Tuesday, 12 December 2017

ಹಲವು ಮಿಥ್ಯಾ ದೃಷ್ಟಿಗಳು

ಹಲವು ಮಿಥ್ಯಾ ದೃಷ್ಟಿಗಳು :

*             ದಾನಕ್ಕೆ ಫಲವಿಲ್ಲ ಎಂದು ತಿಳಿಯುವುದು, ಎಷ್ಟೇ ಪುಣ್ಯ ಮಾಡಲಿ ಲವಲೇಶವು ಲಾಭವಿಲ್ಲ ತಿಳಿಯುವುದು.
*             ಶೀಲಕ್ಕೆ ಫಲವಿಲ್ಲ ಎಂದು ತಿಳಿಯುವುದು, ಎಷ್ಟೇ ಪಾಪ ಮಾಡಲಿ, ಹತ್ಯೆ ಮಾಡಲಿ... ಅದರಿಂದ ಯಾವ ಹಾನಿಯು ಇಲ್ಲ ಎಂದು ಭಾವಿಸುವುದು (ಅಕರ್ಮಕ ಸಿದ್ಧಾಂತ)
*             ತಂದೆ-ತಾಯಿಯರಿಗೆ ಉಚಿತ ಸ್ಥಾನ ನೀಡದಿರುವಂತಹ ದೃಷ್ಟಿಕೋನ.
*             ತ್ಯಾಗ, ಧ್ಯಾನ, ಕ್ಷಮಾಶೀಲ, ಮುಕ್ತರು, ಜ್ಞಾನಿಗಳಾದಂತಹವರು ಇಲ್ಲವೇ ಇಲ್ಲ ಎಂದು ತಿಳಿಯುವುದು.
*             ಕಾರಣವಿಲ್ಲದೆ ಶುದ್ಧಿ, ಅಶುದ್ದಿ, ಲಾಭ, ನಷ್ಟ ಸಂಭವಿಸುತ್ತದೆ ಎಂದು ತಿಳಿಯುವುದು.
*             ಆತ್ಮವು, ಲೋಕವು ಶಾಶ್ವತ ಎಂದು ಭಾವಿಸುವುದು
*             ಎಲ್ಲವೂ ದೇವರಿಂದ ನಡೆಯುತ್ತದೆ ಎಂದು ಭಾವಿಸುವುದು.
*             ಲೋಕಪರಿಮಿತ/ಅಪರಿಮಿತ/ಅನಂತ/ಅಂತ್ಯವೆಂದು ಭಾವಿಸುವುದು.
*             ಕಾರಣವಿಲ್ಲದೆ, ಇದ್ದಕ್ಕಿದ್ದಂತೆ ಲೋಕ, ಆತ್ಮ ಉಂಟಾಯಿತು ಎಂದು ಭಾವಿಸುವುದು.
*             ಆತ್ಮವು ರೂಪಿ/ಅರೂಪಿ/ಅಂತ್ಯವುಳ್ಳದ್ದು/ಅಮರವಾದುದು/ಅನಂತ
*             ಯಾವ ಕಾರ್ಯಕ್ಕೂ ಪರಿಣಾಮವಿಲ್ಲ ಎಂದು ಭಾವಿಸುವುದು.
*             ಎಲ್ಲದಕ್ಕೂ ಹಿಂದಿನ ಜನ್ಮವೇ ಕಾರಣ ಎಂದು ಹೇಳಿ ವರ್ತಮಾನದ ಪ್ರಯತ್ನಕ್ಕೆ ಮಹತ್ವ ನೀಡದಿರುವುದು.
*             ನಮ್ಮೆಲ್ಲಾ ದುಃಖಕ್ಕೆ ಕಾರಣ, ದೇವರು/ವಿಧಿ/ಗ್ರಹಗಳು/ವಾಸ್ತು/ಪರರು, ಇತ್ಯಾದಿ ಎಂದು ತಿಳಿಯುವುದು.
*             ಧ್ಯಾನಕ್ಕೆ ಫಲವಿಲ್ಲ, ಜ್ಞಾನದಿಂದ ಫಲವಿಲ್ಲ, ವಿಮುಕ್ತಿ ಎಂಬುದೇ ಇಲ್ಲ ಎಂದು ಭಾವಿಸುವುದು. ಇತ್ಯಾದಿ...
ಮಿಥ್ಯಾ ದೃಷ್ಟಿಯ ಪರಿಣಾಮ
                ಯಾವ ಮನುಷ್ಯ ಮಿಥ್ಯಾ ದೃಷಿಯಿಂದ ಕೂಡಿರುವನೋ ಆತನಲ್ಲಿ ಮಿಥ್ಯಾ ಸಂಕಲ್ಪ ಉಂಟಾಗುತ್ತದೆ. ಮಿಥ್ಯಾ ಸಂಕಲ್ಪದಿಂದ ಮಿಥ್ಯಾವಾಚಾ ಉಂಟಾಗುತ್ತದೆ. ಮಿಥ್ಯಾವಾಚದಿಂದ ಮಿಥ್ಯಾ ಕರ್ಮಗಳು ಉಂಟಾಗುತ್ತದೆ. ಮಿಥ್ಯಾ ಕರ್ಮದಿಂದ ಮಿಥ್ಯಾ ಜೀವನ ಉಂಟಾಗುತ್ತದೆ. ಮಿಥ್ಯಾ ಜೀವನದಿಂದ ಮಿಥ್ಯಾ ವ್ಯಾಯಾಮ ಆಗುತ್ತದೆ. ಮಿಥ್ಯಾ ವ್ಯಾಯಾಮದಿಂದ ಮಿಥ್ಯಾ ಸ್ಮೃತಿ ಉಂಟಾಗುತ್ತದೆ. ಮಿಥ್ಯಾ ಸ್ಮೃತಿಯಿಂದ ಮಿಥ್ಯಾ ಸಮಾಧಿಯು, ಮಿಥ್ಯಾ ಸಮಾಧಿಯಿಂದ ಮಿಥ್ಯಾ ಜ್ಞಾನ ಉಂಟಾಗುತ್ತದೆ. ಮಿಥ್ಯಾ ಜ್ಞಾನದಿಂದ ಮಿಥ್ಯಾ ಬಂಧನ ಸಿಗುತ್ತದೆ
                ರೀತಿಯಾಗಿ ಮಿಥ್ಯಾದಿಂದ ಸೋಲು ಸಿಗುವುದೇ ಹೊರತು ಯಶಸ್ಸಲ್ಲ.
                ಬೀಜದಂತೆ ಫಲ, ಅದರಂತೆಯೇ ಸಮ್ಮಾದೃಷ್ಟಿಯಂತೆ ಸುಫಲ. ಹಾಗೆಯೇ ಮಿಥ್ಯಾ ದೃಷ್ಟಿಯಂತೆ ಕುಫಲ.
ಮಿಥ್ಯಾ ಯೋಚನೆಯಿಂದ ಮಿಥ್ಯಾದೃಷ್ಟಿ, ಮಿಥ್ಯಾದೃಷ್ಟಿಯಿಂದ ಬಂಧನ :
                ಯೋಚನೆಗಳಲ್ಲಿ ಸುರಕ್ಷಿತವಲ್ಲದವನು ರೀತಿ ಅಯೋಗ್ಯವಾಗಿ ಯೋಚಿಸುತ್ತಾನೆ.
                ನಾನು ಭೂತಕಾಲದಲ್ಲಿ ಇದ್ದೇನೆ? ಅಥವಾ ಇರಲಿಲ್ಲವೇ? ಆಗ ನಾನು ಏನಾಗಿದ್ದೆ? ಹೇಗಿದ್ದೆ? ಹೇಗಿದ್ದು ಹೇಗಾದೆ? ನಾನು ಭವಿಷ್ಯದಲ್ಲಿ ಇರುವನೇ? ನಾನು ಭವಿಷ್ಯದಲ್ಲಿ ಇರುವುದಿಲ್ಲವೇ? ಆಗ ನಾನು ಏನಾಗುತ್ತೇನೆ? ಹೇಗಿರುತ್ತೇನೆ? ಹೇಗಿದ್ದು ಹೇಗಾಗುತ್ತೇನೆ?
                ಹಾಗೆಯೇ ಆತನು ವರ್ತಮಾನದ ಬಗ್ಗೆಯು ಗೊಂದಲದಲ್ಲಿ ಬೀಳುತ್ತಾನೆ ನಾನು ಇದ್ದೇನೆಯೇ? ನಾನು ಇಲ್ಲವೇ? ನಾನು ಏನು? ಹೇಗಿರುವೆ? ಎಲ್ಲಿಂದ ನಾನು ಬಂದೆ? ಎಲ್ಲಿಗೆ ಹೋಗುತ್ತೇನೆ?
ರೀತಿ ಮಿಥ್ಯ ಯೋಚನೆ ಮಾಡುವವನಲ್ಲಿ 6 ವಿಧದ ಮಿಥ್ಯಾದೃಷ್ಟಿ ಉಂಟಾಗುತ್ತದೆ.
1.            ನನ್ನಲ್ಲಿ ಆತ್ಮವಿದೆ
2.            ನನ್ನಲ್ಲಿ ಆತ್ಮವಿಲ್ಲ
3.            ಆತ್ಮನಿಂದಲೇ ಆತ್ಮನನ್ನು ಗ್ರಹಿಸುತ್ತಿದ್ದೇನೆ
4.            ಆತ್ಮನಿಂದ ಅನಾತ್ಮನನ್ನು ಗ್ರಹಿಸುತ್ತಿದ್ದೇನೆ
5.            ಅನಾತ್ಮನಿಂದ ಆತ್ಮನನ್ನು ಗ್ರಹಿಸುತ್ತಿದ್ದೇನೆ
6.            ಇದೇ ನನ್ನ ಆತ್ಮ-ಅರಿಯುವವನು, ಮೋಕ್ಷವು, ಪುಣ್ಯ ಮತ್ತು ಪಾಪಗಳ ಫಲಗಳನ್ನು ಅನುಭವಿಸುವವನು. ನನ್ನ ಆತ್ಮವು ನಿತ್ಯವಾದುದು, ಶಾಶ್ವತವಾದುದು, ಬದಲಾವಣೆಯ ಹೊಂದದಂತಹುದು. ಅಮರವಾಗಿ, ಅನಂತವಾಗಿ ಇರುವಂತಹುದು ಎಂಬ ಮಿಥ್ಯಾದೃಷ್ಟಿ ಪ್ರಬಲವಾಗಿ ಮೂಡುತ್ತದೆ.
                ಇದೇ ದೃಷ್ಟಿಗಳ ಪೊದೆಗಳು, ದೃಷ್ಟಿಗಳ ಕಾಡು, ದೃಷ್ಟಿಗಳ ಮರುಭೂಮಿ, ದೃಷ್ಟಿಗಳ ತಿರುಚು, ದೃಷ್ಟಿಗಳ ಬಂಧನಗಳು ಆಗಿವೆ. ದೃಷ್ಟಿಗಳಿಂದ ಆತನು ಜನ್ಮ, ಜರೆ, ಜರಾ ಮತ್ತು ಮೃತ್ಯುಗಳಿಂದ ಪಾರಾಗಲಾರ, ದುಃಖಗಳಿಂದ ಪಾರಾಗಲಾರ.
ಸಮ್ಮಾ ದೃಷ್ಟಿಯಿಂದ ಬಿಡುಗಡೆ
                ಆದರೆ ಅದೇ ಸುಶಿಕ್ಷಿತ ಆರ್ಯ ಶ್ರಾವಕರು, ಶ್ರೇಷ್ಠರು, ಯೋಗ್ಯವಾಗಿ ಚಿಂತಿಸುತ್ತಾರೆ. ಹೇಗೆಂದರೆ :
1.            ಇದೇ ದುಃಖ
2.            ಇದೇ ದುಃಖ ಉದಯಕ್ಕೆ ಕಾರಣ
3.            ಇದೇ ದುಃಖ ನಿರೋಧ
4.            ಇದೇ ದುಃಖ ನಿರೋಧದ ಮಾರ್ಗ
                ರೀತಿಯಾಗಿ ಯೋಗ್ಯವಾಗಿ ಚಿಂತಿಸುವುದರಿಂದ ಆತನಲ್ಲಿ ಬಂಧನಗಳು ಕಳಚಿ ಬೀಳುತ್ತದೆ, ಮುಕ್ತನಾಗುತ್ತಾನೆ.
                ರೀತಿಯ ಸಮ್ಮಾ ದೃಷ್ಟಿಯಿಂದ ಸಮ್ಮಾ ಸಂಕಲ್ಪ ಉಂಟಾಗುತ್ತದೆ.
                ಸಮ್ಮಾ ಸಂಕಲ್ಪದಿಂದ ಸಮ್ಮಾ ವಾಚಾ ಉಂಟಾಗುತ್ತದೆ.
                ಸಮ್ಮಾ ವಾಚಾದಿಂದ ಸಮ್ಮಾ ಕರ್ಮ ಉಂಟಾಗುತ್ತದೆ.
                ಸಮ್ಮಾ ಕರ್ಮದಿಂದ ಸಮ್ಮಾ ಜೀವನ ಉಂಟಾಗುತ್ತದೆ.
                ಸಮ್ಮಾ ಜೀವನದಿಂದ ಸಮ್ಮಾ ವ್ಯಾಯಾಮ ಉಂಟಾಗುತ್ತದೆ.
                ಸಮ್ಮಾ ವ್ಯಾಯಾಮದಿಂದ ಸಮ್ಮಾ ಸ್ಮೃತಿ ಉಂಟಾಗುತ್ತದೆ.
                ಸಮ್ಮಾ ಸ್ಮೃತಿಯಿಂದ ಸಮ್ಮಾ ಸಮಾಧಿ ಉಂಟಾಗುತ್ತದೆ.
                ಸಮ್ಮಾ ಸಮಾಧಿಯಿಂದ ಸಮ್ಮಾ ವಿಮುಕ್ತಿ ಉಂಟಾಗುತ್ತದೆ.
                ರೀತಿಯಿಂದಾಗಿ ಸಮ್ಮಾದೃಷ್ಟಿ ಬಹು ಶುಭವಾಗಿದೆ.
ವಿಮಶರ್ಿಸಿ - ಅಕುಶಲವನ್ನು ವಜರ್ಿಸಿ, ಕುಶಲವನ್ನು ವೃದ್ಧಿಸಿ
                ಸುದ್ದಿಗಳನ್ನು ನಂಬಬೇಡಿ
                ದಂತಕಥೆ (ಪುರಾಣ)ಗಳನ್ನು ನಂಬಬೇಡಿ.
                ಸಂಪ್ರದಾಯವನ್ನು ನಂಬಬೇಡಿ
                ಪವಿತ್ರಗ್ರಂಥಗಳಲ್ಲಿದೆ ಎಂದೂ ನಂಬಬೇಡಿ
                ತರ್ಕಕ್ಕೆ ಹೊಂದುತ್ತದೆ ಎಂದೂ ನಂಬಬೇಡಿ
                ಒಳ್ಳೆಯ ಊಹೆ ಅಥವಾ ಕಲ್ಪನೆ ಎಂದೂ ನಂಬಬೇಡಿ
                ಚೆನ್ನಾಗಿ ಹೋಲುತ್ತದೆ ಎಂದೂ ನಂಬಬೇಡಿ
                ಚಿಂತನೆಯ ಫಲ ಎಂದೂ ನಂಬಬೇಡಿ
                ಸಾಧ್ಯತೆ ಇದೆ ಎಂದೂ ನಂಬಬೇಡಿ
                ಇದು ನಮ್ಮ ಗೌರವಯುತ ಗುರುವಿನಿಂದ ಬಂದದ್ದು ಎಂದು ಸಹಾ ನಂಬಬೇಡಿ
                ಯಾವಾಗ ನೀವು ವಿಮಶರ್ಿಸಿದಾಗ ಅವು ಅಕುಶಲವಾಗಿ ಕಂಡುಬಂದರೆ ಇವು ನಿಂದನೀಯವಾದುದು, ಜ್ಞಾನಿಗಳಿಂದ ಟೀಕಿಸಲ್ಪಡುತ್ತದೆ. ಇವನ್ನು ಹಿಡಿದಾಗ, ಇವನ್ನು ಪಾಲಿಸಿದಾಗ, ದುಃಖವು ಉಂಟಾಗುತ್ತದೆ ಎಂದು ಗೊತ್ತಾದಾಗ ಅವನ್ನು ವಜರ್ಿಸಿ.

                ಮತ್ತು ಯಾವಾಗ ನೀವು ವಿಮಶರ್ಿಸಿದಾಗ ಇವು ಕುಶಲವಾದುದು, ಇವು ನಿಂದಾತೀತವಾದುದು, ಜ್ಞಾನಿಗಳಿಂದ ಸ್ತುತಿಗೆ ಒಳಪಡುವಂತಹುದು, ಇವನ್ನು ಹೊಂದಿ ಪಾಲಿಸಿದಾಗ ಸುಖ ಮತ್ತು ಕ್ಷೇಮವನ್ನು ಹೊಂದುತ್ತದೆ ಎಂದು ಅರಿವಾದಾಗ ನೀವು ಖಂಡಿತವಾಗಿ ಅದನ್ನು ಪಾಲಿಸಿ ಮುಂದುವರಿಯುತ್ತಾ ಇರಿ.

ಕುಶಲ, ಅಕುಶಲ ಮತ್ತು ಅವುಗಳಿಗೆ ಮೂಲ

ಕುಶಲ, ಅಕುಶಲ ಮತ್ತು ಅವುಗಳಿಗೆ ಮೂಲ

                ಮಿತ್ರರೇ, ಯಾವಾಗ ಆರ್ಯ ಶ್ರಾವಕನು ಅಕುಶಲವನ್ನು ಮತ್ತು ಅಕುಶಲ ಮೂಲವನ್ನು, ಹಾಗೆಯೇ ಕುಶಲವನ್ನು ಮತ್ತು ಕುಶಲ ಮೂಲವನ್ನು ಅರಿಯುತ್ತಾನೆಯೋ ರೀತಿಯಾಗಿ ಆತನು ಸಮ್ಮಾದೃಷ್ಟಿಯುಳ್ಳವನಾಗುತ್ತಾನೆ. ಆತನ ಯೋಚನಾ ಕ್ರಮವು ನೇರಯುತ ವಾಗಿರುತ್ತದೆ, ನೇರದೃಷ್ಟಿಯಿಂದಿರುತ್ತಾರೆ. ಹಾಗು ಧಮ್ಮದಲ್ಲಿ ಪೂರ್ಣ ಶ್ರದ್ಧೆಯುಳ್ಳವ ನಾಗುತ್ತಾನೆ ಮತ್ತು ಆತನು ನಿಜಧಮ್ಮದ ಸನಿಹದಲ್ಲಿರುತ್ತಾನೆ.
                ಮತ್ತು ಮಿತ್ರರೇ ಯಾವುದು ಅಕುಶಲ? ಮತ್ತು ಅವುಗಳ ಮೂಲ ಯಾವುದು. ಹಾಗೆಯೇ ಕುಶಲ ಯಾವುದು? ಮತ್ತು ಅವುಗಳ ಮೂಲ ಯಾವುದು?
                ಜೀವಿಗಳ ಹತ್ಯೆ ಅಕುಶಲ
                ಕೂಡದಿದ್ದುದನ್ನು ತೆಗೆದುಕೊಳ್ಳುವುದು (ಕಳ್ಳತನ) ಅಕುಶಲ
                ಅನೈತಿಕತೆಯ ಕಾಮುಕತನ ಅಕುಶಲ
                ಸುಳ್ಳನ್ನು ನುಡಿಯುವಿಕೆ ಅಕುಶಲ
                ಚಾಡಿಯನ್ನು ನುಡಿಯುವಿಕೆ ಅಕುಶಲ
                ಕಟು ನಿಂದೆಯನ್ನು ನುಡಿಯುವಿಕೆ ಅಕುಶಲ
                ಕಾಡುಹರಟೆಯಲ್ಲಿ ತಲ್ಲೀನನಾಗುವಿಕೆ ಅಕುಶಲ
                ದುರಾಸೆಯು ಅಕುಶಲ
                ದ್ವೇಷಿಸುವಿಕೆ ಅಕುಶಲ
                ಮಿಥ್ಯಾ ದೃಷ್ಟಿಯಿಂದ ಕೂಡಿರುವಿಕೆ ಅಕುಶಲ
                ಇವಿಷ್ಟು ಅಕುಶಲವಾಗಿವೆ ಮತ್ತು ಯಾವುದು ಅಕುಶಲದ ಮೂಲವಾಗಿದೆ?
                ಲೋಭವು, ಅಕುಶಲದ ಮೂಲವಾಗಿದೆ
                ದ್ವೇಷವು ಅಕುಶಲದ ಮೂಲವಾಗಿದೆ
                ಮೋಹವು ಅಕುಶಲದ ಮೂಲವಾಗಿದೆ
                ಮತ್ತೆ ಯಾವುದು ಕುಶಲವಾಗಿದೆ ?
                ಜೀವಹತ್ಯೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಳ್ಳತನದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಅನೈತಿಕತೆಯ ಕಾಮುಕತನದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಸುಳ್ಳು ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಚಾಡಿಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಟು ನಿಂದೆಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಾಡುಹರಟೆಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ದುರಾಸೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ದ್ವೇಷದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಸಮ್ಮಾದೃಷ್ಟಿಯಿಂದ ಕೂಡಿರುವುದೇ ಕುಶಲವಾಗಿದೆ, ಇದೇ ಕುಶಲವಾಗಿದೆ.
                ಮತ್ತೆ ಯಾವುದು ಕುಶಲಗಳ ಮೂಲ
                ಅಲೋಭ ಕುಶಲಗಳ ಮೂಲವಾಗಿದೆ
                ಅದ್ವೇಷ ಕುಶಲಗಳ ಮೂಲವಾಗಿದೆ
                ಅಮೋಹ ಕುಶಲಗಳ ಮೂಲವಾಗಿದೆ.
                ಯಾವಾಗ ಆರ್ಯ ಶ್ರಾವಕನು ರೀತಿಯಾಗಿ ಅಕುಶಲ, ಕುಶಲ ಮತ್ತು ಅವುಗಳ ಮೂಲಗಳನ್ನು ಅರಿಯುತ್ತಾನೋ ಆತನು ಲೋಭವನ್ನು ವಜರ್ಿಸುತ್ತಾನೆ, ದ್ವೇಷವನ್ನು ವಜರ್ಿಸುತ್ತಾನೆ ಮತ್ತು ಮೋಹವನ್ನು ವಜರ್ಿಸುತ್ತಾನೆ. ನಾನು ಎಂಬ ಅಹಂಕಾರದಿಂದ ವಿರತನಾಗಿ, ಅಜ್ಞಾನವನ್ನು ತ್ಯಾಗಮಾಡಿ, ಇಲ್ಲಿಯೇ ಈಗಲೇ ಸಮ್ಮಾದೃಷ್ಟಿಯುಳ್ಳವನಾಗಿ ದುಃಖದ ಅಂತ್ಯಮಾಡುತ್ತಾನೆ.
10 ಕುಶಲ ಕರ್ಮಗಳು
                1.            ದಾನ
                2.            ಶೀಲ
                3.            ಧ್ಯಾನ
                4.            ಗೌರವ
                5.            ಸೇವೆ
                6.            ಪುಣ್ಯದಾನ
                7.            ಪರರ ಪುಣ್ಯದಲ್ಲಿ ಆನಂದಿಸುವುದು
                8.            ಧಮ್ಮ ಆಲಿಸುವಿಕೆ
                9.            ಧಮ್ಮ ಬೋಧಿಸುವಿಕೆ
                10.          ಯೋಗ್ಯ ದೃಷ್ಟಿಕೋನಗಳನ್ನು (ಸಮ್ಮಾದೃಷ್ಟಿ) ನೇರಗೊಳಿಸುವಿಕೆ (ಬೆಳಸುವಿಕೆ)
.               ಇವುಗಳಲ್ಲಿ 1 ದಾನ, 5 ಸೇವೆ, 6 ಪುಣ್ಯದಾನ 9 ಧಮ್ಮ ಬೋಧಿಸುವಿಕೆ ಇವು ದಾನದ ಗುಂಪಿಗೆ ಸೇರುತ್ತವೆ.
.               2 ಶೀಲ, 4 ಗೌರವ, 3 ಪರರ ಪುಣ್ಯದಲ್ಲಿ ಆನಂದಿಸುವಿಕೆ ಇವು ಶೀಲದ ಗುಂಪಿಗೆ ಸೇರುತ್ತವೆ.
.               3 ಧ್ಯಾನವು ಸಮಾಧಿ ಗುಂಪಿಗೆ ಸೇರುತ್ತದೆ.
ಗಿ.            8 ಧಮ್ಮ ಆಲಿಸುವಿಕೆ ಮತ್ತು ಯೋಗ್ಯ ದೃಷ್ಟಿಕೋನಗಳನ್ನು ಬೆಳೆಸುವಿಕೆ ಪ್ರಜ್ಞಾ ಗುಂಪಿಗೆ ಸೇರುತ್ತದೆ.

                ರೀತಿಯಾಗಿ ದಾನ, ಶೀಲ, ಸಮಾಧಿ, ಪ್ರಜ್ಞಾವು ಕುಶಲ ಕರ್ಮಗಳ ನಿಧಿಯಾಗಿದೆ. ಜ್ಞಾನಿಗಳು ಇದನ್ನು ಪರಮ ಐಶ್ವರ್ಯವೆಂದು ಭಾವಿಸಿ ಇವನ್ನು ಸದಾ ವೃದ್ಧಿಗೊಳಿಸುವರು

ಬೋಧಿ ಪ್ರಾಪ್ತಿಯ ಆ ಮಹೋನ್ನತ ಅಮೃತ ಘಳಿಗೆ

ಬೋಧಿ ಪ್ರಾಪ್ತಿಯ ಮಹೋನ್ನತ ಅಮೃತ ಘಳಿಗೆ



                ಬುದ್ಧ ಭಗವಾನರು ವೈಶಾಖ ಶುದ್ಧ ಪೂರ್ಣಮಿಯ ದಿನದಂದು ಬೋಧಿಪ್ರಾಪ್ತಿಯ ದಿನದಂದು ಮೊದಲನೆಯ ಜಾವಕ್ಕೆ ತಮ್ಮೆಲ್ಲ ಹಿಂದಿನ ಜನ್ಮದ ವೃತ್ತಾಂತವನ್ನು ಕ್ಷಿಪ್ರವಾಗಿ, ಸಂಕ್ಷಿಪ್ತವಾಗಿ ಅರಿತುಕೊಂಡರು. ಎರಡನೆಯ ಜಾವದಲ್ಲಿ ಜೀವಿಗಳು ಯಾವ ಯಾವ ಕರ್ಮದಿಂದ ಯಾವ ಯಾವ ಗತಿ ಸೇರುತ್ತವೆ ಎಂಬ ಕರ್ಮ ನಿಯಮದ ಜ್ಞಾನವನ್ನು ಅರಿತುಕೊಂಡರು.
                3ನೆಯ ಜಾವದ ಸಮೀಪದ ವೇಳೆಯಲ್ಲಿ ಅವರು ಆರ್ಯಸತ್ಯಗಳ ಜ್ಞಾನಪ್ರಾಪ್ತಿಯ ಕಡೆ ಗಮನಹರಿಸಿದರು.
                ಅಹೋ, ಜೀವಿಗಳೆಲ್ಲವೂ ಕೇವಲ ಆಯಾಸವನ್ನೇ ಹೊಂದುತ್ತವೆ. ಬಾರಿ ಬಾರಿ ಜನ್ಮ ಎತ್ತುತ್ತವೆ. ಮುದಿಗಳಾಗುತ್ತಾರೆ ಸತ್ತು ಪುನಃ ಜನ್ಮ ತಾಳುತ್ತಿರುತ್ತವೆ.
                ಮಾನವನ ದೃಷ್ಟಿಕೋನಕ್ಕೆ ಕಾಮದ ಅಥವಾ ಮೋಹದ ಅಂಧಕಾರವು ಸದಾ ಆವರಿಸಿರುತ್ತದೆ ಮತ್ತು ತಮ್ಮ ಅಂಧಕತೆಯ ಕಾರಣದಿಂದ ಅವರು ಮಹಾ ದುಃಖದಿಂದ ಪಾರಾಗುವ ಮಾರ್ಗವನ್ನೇ ಅರಿಯಲಾರರು.
                ರೀತಿಯ ವಿಚಾರ ಕ್ರಮದಿಂದ ಅವರು ರೀತಿ ಪ್ರಶ್ನಿಸಿಕೊಂಡರು. ನಿಜಕ್ಕೂ ಇದೇನು? ಏತಕ್ಕಾಗಿ ಜರಾಮರಣವಾಗುತ್ತದೆ? ಆಗ ಅವರಿಗೆ ಅರಿವಾಯಿತು. ತಲೆ ಇರುವವರೆಗೆ ತಲೆನೋವು ಇರುವ ಹಾಗೆ, ವೃಕ್ಷವಿರುವ ಕಾಲಕ್ಕೂ ಅದಕ್ಕೆ ಕಡಿದು ಹಾಕುವ ಹಾಗೆ ಜನ್ಮವಿರುವ ತನಕ ಜರಾಮರಣಗಳು ಇದ್ದೇ ಇರುತ್ತವೆ.
                ನಂತರ ಅವರು ಜನ್ಮಕ್ಕೆ ಕಾರಣವೇನು? ಎಂದು ಶೋಧಿಸಿದಾಗ ಅವರಿಗೆ ಭವ (ಕರ್ಮಭವ) ದಿಂದ ಜನ್ಮವಾಗುತ್ತದೆ ಎಂದು ಅರಿವಾಯಿತು. ಅವರಿಗೆ ಸ್ಪಷ್ಟವಾಗಿ ಅರ್ಥವಾಯಿತು. ಏನೆಂದರೆ ಜನ್ಮವು ಸೃಷ್ಟಿಕರ್ತನಿಂದಾಗಲಿ, ಪ್ರಕೃತಿಯಿಂದಾಗಲಿ, ಆತ್ಮನಿಂದಾಗಲಿ, ಅಕಾರಣದಿಂದಾಗಲಿ ಸೃಷ್ಟಿಯಾಗಲಿಲ್ಲ.
                ನಮ್ಮ ಹಿಂದಿನ ಜನ್ಮದ ಕರ್ಮ ಭವದಿಂದಲೇ ಜನ್ಮವಾಗುತ್ತದೆ ಎಂದು ಅರಿವಾಯಿತು.
                ಆಗ ಅವರು ಭವಕ್ಕೆ ಕಾರಣವೇನು? ಎಂದು ಶೋಧಿಸಿದಾಗ ಅವರಿಗೆ ಭವದ ಕಾರಣ ಉಪಾದಾನ (ಪ್ರಬಲ ಆಸಕ್ತಿಯ ಅಂಟು)ವೇ ಎಂದು ಅರಿವಾಯಿತು.
                ಜೀವನದಲ್ಲಿ ದುಃಖಮುಕ್ತರಾಗಲು ನಾವು ಹಲವಾರು ಮಿಥ್ಯಾ ಆಶ್ರಯಗಳಿಗೆ ಮೊರೆ ಹೋಗುತ್ತೇವೆ. ನಾನಾ ಮಿಥ್ಯಾಶೀಲಾಚರಣೆ, ಮೋಹಾಚಾರಣೆಗಳಲ್ಲಿ ಆಸಕ್ತಿ ತಾಳುತ್ತೇವೆ. ಕಾಮಭೋಗದಲ್ಲಿ ಅತಿ ಆಸಕ್ತಿ ತಾಳುತ್ತೇವೆ. ಆತ್ಮನಲ್ಲಿ ಆಸಕ್ತಿ ತಾಳುತ್ತೇವೆ. ನಾನಾ ಸಿದ್ಧಾಂತಗಳಲ್ಲಿ ಆಸಕ್ತಿಗಳನ್ನು ತಾಳುತ್ತೇವೆ. ಹೇಗೆ ಸಣ್ಣ ಜ್ವಾಲೆಯಿಂದ ಮಹಾ ಅಗ್ನಿ ಸಂಭವಿಸುತ್ತದೋ ಹಾಗೆಯೇ ಎಲ್ಲಾ ಆಸಕ್ತಿಗಳಿಂದ ಭವವು ಸಂಭವಿಸುತ್ತದೆ ಎಂದು ಅರಿತರು.
                ನಂತರ ಉಪಾದಾನವು ಯಾವ ಕಾರಣಗಳಿಂದಿರುತ್ತದೆ ಎಂದು ಶೋಧಿಸಿದಾಗ ಅವರಿಗೆ ತನ್ಹಾ (ತೃಷ್ಣೆ/ತೀವ್ರಬಯಕೆ/ದಾಹ)ದಿಂದ ಆಗುತ್ತದೆ ಎಂದು ಅರಿವಾಯಿತು. ಯಾವರೀತಿ ವಾಯುವಿನ ಸಹಾಯದಿಂದ ಅಗ್ನಿಯು ಪ್ರಜ್ವಲಿತವಾಗುತ್ತದೋ ಅದೇರೀತಿಯಲ್ಲಿ ತನ್ಹಾದಿಂದ ಕಾಮ ಕ್ರೋಧ ಮುಂತಾದ ಮಹಾಪಾಪಗಳು ಸಂಭವಿಸುತ್ತದೆ.
                ನಂತರ ಅವರು ಯೋಚಿಸಿದರು, ತನ್ಹಾ ಯಾವುದರಿಂದ ಉದಯಿಸುತ್ತದೆ. ಆಗ ಅವರಿಗೆ ವೇದನೆಯೇ ತನ್ಹಾದ ಕಾರಣವೆಂದು ಅರಿವಾಯಿತು.
                ವೇದನೆಗಳಿಂದ (ಸುಖ, ದುಃಖ, ತಟಸ್ಥ ಅನುಭವಗಳು/ಸಂವೇದನೆಗಳು) ಆವೃತನಾದ ಮನುಷ್ಯ ಅವುಗಳ ತೃಪ್ತಿಗಾಗಿ ಉಪಾಯಗಳನ್ನು ಹುಡುಕುತ್ತಾನೆ. ಏಕೆಂದರೆ ದಾಹವಿಲ್ಲದೆ ಯಾರಿಗೂ ಜಲದ ಆನಂದ ಸಿಗುವುದಿಲ್ಲ. ಹಾಗೆಯೇ ವೇದನೆಗಳಿರುವುದ ರಿಂದಲೇ ತನ್ಹಾ ಉದಯಿಸುತ್ತದೆ ಎಂದು ಸ್ಪಷ್ಟವಾಗಿ ಅರಿವಾಯಿತು. ನಂತರ ಅವರು ವೇದನೆಗಳ ಕಾರಣವನ್ನು ಶೋಧಿಸಿದರು.
                ಬುದ್ಧ ಭಗವಾನರು ಮೊದಲೇ ವೇದನೆಗಳ ಅಂತ್ಯ ಮಾಡಿದ್ದರು. ಅವರಿಗೆ ಸುಲಭವಾಗಿ ವೇದನೆಗಳ ಕಾರಣ ಸ್ಪರ್ಶವೆಂದು ಅರಿವಾಯಿತು. ಸ್ಪರ್ಶವೆಂದರೆ ಇಂದ್ರಿಯಗಳು ಮತ್ತು ಅವುಗಳ ವಿಷಯಗಳ ಮಿಲನ ಅಥವಾ ಮನಸ್ಸು ಮತ್ತು ಮನಸ್ಸಿನ ವಿಷಯಗಳ ಮಿಲನ ಇದೇ ಸ್ಪರ್ಶವಾಗಿದೆ. ಹೇಗೆ ಇಂದನ ಮತ್ತು ಕಿಡಿಗಳ ಸಂಯೋಗದಿಂದ ಜ್ವಾಲೆಯು ಉಂಟಾಗುವುದೋ ಹಾಗೆಯೇ ಇಂದ್ರಿಯಗಳ ಮತ್ತು ಅವುಗಳ ವಿಷಯಗಳಿಂದ ಸ್ಪರ್ಶವು ಆಗಿಯೇ ವೇದನೆಗಳು ಉಂಟಾಗುತ್ತದೆ.
                ನಂತರ ಅವರು ಸ್ಪರ್ಶಕ್ಕೆ ಕಾರಣ ಹುಡುಕಿದಾಗ ಅವರಿಗೆ ಆರು ಇಂದ್ರಿಯಗಳ ಆಧಾರಗಳು ಕಂಡುಬರುತ್ತದೆ. ಅವೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ದೇಹ ಮತ್ತು ಮನಸ್ಸು.
                ಅವರಿಗೆ ಸ್ಪಷ್ಟವಾಗಿ ಆರು ಇಂದ್ರಿಯಗಳ ಆಧಾರ ಇರುವುದರಿಂದಲೇ ಸ್ಪರ್ಶವು ಉದಯಿಸುತ್ತದೆ ಎಂದು ಅರಿವಾಯಿತು.
                ಹೀಗೆಯೇ ಭಗವಾನರು ಉರುವೇಲದ ಹತ್ತಿರ ನಿರಂಜರ ನದಿಯ ದಡದಲ್ಲಿ ಬೋಧಿ ಧ್ಯಾನವನ್ನು ಮತ್ತು ನಿಬ್ಬಾಣದ ಪರಮ ಸುಖವನ್ನು ಅನುಭವಿಸುತ್ತಿದ್ದರು. ಹೀಗೆಯೇ ಅದೇ ಆಸನದಲ್ಲಿ ಪಟಿಚ್ಚಸಮುಪ್ಪಾದದ ಅನುಲೋಮ ಕ್ರಮವಾದ ಸರಣಿಯನ್ನು ವಿಶ್ಲೇಷಿಸಿದರು.
                ಇದರಿಂದ, ಇನ್ನೊಂದು ಉದಯಿಸುತ್ತದೆ. ಇದರ ಉದಯದಿಂದ ಇದು ಉದಯಿಸುತ್ತದೆ. ಹೇಗೆಂದರೆ : ಅವಿದ್ಯೆ(ಅಜ್ಞಾನ)ಯಿಂದ ಸಂಖಾರಗಳು (ಮನೋ ನಿಮರ್ಿತಿಗಳು) ಉದಯಿಸುತ್ತದೆ.
                ಸಂಖಾರಗಳಿಂದ ವಿನ್ಯಾನವು ಉದಯಿಸುತ್ತದೆ.
                ವಿನ್ಯಾನದಿಂದ ನಾಮರೂಪಗಳು ಉದಯಿಸುತ್ತದೆ.
                ನಾಮರೂಪಗಳಿಂದ 6 ಇಂದ್ರೀಯಾಧಾರಗಳು ಉದಯಿಸುತ್ತದೆ.
                6 ಇಂದ್ರೀಯಾಧಾರಗಳಿಂದ ಸ್ಪರ್ಶವು ಉದಯಿಸುತ್ತದೆ.
                ಸ್ಪರ್ಶಗಳಿಂದ ವೇದನೆಗಳು ಉದಯಿಸುತ್ತದೆ.
                ವೇದನೆಯಿಂದ ತನ್ಹಾವು ಉದಯಿಸುತ್ತದೆ.
                ತನ್ಹಾದಿಂದ ಉಪಾದಾನ ಉದಯಿಸುತ್ತದೆ.
                ಉಪಾದಾನದಿಂದ ಭವವು ಉದಯಿಸುತ್ತದೆ.
                ಭವದಿಂದ ಜನ್ಮ ಉದಯಿಸುತ್ತದೆ.
                ಜನ್ಮದಿಂದ ಜರಾಮರಣ ಒಟ್ಟಾರೆ ದುಃಖರಾಶಿಯು ಉದಯಿಸುವುದು.
                ಹೀಗೆ ನುಡಿದ ನಂತರ ಭಗವಾನರು ಉದಾನವೊಂದನ್ನು ನುಡಿದರು.
                ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವರೋ, ಆಗ ಅವರು ಕಾರಣ ಮತ್ತು ಪರಿಣಾಮಗಳ ಸ್ವರೂಪವನ್ನು ಅರಿಯುವರು. ಆಗ ಎಲ್ಲಾ ಸಂದೇಹಗಳು ನಿವಾರಣೆಯಾಗುವುವು.
                ನಂತರ ಭಗವಾನರು ಹಾಗೆಯೇ ಕಾರಣ ಮತ್ತು ಪರಿಣಾಮದ ಸರಪಳಿಯನ್ನು ಪರೋಕ್ಷವಾಗಿ ವಿಶ್ಲೇಷಿಸಿದರು.
                ಸ್ಥಿತಿಯು ಇಲ್ಲದಿದ್ದರೆ, ಸ್ಥಿತಿಯು ಉಂಟಾಗುವುದಿಲ್ಲ. ಸ್ಥಿತಿಗಳ ಉದಯಿಸುವಿಕೆಯ ನಿರೋಧದಿಂದ ಸ್ಥಿತಿಯು ನಿರೋಧವು ಆಗುತ್ತದೆ.
                ಹೇಗೆಂದರೆ ಅವಿದ್ಯೆಯ (ಅಜ್ಞಾನ) ಪೂರ್ಣ ನಾಶದಿಂದ ಮತ್ತು ನಿರೋಧದಿಂದ ಸಂಖಾರವು ನಿರೋಧವಾಗುತ್ತದೆ.
                ಸಂಖಾರಗಳ ನಿರೋಧದಿಂದ ವಿನ್ಯಾನದ ನಿರೋಧವಾಗುತ್ತದೆ. (ನಿಲುಗಡೆ/ಅಂತ್ಯ)
                ವಿನ್ಯಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ.
                ನಾಮರೂಪದ ನಿರೋಧದಿಂದ 6 ಇಂದ್ರೀಯಗಳ ನಿರೋಧವಾಗುತ್ತದೆ.
                6 ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ.
                ಸ್ಪರ್ಶಗಳ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ.
                ವೇದನೆಗಳ ನಿರೋಧದಿಂದ ತನ್ಹಾ ನಿರೋಧವಾಗುತ್ತದೆ.
                ತನ್ಹಾದ ನಿರೋಧದಿಂದ ಉಪದಾನದ ನಿರೋಧವಾಗುತ್ತದೆ.
                ಉಪದಾನದ ನಿರೋಧದಿಂದ ಭವದ ನಿರೋಧವಾಗುತ್ತದೆ.
                ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ.
                ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.
                ಇದಕ್ಕೆ ಸಂಬಂಧಿಸಿದಂತೆ ಭಗವಾನರು ಇನ್ನೊಂದು ಉದಾನವನ್ನು ನುಡಿದರು.
                ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ವಿಶ್ಲೇಷಿಸುವರೋ ಆಗ ಅವರು ಕಾರಣಗಳ ನಿರೋಧವನ್ನು ಅರಿಯುತ್ತಾರೆ, ಆಗ ಅವರ ಎಲ್ಲಾ ಸಂದೇಹಗಳು ದೂರವಾಗುತ್ತದೆ.
                ಹೀಗೆಯೇ ಭಗವಾನರು ಪಟಿಚ್ಚ ಸಮುಪ್ಪಾದ ಅನುಲೋಮ ಕ್ರಮ ಹಾಗು ಪ್ರತಿಲೋಮ ಕ್ರಮದಿಂದ ಒಟ್ಟಾಗಿ ಅರಿತರು. ನಂತರ ಉದಾನವೊಂದನ್ನು ಹಾಡಿದರು.
                ಯಾವಾಗ ಪರಿಶ್ರಮ ಜ್ಞಾನಿ ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವನೋ ಆತನು ಮಾರನ ಸೈನ್ಯವನ್ನು ಕತ್ತಲೆಯನ್ನು ದೂರೀಕರಿಸುವ ಸೂರ್ಯನಂತೆ ಚದುರಿಸಿಬಿಡುವನು. ಎಂದು ನುಡಿದರು.
                ರೀತಿಯಾಗಿ ಜ್ಞಾನ ಗಳಿಸಿದ ಅವರು ಎಲ್ಲರ ಆಸ್ತಿತ್ವಕ್ಕೆ ಕಾರಣವಾಗುವ, ಎಲ್ಲರೂ ನಂಬುವ ಹಾಗೆ ಯಾವ ದೇವರನ್ನು (ಸೃಷ್ಟಿಕರ್ತ, ಪಾಲನಕರ್ತ, ನಾಶಕರ್ತ) ಕಾಣಲಿಲ್ಲ. ಯಾವ ಆತ್ಮನನ್ನು ಅವರು ಕಾಣಲಿಲ್ಲ. ಪರರು ಸಮಾಧಿ ಸ್ಥಿತಿಗಳಿಗೆ ದೇವರೆಂದು ಮತ್ತು ಆತ್ಮವೆಂದು ಕರೆಯುತ್ತಾರೆ ಎಂದು ತಿಳಿದರು.
                ರೀತಿ ಎಲ್ಲವನ್ನು ಅರಿತು ತನ್ಹಾದಿಂದ, ಅಜ್ಞಾನದಿಂದ, ಕಲ್ಮಶಗಳಿಂದ, ಜನ್ಮಗಳಿಂದ ಮುಕ್ತರಾದರು.
                ನಿಬ್ಬಾಣವನ್ನು ಸಾಕ್ಷಾತ್ಕರಿಸಿದರು. ಸ್ವಯಂ ಮಧ್ಯಮ ಮಾರ್ಗ/ಆರ್ಯ ಅಷ್ಠಾಂಗ ಮಾರ್ಗವನ್ನು ಸಂಶೋದಿಸಿದರು. ರೀತಿಯಾಗಿ ಎಲ್ಲವನ್ನು ತಾವಾಗಿಯೇ ಸಿದ್ಧಿಸಿದ್ದರಿಂದ ಅವರು ಅದ್ವಿತೀಯರಾಗಿ, ಬುದ್ಧರಾಗಿ ಪ್ರಕಾಶಿಸುತ್ತ ನಿಂತರು. ಜಗದ ದುಃಖ ವಿಮುಕ್ತಿಗಾಗಿ ಶ್ರಮಿಸಲು ಸಿದ್ಧರಾದರು. ಅದಕ್ಕೆ ಮುಂಚೆ ಒಂದು ಗಾಥೆಯನ್ನು ನುಡಿದರು.
                ಗೃಹ ಕಟ್ಟುವವನೇ ದೃಷ್ಟಿಸಿದ್ದೇನೆ (ನಿನ್ನನ್ನು),
ಮತ್ತೆ ಗೃಹವು ಕಟ್ಟಲ್ಪಡುವುದಿಲ್ಲ.
ಬೇಕಾದ ತೊಲೆ ನಿಲುವುಗಳೆಲ್ಲಾ ಚೂರಾಗಿವೆ.
ಗೃಹದ ಆಧಾರಸ್ತಂಭ ಮುರಿದು ಚೆಲ್ಲಾಪಿಲ್ಲಿಯಾಗಿದೆ
 ಚಿತ್ತವು ಸಂಖಾರತೀತವಾಗಿದೆ
ತನ್ಹಾ ಕ್ಷಯವು ಸಾಧಿಸಲ್ಪಟ್ಟಿದೆ (ಜಯಿಸಲ್ಪಟ್ಟಿದೆ). (ಧಮ್ಮಪದ 154)

                ಹೀಗಾಗಿ ಪಟ್ಟಿಚ ಸಮುಪ್ಪಾದವು ಬೋಧಿಯ ಸಾರವೇ ಆಗಿದೆ.