಯ ಮಾತ್ರ ಎಂದು ಹೇಳುತ್ತಾರೆ.

4. ಆತನು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. ಹೇಗೆಂದರೆ : ನಾನು ಕಾಯಸಂಖಾರ (ದೇಹದ ಚಟುವಟಿಕೆ)ಗಳನ್ನು ಶಾಂತಗೊಳಿಸುತ್ತ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರ ಬಿಡುತ್ತಿದ್ದೇನೆ.

ಇಲ್ಲಿ ಆತನು ದೇಹದ ಚಟುವಟಿಕೆಗಳನ್ನೆಲ್ಲಾ ಶಾಂತಗೊಳಿಸುತ್ತಾನೆ, ನಿಲ್ಲಿಸುತ್ತಾನೆ. ಸೂಕ್ಷ್ಮಗೊಳಿಸುತ್ತಾನೆ ಮತ್ತು ಪರಿಶುದ್ಧಿಗೊಳಿಸುತ್ತಾನೆ.
ಇಲ್ಲಿ ಶರೀರವು ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ ಮತ್ತು ಯೋಚಿಸದೆ ಇರುವಾಗ ಶರೀರದಲ್ಲಿ ನಾನಾ ವಿಧವಾದ ಕಸಿವಿಸಿ, ಒತ್ತಡ, ಕಠಿಣತೆ, ಕ್ಷೊಭೆ, ನೋವು ನಿಲ್ಲುತ್ತದೆ. ಆತನ ದೃಢನಿಧರ್ಾರದಿಂದ ನೋವು ಎಲ್ಲವನ್ನು ಮೀರಿದ್ದರಿಂದ ಶರೀರವು ಶಾಂತವಾಗುತ್ತದೆ, ಪಳಗುತ್ತದೆ, ಮೆದುವಾಗುತ್ತದೆ ತುಂಬಾ ಸೂಕ್ಷ್ಮವಾಗುತ್ತದೆ. ಹೇಗೆಂದರೆ ಒಬ್ಬ ತಲೆಯ ಮೇಲೆ ಭಾರವನ್ನು ಎತ್ತಿಕೊಂಡು ಓಡುವುದು ಅಥವಾ ಬೆಟ್ಟ ಹತ್ತುವುದು ಮಾಡಿದಾಗ ಆತನ ಉಸಿರು ತಾರಕಕ್ಕೆ ಏರುತ್ತದೆ, ಅತಿಯಾಗುತ್ತದೆ. ಮೂಗಿನ ಹೊಳ್ಳೆಗೆ ಉಸಿರು ಜೋರಾಗಿ ಬೀಸುತ್ತದೆ. ದೇಹವೆಲ್ಲಾ ಕ್ಷೊಭೆಗೆ ಗುರಿಯಾಗಿ ದೇಹದಲ್ಲಿ ಅಶಾಂತತೆ ಮೂಡುತ್ತದೆ. ಆದರೆ ಅದೇ ವ್ಯಕ್ತಿ, ಭಾರವನ್ನು ಬಿಸಾಕಿ, ಓಡುವುದನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತಾ ನಂತರ ಸ್ನಾನವನ್ನು ಮಾಡಿ, ತಂಪಾದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಉಸಿರಾಟವನ್ನು ಗಮನಿಸಿದಾಗ ಉಸಿರಾಟವು ತುಂಬಾ ಶಾಂತವಾಗಿ, ಸೂಕ್ಷ್ಮವಾಗಿ ಗೋಚರಿಸುತ್ತದೆ. ಉಸಿರೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದೇರೀತಿಯ ಅನುಭವವು ಆತನಿಗೆ ಕಾಯದ ಸಂಖಾರಗಳನ್ನು ಸೂಕ್ಷ್ಮಗೊಳಿಸುವುದ ರಿಂದಾಗಿ ಉಂಟಾಗುತ್ತದೆ.
ಕಾಯದ ಸಂಖಾರಗಳನ್ನು ಶಾಂತಗೊಳಿಸುವುದು ಅಥವಾ ಸೂಕ್ಷ್ಮಗೊಳಿಸುವುದು ಹೇಗೆ? ಒಂದು ಸಮಾಧಿಯಿಂದ ಹೇಗೆಂದರೆ ಪಂಚನೀವರಣಗಳನ್ನು ಮೀರುವುದರಿಂದಾಗಿ ನಂತರ ಸಮಾಧಿಯ ಹಂತಗಳನ್ನು ದಾಟುತ್ತಿದ್ದಂತೆ ಹಿಂದಿನದಕ್ಕಿಂತ ಈಗಿನ ಸ್ಥಿತಿಯು ಶಾಂತವಾಗಿ, ಸೂಕ್ಷ್ಮವಾಗಿ ಕಾಣುವುದು. ಇದೇರೀತಿ ಪ್ರತಿಯೊಂದು ಹಂತದಲ್ಲೂ ಮೇಲೆ ಹೋಗುತ್ತಿದ್ದಂತೆ ಹಿಂದಿನ ಹಂತವು ಸ್ಥೂಲವಾಗಿ ಕಾಣುತ್ತದೆ. ಈಗಿನ ಹಂತವು ಶಾಂತವಾಗಿ ಸೂಕ್ಷ್ಮವಾಗಿ ಕಾಣುತ್ತದೆ.
ಮತ್ತೊಂದು ವಿಧಾನವೆಂದರೆ ವಿಪಶ್ಶನ ಧ್ಯಾನದಿಂದ ಅಂದರೆ ವಿಪಶ್ಶನ ಧ್ಯಾನದಲ್ಲಿ ಕಾಯ ಸಂಖಾರಗಳು ಸ್ಥೂಲವಾಗಿ ಕಾಣುತ್ತದೆ. ಧಾತುಗಳು ಸೂಕ್ಷ್ಮವಾಗಿ ಕಾಣುತ್ತದೆ. ಹಾಗೆಯೇ ಅರೂಪ ಸಮಾಧಿಗೆ ಹೋಲಿಸಿದರೆ ರೂಪ ಸಮಾಧಿಯು ಸ್ಥೂಲವಾಗಿರುತ್ತದೆ. ಅರೂಪ ಸಮಾಧಿಯು ಸೂಕ್ಷ್ಮವಾಗಿರುತ್ತದೆ. ಆದರೆ ನಾಮ ರೂಪಗಳನ್ನು ಅರಿಯುತ್ತಿರುವಾಗ ಅರೂಪವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೆಯೇ ತ್ರಿಲಕ್ಷಣವನ್ನು ಅರಿಯುವಾಗ ನಾಮರೂಪದ ವಿಶ್ಲೇಷಣೆಯು ಸ್ಥೂಲವಾಗಿ ಕಂಡುಬರುತ್ತದೆ. ಇದೇರೀತಿ ಸಾಧನೆ ಮುಂದುವರೆಯುತ್ತಿರುತ್ತದೆ.
ಗಾಳಿಯ ಬಗ್ಗೆ, ಉಸಿರಾಟದ ಬಗ್ಗೆ ಜಾಗ್ರತೆಯು ಸ್ಥಾಪಿತವಾಗಿ, ನಿಮಿತ್ತಗಳಲ್ಲಿ ಕೌಶಲ್ಯಹೊಂದಿ ಮತ್ತು ಧ್ಯಾನಂಗಗಳಲ್ಲಿ ಕೌಶಲ್ಯ ಹೊಂದಿ, ಸಮಾಧಿಯಲ್ಲಿ ನೈಪುಣ್ಯತೆ ಪಡೆದು, ಹಂತ ಹಂತವು ಶುದ್ಧಿ ಹೊಂದುತ್ತಾನೆ. ಹಂತಹಂತವು ಸೂಕ್ಷ್ಮಕ್ಕೆ ಏರುತ್ತಾನೆ. ಹೇಗೆಂದರೆ ಗಂಟೆಯ ಶಬ್ದದಂತೆ, ಗಂಟೆಯ ಶಬ್ದವು ಹೊರಹೊಮ್ಮಿದಾಗ ಗಂಟೆಯ ಶಬ್ದ ಕೇಳಿಸುತ್ತದೆ. ನಂತರ ಗಾಳಿಯಲ್ಲಿ ಶಬ್ದದ ಕಂಪನಗಳು ಅಲೆಗಳಿಂದಲೂ ಸೂಕ್ಷ್ಮವಾಗಿ ಗಂಟೆ ನಿಂತ ನಂತರವೂ ಕೇಳಿಸುತ್ತಿರುತ್ತದೆ. ಇದೇರೀತಿ ಸೂಕ್ಷ್ಮವನ್ನು ಅವಲಂಬಿಸಿ ಮತ್ತಷ್ಟು ಅಭಿವೃದ್ಧಿ ಆಗುತ್ತಿರುತ್ತದೆ.
ಆಯ್ಕೆಗಳು :
ಇಲ್ಲಿ ಆತನು ಚತುರ್ಥ ಸಮಾಧಿ ಪ್ರಾಪ್ತಿ ಮಾಡಿ ವಿಪಶ್ಶನ ಧ್ಯಾನ ಮಾಡಬಹುದು ಅಥವಾ ಪ್ರಥಮ ಧ್ಯಾನದ ನಂತರವೇ ವಿಪಶ್ಶನವನ್ನು ಪ್ರಾರಂಭಿಸಬಹುದು. ಅಥವಾ ಅರೂಪ ಸಮಾಧಿಯ ನಂತರವೂ ಪ್ರಾರಂಭಿಸಬಹುದು. ವಿಪಶ್ಶನದ ಪ್ರಾರಂಭಕ್ಕೆ ಯಾವ ಸ್ಥಿತಿಯು ಅಡ್ಡಿಯಿಲ್ಲ. ಆದರೆ ಸಮಥ ಧ್ಯಾನ ಮಾತ್ರ ಪ್ರಾರಂಭದಿಂದಲೇ ಆರಂಭಿಸಬೇಕಾಗುತ್ತದೆ.

ಆನಾಪಾನಾ ಸಮಥ ಧ್ಯಾನ anapana samatha jhana

                                    ಆನಾಪಾನಾ ಸಮಥ ಧ್ಯಾನ


ಆನಾಪಾನಾಕ್ಕೆ ಎಂಟು ಮೆಟ್ಟಿಲುಗಳು :

ಈ ಎಂಟು ಮೆಟ್ಟಿಲುಗಳಲ್ಲಿ ನಾವು ಇಡೀ ಸಾಧನೆಯನ್ನೇ ಅಡಕಗೊಳಿಸಬಹುದು. ಇದರಲ್ಲಿ ಆದಿಯಿಂದ ಅಂತ್ಯದವರೆಗಿನ ಮಾಹಿತಿಯಿದೆ. ಇದರಿಂದಾಗಿ ಧ್ಯಾನ ಸ್ಥಿತಿಗಳಲ್ಲದೆ ಆರಿಯ ಮಾರ್ಗಫಲವು ಸಹಾ ಸಿಗುತ್ತದೆ. ಮೊದಲ ನಾಲ್ಕು ಮೆಟ್ಟಿಲುಗಳು ಝಾನ ಸ್ಥಿತಿಗೆ ಕೊಂಡೊಯ್ಯುತ್ತದೆ ನಂತರದ ನಾಲ್ಕು ಸ್ಥಿತಿಗಳು ಅರಿಯಮಾರ್ಗ ಫಲವನ್ನು ನೀಡುತ್ತದೆ. ಅವು ಹೀಗಿವೆ :
ಸಮಥಾ
1. ಎಣಿಕೆಯ ಸಾಧನೆ (ಗಣನ) : ಕೇವಲ ಉಸಿರಾಟದ ಎಣಿಕೆ
2. ಸಂಬಂಧಿಸುವ ಸಾಧನೆ (ಅನುಬಂಧನ) : ಉಸಿರಾಟದ ಗಮನ
3. ಸಂಪರ್ಕ ಸಾಧನೆ (ಪುಸನಾ) : ಉಸಿರಾಟದ ಸ್ಪಶರ್ಿಸುವಿಕೆ
4. ಸ್ಥಿರಗೊಳ್ಳುವ ಸಾಧನೆ (ಥಾಪನ) : ಧ್ಯಾನ ಪ್ರಾಪ್ತಿ
ವಿಪಶ್ಶನಾ
5. ಅರಿಯುವಿಕೆಯ ಸಾಧನೆ (ಸಲ್ಲಕ್ಖಣ) : ವಿಪಶ್ಶನದ ಆರಂಭ
6. ವಿಮುಖವಾಗುವ ಸಾಧನೆ (ವಿವಟ್ಠನಾ) : ಮಾರ್ಗದಲ್ಲಿ ನೆಲಸುವಿಕೆ
7. ಪರಿಶುದ್ಧಿಯಾಗುವ ಸಾಧನೆ (ಪರಿಶುದ್ಧಿ) : ಫಲಪ್ರಾಪ್ತಿ
8. ಪುನರ್ ಅವಲೋಕನ ಸಾಧನೆ (ಪಟಿಪಸ್ಸನಾ) : ಪುನರ್ ವೀಕ್ಷಣೆ

ಅನಾಪಾನ ಸಮಥ ಧ್ಯಾನ :

1. ಎಣಿಕೆ (ಗಣನೆ) : 

ಯೋಚನೆಗಳ ತಡೆಯನ್ನು ಮೀರಲು ಸುಲಭವಾದ ಕ್ರಮವಿದು.  ಇಲ್ಲಿ ಸಾಧಕನು ಉಸಿರಾಟವು ಸ್ಪರ್ಶವಾದೊಡನೆಯೆ ಒಂದು ಎಂದು ಎಣಿಕೆ ಮಾಡುತ್ತಾನೆ. ಹೀಗೆಯೇ ಪ್ರತಿ ಉಸಿರಾಟದ ಸ್ಪರ್ಶದಲ್ಲಿ ಎಣಿಕೆ ಮಾಡುತ್ತಾನೆ. ಆದರೆ ಸಂಖ್ಯೆ 10ನ್ನು ಮೀರಬಾರದು. ಹಾಗಾದರೆ ಅನಾಪಾನಾ ಸ್ಮೃತಿಯು ಭಂಗವಾಗುತ್ತದೆ. ಉಸಿರಾಟದ ಧ್ಯಾನದಲ್ಲಿ ಹಿಡಿತ ಸಿಕ್ಕೊಡನೆ ಆತನು ಎಣಿಸುವುದನ್ನು ನಿಲ್ಲಿಸಬೇಕು. ಕೇವಲ ಉಸಿರಾಟದಲ್ಲಿ ಗಮನವನ್ನು ಕೇಂದ್ರೀಕರಿಸಬೇಕು.

2. ಸಂಬಂಧಿಸುವ ಸಾಧನೆ (ಅನುಬಂಧನ) :

 ಅನುಬಂಧನವೆಂದರೆ ಉಸಿರಾಟದಲ್ಲಿ ತಡೆರಹಿತ ಗಮನ ನೀಡುವಿಕೆ ಆಗಿದೆ. ಇಲ್ಲಿ ಒಳ ಉಸಿರಾಟವು ಮೂಗಿನಿಂದ ಆರಂಭವಾಗುತ್ತದೆ. ಹೃದಯದಲ್ಲಿ ಇದರ ಮಧ್ಯಾವಸ್ಥೆ ಇರುತ್ತದೆ. ಕಿಬ್ಬೊಟ್ಟೆಯಲ್ಲಿ ಇದರ ಅಂತ್ಯವಾಗುತ್ತದೆ. ಹಾಗೆಯೇ ಹೊರ ಉಸಿರಾಟವು ಕಿಬ್ಬೊಟ್ಟೆಯಿಂದ ಆರಂಭವಾಗಿ, ಹೃದಯದಲ್ಲಿ ಮಧ್ಯಾವಸ್ಥೆ ಇದ್ದು ಮೂಗಿನಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಎಲ್ಲಾ ಅವಸ್ಥೆಯಲ್ಲಿ ಕೇಂದ್ರೀಕೃತಗೊಳಿಸಿದರೆ ಮನವು ಚದುರಿಹೋಗುತ್ತದೆ.
ಆಗ ಮನಸ್ಸು ಕ್ಷೊಭೆಗೆ ಒಳಗಾಗುತ್ತದೆ. ಆದ್ದರಿಂದ ಎಲ್ಲಿ ಉಸಿರಾಟ ಸ್ಪರ್ಶವಾಗುತ್ತದೋ ಅಲ್ಲೇ ಎಣಿಕೆ ಮಾಡಬೇಕು. ಹಾಗೆಯೇ ಅನುಬಂಧವು ಸಹಾ ಅದೇ ಸ್ಥಳದಲ್ಲಿ ಆಗಬೇಕು. ಆಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದರೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಬೇಕು.

3. ಸಂಪರ್ಕ ಸಾಧನೆ (ಪುಸಣ) : 

ಇಲ್ಲಿ ಉಸಿರಾಟದ ಸ್ಪರ್ಶವಾಗುವ ಕಡೆ ಸಂಪರ್ಕ ಏರ್ಪಟ್ಟಿರಬೇಕು. ಅಂದರೆ ಮೂಗಿನ ತುದಿಯಲ್ಲಿ ಅಥವಾ ಮೇಲ್ತುಟಿಯ ಭಾಗದಲ್ಲಿ ಕೆಲವೊಂದು ಸಾಧಕರು ಕಿಬ್ಬೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತಗೊಳಿಸುತ್ತಾರೆ. ಆದರೆ ಬಹುಪಾಲು ಸಾಧಕರು ಮೂಗಿನ ತುದಿಯಲ್ಲಿ ಕೇಂದ್ರೀಕೃತಗೊಳಿಸುತ್ತಾರೆ. ಎಲ್ಲೇ ಆಗಲಿ, ಆ ಒಂದು ಸ್ಥಳದಲ್ಲೇ ಕೇಂದ್ರೀಕೃತಗೊಳಿಸಬೇಕು. ಹೇಗೆಂದರೆ ದ್ವಾರಪಾಲಕನಂತೆ, ದ್ವಾರಪಾಲಕನು ಯಾರು ಒಳಹೊಕ್ಕರು ಅಥವಾ ಯಾರು ಹೊರಬಂದರು ಎಂದು ಗಮನ ನೀಡುತ್ತಲೇ ಇರುತ್ತಾರೆ. ಅದೇ ರೀತಿಯಲ್ಲಿ ನಾವು ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಅಂದರೆ ಅದು ಸಂಪಕರ್ಿಸುವಲ್ಲೇ ಗಮನ ನೀಡಬೇಕು. ಹೇಗೆಂದರೆ ಗರಗಸದ ಉದಾಹರಣೆಯಂತೆ. ಒಂದು ಮರದ ತುಂಡನ್ನು ಸಮನಾದ ನೆಲದಲ್ಲಿಟ್ಟು ಆ ಕಡೆ ಈ ಕಡೆ ಗರಗಸದಿಂದ ಕೊಯ್ಯುತ್ತಾರೆ. ಆಗ ಅವರ ಗಮನ ಮರದ ತುಂಡಿನ ಮೇಲೆ ಇರುವುದಿಲ್ಲ. ಹಾಗೆಯೇ ಗರಗಸದ ಮೇಲೆಯೂ ಇರುವುದಿಲ್ಲ. ಕೇವಲ ಗರಗಸವು ಮರದ ತುಂಡನ್ನು ಕತ್ತಿರಿಸುತ್ತಿರುವ ಭಾಗದಲ್ಲಿ ಮಾತ್ರ ನೆಲೆಸಿರುತ್ತದೆ. ಹಾಗೆಯೇ ಸಾಧಕನು ಒಳ ಉಸಿರಿನಲ್ಲಿ ಆಗಲಿ ಅಥವಾ ಹೊರ ಉಸಿರಿನಲ್ಲಿ ಆಗಲಿ ಕೇಂದ್ರೀಕರಿಸದೆ ಉಸಿರುಗಳು ಸ್ಪಶರ್ಿಸುತ್ತಿರುವ ಭಾಗದಲ್ಲಿ ಮಾತ್ರ ಚಿತ್ತವನ್ನು ಕೇಂದ್ರೀಕೃತಗೊಳಿಸುತ್ತಾನೆ.
ಹಾಗೆಯೇ ಆತನು ಯೋಗ್ಯ ಜಾಗರೂಕತೆಯಿಂದಿರುತ್ತಾನೆ, ಯೋಗ್ಯ ಏಕಾಗ್ರತೆಯಿಲ್ಲಿರುತ್ತಾನೆ ಮತ್ತು ಯೋಗ್ಯ ಶ್ರಮವನ್ನು ಪಡುತ್ತಿರುತ್ತಾನೆ. ಹೇಗೆಂದರೆ ಯಾವುದೇ ಯೋಚನೆಗಳನ್ನು ಆತನು ಮಾಡುವುದಿಲ್ಲ. ಹೀಗಾಗಿ ಆತನಿಗೆ ತಡೆಗಳಾವುವು ಇಲ್ಲದೆ ಪಂಚ ನೀವರಣಗಳು ಕ್ಷಯಿಸಿ ಹೋಗುತ್ತದೆ. ತಾತ್ಕಾಲಿಕವಾಗಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಆತನ ಧ್ಯಾನಾಂಗಗಳು ಹರಿತವಾಗುತ್ತದೆ. ಆಗ ಆತನಲ್ಲಿ ಪಂಚನೀವರಣಗಳಾದ ಬೋಗಾಭಿಲಾಷೆ, ದ್ವೇಷ, ಸೋಮಾರಿತನ, ಅವಿಶ್ರಾಂತಿ, ಪಶ್ಚಾತ್ತಾಪ ಮತ್ತು ಸಂದೇಹ ಗಳಿಂದ ಮುಕ್ತನಾಗುತ್ತಾನೆ. ಹಾಗೆಯೇ ಧ್ಯಾನಾಂಗಗಳಿಂದ ಕೂಡಿರುತ್ತಾನೆ. ಧ್ಯಾನಂಗಗಳೆಂದರೆ ವಿತರ್ಕ, ವಿಚಾರ, ಪ್ರೀತಿ, ಸುಖ ಮತ್ತು ಏಕಾಗ್ರತೆ. ಈಗ ವಿವರವಾಗಿ..
.

                                     5 ಧ್ಯಾನಂಗಗಳು : 

ವಿತಕ್ಕ :

 ಸಮಾನ್ಯವಾಗಿ ವಿತರ್ಕವೆಂದರೆ ಯೋಚಿಸುವುದು, ನಿರ್ಧರಿಸುವುದು ಎಂತಿದೆ. ಆದರೆ ಇಲ್ಲಿ ಆ ಪದಕ್ಕೆ ಬೇರೆಯೇ ಅರ್ಥವಿದೆ. ಇಲ್ಲಿ ವಿತಕ್ಕ (ವಿತರ್ಕ)ವೆಂದರೆ ಧ್ಯಾನದ ವಿಷಯಕ್ಕೆ (ಉಸಿರಾಟದಲ್ಲಿ) ಸಮೀಪ ಗಮನ ನೀಡುವಿಕೆ ಅಂದರೆ ಗಮನವನ್ನು ಕೇಂದ್ರೀಕರಿಸುವಿಕೆ. ಉಸಿರಾಟದ ಎಣಿಕೆಯಲ್ಲಿ ಮತ್ತು ಸಂಬಂಧ ಏಪರ್ಾಟು ಆಗುವಲ್ಲಿ ವಿತಕ್ಕವು ಅಷ್ಟಾಗಿ ಬೆಳವಣಿಗೆ ಹೊಂದಿರುವುದಿಲ್ಲ, ಆದರೆ ಸಂಪರ್ಕ ಮತ್ತು ಸ್ಥಿರತೆಯ ಹಂತದಲ್ಲಿ ವಿತಕ್ಕವು ಪೂರ್ಣವಾಗಿ ಅಭಿವೃದ್ಧಿ ಹೊಂದಿರುತ್ತದೆ.

ವಿಚಾರ : 

ವಿಚಾರಕ್ಕೆ ಸಾಮಾನ್ಯ ಅರ್ಥ ಶೋಧನೆ. ತರ್ಕ ವಿಶ್ಲೇಷಣೆಯಿದ್ದರೂ ಇಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ. ಅಂದರೆ ಧ್ಯಾನ ವಿಷಯದಲ್ಲಿ (ಉಸಿರಾಟದಲ್ಲಿ) ಆಳವಾಗಿ ಅರಿಯುವಿಕೆ ಮತ್ತು ಹರಿಯುವಿಕೆ, ವಿತಕ್ಕ ಮತ್ತು ವಿಚಾರವು ಜೊತೆಯಲ್ಲಿಯೇ ಇರುತ್ತದೆ. ಉದಾಹರಣೆಗೆ : ವಿತರ್ಕವು ಚಿತ್ತವನ್ನು ನೋಡಿದರೆ ವಿಚಾರವು ನೋಡುವಷ್ಟೇ ಅಲ್ಲದೆ ಅರಿಯುವ ಕೆಲಸವು ಮಾಡುತ್ತದೆ, ವಿತರ್ಕವು ಭೂಮಿಗೆ ಸ್ಪಶರ್ಿಸುವ ಮಳೆಯ ಹನಿಗಳಾದರೆ, ವಿಚಾರವು ಆ ನೀರನ್ನು ಹೀರುವ ನೆಲವಾಗುತ್ತದೆ. ಒಂದು ದುಂಬಿಯು ಹೂವಿನ ಹತ್ತಿರ ಹೋಗುವಿಕೆ ವಿತರ್ಕವಾದರೆ, ಆ ಹೂವಿನ ಸುತ್ತಲು ತಿರುಗಾಡುವುದು ವಿಚಾರವಾಗುತ್ತದೆ. ಗಂಟೆಯ ಶಬ್ದವು ವಿತರ್ಕವಾದರೆ, ನಂತರದ ಪ್ರತಿಧ್ವನಿ ವಿಚಾರವಾಗುತ್ತದೆ. ಪಕ್ಷಿಯೊಂದು ಬಂಡೆಯಿಂದ ಹಾರಿದಾಗ ವಿತರ್ಕವಾಗುತ್ತದೆ ನಂತರ ದಿಕ್ಕಿನತ್ತ ನಿರಂತರ ಹಾರುವಿಕೆ ವಿಚಾರವಾಗುತ್ತದೆ. ಹೀಗಾಗಿ ವಿತರ್ಕವೆಂದರೆ ಕೇಂದ್ರೀಕೃತಗೊಳಿಸುವಿಕೆ ಮತ್ತು ವಿಚಾರವೆಂದರೆ ನಿರಂತರ ಮುಂದುವರೆಯುವಿಕೆ, ಹರಿಯುವಿಕೆ ಆಗಿದೆ.

ಪೀತಿ (ಆನಂದ) : 

ಪೀತಿ ಎಂದರೆ ಆನಂದ ಎಂದರ್ಥ. ಆದರೆ ಈ ಆನಂದವು ಇಂದ್ರೀಯ ಸುಖಗಳ ಆನಂದಕ್ಕಿಂತ ವಿಭಿನ್ನವಾದುದು ಹಾಗು ಶ್ರೇಷ್ಠವಾದುದು, ಮೀರಿದುದು ಆಗಿದೆ. ಈ ಪೀತಿಯು ಚೇತಸಿಕಾಗಳಲ್ಲಿ ಒಂದಾಗಿದೆ. ಯಶಸ್ಸಿನ ನಂತರದ ಆನಂದ ಅನುಭೂತಿಯಾಗಿದೆ. ಆನಂದವು ಉದಯಿಸಿದಾಗ ಕೂದಲು ಎದ್ದಿರುತ್ತದೆ. ಮಿಂಚಿನಂತೆ ಉದಯಿಸುವ ಕ್ಷಣಿಕ ಆನಂದವು ಇರುತ್ತದೆ. ದೇಹದಲ್ಲಿ ಎಣ್ಣೆಯು ಹರಿಯುವ ರೀತಿ ಪ್ರವಹಿಸುವ ಆನಂದವು ಇರುತ್ತದೆ. ವೇಗವಾಗಿ ಹರಿದು ದೀರ್ಘಕಾಲ ಇರುವಂತಹ ಆನಂದ ಇರುತ್ತದೆ. ಆದರೆ ಇಲ್ಲಿ ಅತ್ಯಂತ ರಭಸವಾಗಿ ಬೀಳುವ ಮಳೆಯಂತೆ ಇರುವ ಆನಂದವಾಗಿರುತ್ತದೆ. ಇದರಿಂದಾಗಿಯೇ ಪ್ರಥಮ ಸಮಾಧಿ ಸಿಗುವುದು.

ಸುಖ (ದಿವ್ಯ ಸುಖ/ಶಾಂತತೆ) :

 ನಾವು ನಿಜವಾದ ದಿವ್ಯ ಸುಖವನ್ನು ಅನುಭವಿಸಿಯೇ ಇಲ್ಲ. ಇದು ಸಿಗುವುದು ಪಂಚ ನೀವರಣಗಳು ನಾಶವಾದ ನಂತರವೇ. ಆದ್ದರಿಂದ ನಾವು ಇದನ್ನು ಕ್ಷಣಿಕವಾಗಿ ಅನುಭವಿಸುತ್ತಿದ್ದೇವೆ. ಯಾವಾಗ ಮನಸ್ಸು ನೀವಾರಣಗಳಿಂದ ಮುಕ್ತವಾಗಿ ಏಕಾಂತತೆ ತಾಳುವುದೋ ಆಗ ಸುಖವು ನೆಲಸುತ್ತದೆ. ನಾವು ಸುಖವನ್ನು ಅನುಭವಿಸಿದಾಗ ಮಾತ್ರ ಆನಂದಕ್ಕೂ ಮತ್ತು ದಿವ್ಯಸುಖಕ್ಕೂ ವ್ಯತ್ಯಾಸ ತಿಳಿಯಬಲ್ಲೆವು. ಪೀತಿ (ಆನಂದ) ಮತ್ತು ಸುಖ (ದಿವ್ಯ ಸುಖ/ಶಾಂತತೆ) ಇವು ಸಹಾ ಜೊತೆಯೇ ಇರುತ್ತದೆ. ಹೇಗೆಂದರೆ ತೇಲುವಿಕೆ ಪೀತಿಯಾದರೆ ನೆಮ್ಮದಿಯು ಸುಖವಾಗಿರುತ್ತದೆ. ಮನಶ್ಶಾಂತಿಯು ಪೀತಿಯಾದರೆ ಏಕಾಗ್ರತೆಯು ಸುಖವಾಗಿರುತ್ತದೆ. ಪೀತಿಯ ಸ್ಥೂಲವಾಗಿದ್ದರೆ ಸುಖವು ಸೂಕ್ಷ್ಮವಾಗಿರುತ್ತದೆ. ಪೀತಿಯು ಸಂಖಾರಗಳಲ್ಲಿ ಒಂದಾದರೆ ಆನಂದವು ವೇದನೆಗಳಲ್ಲಿ ಒಂದಾಗಿದೆ. ಎಲ್ಲಿ ಪೀತಿ (ಆನಂದ) ಬರುತ್ತದೆಯೋ ಅಲ್ಲೆಲ್ಲಾ ಸುಖವಿರುತ್ತದೆ. ಆದರೆ ಸುಖವಿರುವೆಡೆಯಲ್ಲಿ ಆನಂದ (ಪೀತಿ) ಇರಬಹುದು ಅಥವಾ ಇಲ್ಲದೆ ಹೋಗಬಹುದು.

ಏಕಾಗ್ಗತಾ (ಏಕಾಗ್ರತೆ) : 

ಇದನ್ನು ಚಿತ್ತ ಏಕಾಗ್ರತೆಯೆಂದು ಕರೆಯುತ್ತಾರೆ. ಇಲ್ಲಿ ಮನಸ್ಸು ಒಂದೇ ವಿಷಯದ ಮೇಲೆ (ಉಸಿರಾಟ) ನೆಲೆಸಿರುತ್ತದೆ, ಸ್ಥಾಪಿತವಾಗಿರುತ್ತದೆ. ಅಲ್ಲೇ ಕೇಂದ್ರಿಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸ್ಸು ಒಂದು ವಿಷಯದಿಂದ, ವಿಷಯಕ್ಕೆ ಹಾರುತ್ತಿರುತ್ತದೆ. ಪರಿವರ್ತನೆಯಾಗುತ್ತಲೆ ಇರುತ್ತದೆ. ಆದರೆ ಸುಶಿಕ್ಷಣದಿಂದ ಇಲ್ಲಿ ಮನಸ್ಸನ್ನು ಏಕ ವಿಷಯದ (ಉಸಿರಾಟದ) ಮೇಲೆ ನಿಲ್ಲಿಸಿ, ಕೇಂದ್ರೀಕೃತಗೊಳಿಸಿ, ಹರಿಸಿ, ನೆಲೆಸಿ, ಸ್ಥಾಪಿಸಿ ದೀರ್ಘಕಾಲ ಇರುತ್ತೇವೆ. ಇಲ್ಲಿ ಮನಸ್ಸು ಸ್ಥಿರವಾಗಿ, ದೃಢವಾಗಿ ಸುಸ್ಥಾಪಿತವಾಗಿರುತ್ತದೆ.
ಈ ಐದು ಅಂಗಗಳು ಒಟ್ಟಾಗಿ ಸೇರಿದಾಗ, ಪರಸ್ಪರ ಅವಲಂಬನೆಯಿಂದ ಬಲಿಷ್ಠವಾದಾಗ ಏಕ ಕಾರ್ಯಕ್ಕೆ ಕ್ರಿಯಾಶೀಲವಾದಾಗ, ಕುಶಲ ಸ್ಥಿತಿಗಳ ಸಮಗ್ರತೆಯಾದಾಗ ಪ್ರಥಮ ಸಮಾಧಿಗೆ ಸಮೀಪವಾದ ಸಾಮಿಪ್ಯ ಸಮಾಧಿಗೆ ದಾರಿ ಮಾಡಿಕೊಡುತ್ತದೆ. ಈ ಐದು ಅಂಗಗಳು ಎಳೆಗಳಿಂದ ದೊಡ್ಡ ಹಗ್ಗವಾದಂತೆ, ಸ್ಥಂಬಗಳಿಂದ ಕಟ್ಟಡವಿದ್ದಂತೆ, ಈ ಧ್ಯಾನದ ಅಂಗಗಳಿಂದ ಪ್ರಥಮ ಸಮಾಧಿಯು ಲಭಿಸುವುದು.
ಈ ಧ್ಯಾನಾಂಗಗಳು ಪಂಚ ನೀವರಣಗಳಿಗೆ ವಿರುದ್ಧವಾಗಿದೆ. ಯಾವಾಗ ವಿತಕ್ಕವು ಉಸಿರಾಟದಲ್ಲಿ (ಧ್ಯಾನ ವಿಷಯದಲ್ಲಿ) ಕೇಂದ್ರೀಕೃತವಾಗುವುದೋ ಆಗ ಉದ್ದಚ್ಚ (ಅವಿಶ್ರಾಂತಿ) ಮತ್ತು ಕುಕ್ಕುಚ್ಚ (ಚಿಂತೆ, ಪಶ್ಚಾತ್ತಾಪ) ಉದಯಿಸುವುದಿಲ್ಲ ಹಾಗು ಇರುವುದಿಲ್ಲ. ಹಾಗೆಯೇ ವಿಚಾರ (ಹರಿಯುವಿಕೆ)ವು ಕ್ರಿಯಾಬದ್ಧವಾಗಿರುವಾಗ ಸಂಶಯವು ತಾತ್ಕಾಲಿಕವಾಗಿ ನಿಲ್ಲುತ್ತದೆ, ಉದಯಿಸುವುದಿಲ್ಲ, ಇದರಂತೆಯೇ ಪೀತಿ (ಆನಂದ) ಮತ್ತು ಸುಖ (ದಿವ್ಯಸುಖ) ಇದ್ದಾಗ ದ್ವೇಷ ಬೇಸರವಾಗಲಿ, ಜಡತೆ ಸೋಮಾರಿತನವಾಗಲಿ ಇರುವುದಿಲ್ಲ, ಅವೆಲ್ಲವೂ ನಾಶವಾಗುತ್ತದೆ. ಹಾಗೆಯೇ ಏಕಾಗ್ರತೆಯು ನೆಲೆಸಿ ಪೀತಿ, ಸುಖ ಲಭಿಸುತ್ತಿದ್ದಂತೆ ಬೋಗಾಭಿಲಾಷೆಯು ನಾಶವಾಗಿ ಯಾವುದೇ ಪ್ರಾಪಂಚಿಕ ಬಯಕೆಗಳು, ಆನಂದವು ಇರುವುದಿಲ್ಲ. ಹೇಗೆ ಬೆಳಕು, ಕತ್ತಲೆಗಳು ಒಟ್ಟಿಗೆ ಇರಲಾರವೋ ಹಾಗೆಯೇ ಧ್ಯಾನಾಂಗಗಳ ಅಸ್ತಿತ್ವದಿಂದ ಐದು ನೀವರಣಗಳು ನಾಶವಾಗುತ್ತದೆ. ಆಗ ಆತನಿಗೆ ಸಾಲದಿಂದ ಮುಕ್ತವಾದಂತೆ, ರೋಗದಿಂದ ಮುಕ್ತನಾದಂತೆ, ಕಾರಾಗೃಹದಿಂದ  ಮುಕ್ತನಾದಂತೆ, ಗುಲಾಮಗಿರಿಯಿಂದ ಮುಕ್ತನಾದಂತೆ ಮರಳುಗಾಡಿನ ಅಥವಾ ಕಾಡಿನಿಂದ ದಾರಿತಪ್ಪಿ ಮತ್ತೆ ಯೋಗ್ಯ ಪಥದಲ್ಲಿ ಬಂದಂತಹ ಆನಂದ ಪಡೆಯುತ್ತಾನೆ.

ನಿಮಿತ್ತ (ಚಿಹ್ನೆ)ಗಳು :

ನಿಮಿತ್ತಗಳು 3 ವಿಧದಿಂದ ಕೂಡಿವೆ.
1. ಪರಿಕಮ್ಮ ನಿಮಿತ್ತ (ಪ್ರಾಥಮಿಕ ಚಿಹ್ನೆ)
2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ)
3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ)

1. ಪರಿಕಮ್ಮ ನಿಮಿತ್ತ :

 ಇಲ್ಲಿ ಉಸಿರಾಟವೇ ಪರಿಕಮ್ಮ (ಪ್ರಾಥಮಿಕ ಚಿಹ್ನೆಯಾಗಿದೆ), ನಿಮಿತ್ತವಾಗಿದೆ. ಅಂದರೆ ಧ್ಯಾನ ವಸ್ತು (ವಿಷಯ)ವೇ ಪ್ರಾಥಮಿಕ ಚಿಹ್ನೆಯಾಗಿರುತ್ತದೆ. ಇಲ್ಲಿ ಉಸಿರಾಟದಲ್ಲಿ ಚಿತ್ತವು ನೆಲೆಸುವುದರಿಂದ ಇಲ್ಲಿ ಉಸಿರಾಟದ ಮೇಲಿನ ಜಾಗ್ರತೆಯೇ ಪರಿಕಮ್ಮ ನಿಮಿತ್ತ ಆಗಿರುತ್ತದೆ.

2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ) : 

ಯಾವಾಗ ಚಿತ್ತವು ಉಸಿರಾಟದಲ್ಲಿ ನೆಲಸುವುದೋ ಆಗ ಏಕಾಗ್ರತೆಯೂ ಹರಿತವಾಗಿ, ಸ್ಥಿರವಾಗಿ ಸ್ಥಾಪಿಸಲ್ಪಡುತ್ತದೆ. ಉಸಿರಾಟವು ಮೂಗಿನ ಅಥವಾ ಮೇಲ್ತುಟಿಯ ಚರ್ಮದಲ್ಲಿ ಸ್ಥಾಪಿಸಲ್ಪಡುತ್ತದೆ. ದೀರ್ಘಕಾಲ ಅಭಾದಿತ, ನಿವರ್ಿಘ್ನ ಏಕಾಗ್ರತೆಯಿಂದ ದೇಹವು ಶಾಂತವಾಗುತ್ತದೆ. ಉಸಿರಾಟವು ಒಂದೇ ಗತಿಯಲ್ಲಿ ನಡೆಯುತ್ತಿರುತ್ತದೆ. ಅವಿಶ್ರಾಂತಿ ಶಾಂತವಾಗುತ್ತದೆ. ದೇಹವು ವಿಶ್ರಾಂತತೆಯನ್ನು, ಮಣಿಯುವಂತಹ ಮೆದುತನದ ಅನುಭವ ಪಡೆಯುತ್ತದೆ. ನೋವು, ಒತ್ತಡ, ಅವಿಶ್ರಾಂತತೆಯಿಂದ ಮುಕ್ತತೆ ಪಡೆದಾಗ, ಉಸಿರಾಟವು ಅತ್ಯಂತ ಸೂಕ್ಷ್ಮವಾಗಿ ನಡೆಯುತ್ತಿರುತ್ತದೆ. ಆಗ ದೇಹವು ಹಗುರತನದ ಅನುಭೂತಿಯನ್ನು ಪಡೆಯುತ್ತದೆ. ದೇಹವು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಗಂಟೆಯ ಶಬ್ದವು ಬಂದಾಗ ಆ ಶಬ್ದವು ಅಳಿದು ಅಲೆಗಳ ಕಂಪನ ಶಬ್ದವು ಸೂಕ್ಷ್ಮವಾಗಿ ಕೇಳಿದಂತೆ ಸೂಕ್ಷ್ಮವಾದ ಉಸಿರಾಟದ ಅನುಭವವು ಲಭಿಸುತ್ತದೆ. ಉಸಿರಾಟ ಒಂದು ಕ್ಷಣ ನಿಲ್ಲಿಸಿದರೂ ಉಸಿರಾಟ ನಡೆದಂತೆ ಭಾಸವಾಗುತ್ತದೆ. ಮೂಗು ಅಥವಾ ತುಟಿಯ ಚರ್ಮದ ಮೇಲೆ ಅಂತಹುದೆ ಸಂವೇದನೆ ಸಿಗುತ್ತದೆ. ಗೋಪಾಲಕನು ಹಸುಗಳನ್ನು ಮೇಯಿಸಲು ಹೋದಾಗ ಅದರ ಪಾಡಿಗೆ ಅದನ್ನು ಬಿಟ್ಟುಬಿಡುತ್ತಾನೆ. ಆದರೂ ಅವು ಎಲ್ಲೇ ಮೇಯಲಿ, ನೀರು ಕುಡಿಯಲು ಒಂದೇ ಸ್ಥಳಕ್ಕೆ ಬರುತ್ತದೆ. ಅಲ್ಲೇ ಗೋಪಾಲಕನು ಅವನ್ನು ಹಿಡಿಯುತ್ತಾನೆ. ಅದೇರೀತಿಯಲ್ಲಿ ಒಳ ಉಸಿರು ಮತ್ತು ಹೊರ ಉಸಿರು ಸಂಪರ್ಕವಾಗುವ ಸ್ಥಳದ ಸಂವೇದನೆ, ಗಾಳಿಯ ಸಂವೇದನೆಯಲ್ಲಿ ಮನಸ್ಸು ಸ್ವಾಭಾವಿಕವಾಗಿ ನೆಲೆಸುತ್ತದೆ. ಇದೇ ಉಗ್ಗಹ ನಿಮಿತ್ತವಾಗಿದೆ.

3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) : 

ಹೀಗೆ ಸಾಧನೆ ಮಾಡುತ್ತಿರುವಾಗ ಅಲೌಕಿಕ ಅನುಭವಗಳಾಗುತ್ತದೆ. ಅದೇ ಈ ಪಟಿಭಾಗ ನಿಮಿತ್ತ. ಅದೆಂದರೆ ಆತನಿಗೆ ಚಿಹ್ನೆಗಳು (ನಿಮಿತ್ತ) ಗೋಚರವಾಗುತ್ತದೆ. ಆದರೆ ಆ ಚಿಹ್ನೆಗಳು ಎಲ್ಲರಿಗೂ ಒಂದೇರೀತಿಯಾಗಿ ಕಾಣಿಸುವುದಿಲ್ಲ ಅಥವಾ ಸ್ಪರ್ಶವಾಗುವುದಿಲ್ಲ ಅಥವಾ ಅನುಭೂತಿಯಾಗುವುದಿಲ್ಲ.
ಇಲ್ಲಿ ಆಗುವಂತಹ ಅನುಭವಗಳೆಂದರೆ ಹತ್ತಿಯ ಸ್ಪರ್ಶದಂತಹ ಅನುಭವ ಅಥವಾ ರೇಷ್ಮೆಯ ಹತ್ತಿಯಂತಹ ಸ್ಪರ್ಶದ ಅನುಭವ ಅಥವಾ ಗಾಳಿಯ ಹೊಡೆತದಂತಹ ಅನುಭವವಾಗುತ್ತದೆ. ಎಳೆತ, ಸೆಳೆತದಂತಹ ಅನುಭವ ಅಥವಾ ಕೆಲವರಿಗೆ ನಕ್ಷತ್ರ ಅಥವಾ ರತ್ನಗಳ ಗುಂಪಿನಂತೆ, ಮುತ್ತಿನ ಗುಂಪಿನಂತೆ ಅಥವಾ ಹತ್ತಿಯ ಬೀಜದ ಸ್ಪರ್ಶದಂತೆ, ಉಲ್ಲಾಸಯುತ ಗಾಳಿಯ ಸ್ಪರ್ಶದಂತೆ ಅಥವಾ ಕಾಂಡದ ಚೂಪಿನ ಸ್ಪರ್ಶದಂತೆ, ತಂತಿಗಳ ಪಟ್ಟಿಯಂತೆ ಹೂಮಾಲೆಯಂತೆ, ಹೊಗೆಯ ಚಲನೆಯಂತೆ, ಜೇಡರ ಬಲೆಯಂತೆ ಅಥವಾ ಮೋಡದ ಪೊರೆಯಂತೆ ಅಥವಾ ಕಮಲದ ಹೂವಿನಂತೆ ಅಥವಾ ರಥದ ಚಕ್ರದಂತೆ ಅಥವಾ ಚಂದಿರನ ತಟ್ಟೆಯಂತೆ ಅಥವಾ ಸೂರ್ಯನ ತಟ್ಟೆಯಂತೆ ಕಾಣಿಸುವುದು ಅಥವಾ ಸ್ಪಶರ್ಿಸಲ್ಪಡುವುದು.
ಹೀಗೆ ಈ ಪಟಿಭಾಗ ನಿಮಿತ್ತವು ಒಬ್ಬೊಬ್ಬರಿಗೆ ಒಂದು ರೀತಿಯಂತೆ ಅನುಭವಕ್ಕೆ ಬರುತ್ತದೆ. ಏಕೆಂದರೆ ಗ್ರಹಿಕೆಯೇ ಕಾರಣ. ಒಬ್ಬೊಬ್ಬರ ಗ್ರಹಿಕೆ ಒಂದೊಂದು ರೀತಿಯಲ್ಲಿರುವ ಕಾರಣದಿಂದ, ಗ್ರಹಿಕೆಯಿಂದಲೇ ಉದಯಿಸುವ ಚಿಹ್ನೆಯು ಈ ರೀತಿಯಾಗಿ ಗೋಚರಿಸಿದರೆ ಆಶ್ಚರ್ಯವಿಲ್ಲ.
ಉದಾಹರಣೆಗೆ ಒಂದು ದೀಪವನ್ನೇ ತೆಗೆದುಕೊಳ್ಳಿ :-
. ಚಿಟ್ಟೆಗಳಿಗೆ ಅಥವಾ ಕೆಲವು ಕೀಟಗಳಿಗೆ ಈ ದೀಪವು ಅತ್ಯಾಕರ್ಷಕವಾಗಿರುತ್ತದೆ ಎಂದರೆ ಅದನ್ನು ಸ್ಪಶರ್ಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತದೆ.
. ಸಾಮಾನ್ಯ ಜನಕ್ಕೆ ದೀಪ ಬೆಳಕು ನೀಡುವಂತಹುದು ಅಷ್ಟೇ.
. ವಿಜ್ಞಾನಿಗಳಿಗೆ ದೀಪದಲ್ಲಿರುವ ಸಂಯುಕ್ತಗಳು, ಇಂಧನಗಳೆಲ್ಲಾ ತಿಳಿಯುತ್ತದೆ.
ತ. ಸಮಥ ಧ್ಯಾನಿಗೆ ಝಾನ ಪ್ರಾಪ್ತಿಯ ವಸ್ತು ದೀಪವಾದರೆ
ತ. ವಿಪಶ್ಶನ ಧ್ಯಾನಿಗೆ ಅನಿತ್ಯಗೋಚರಕಾರಿ ವಸ್ತುವಾಗಿರುತ್ತದೆ.
ಈ ರೀತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗ್ರಹಿಕೆಯಿರುತ್ತದೆ.


4. ಸ್ಥಿರಗೊಳ್ಳುವ ಸಾಧನೆ (ಥಾಪನ) :

ಈ ನಿಮಿತ್ತಗಳಲ್ಲಿ ನಾವು ಜಾಗರೂಕರಾಗಿರಬೇಕು. ಏಕೆಂದರೆ ಇಲ್ಲಿ ಕಸಿನಾದಲ್ಲಿ ಗೋಚರಿಸುವಂತಹ ನಿಮಿತ್ತಗಳು ಗೋಚರವಾದಾಗ ನಾವು ಅದನ್ನು ಅಲಕ್ಷಿಸಬೇಕು. ಇಲ್ಲವಾದರೆ ಅನಾಪಾನಾಸತಿಯ ಧ್ಯಾನವಾಗದೆ, ಕಸಿನಾದಂತಹ ಧ್ಯಾನಕ್ಕೆ ತಲುಪುವ ಸಂಭವನೀಯತೆ ಇರುತ್ತದೆ. ಅಂತಹ ನಿಮಿತ್ತಗಳೆಂದರೆ ಹೊಳಪುಳ್ಳ ಸೂರ್ಯ, ಚಂದಿರ, ನಕ್ಷತ್ರ, ಮುತ್ತು-ರತ್ನ ಇತ್ಯಾದಿ. ಈ ಗೋಚರ ನಿಮಿತ್ತ ಗೋಚರಿಸಿದರೂ ಅನಾಪಾನಾ ಸಾಧನೆ ಮುಂದುವರೆಸಬೇಕು. ಆದರೆ ಗಾಳಿಯ ಸ್ಪರ್ಶ, ಹತ್ತಿಯ ಸ್ಪರ್ಶಕ್ಕೆ, ಹತ್ತಿಯ ಬೀಜದ ಸ್ಪರ್ಶ, ಹಗುರತನದ ಅನುಭೂತಿ, ಗಾಳಿಯಲ್ಲಿ ತೇಲುವ ಅನುಭೂತಿ ಅಲಕ್ಷಿಸಬಾರದು. ಅಂತಹ ಸ್ಪರ್ಶದ ಅನುಭೂತಿಯಲ್ಲೇ ತಲ್ಲೀನನಾಗಬೇಕು. ಆ ಸ್ಪರ್ಶದ ಅನುಭೂತಿಯಲ್ಲೇ ಮನಸ್ಸು ನೆಟ್ಟು, ಕೇಂದ್ರೀಕರಿಸಿ ಸಾಧನೆ ಮಾಡಬೇಕು. ಇದೇ ಪಟಿಭಾಗ ನಿಮಿತ್ತವಾಗಿದೆ. ಈ ನಿಮಿತ್ತವು ಬಣ್ಣಗಳಿಂದ ಕೂಡಿರುವುದಿಲ್ಲ ಅಥವಾ ಆಕಾರದಿಂದಲೂ ಕೂಡಿರುವುದಿಲ್ಲ. ಈ ಪಟಿಭಾಗ ನಿಮಿತ್ತವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಕೌಶಲ್ಯದಿಂದ ರಕ್ಷಿಸಬೇಕಾಗುತ್ತದೆ. ಹೇಗೆಂದರೆ ಗಭರ್ಿಣಿಯು ತನ್ನ ಪುತ್ರನನ್ನು ರಕ್ಷಿಸುವಂತೆ ಅತ್ಯಮೂಲ್ಯವಾದ ರತ್ನವನ್ನು ಕಾಪಾಡುವ ಹಾಗೆ ಕಾಪಾಡಿ ಹಗಲು-ರಾತ್ರಿ ಧ್ಯಾನಿಸಬೇಕಾಗುತ್ತದೆ. ಮೊದಲಿನ ಉಗ್ಗಹ ನಿಮಿತ್ತಕ್ಕೂ ಪಟಿಭಾಗ ನಿಮಿತ್ತಕ್ಕೂ ವ್ಯತ್ಯಾಸವಿದೆ. ಉಗ್ಗಹ ನಿಮಿತ್ತದಲ್ಲಿ ಯಾವುದೇ ತಪ್ಪಿದ್ದರೂ ಗೋಚರವಾಗುತ್ತಿತ್ತು. ಆದರೆ ಪಟಿಭಾಗ ನಿಮಿತ್ತದಲ್ಲಿ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಆಗ ಸಾಧಕನು ಈ ಪಟಿಭಾಗ ಚಿಹ್ನೆಯನ್ನು ಮೂಗಿನ ತುದಿಯಲ್ಲಿ ಕೇಂದ್ರೀಕರಿಸಿ ಹಿಗ್ಗಿಸಬೇಕು. ನಂತರ ಹಾಗೆಯೇ ಹುಬ್ಬುಗಳ ನಡುವೆ ಅಥವಾ ಹಣೆಯಲ್ಲಿ ಹಾಗೆಯೇ ದೇಹದ ಭಾಗಗಳಲ್ಲಿ ಸ್ಥಾಪಿಸಬೇಕು. ಆಗ ಅಲ್ಲೆಲ್ಲಾ ಗಾಳಿ ತುಂಬಿದ ಅನುಭೂತಿಯಾಗುತ್ತದೆ. ಉದಾಹರಣೆಗೆ ಹಣೆಯಲ್ಲಿ ಕೇಂದ್ರೀಕರಿಸಿದಾಗ ತಲೆಯೆಲ್ಲಾ ಗಾಳಿಯಿಂದ ತುಂಬಿದ ಅನುಭೂತಿಯಾಗುತ್ತದೆ. ಇದೇ ರೀತಿಯಲ್ಲಿ ಇಡೀ ಶರೀರವೆಲ್ಲಾ ಗಾಳಿಯ, ತೇಲುವ, ಸ್ಪಶರ್ಿಕ ಅನುಭೂತಿಯ ಪಟಿಬಾಗ ನಿಮಿತ್ತದಿಂದ ಆವರಿಸಿದಾಗ ಆನಂದ ಮತ್ತು ಸುಖವು ಆತನಲ್ಲಿರುವ ಸೂಕ್ಷ್ಮ ನೀವರಣಗಳು ನಶಿಸಿ ಧ್ಯಾನಂಗಗಳು ಕೂಡಿ ಸಾಮಿಪ್ಯ ಸಮಾಧಿ ಪ್ರಾಪ್ತಿ ಮಾಡುತ್ತಾನೆ.

ಸಮಾಧಿ ಹಂತಗಳು

ಪ್ರಥಮ ಸಮಾಧಿ :

ಸಾಧಕನಲ್ಲಿ ಪಂಚನೀವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಾಚರ) ಸಮಾಧಿ ಪಡೆದಿದ್ದರೂ ಆತನಲ್ಲಿ ಧ್ಯಾನಂಗಗಳು ಇನ್ನೂ ಬಲಿಷ್ಠವಾಗಿ ಬೆಳೆದಿರುವುದಿಲ್ಲ. ಹೇಗೆಂದರೆ ಮಗುವು ಎದ್ದು ಬಿದ್ದು ನಡೆಯುವ ರೀತಿ. ಆದರೆ ಪಂಚ ಧ್ಯಾನಂಗಗಳನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ. ಹೇಗೆಂದರೆ ಯುವಕ ಓಡುವಂತೆ. ಹೇಗೆ ಆತನು ಸ್ಥಿರ ಸಮಾಧಿ (ಪ್ರಥಮ ಸಮಾಧಿ ಗಳಿಸುತ್ತಾನೆ) ಆ ಸ್ಥಿತಿಯಲ್ಲಿ ಆತನ ಮನಸ್ಸು, ಅತ್ಯಂತ ಮೃದು, ಅತ್ಯಂತ ಶಾಂತ, ಏಕಾಗ್ರತೆ, ಕಾರ್ಯಶೀಲತೆ, ಸುಖ, ಆನಂದ, ಮಣಿಯುವಂತಹ ಹಗುರತೆ ಎಲ್ಲವೂ ವೃದ್ಧಿಯಾಗಿರುತ್ತದೆ. ಆತನಿಗೆ ಯಾವ ಶಬ್ದವೂ ಕೇಳಿಸದೆ ಶಬ್ದಕ್ಕೆ ಆತೀತನಾಗಿರುತ್ತಾನೆ. ಪ್ರಥಮ ಸಮಾಧಿಯಲ್ಲಿ ಮಾನಸಿಕವು ಪ್ರಕಾಶಿತವಾಗುತ್ತದೆ, ಮನಸ್ಸು ಪಕ್ವವಾಗುತ್ತದೆ. ಅಪಾರ ಆನಂದದ ವೃದ್ಧಿಯಾಗಿರುತ್ತದೆ.
ಆತನ ಮನಸ್ಸು ಇಂದ್ರೀಯ ಕ್ಷೇತ್ರದಿಂದ ಸಮಾಧಿ ಲೋಕದ ಚಿತ್ತವಾಗಿ ಗೋತ್ರ ಬದಲಾಯಿಸುತ್ತದೆ. ಈ ರೀತಿಯಲ್ಲಿ ಆತನು ರಾಗಾದಿ, ಅಕುಶಲ ಚಿತ್ತಗಳಿಂದ (ನೀವರಣಗಳಿಂದ) ಮುಕ್ತನಾಗಿ ಏಕಾಂತತೆಯಿಂದ ಹುಟ್ಟಿದ ಪೀತಿ, ಸುಖದಿಂದ ಕೂಡಿದ ಪ್ರಥಮ ಸಮಾಧಿಯಲ್ಲಿ ನೆಲೆಗೊಳ್ಳುತ್ತಾನೆ.
ಆತನ ಇಡೀ ಶರೀರದಲ್ಲೆಲ್ಲಾ ಈ ರೀತಿಯ ಅಲೌಕಿಕ ಆನಂದ ಮತ್ತು ಸುಖದ ಏಕಾಗ್ರತೆಯ ಸುಖವನ್ನು ಆತನು ಇಡೀ ಶರೀರದಲ್ಲೆಲ್ಲಾ ಯಾವ ಭಾಗವು ಬಿಡದೆ ಹಬ್ಬಿಸುತ್ತಾನೆ.
ಹೇಗೆಂದರೆ ಸ್ನಾನ ಮಾಡುವವನು ಸೋಪಿನಪುಡಿಯನ್ನು ನೀರಿನಲ್ಲಿ ನೆನೆಸಿ, ಹಿಂಡಿ, ನೊರೆಯುಕ್ಕಿಸಿ ಇಡೀ ಶರೀರದಲ್ಲೆಲ್ಲಾ ನೊರೆ ವ್ಯಾಪಿಸುವ ಹಾಗೆ ಆತನು ತನ್ನ ಪಟಿಭಾಗ ನಿಮಿತ್ತವನ್ನು, ಹಗುರತನವನ್ನು, ಆ ಸಂವೇದನೆಗಳನ್ನು ಇಡೀ ಶರೀರ ವ್ಯಾಪಿಸುತ್ತಾನೆ.

  10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವೀಣ್ಯತೆ .


 ಅದೆಂದರೆ : 1) ಸ್ವಚ್ಛತೆ 2) ಧ್ಯಾನಂಗಗಳ ಮತ್ತು ಪಂಚಬಲಗಳ ಸಮತೋಲನೆ 3) ಚಿಹ್ನೆಗಳಲ್ಲಿ ಕೌಶಲ್ಯತೆ 4) ಸಕಾಲ ಪ್ರಯತ್ನಶೀಲತೆ 5) ಸಕಾಲ ಸಂಯಮ 6) ಸಕಾಲ ಸ್ಫೂತರ್ಿ 7) ಸಕಾಲ ಸಮಚಿತ್ತತೆ 8) ಧ್ಯಾನಿಗಳಲ್ಲದವರ ವರ್ಜನೆ 9) ಧ್ಯಾನಿಗಳೊಂದಿಗೆ ಬೆರೆಯುವಿಕೆ (ಸ್ನೇಹ) 10) ಧ್ಯಾನದಲ್ಲಿ ಸ್ಥಿರನಿಧರ್ಾರ ಕೈಗೊಳ್ಳುವಿಕೆ (ಹೊಂದಿಕೊಳ್ಳುವಿಕೆ, ಬಾಗುವಿಕೆ).
ನಂತರ ಸಾಧಕನು 5 ಹಂತದ ಸಮಾಧಿಯಲ್ಲಿ ನೈಪುಣ್ಯತೆ ಪಡೆಯಬೇಕಾಗುತ್ತದೆ.

1. ಲಕ್ಷ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಧ್ಯಾನ ವಿಷಯದಲ್ಲಿ ಗಮನ ನೀಡುತ್ತಾನೆ. ನಿಮಿತ್ತ ಧ್ಯಾನಂಗಗಳಲ್ಲಿಯೂ ಗಮನ ಕೇಂದ್ರೀಕರಣ.

2. ಪ್ರವೇಶ ಪ್ರಾಪ್ತಿ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಸಮಾಧಿಯ ಪ್ರವೇಶ ಮತ್ತು ಪ್ರಾಪ್ತಿ.

3. ನೆಲೆಸುವ ನಿಧರ್ಾರ ನೈಪುಣ್ಯತೆ :

 ಇಚ್ಛಾಕಾಲ (ದೀರ್ಘಕಾಲ) ಸಮಾಧಿಯಲ್ಲಿ ನೆಲೆಸುತ್ತಾನೆ

4. ನಿರ್ಗಮನ ನೈಪುಣ್ಯತೆ :

 ಇಚ್ಛಿಸಿದಾಗ ಸಮಾಧಿಯಿಂದ ಹೊರಬರುವಿಕೆ.

5. ಪುನರಾವಲೋಕನ ನೈಪುಣ್ಯತೆ : 

ಇಡೀ ಧ್ಯಾನವನ್ನು ಆತನು ಪುನಃ ಅವಲೋಕಿಸುತ್ತಾನೆ, ವಿಮಶರ್ಿಸುತ್ತಾನೆ ಮತ್ತು ವಿಶ್ಲೇಷಿಸುತ್ತಾನೆ.



ದ್ವಿತೀಯ ಸಮಾಧಿ :

ಈ ರೀತಿಯಲ್ಲಿ ಆತನು ಧ್ಯಾನದಲ್ಲಿ ನೈಪುಣ್ಯತೆ ಪಡೆದಾಗ ಆತನು ಅದನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಪೀತಿ, ಸುಖ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಕಂಡುಬರುತ್ತದೆ. ಆಗ ಆತನು ವಿತಕ್ಕ ವಿಚಾರವನ್ನು ಸ್ತಬ್ದಗೊಳಿಸುತ್ತಾನೆ.
ಭಿಕ್ಷುವು ವಿತಕ್ಕ ಮತ್ತು ವಿಚಾರವನ್ನು ಸ್ತಬ್ದಗೊಳಿಸಿ, ಪೀತಿ (ಆನಂದ) ಸುಖ (ದಿವ್ಯಸುಖ) ಮತ್ತು ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯನ್ನು ಪ್ರಾಪ್ತಿ ಮಾಡುತ್ತಾನೆ. ಇದನ್ನು ಸಾಧಿಸಲು ಆತನಿಗೆ ಅಪಾರ ಆಂತರಿಕ ಶ್ರದ್ಧೆಯಿರಬೇಕಾಗುತ್ತದೆ. ಇವು 3 ಅಂಗಗಳಿಂದ ಕೂಡಿರುತ್ತದೆ. ಅಂದರೆ ಆನಂದ, ಸುಖ ಮತ್ತು ಏಕಾಗ್ರತೆ ವಿಭಂಗದ ಪ್ರಕಾರ ಪ್ರಬಲ ಶ್ರದ್ಧೆಯು ಇರುತ್ತದೆ. ಇದರಿಂದ ಸಿಗುವಂತಹ ಸುಖ, ಆನಂದದಿಂದ ಆತನು ನೆಲೆಸಿ ಆತನು ಇಡೀ ಶರೀರದಲ್ಲೆಲ್ಲಾ ಸುಖ, ಆನಂದವನ್ನು ಪ್ರಸರಿಸುತ್ತಾನೆ. ಹೇಗೆಂದರೆ ಆಳವಾದ ಸರೋವರವೊಂದರಲ್ಲಿ ಕೆಳಗಿನಿಂದ ತಂಪಾದ ನೀರು ಉದಯಿಸಿ ಉಕ್ಕಿ ಮೇಲೆ ಸುತ್ತಲೂ ಸರೋವರವನ್ನೆಲ್ಲ ಆವರಿಸಿಬಿಡುತ್ತದೆ. ಅದೇರೀತಿಯಲ್ಲಿ ಸಾಧಕನು, ಪೀತಿ ಸುಖದಿಂದ ಕೂಡಿದ ಏಕಾಗ್ರತೆಯ ಸುಖದಿಂದ ಇಡೀ ಶರೀರವನ್ನು ತೋಯಿಸಿಬಿಡುತ್ತಾನೆ.

ತೃತೀಯ ಸಮಾಧಿ : 

ಆತ ದ್ವಿತೀಯ ಸಮಾಧಿಯಲ್ಲಿ 5 ರೀತಿ ಪ್ರಾವಿಣ್ಯತೆ ಪಡೆಯುತ್ತಾನೆ. ಸಮಾಧಿಯಲ್ಲಿ ಬಹಳಕಾಲ ಲಕ್ಷಕೊಟ್ಟು ಪ್ರವೇಶಿಸಿ, ನೆಲೆಸಿ, ನಿರ್ಗಮಿಸಿ, ಪುನರ್ ಅವಲೋಕನ ಮಾಡುತ್ತಾನೆ. ಆಗ ಆತನಿಗೆ ಪೀತಿ (ಆನಂದ) ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಸುಖ ಹಾಗು ಏಕಾಗ್ರತೆಯು ಸೂಕ್ಷ್ಮವಾಗಿಯು, ಶಾಂತವಾಗಿಯು ಕಂಡುಬರುತ್ತದೆ.
ಆಗ ಆತನು ಪೀತಿ (ಆನಂದ)ಯನ್ನು ಸ್ತಬ್ದಗೊಳಿಸಿದವನಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ. ತನ್ನ ದೇಹದಲ್ಲೆಲ್ಲಾ ಸುಖವನ್ನು (ದಿವ್ಯಸುಖ/ಶಾಂತಿ) ಎಚ್ಚರಿಕೆಯಿಂದ ಅನುಭವಿಸಿದವನಾಗಿ, ಯಾವುದನ್ನು ಆರ್ಯರು ಸಮಚಿತ್ತತೆ ಮತ್ತು ಎಚ್ಚರದಿಂದ ಕೂಡಿದ ಸುಖ ಎನ್ನುವರೋ ಅದನ್ನು ಪ್ರಾಪ್ತಿ ಮಾಡುತ್ತಾನೆ. ಈ ರೀತಿಯ ಪ್ರಶಾಂತತೆಯ ಸುಖದಿಂದ ಆತನು ಇಡೀ ಶರೀರವನ್ನೆಲ್ಲಾ (ತುಂಬಿಸಿ ಆವರಿಸಿಬಿಡುತ್ತಾನೆ), ತೋಯಿಸಿಬಿಡುತ್ತಾನೆ. ಹೇಗೆಂದರೆ ಕಮಲಗಳಿರುವ ಸರೋವರದಲ್ಲಿ ಕಮಲಗಳನ್ನೆಲ್ಲಾ ನೀರು ಆವರಿಸಿರುತ್ತದೆ. ಅಲ್ಲಿರುವ ಯಾವುದೇ ಕಮಲವಿರಲಿ ಅವೆಲ್ಲಾ ನೀರಿನಿಂದ ಆವೃತವಾಗಿರುತ್ತದೆ. ಅದೇರೀತಿಯಲ್ಲಿ ಆತನು ಸುಖವನ್ನು ಶರೀರದಲ್ಲೆಲ್ಲಾ ಆವರಿಸುತ್ತಾನೆ.

ಚತುರ್ಥ ಸಮಾಧಿ :

ನಂತರ ಮತ್ತೆ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷಿಸುವಿಕೆ, ಪ್ರವೇಶ, ನೆಲೆಸುವಿಕೆ, ನಿರ್ಗಮನ, ಅವಲೋಕನ. ಆಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ. ಸಂಪೂರ್ಣ ಜಾಗರೂಕನಾದ ಆತನಿಗೆ ಸಮಚಿತ್ತತೆ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಶಾಂತವಾಗಿ ಕಂಡುಬಂದು ಅದನ್ನು ಸಾಧಿಸುತ್ತಾನೆ. ಸ್ಥೂಲವಾದ ಸುಖವನ್ನು ವಜರ್ಿಸಿ, ಸುಲಭವಾಗಿ ಸಿಗಲಾರದ ಅತ್ಯಂತ ಸೂಕ್ಷ್ಮವಾದ ಪರಿಶುದ್ಧವಾದ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ. ಅದು ಕೇವಲ 2 ಅಂಗಗಳಿಂದ ಕೂಡಿರುತ್ತದೆ. ಅದೆಂದರೆ ಸಮಚಿತ್ತತೆ ಮತ್ತು ಏಕಾಗ್ರತೆ ಈ ಬಗೆಯ ಪರಿಶುದ್ಧ ಸ್ಥಿತಿಯಿಂದ ಆತನು ನೆಲೆಸಿರುತ್ತಾನೆ. ಇಡೀ ಶರೀರದಲ್ಲೆಲ್ಲಾ ಇಂತಹುದೇ ಸ್ಥಿತಿಯಿಂದ ಆವೃತಗೊಳಿಸುತ್ತಾನೆ. ಹೇಗೆಂದರೆ ಒಬ್ಬ ವ್ಯಕ್ತಿ ಕುಳಿತು ಬಿಳಿ ಬಟ್ಟೆಯನ್ನು ಪೂರ್ಣವಾಗಿ ಹೊದ್ದುವಂತೆ ಆತನು ಈ ಪರಿಶುದ್ಧತೆಯಿಂದ ಇಡೀ ಶರೀರವನ್ನು ತೋಯಿಸುತ್ತಾನೆ, ನೆಲೆಸುತ್ತಾನೆ.
ನಂತರ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷ, ಪ್ರವೇಶ, ನೆಲೆ, ನಿರ್ಗಮನ ಮತ್ತು ಅವಲೋಕನ. ಆಗ ಆತನಿಗೆ ರೂಪ ಸಮಾಧಿಯು ಸ್ಥೂಲವಾಗಿ ಕಂಡುಬರುತ್ತದೆ. ಆಗ ಆತನಿಗೆ ಎರಡು ಆಯ್ಕೆಗಳಿರುತ್ತದೆ. ಅರೂಪ ಸಮಾಧಿ ಸಿದ್ಧಿಸುವುದು ಅಥವಾ ವಿಪಶ್ಶನಾ ಧ್ಯಾನವನ್ನು ಆರಂಭಿಸುವುದು.

5. ಅರಿಯುವಿಕೆ (ಸಲ್ಲಖ್ಖಂ) (ಅನಾಪಾನ ವಿಪಶ್ಶನ ಧ್ಯಾನ (ಸಂಕ್ಷಿಪ್ತ)) :

ಇಲ್ಲಿ ಧ್ಯಾನಿಯು ನಾಮ (ಮನಸ್ಸು) ಮತ್ತು ರೂಪ (ಶರೀರ)ವನ್ನು ಅರಿಯುತ್ತಾನೆ. ಆಗ ಆತನಿಗೆ ಆನಾಪಾನಸತಿಗೆ ಶರೀರವೇ ಆಧಾರ ಮತ್ತು ಮನಸ್ಸಿನಿಂದ ಇದರ ಉದ್ಭವ ಆಗಿದೆ ಎಂದು ಅರಿವಾಗುತ್ತದೆ. ಹಾಗೆಯೇ ದೇಹ ಮನಸ್ಸಿನ ಸ್ವರೂಪವು ಅದರ ಹಿಂದಿನ ಕಾರಣಗಳು, ಈಗಿನ ಅಸ್ತಿತ್ವ ಮತ್ತು ಮುಂದಿನ ಪರಿಣಾಮ ಈ ರೀತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಅರಿಯುತ್ತಾನೆ. ನಂತರ ಆತನು ತನ್ನ ಸಂಶಯಗಳನ್ನೆಲ್ಲಾ ನಿವಾರಿಸಿಕೊಳ್ಳುತ್ತಾನೆ. ಆತನಿಗೆ ಈ ದೇಹ ಮತ್ತು ಮನಸ್ಸು ಕ್ಷಣಿಕ. ಅನಿತ್ಯವೆಂಬ ಜ್ಞಾನೋದಯ ಉಂಟಾಗುತ್ತದೆ. ಈ ಶರೀರವೇ ದುಃಖ ಮತ್ತು ಮನಸ್ಸು ಸಹಾ ದುಃಖ ಎಂದು ಅರಿವಿಗೆ ಬರುತ್ತದೆ. ಇಲ್ಲಿ ತನ್ನದು, ತನ್ನ ಆತ್ಮ ಅಥವಾ ನಾನು ಎಂಬುದು ಭ್ರಮೆ ಎಂಬ ಜ್ಞಾನೋದಯ ಉಂಟಾಗುತ್ತದೆ.

6. ವಿಮುಖತೆ (ವಿವಟ್ಠನಾ) :

 ಇಲ್ಲಿ ಸಾಧಕನು 10 ಬಗೆಯ ಅಪೂರ್ಣತೆಗಳನ್ನು ವಜರ್ಿಸುತ್ತಾನೆ. ಇಲ್ಲಿ ಆತನಿಗೆ ಉದಯ ವ್ಯಯದ ಜ್ಞಾನವಾಗಿ ಎಲ್ಲಾ ಸಂಖಾರಗಳು ಭಯಾನಕವಾಗಿ ಕಂಡುಬರುತ್ತದೆ. ಆತನು ಅದರಿಂದ ವಿರಾಗ ತಾಳುತ್ತಾನೆ. ನಿರೋಧವನ್ನುಂಟು ಮಾಡಿ, ಕಲ್ಮಶಗಳನ್ನೆಲ್ಲ ತೊರೆಯುತ್ತಾನೆ. ಹೊಸದಾಗಿ ಯಾವೊಂದು ರೀತಿಯ ಬಂಧನಕ್ಕೂ ಬೀಳದೆ ಸಾಧನೆ ಮಾಡುತ್ತಾನೆ.

7. ಪರಿಶುದ್ಧಿ : 

ಇಲ್ಲಿ ಆತನಿಗೆ ಲೋಕೋತ್ತರ ಫಲ ಪ್ರಾಪ್ತಿಯಾಗುತ್ತದೆ. ವಿಮುಕ್ತಿ ಅಥವಾ ಸಮಚ್ಛೆದಾ ವಿಮುಕ್ತಿ ಗಳಿಸುತ್ತಾನೆ.

8. ಪುನರ್ ಅವಲೋಕನ (ಪಟಿಪಸ್ಸನಾ) :

 ಇಲ್ಲಿ ಆತನು ನಾಶಗೊಳಿಸಿದ ಬಂಧನಗಳ ಇಡೀ ಪ್ರಕ್ರಿಯೆ ಪುನಃ ಪುನಃ ಅವಲೋಕಿಸುತ್ತಾನೆ. ಅಂದರೆ ಎಣಿಕೆಯಿಂದ ಪರಿಶುದ್ದಿಯವರೆಗೂ ಪುನರ್ ಅವಲೋಕನ ಮಾಡುತ್ತಾನೆ.

ಸಮಾಧಿಯ ಲೋಕೋತ್ತರ ಪ್ರಯಾಣ

                               ಸಮಾಧಿಯ ಲೋಕೋತ್ತರ ಪ್ರಯಾಣ :




ಮನಸ್ಸಿನ ಏಕತೆಯೇ ಸಮಾಧಿ, ನಾಲ್ಕು ಸತಿಪಟ್ಠಾನವೇ ಧ್ಯಾನದ ವಿಷಯಗಳು, 4 ಸಮ್ಮಾ ಪ್ರಯತ್ನಗಳೇ ಅವುಗಳ ಸಲಕರಣೆಗಳು. ಇವುಗಳ ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.

ಸಮಾಧಿಯ ಸ್ಥಳ :

ಅದು ಅರಣ್ಯವಾಗಿರಬಹುದು, ಮರದ ಬುಡ, ಗುಹೆ, ಬೆಟ್ಟ, ವಿಹಾರ, ಧ್ಯಾನಮಂದಿರ ಅಥವಾ ಶೂನ್ಯಗೃಹ (ಯಾರು ಇಲ್ಲದ ಮನೆ), ಇವು ಯಾವುದಾದರೂ ಆಗಬಹುದು. ಆದರೆ ಆ ಸ್ಥಳವು ಅತಿ ನಿಶ್ಶಬ್ದವಾಗಿರಬೇಕು. ಹಾಗು ನಿರ್ಜನವಾಗಿರಬೇಕು. ಏಕೆಂದರೆ ಪ್ರಥಮ ಸಮಾಧಿಗೆ ಶಬ್ದವೇ ಶತ್ರು ಎನ್ನುತ್ತಾರೆ. ಆ ಸ್ಥಳವು ವಾಹನಗಳ ಶಬ್ದ, ಸಂಗೀತ, ಹಾಡುಗಳ, ಕಾಖರ್ಾನೆಗಳ ಒಟ್ಟಾರೆ ಸರ್ವರೀತಿಯ ಶಬ್ದಗಳಿಂದ ಮುಕ್ತವಾಗಿರಬೇಕು. ಹಾಗೆಯೇ ಹಾವು ಮುಂತಾದ ಸರಿಸೃಪಗಳಿಂದ ಮುಕ್ತವಾಗಿರಬೇಕು.

ಸಮಾಧಿಯ ಸಕಾಲ :

ಭಿಕ್ಷುಗಳು ಇಡೀ ಜೀವನ ಧ್ಯಾನದಲ್ಲಿ ಕಳೆಯಬೇಕಾಗುತ್ತದೆ. ಆದರೆ ಗೃಹಸ್ಥರು ಪ್ರತಿದಿನ ಕನಿಷ್ಠ ಅರ್ಧಗಂಟೆ ಧ್ಯಾನಿಸುವುದು ಅವರ ಲೌಕಿಕ, ಅಲೌಕಿಕ ಮತ್ತು ಲೋಕೋತ್ತರ ಲಾಭಕ್ಕಾಗಿ ಉತ್ತಮವಾದುದು. ಬೆಳಿಗ್ಗೆ 3 ರಿಂದ 7ರ ತನಕ ಅಥವಾ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಮಾಡಬಹುದು. ಯಾವುದೇ ಕಾಲವಾಗಿರಲಿ, ನಿಗದಿತ ಸಮಯ ಸುಲಾಭಕಾರಿ.
ಸಮಾಧಿಯ ಭಂಗಿ : ಪದ್ಮಾಸನವು ಸವರ್ೊತ್ತಮವಾದುದು. ಇದು ಸಮತೋಲನತೆಗೆ, ಆರೋಗ್ಯಕ್ಕೆ, ಚಳಿಗೆ ಸಹಾಯಕಾರಿಯಾಗಿದೆ. ಸೊಂಟ, ಬೆನ್ನು, ಕುತ್ತಿಗೆ ನೇರವಾಗಿರಬೇಕು. ಕಣ್ಣುಮುಚ್ಚಿದರೆ ಉತ್ತಮ, ಅರ್ಧ ಪದ್ಮಾಸನ ಅಥವಾ ಸುಖಾಸನವು ಧ್ಯಾನಕ್ಕೆ ಉತ್ತಮವೇ ಆಗಿದೆ.

ಸಮಾಧಿಗೆ ಬಾಹ್ಯ ಅಡ್ಡಿಗಳು :

 ಇವು ಧ್ಯಾನಕ್ಕೆ ಬಹಳಷ್ಟು ಬಾರಿ ಅಡ್ಡಿತರುತ್ತದೆ. 

1. ವಾಸಸ್ಥಳ 2. ಕುಟುಂಬ 3. ಪ್ರಯಾಣ 4. ವಿಪರೀತ ಲೌಕಿಕ ಕೆಲಸಗಳು 5. ರೋಗ  6. ಅತಿಯಾಧ ಅಧ್ಯಯನ 7. ಅಲೌಕಿಕ ಧ್ಯಾನ ಶಕ್ತಿಗಳು 8. ಶಬ್ದದ ವಾತಾವರಣ
9. ಲೌಕಿಕರ ಸ್ನೇಹ 10. ಹರಟೆ 11. ನೋವು ಇತ್ಯಾದಿ.

ಆಂತರಿಕ ಅಡ್ಡಿಗಳು

1. ಮಾರನ ಸೈನ್ಯ   2. ಪಂಚ ನೀವರಣ

1) ಮಾರನ ಸೈನ್ಯ :

1. ಕಾಮ : ಇಂದ್ರೀಯ ಬೋಗಾಭಿಲಾಷೆ, ಸ್ತ್ರೀ, ಮಕ್ಕಳು ಐಶ್ವರ್ಯ, ಅಧಿಕಾರಲಾಲಸೆ.
2. ಅರತಿ (ಅತೃಪ್ತಿ) : ಶ್ರೇಷ್ಠ ಧಮ್ಮ ಜೀವನದಲ್ಲಿ ಆನಂದಿಸದಿರುವಿಕೆ.
3. ಹಸಿವು ಮತ್ತು ಬಾಯಾರಿಕೆ : ನಾಲಿಗೆಗೆ ವಶವಾಗುವಿಕೆ
4. ತನ್ಹಾ : ಕಾಯತನ್ಹಾ, ಭವತನ್ಹಾ ಮತ್ತು ವಿಭವತನ್ಹಾ
5. ಜಡತೆ ಮತ್ತು ಸೋಮಾರಿತನ : ಪ್ರಯತ್ನವಿಲ್ಲದಿರುವಿಕೆ
6. ಭಯ : ಹೆದರುವಿಕೆ
7. ಸಂದೇಹ : ತ್ರಿರತ್ನ ಮತ್ತು ತನ್ನಲ್ಲಿ ಸಂದೇಹ
8. ಅಹಂಕಾರ ಮತ್ತು ಕೃತಘ್ನತೆ : ತನ್ನನ್ನು ಶ್ರೇಷ್ಠ ಎಂದು ಭಾವಿಸಿ ಸೇವೆ ಮರೆಯುವಿಕೆ.
9. ಲಾಭ ಕೀತರ್ಿ, ಗೌರವ : ಪ್ರಶಂಸೆಗೆ, ಲೌಕಿಕತೆಗೆ ಹಾತೊರೆಯುವಿಕೆ.
10. ಸ್ವಪ್ರಶಂಸೆ ಮತ್ತು ಪರನಿಂದೆ : ತನ್ನನ್ನು ಹೊಗಳುವಿಕೆ ಪರರ ಹುಳುಕನ್ನು ಹುಡುಕಿ ನಿಂದಿಸುವಿಕೆ.

ಪಂಚ ನೀವರಣಗಳು

1. ಇಂದ್ರೀಯ ಬೋಗದ ಚಿಂತನೆ (ಕಾಮಚ್ಚಂದ)
2. ದ್ವೇಷಿಸುವಿಕೆ (ವ್ಯಾಪಾದ)
3. ಜಡತೆ ಮತ್ತು ಸೋಮಾರಿತನ (ತೀನ ಮತ್ತು ಮಿದ್ದ)
4. ಅವಿಶ್ರಾಂತಿ ಮತ್ತು ಪಶ್ಚಾತ್ತಾಪ (ಉದ್ಧಚ ಮತ್ತು ಕುಕ್ಕುಚ್ಚ)
5. ಸಂದೇಹ (ವಿಚಿಕಿಚ್ಚಾ)

ಧ್ಯಾನಕ್ಕೆ ಪೂರ್ವ ಸಿದ್ಧತೆ :

1. ಶೀಲವಂತ, ತ್ಯಾಗಿಗಳ, ಪ್ರಯತ್ನಶೀಲರ, ಧ್ಯಾನಿಗಳ, ಮೈತ್ರಿವಂತರ, ಪ್ರಜ್ಞಾವಂತರ ಸಹವಾಸದಲ್ಲಿರಬೇಕಾಗುತ್ತದೆ.
2. ಅಧ್ಯಯನ ಮತ್ತು ಚಚರ್ೆ
3. ಮಿತಾಹಾರ
4. ಶೀಲಪಾಲನೆ, ಇಂದ್ರಿಯ ನಿಗ್ರಹ ಮತ್ತು ಕರ್ಮಫಲಗಳ ಅರಿಯುವಿಕೆ,
5. ಪ್ರತಿಯೊಂದು ಕುಶಲದ ಮಹತ್ವ ಮತ್ತು ಧ್ಯಾನದ ಪ್ರತಿಹಂತಗಳ ಅರಿಯುವಿಕೆ ಮತ್ತು ಅಡ್ಡಿಗಳ ನಿವಾರಣೆಗೆ ಸಿದ್ಧವಾಗುವುದು.
6. ಧ್ಯಾನದ ಸ್ಥಳ, ಕಾಲ, ಭಂಗಿಯನ್ನು ನಿಧರ್ಿಷ್ಟಗೊಳಿಸಬೇಕು. ತಾಜಾತನದ ಮನಸ್ಸಿನಿಂದ ಆರಂಭಿಸಬೇಕಾಗುತ್ತದೆ.
ಆನಾಪಾನಾ ಝಾನದ ಆರಂಭ :
ಇಲ್ಲಿ ಸಾಧಕ ಅಥವಾ ಭಿಕ್ಷುವು, ಅರಣ್ಯಕ್ಕೂ ಅಥವಾ ವೃಕ್ಷ ಮೂಲದಲ್ಲೋ ಅಥವಾ ಶೂನ್ಯಗೃಹದಲ್ಲೋ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ತನ್ನ ಶರೀರವನ್ನು ನೇರವಾಗಿಡುತ್ತಾನೆ ಮತ್ತು ಜಾಗರೂಕತೆಯನ್ನು ತನ್ನ ಮುಂದೆ ಸ್ಥಾಪಿಸುತ್ತಾನೆ. ಸದಾ ಒಳ ಉಸಿರು ಮತ್ತು ಹೊರ ಉಸಿರು (ಅನಾ ಮತ್ತು ಅಪಾನ)ನಲ್ಲೇ ಜಾಗ್ರತೆ (ಸತಿ) ಸ್ಥಾಪಿಸುತ್ತಾನೆ.
ಅಂದರೆ ಇಲ್ಲಿ ಒಂದು ನಿಗದಿತ ಕಾಲದಲ್ಲಿ ಅಥವಾ ಭಿಕ್ಷುವಾಗಿದ್ದರೆ ಸದಾಕಾಲ ಅಭ್ಯಸಿಸಬೇಕಾಗುತ್ತದೆ. ಆಗಿನ ಕಾಲದಲ್ಲಿ ಅರಣ್ಯವು ಏಕಾಂತ ಸ್ಥಳವಾಗಿದ್ದರಿಂದ ಅದೇ ವಿವರಣೆ ಇಲ್ಲಿ ನೀಡಿದೆ. ವೃಕ್ಷಮೂಲ ಅಥವಾ ಮರದ ಬುಡವು ಚಳಿ, ಮಳೆ ಮತ್ತು ಬಿಸಿಲಿಗೆ ರಕ್ಷಣೆ ನೀಡುವುದರಿಂದ ಅದನ್ನು ಆಯ್ಕೆ ಮಾಡಬಹುದು ಅಥವಾ ಆಧುನಿಕ ಕಾಲದಂತೆ ಧ್ಯಾನಮಂದಿರ ಅಥವಾ ಶೂನ್ಯಗೃಹ ಅಂದರೆ ಶಬ್ದವಿಲ್ಲದ, ಬೇರೆ ವ್ಯಕ್ತಿಗಳಿಲ್ಲದ ಕಡೆ ಧ್ಯಾನದಲ್ಲಿ ನೆಲೆಸಿ ಸಾಧಿಸಬೇಕಾಗುತ್ತದೆ.
ಆತನು ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನದಲ್ಲಿ ಅಥವಾ ಅರ್ಧ ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ಮತ್ತು ಕತ್ತನ್ನು ಒಟ್ಟಾರೆ ಶರೀರದ ಭಂಗಿ ನೇರವಾಗಿಟ್ಟುಕೊಂಡು ಕುಳಿತು ತನ್ನ ಗಮನವೆಲ್ಲಾ, ತನ್ನ ಮನಸ್ಸನ್ನು ಉಸಿರಿನಲ್ಲೇ ಅಂದರೆ ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಕೇಂದ್ರೀಕೃತಗೊಳಿಸಿ ಜಾಗ್ರತೆಯಲ್ಲಿರಬೇಕು. ಇಲ್ಲಿ ಉಸಿರನ್ನು ಹಿಡಿಯುವುದಾಗಲಿ (ಕುಂಭಕ) ಅಥವಾ ಉಸಿರನ್ನು ಬಿಟ್ಟು ಉಸಿರನ್ನು ಹಿಡಿಯುವುದಾಗಲಿ (ಬಾಹ್ಯ ಕುಂಭಕ) ಮಾಡಬಾರದು. ಅಥವಾ ಒಂದು ಮೂಗಿನ ಹೊಳ್ಳೆಯಿಂದ ಉಸಿರು ತೆಗೆಯುವುದು, ಬಿಡುವುದು ಇತ್ಯಾದಿ. ಉಸಿರಾಟದ ವ್ಯಾಯಾಮಗಳನ್ನು ಮಾಡಬೇಡಿ. ಏಕೆಂದರೆ ಇದು ಉಸಿರಾಟದ ವ್ಯಾಯಾಮವಲ್ಲ, ಬದಲಾಗಿ ಉಸಿರಾಟದ ಧ್ಯಾನವಾಗಿದೆ. ಹಾಗೆಯೇ ಬಲವಂತವಾಗಿ ಉಸಿರಾಟ ಮಾಡುವುದು ಬೇಡ. ಸಹಜ ಸ್ಥಿತಿಯಲ್ಲೇ ಉಸಿರಾಟ ಹೇಗೆ ಒಳಹೋಗುವುದು ಅಥವಾ ಹೊರಬರುತ್ತದೋ ಅದನ್ನು ಹಾಗೆಯೇ ವೀಕ್ಷಿಸಿ, ಅನುಭವಿಸಿ, ಜಾಗ್ರತೆಯಿಂದ ಗಮನಿಸಿ. ಹಾಗೆಯೇ ಉಸಿರಿನ ಜೊತೆಗೆ ರೂಪವನ್ನು (ರೂಪ/ವಿಗ್ರಹ/ಭಾವಚಿತ್ರ) ಕಲ್ಪಸಬೇಡಿ. ಹಾಗೆಯೇ ಜಪವನ್ನು ಮಾಡಬೇಡಿ. ಹಾಗೆ ಮಾಡಿದಾಗ ಅದು ಉಸಿರಾಟದ ಧ್ಯಾನವಾಗದೆ ಕಸಿನಾ ಅಥವಾ ಜಪಧ್ಯಾನವಾಗುತ್ತದೆ. ಆಗ ನೀವು ಅನಾಪಾನಾಸತಿಯ ಅತ್ಯುನ್ನತ ಲಾಭದಿಂದ ವಂಚಿತರಾಗುತ್ತೀರಿ. ಆದ್ದರಿಂದ ಕಡ್ಡಾಯವಾಗಿ ರೂಪ ಅಥವಾ ನಾಮ (ಜಪ) ಸೇರಿಸಬೇಡಿ.
ಉಸಿರಾಟವು ಸಹಜವಾಗಿ ನಡೆಯುತ್ತಿರುತ್ತದೆ. ನೀವು ಸಹಾ ಸಹಜವಾಗಿಯೇ ಅದನ್ನು ಗಮನಿಸುತ್ತಿರಿ. ಮನಸ್ಸಿನಲ್ಲಿ, ಉಸಿರಾಟದಲ್ಲೇ ಕೇಂದ್ರೀಕೃತಗೊಳಿಸಿ. ಉಸಿರಾಟದಲ್ಲೇ ಹರಿಸಿರಿ. ಏಕಾಗ್ರಗೊಳಿಸಿರಿ, ನಿಮ್ಮ ಮನಸ್ಸು ಚದುರದಿರಲಿ, ಚೆಲ್ಲಾಪಿಲ್ಲಿಯಾಗಿ ಚಲಿಸದಿರಲಿ. ಬೇರೆ ವಿಷಯದ ಕಡೆ ಹರಿಯದಿರಲಿ, ಯಾವುದರಿಂದಲೂ ಕ್ಷೊಭೆಗೆ ಒಳಗಾಗಬಾರದು. ಚದುರದ, ಅಬಾಧಿತವಾದ ಏಕಾಗ್ರತೆಯನ್ನು ಉಸಿರಾಟದ ಮೇಲೆ ಹರಿಸಿ, ಮಿಕ್ಕೆಲ್ಲಾ ವಿಷಯದಿಂದ ನಿಮ್ಮ ಮನಸ್ಸು ವಿಮುಖವಾಗಲಿ, ಹಾಗೆಯೇ ಉಸಿರಾಟದಲ್ಲಿ ನಿಮ್ಮ ಮನಸ್ಸು ಒಮ್ಮುಖವಾಗಿರಲಿ.

ಮಾರನ ತಡೆಗಳು :

ಆದರೆ ನಿಮ್ಮ ಮನಸ್ಸು ಸುಶಿಕ್ಷಿತವಾಗಿಲ್ಲದ ಕಾರಣ, ಧ್ಯಾನದಲ್ಲಿ ನೆಲೆಸದ ಕಾರಣ, ಈ ಹಿಂದೆ ಚಂಚಲತೆಗೆ ಒಳಪಟ್ಟ ಕಾರಣದಿಂದ, ಅದು ಉಸಿರಾಟದಲ್ಲಿ ತಲ್ಲೀನವಾಗದು. ಅದು ನಾನಾ ವಿಷಯಗಳಲ್ಲಿ ಚಲಿಸುತ್ತಿರುತ್ತದೆ. ಮೊಲದಂತೆ ಚೆಲ್ಲಾಪಿಲ್ಲಿಯಾಗಿ ಚಲಿಸುತ್ತದೆ. ಮಂಗವು ಒಂದು ವೃಕ್ಷದಿಂದ ಮತ್ತೊಂದು ವೃಕ್ಷಕ್ಕೆ ನೆಗೆಯುವ ಹಾಗೆ ಅದು ಸಹಾ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರುತ್ತಿರುತ್ತದೆ. ನೆಲಕ್ಕೆ ಬಿದ್ದ ಪಾದರಸದಂತೆ ಚದುರಿ ಹೋಗುತ್ತದೆ.
ಇಷ್ಟಕ್ಕೂ ನಮ್ಮ ಮನಸ್ಸನ್ನು ಆಕ್ರಮಿಸುವಂತಹುದು ಯಾವುದು? ಸುಖಪೂರಿತವಾದ ಇಂದ್ರಿಯ ಸುಖಗಳು ಚಿತ್ತಾಕರ್ಷಕವಾಗಿ ಕಾಡುತ್ತದೆ. ಇದು 6 ಇಂದ್ರಿಯಗಳ ಸುಖವೆಂದು ಹೇಳಬಹುದು. ಅಂದರೆ ಕಣ್ಣಿಗೆ ಆಕರ್ಷಕವಾದುದು, ಕಿವಿಗೆ ಆಕರ್ಷಕವಾದುದು, ಮೂಗಿಗೆ ಆಕರ್ಷಕವಾದುದು, ನಾಲಿಗೆಗೆ ಆಕರ್ಷಕವಾದುದು, ದೇಹಕ್ಕೆ ಆಕರ್ಷಕವಾದದ್ದು ಮತ್ತು ಮನಸ್ಸಿಗೆ ಆಕರ್ಷಕವಾದುದ್ದು ಹಾಗೆಯೇ ಹಣ, ಅಧಿಕಾರ, ಕೀತರ್ಿ, ಸ್ತ್ರೀ ಅಥವಾ ಪುರುಷ, ಪುತ್ರರು ಇತ್ಯಾದಿ ಸುಖಗಳ ಯೋಜನೆಗಳು ಬಂದು ಕಾಡುತ್ತದೆ. ಆಗ ಮನಸ್ಸು ಅದರ ಹಿಂದೆ ಹೊರಡುತ್ತದೆ.
ಅಥವಾ ಆರು ಇಂದ್ರೀಯಗಳಿಗೆ ಅಪ್ರಿಯವಾದದ್ದು, ಕಾಡಬಹುದು. ರೂಪದ್ವೇಷ (ಕಣ್ಣಿನ ಮೂಲಕ ದ್ವೇಷಿಸುವಂತಹುದು) ಶಬ್ದದ ದ್ವೇಷ, ವಾಸನೆಯ ದ್ವೇಷ, ಸ್ಪರ್ಶದ ದ್ವೇಷ, ರುಚಿಯ ದ್ವೇಷ, ದ್ವೇಷಿಸುವ ವ್ಯಕ್ತಿಗಳ ಯೋಚನೆ. ಅಪ್ರಿಯ ಸನ್ನಿವೇಶಗಳ ಯೋಚನೆ, ಅಪ್ರಿಯ ವಸ್ತುಗಳ ಯೋಚನೆ, ಭಯದ ಯೋಚನೆ, ಚಿಂತೆ, ಕಾಡಬಹುದು. ಆದರೆ ಪ್ರತಿ ಭಯ ಅಥವಾ ಚಿಂತೆಯ ಹಿಂದೆ ಪ್ರಿಯ ಅಥವಾ ಅಪ್ರಿಯ ಯೋಚನೆ ಇದ್ದೇ ಇರುತ್ತದೆ. ಅಥವಾ ಪಶ್ಚಾತ್ತಾಪ ಉಂಟಾಗಬಹುದು. ಹಿಂದೆ ಮಾಡಿರುವ ಪಾಪ ಅಥವ ತಪ್ಪುಗಳು ಪಶ್ಚಾತ್ತಾಪ ಉಂಟುಮಾಡುತ್ತಿರುತ್ತದೆ. ಹಾಗೆಯೇ ಭವಿಷ್ಯದಲ್ಲಿ ಸಾಧಿಸದಿರುವ ಈಗ ಸಾಧಿಸಲು ಸಾಧ್ಯವಾಗದೆ ಉಂಟಾಗುತ್ತಿರುವ ಪಶ್ಚಾತ್ತಾಪವಾಗ ಬಹುದು. ಅಥವಾ ಧ್ಯಾನದ ಬಗ್ಗೆಯೇ ಬೇಸರವಾಗಬಹುದು. ಜಯ-ಪರಾಜಯ, ಲಾಭ-ನಷ್ಟ, ಸ್ತುತಿನಿಂದ ಇವುಗಳು ಕಾಡಬಹುದು.
ಅಥವಾ ಜಡಸ್ಥಿತಿಯು ಉಂಟಾಗಿ ಅಲಕ್ಷವು ಅತಿಯಾಗಿ ಯತ್ನಶೀಲತೆಯು ನಿಂತೇ ಹೋಗಬಹದು. ನಾಳೆ ಮಾಡೋಣ, ಅನಂತರ ಮಾಡೋಣ, ಮುಂದಿನ ತಿಂಗಳು ಮಾಡೋಣ ಹೀಗೆಯೇ ಸೋಮಾರಿತನ ಉಂಟಾಗಬಹುದು.
ಅಥವಾ ಧ್ಯಾನದ ಮೇಲೆ ಸಂದೇಹ ಉಂಟಾಗಬಹುದು. ತನ್ನ ಮೇಲೆ ಸಂದೇಹ ಉಂಟಾಗಬಹುದು. ಅಥವಾ ತ್ರಿರತ್ನದ ಮೇಲೆ (ಬುದ್ಧ, ಧಮ್ಮ, ಸಂಘ) ಸಂದೇಹ ಉಂಟಾಗಬಹುದು.
ಅಥವಾ ಕಾಲುಗಳು ನೋವನ್ನು ತರಬಹುದು, ದೇಹವನ್ನು, ಉಸಿರನ್ನು ಮತ್ತು ಸಂವೇದನೆಗಳನ್ನು ಯಾವಾಗಲು, ವೀಕ್ಷಿಸದ ಕಾರಣ ಆ ಅನುಭವವನ್ನು ಕಂಡು ಭೀತಿಗೊಳ್ಳಬಹುದು. ವಿಪರೀತ ಸಂದೇಹಕ್ಕೆ ಗುರಿಯಾಗಬಹುದು. ಹಸಿವು, ನೀರಡಿಕೆ ಕಾಡಬಹುದು. ಭಯವು ಉಂಟಾಗಬಹುದು, ಲಾಭ, ಪ್ರಶಂಸೆಗಳ ಬಗ್ಗೆ ಮನವು ಚಲಿಸಬಹುದು.
ಇಂತಹುದೇ ಭೂತಕಾಲದ ಯೋಚನೆಗಳಲ್ಲಿ ಮನಸ್ಸು ಹರಿಯುತ್ತದೆ ಅಥವಾ ಇಂತಹುದೇ ಭವಿಷ್ಯಕಾಲ ಯೋಚನೆಗಳಲ್ಲಿ ಮುಳುಗಬಹುದು ಅಥವಾ ವರ್ತಮಾನದ ನೋವು, ಬೇಸರ, ಜಡತೆ ಕಾಡಬಹುದು.

ಮಾರನ ತಡೆಗಳ ನಿವಾರಣೆ :

ಈ ರೀತಿ ನಿಮಗೆ ಕಾಡುವ ಯೋಚನೆಗಳ ಸಂಗ್ರಹವೇ ಪಂಚನೀವರಣ. ಅಂದರೆ ಇಂದ್ರಿಯಾಸಕ್ತಿ, ದ್ವೇಷ, ಜಡತೆ, ಚಿಂತೆ ಮತ್ತು ಸಂದೇಹ ಹಾಗು ನೋವು ಇವೇ ನಿಮ್ಮನ್ನು ಕಾಡುತ್ತಿರುವುದು. ಇವು ಭೂತಕಾಲದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ಭವಿಷ್ಯದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ವರ್ತಮಾನದಲ್ಲಿ ಬೇಸರ, ಸೋಮಾರಿತನ ಅಥವಾ ಕಾಲುಗಳ ನೋವಿನ ದ್ವೇಷದ ರೂಪದಲ್ಲಿ ಕಾಡಬಹುದು.
ಇವೆಲ್ಲದರಿಂದ ಮೀರಿ ಸಾಧನೆ ಮಾಡುತ್ತೇವೆ ಎಂದು ಸಂಕಲ್ಪಿಸಿ ಹಾಗು ದೃಢ ನಿಧರ್ಾರದಿಂದ ಪ್ರಯತ್ನಶೀಲರಾಗಿ ಮತ್ತು ಯಶಸ್ವಿಗಳಾಗಿ ಆಗಲೇ ನಿಮಗೆ ಜಯ ಸಾಧ್ಯ.
ಇವೆಲ್ಲವೂ ಯೋಚನೆಗಳಾಗಿವೆ, ಇವು ಭೂತಕಾಲದ ನೆನಪುಗಳಾಗಿರುತ್ತವೆ ಅಥವಾ ಭವಿಷ್ಯದ ಯೋಜನೆ ಅಥವಾ ಕನಸುಗಳಾಗಿರುತ್ತದೆ ಅಷ್ಟೇ. ಈ ಯೋಚನೆಗಳನ್ನು ನೀವು ಮೀರಿ ಸಾಧನೆ ಮಾಡಬೇಕು.
ಈ ತಡೆಗಳನ್ನು ಮೀರಬೇಕಾದರೆ ನೀವು ಈ ಹಿಂದೆ ಶೀಲವನ್ನು ಪಾಲಿಸುತ್ತಿರಬೇಕು, ಇಂದ್ರಿಯಗಳ ರಕ್ಷಣೆ (ಸಂಯಮ) ಮಾಡಬೆಕು, ಅಧ್ಯಯನ ಮಾಡಿ ಜ್ಞಾನ ಗಳಿಸಿ ಸಂದೇಹ ಮುಕ್ತವಾಗಿರಬೇಕು. ಸತ್ಸಂಗದಲ್ಲಿ ಇರಲೇಬೇಕು.
ವರ್ತಮಾನದಲ್ಲಿ ತಡೆಗಳ ರಹಿತ ಸ್ಥಿತಿಗೆ ನಿರಂತರ ಶ್ರಮಿಸಬೇಕು. ಪಂಚ ಬಲಗಳನ್ನು ಸಪ್ತಬೋಧಿ ಅಂಗಗಳನ್ನು ವೃದ್ಧಿಗೊಳಿಸಬೇಕು.
ಈ ಹಿಂದೆಯೇ ಅಶುಭ ಧ್ಯಾನ, ಬ್ರಹ್ಮವಿಹಾರ ಧ್ಯಾನ, ಕರ್ಮಫಲ ಚಿಂತನೆ, ಪ್ರಯತ್ನಶೀಲತೆಯ ಮಹತ್ವ, ಅಲೋಕ ಕಸಿನಾ, ಸುಖವೃದ್ಧಿ, ಶ್ರದ್ಧೆ, ಜ್ಞಾನದ ವೃದ್ಧಿ ಮಾಡಿದರೆ ಪಂಚ ತಡೆಗಳು ಬಲಹೀನವಾಗುತ್ತದೆ, ನಾಶವಾಗುತ್ತದೆ.
ಇವೆಲ್ಲವೂ ಯೋಚನೆಗಳಾಗಿವೆ, ಯಾವಾಗ ನೀವು ಯೋಚನೆ ಮೀರುವಿರೋ ಆಗ ನೀವು ತಡೆಗಳನ್ನು ಮೀರುವಿರಿ. ಈ ರೀತಿಯ ಅಕುಶಲ ಯೋಚನೆ ಉಂಟಾದಾಗ ನೀವು ಅವುಗಳ ಉತ್ಪತ್ತಿಯಾಗದಂತೆಯೇ ತಡೆಯಬೇಕು. ಏಕೆಂದರೆ ಪಾಪಯುತವಾದ ಅಕುಶಲ ಯೋಚನೆಗಳು ಪ್ರಾರಂಭ ಸ್ಥಿತಿಯಲ್ಲಿಯೇ ದಮನ ಮಾಡಿದರೆ ಸೂಕ್ತ. ಇಲ್ಲದೇ ಹೋದರೆ ಅವು ನಿಮ್ಮನ್ನು ದಮನಮಾಡಿ ಬಿಡುತ್ತದೆ.


ಕೇವಲ ನಿಮ್ಮ ಯೋಚನೆಗಳನ್ನು ನಿಯಂತ್ರಿಸಿ (ರಕ್ಷಿಸಿರಿ) :

ಶ್ರಾವಸ್ತಿಯಲ್ಲಿ ಒಬ್ಬ ಗೃಹಪತಿ ಪುತ್ರನಿದ್ದನು. ಆ ಯುವಕನು ಧಮರ್ಾಚಾರಿ ಯಾಗಿದ್ದನು. ಭಿಕ್ಷುಗಳಿಗೆ ದಾನ ನೀಡುತ್ತಾ, ಶೀಲ ಪಾಲಿಸುತ್ತಾ ಸದ್ಗೃಹಸ್ಥನಾಗಿದ್ದನು. ಒಮ್ಮೆ ಭಿಕ್ಷುವಿನ ವಚನದಂತೆ ಆತ ತನ್ನ ಐಶ್ವರ್ಯವನ್ನು 3 ಭಾಗ ಮಾಡಿ 1 ಭಾಗವನ್ನು ಉದ್ಯಮದಲ್ಲಿ ಹೂಡಿದನು. ಮತ್ತೊಂದು ಭಾಗವನ್ನು ಕುಟುಂಬ ಪಾಲನೆಗೆ ಮೀಸಲಿಟ್ಟನು. ಮತ್ತು 3ನೆಯ ಭಾಗವನ್ನು ದಾನಕ್ಕೆ ಮೀಸಲಿಟ್ಟು ದಾನಿಯಾದನು. ಇದೇರೀತಿ ದಾನ, ಶೀಲ ಪಾಲಿಸುತ್ತಾ ಆತನಿಗೆ ಆನಂದ ಉಂಟಾಗಿ ಮುಂದೆ ನಾನು ಏನನ್ನು ಮಾಡಬೇಕೆಂದು ಆತ ಕೇಳಿದಾಗ, ತ್ರಿಶರಣು ಪಡೆ ಎಂದು ಭಿಕ್ಷುಗಳು ನುಡಿದರು. ಹಾಗೆಯೇ ಆತನು ತ್ರಿಶರಣು ಪಡೆದು ಮುಂದೆ ಹಾಗೆಯೇ ಪಂಚಶೀಲ ಪಾಲಿಸುತ್ತಾ ಹಾಗೆಯೇ ದಶಶೀಲ ಪಾಲಿಸಲು ಆರಂಭಿಸಿದನು. ನಂತರ ಆತನು ಪ್ರಾಪಂಚಿಕತೆಯಿಂದ ಮುಕ್ತನಾಗಿ ಭಿಕ್ಷುವಾದನು.
ಆತನು ಭಿಕ್ಷುವಾದಾಗ ಆತನಿಗೆ ಅಭಿಧಮ್ಮವನ್ನು ಒಬ್ಬ ಭಿಕ್ಷು ಉಪದೇಶಿಸಿದರು. ಹಾಗೆಯೇ ವಿನಯದ ಗುರುಗಳು ಆತನಿಗೆ ಭಿಕ್ಷುಗಳ ನಿಯಮಗಳನ್ನು ತಿಳಿಸಿ ಅದನ್ನು ನೆನಪಿಡಲು ಮತ್ತು ಪಾಲಿಸಲು ತಿಳಿಸಿದರು. ಆತನು ಚಿಂತಾಕ್ರಾಂತನಾದನು. ಏಕೆಂದರೆ ಶೀಲದ ನಿಯಮಗಳು 227 ಇದ್ದವು. ಜೊತೆಗೆ ಧ್ಯಾನದ ವಿಷಯಗಳು, ಜೊತೆಗೆ ಬೌದ್ಧ ಮನಶಾಸ್ತ್ರ (ಅಭಿಧಮ್ಮದ) ವಿಸ್ತಾರ ವಿಶ್ಲೇಷಣೆ ಬೇರೆ. ಸುತ್ತಗಳ ನೆನಪು ಬೇರೆ ಇಡಬೇಕಿತ್ತು. ಆತನಿಗೆ ಇದಕ್ಕಿಂತ ಗೃಹಸ್ಥ ಜೀವನ ಸ್ವತಂತ್ರ ಎನಿಸಿತು. ಆತನು ಮತ್ತೆ ಗೃಹಸ್ಥನಾಗಲು ಸಿದ್ಧನಾದನು. ಆದರೆ ಅದು ಬಿಡಲಾರದೆ ಇದು ಹಿಡಿಯಲಾರದೆ ಆತನು ತನ್ನ ಮಾನಸಿಕ ಹೊರೆಯಿಂದ ಕುಗ್ಗಿದನು, ಅತೃಪ್ತನಾದನು, ಸಂದೇಹದಿಂದ ಕೂಡಿದನು. ಅಸಂತುಷ್ಟನಾದನು, ಅಸುಖಿಯಾಗಿ ದುರ್ಬಲನಾದನು. ಆತನ ಈ ಚಿಂತೆ, ದುಃಖ ಬುದ್ಧರಿಗೆ ಅರಿವಾಗಿ ಆತನಿಗೆ ಈ ರೀತಿ ಉಪದೇಶ ನೀಡಿದರು.
ನೀನು ಕೇವಲ ಮನಸ್ಸನ್ನು ನಿಯಂತ್ರಿಸಿದರೆ ಅಷ್ಟೇ ಸಾಕು, ನೀನು ಮತ್ತೆ ಏನನ್ನೂ ನಿಯಂತ್ರಿಸುವುದು ಬೇಡ. ಆದ್ದರಿಂದ ಕೇವಲ ನಿನ್ನ ಮನಸ್ಸನ್ನು ಅಕುಶಲಗಳಿಂದ ರಕ್ಷಿಸಿಕೋ.
ಮನಸ್ಸನ್ನು ಗ್ರಹಿಸುವುದು ಅತಿ ಕಷ್ಟಕರ, ಅದು ಅತ್ಯಂತ ಕೋಮಲವು ಮತ್ತು ಅತಿ ಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ.
- ಧಮ್ಮಪದ 36
ನಂತರ ಆ ಯುವ ಭಿಕ್ಷುವು ಅದರಂತೆಯೇ ಸಾಧಿಸಿ ಅರಹಂತನಾಗುತ್ತಾನೆ.
ಹೀಗೆ ಚಿತ್ತದ ರಕ್ಷಣೆ ಅಥವಾ ಯೋಚನೆಗಳ ರಕ್ಷಣೆ ಮಾಡಿದಾಗ ಮಾತ್ರ ನಾವು ಧ್ಯಾನದಲ್ಲಿ ಯಶಸ್ವಿಯಾಗುತ್ತೇವೆ.
ಬುದ್ಧರು ತಮ್ಮ ಬೋಧಿ ಪ್ರಾಪ್ತಿಯ ಮುನ್ನ ಮಾಡಿದ ಮಹಾ ಸಂಕಲ್ಪ ನೆನಪಿಸಿಕೊಳ್ಳಿ.
ನನ್ನ ಚರ್ಮ, ಮಾಂಸ, ಮೂಳೆ ಮತ್ತು ರಕ್ತಗಳೆಲ್ಲವೂ ಒಣಗಿಹೋದರೂ ಸರಿಯೆ, ಸಂಬೋಧಿಪ್ರಾಪ್ತಿಯ ವಿನಃ ನಾನು ಈ ಪದ್ಮಾಸನ ಭಂಗಿಸಲಾರೆ. ಈ ಸ್ಥಳದಿಂದ ಅಲುಗಾಡಲಾರೆ. ಅದರಂತೆಯೇ ಅವರು ಸಹಸ್ರ ವಿಘ್ನಗಳು ಬಾಧಿಸಿದರೂ ಅಲುಗಾಡದೆ ಸಮ್ಮಾ ಸಂಬೋಧಿ ಪ್ರಾಪ್ತಿ ಮಾಡಿದರು.
ನಾವು ಸಹ ಹಾಗೆಯೇ ನಮ್ಮ ಯೋಚನೆಗಳನ್ನು ಗೆಲ್ಲಬೇಕಾಗಿದೆ. ಧ್ಯಾನಸಿದ್ಧಿಗೊಳಿಸ ಬೇಕಾಗಿದೆ. ವಿಶುದ್ಧಿ ಪ್ರಾಪ್ತಿಗೊಳಿಸಬೇಕಾಗಿದೆ. ವಿಮುಕ್ತರಾಗಬೇಕಾಗಿದೆ. ನಿಬ್ಬಾಣ ಪಡೆಯಬೇಕಾಗಿದೆ.

ಯೋಚನೆಗಳೊಂದಿಗೆ ಹೋರಾಟ :

ಒಂದು ನಾವು ಅಕುಶಲ ಯೋಚನೆ ಉಂಟಾಗದಂತೆ ಮನಸ್ಸನ್ನು ರಕ್ಷಿಸಬೇಕಾಗುತ್ತದೆ (ಸಂಯಮ ತಾಳಬೇಕಾಗುತ್ತದೆ).
ಒಂದುವೇಳೆ ಎಂದಾದರೂ ಉದಯಿಸಿದರೆ ಅದನ್ನು ಅಲಕ್ಷಿಸದೆ ವಜರ್ಿಸಬೇಕು. ಅದರಲ್ಲಿಯೆ ದೃಢ ಶ್ರಮಪಟ್ಟು ಯಶಸ್ಸು ಪಡೆಯಬೇಕು. ತಕ್ಷಣ ಉಸಿರಾಟದಲ್ಲಿ ಮನಸ್ಸು ತಿರುಗಿಸಬೇಕು. ಹಾಗೆಯೇ ಮುಂದುವರೆಯಬೇಕು. ನೆನಪಿಡಿ, ಒಬ್ಬನು ಪೂರ್ವದ ಕಡೆ ಪ್ರಯಾಣ ಮಾಡಿದಷ್ಟು ಪಶ್ಚಿಮದಿಂದ ವಿಮುಖನಾಗುತ್ತಾನೆ. ಹಾಗೆಯೇ ನೀವು ಉಸಿರಾಟದಲ್ಲಿ ತಲ್ಲೀನರಾದಷ್ಟು ನೀವು ಅಕುಶಲದಿಂದ ದೂರವಾಗುತ್ತೀರಿ ಅಥವಾ ಈ ಯೋಚನೆಗಳು ಅತಿ ಅಪಾಯಕಾರಿ ಎಂದು ಅಪಾಯ ಪರಿಶೋಧನೆ ಮಾಡಿದಾಗ ಅವು ಅಂತ್ಯಗೊಳಿಸಿ ಅಥವಾ ಅಕುಶಲ ಯೋಚನೆಗಳನ್ನು ಮರೆಯಬೇಕು ಅಥವಾ ಅವುಗಳ ಪ್ರಕ್ರಿಯೆ ವೀಕ್ಷಿಸಿ ಸಮತೋಲನದಿಂದ ಸ್ಥಿರಗೊಳಿಸಬೇಕು ಅಥವಾ ಪ್ರಬಲವಾದ ಬಲಪ್ರಯೋಗದಿಂದ, ದೃಢನಿಧರ್ಾರದಿಂದ, ಶ್ರದ್ಧೆಯಿಂದ ಅವುಗಳ ಅಂತ್ಯ ಮಾಡಿರಿ.
(ಇದರ ವಿವರಕ್ಕಾಗಿ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1 ಓದಿರಿ)
ಛಾವಣಿ ಸರಿಯಿಲ್ಲದ ಮನೆಯಲ್ಲಿ ಮಳೆಯ ನೀರು ನುಗ್ಗುವಂತೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವು ನುಗ್ಗುತ್ತದೆ.
ಛಾವಣಿ ಸರಿಯಿರುವ ಮನೆಯಲ್ಲಿ ಮಳೆಯ ನೀರು ನುಗ್ಗದಂತೆ ಅಭಿವೃದ್ಧಿ ಹೊಂದಿರುವ ಚಿತ್ತದಲ್ಲಿ ರಾಗವು ನುಗ್ಗಲಾರದು ಧಮ್ಮಪದ 13/14
ಹೀಗೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವಷ್ಟೇ ಅಲ್ಲ, ದ್ವೇಷ ಮತ್ತು ಮೋಹಗಳು ಪ್ರವೇಶಿಸುತ್ತದೆ. ಆದ್ದರಿಂದ ನಾವು ಪ್ರಜ್ಞಾದಿಂದ ಮತ್ತು ಸಮಾಧಿಯಿಂದ ಚಿತ್ತಾಭಿವೃದ್ಧಿ ಹೊಂದಿದಾಗ ಯಾವುದೇ ಕೆಟ್ಟ ಯೋಚನೆಗಳು ಉಂಟಾಗಲಾರದು.
ನಿಮ್ಮ ಮನಸ್ಸನ್ನು ನಿಯಂತ್ರಿಸಿ :
ಆರು ಭಿಕ್ಷುಗಳು ಬುದ್ಧರಿಂದ ಧ್ಯಾನದ ವಸ್ತು ಸ್ವೀಕರಿಸಿ ಪರ್ವತದ ಬುಡದ ಬಳಿಯಲ್ಲಿದ್ದ ಹಳ್ಳಿಗೆ ಧ್ಯಾನಿಸಲು ಹೊರಟರು. ಅಲ್ಲಿ ಮಾತಿಕಮಾತೆ ಎಂಬುವಳು ಹಳ್ಳಿಗೆ ಮುಖ್ಯಸ್ಥರಾಗಿದ್ದಳು. ಆಕೆ ಭಿಕ್ಷುಗಳಿಗಾಗಿ ಅವರ ಮಳೆಗಾಲದ ಆಶ್ರಯಕ್ಕಾಗಿ ನೆಲೆ ಮಾಡಿಕೊಟ್ಟಳು. ಭಿಕ್ಷುಗಳು ಅಲ್ಲೇ ಧ್ಯಾನಿಸಿ ವಾಸಿಸತೊಡಗಿದರು.
ಒಮ್ಮೆ ಆಕೆಯು ಭಿಕ್ಷುಗಳಿಂದ ಧ್ಯಾನ ಕಲಿಯಲು ಇಚ್ಛಿಸಿದಳು. ಅವರು ಅಕೆಗೆ 32 ದೇಹ ಭಾಗಗಳನ್ನು ಧ್ಯಾನಿಸುವಂತಹ ಕಾಯಾಗತಸತಿ ಕಲಿಸಿದರು. ಆಕೆಯು ಶ್ರದ್ಧೆಯಿಂದ, ಪ್ರಯತ್ನದಿಂದ ಮತ್ತು ಪ್ರಜ್ಞಾದಿಂದ ದೇಹದ ಅನಿತ್ಯತೆ ಗಮನಿಸಿ ಅನಾಗಾಮಿತ್ವವನ್ನು ಪಡೆದಳು ಮತ್ತು ಅಷ್ಟೇ ಅಲ್ಲ, ಆಕೆ ಅಭಿಜ್ಞಾಶಕ್ತಿಯನ್ನು ಪಡೆದು ದಿವ್ಯಚಕ್ಷುವನ್ನು ಸಂಪಾದಿಸಿದಳು. ಅಂತಹುದನ್ನು ಇನ್ನೂ ಆ ಭಿಕ್ಷುಗಳೇ ಸಂಪಾದಿಸಿರಲಿಲ್ಲ.
ಆಕೆ ತನ್ನ ದಿವ್ಯಚಕ್ಷುವಿನ ಸಹಾಯದಿಂದ ಭಿಕ್ಷುಗಳು ಇನ್ನೂ ಅರಹಂತರಾಗಿಲ್ಲ ಎಂದು ಅರಿತಳು. ಆಕೆಗೆ ಭಿಕ್ಷುಗಳು ಶಾರೀರಿಕವಾಗಿ ದುರ್ಬಲರಾಗಿದ್ದು, ಆದ್ದರಿಂದಲೆ ಅವರ ಮನಸ್ಸಿಗೆ ಶಾಂತಿ ಸಿಕ್ಕಿಲ್ಲ ಎಂದು ಅರಿತು ಆಕೆಯು ಅವರಿಗಾಗಿ ಪುಷ್ಟಿಯುತ ಸ್ವಾದಿಷ್ಟಕರ ಆಹಾರ ಮಾಡಿ ಬಡಿಸಲಾರಂಭಿಸಿದಳು. ಇದರಿಂದಾಗಿ ಭಿಕ್ಷುಗಳು ಶ್ರೇಷ್ಠವಾಗಿ ಅರಹಂತತ್ವ ಪ್ರಾಪ್ತಿ ಮಾಡಿದರು.
ವಷರ್ಾವಾಸ ಮುಗಿದ ನಂತರ ಅವರು ಭಗವಾನರ ಬಳಿಗೆ ಬಂದು ಎಲ್ಲ ವಿಷಯವನ್ನು ಹೇಳಿದರು. ಒಬ್ಬ ಭಿಕ್ಷುವು ಈ ವಿಷಯ ತಿಳಿದು ಅತನು ಅಲ್ಲೇ ಧ್ಯಾನ ವಿಮುಕ್ತಿ ಸಾಧಿಸಲು ಭಗವಾನರಿಂದ ಧ್ಯಾನವಸ್ತು ಪಡೆದು ಆಕೆಯ ಮನೆಯಲ್ಲಿದ್ದು ಧ್ಯಾನವನ್ನು ಆರಂಭಿಸಿದನು. ಆತನಿಗೆ ಇಷ್ಟವಾದ ತಿಂಡಿಗಳೇ ಆಹಾರಗಳೇ ಆಕೆ ಬಡಿಸಿದಾಗ ಆತನಿಗೆ ಆಶ್ಚರ್ಯವಾಯಿತು. ಆತ ಆಕೆಗೆ ವಿಚಾರಿಸಿದಾಗ ಆಕೆ ಆತನ ಮನಸ್ಸು ಓದಿ ಸಿದ್ಧಪಡಿಸಿರುವುದಾಗಿ ಒಪ್ಪಿದಳು.
ಆಗ ಆ ಭಿಕ್ಷುವು ಈ ರೀತಿ ಯೋಚಿಸಿದನು. ನಾನಿನ್ನೂ ಪ್ರಾಪಂಚಿಕನಾಗಿದ್ದೇನೆ, ನನ್ನಲ್ಲಿ ಇನ್ನೂ ಕಶ್ಮಲಗಳಿಂದ ಕೂಡಿದ ಪಾಪಯುತ ಯೋಚನೆಗಳೇ ಉದಯಿಸುತ್ತಿರುತ್ತವೆ. ಆಕೆಯೇನಾದರೂ ಅದನ್ನು ಓದಿದರೆ ನನ್ನ ಬಗ್ಗೆ ಕೆಟ್ಟದಾಗಿ ಯೊಚಿಸುವಳು ಹೀಗೆ ಯೋಚಿಸಿ ಭೀತನಾಗಿ ಆತನು ಜೇತವನಕ್ಕೆ ಹಿಂದಿರುಗಿದನು ಮತ್ತು ಬುದ್ಧರಿಗೆ ಎಲ್ಲಾ ವಿಷಯವನ್ನು ತಿಳಿಸಿದನು. ಆಗ ಬುದ್ಧರು ಆತನಿಗೆ ನಿನ್ನ ಮನಸ್ಸನ್ನು ನಿಯಂತ್ರಿಸು ಎಂದರು.
ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ. ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಎಲ್ಲಾ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದು. ಪಳಗಿಸಲ್ಪಟ್ಟ ಮನಸ್ಸು ಸುಖಕಾರಿ ಎಂದು ನುಡಿದು ಧ್ಯಾನ ವಿಷಯವಲ್ಲದೆ ಮತ್ತೇನೂ ಯೋಚಿಸಬೇಡ ಎಂದು ತಿಳಿಸಿ ಕಳಿಸಿಕೊಟ್ಟರು. (ಧಮ್ಮಪದ 35)
ಈಗ ಆತನು ಮನಸ್ಸನ್ನು ನಿಯಂತ್ರಿಸಿದ್ದರಿಂದಾಗಿ ಪ್ರಶಾಂತವಾಗಿ ಧ್ಯಾನಿಸ ಲಾರಂಭಿಸಿದನು. ಆತನು ಸ್ವಲ್ಪ ಕಾಲದಲ್ಲೇ ಚಿತ್ತಶುದ್ಧಿ ಪಡೆದು ಅರಹಂತನಾದನು.