Monday 20 October 2014

ಧ್ಯಾನ-ಸಮಾಧಿಯು ಏತಕ್ಕಾಗಿ ? ಅದರ ಲಾಭಗಳೇನು ?(why meditation )

ಧ್ಯಾನ-ಸಮಾಧಿಯು ಏತಕ್ಕಾಗಿ ? ಅದರ ಲಾಭಗಳೇನು ?
                ಧ್ಯಾನದ ಲಾಭಗಳು ಅಪಾರ, ಅನಂತವಾಗಿದೆ ಮತ್ತು ಮಾಡುವ ಸರ್ವರಿಗೂ ಲಾಭದಾಯಕವಾಗಿದೆ. ಬೌದ್ಧರ ಧ್ಯಾನವಂತು ಸರಳವಾಗಿದೆ, ಸುರಕ್ಷಿತವಾಗಿದೆ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ವಿಜ್ಞಾನಿಗಳಿಂದಲೂ ಅಧ್ಯಯನಕ್ಕೆ ಒಳಪಟ್ಟು ಪ್ರಶಂಸನೀಯವಾಗಿದೆ. ವೈದ್ಯರಿಂದಲೂ ಶ್ಲಾಘನೆಗೆ ಸಲಹೆಗೆ ಗುರಿಯಾಗಿದೆ. ಇದರ ಲಾಭಗಳನ್ನು ಈ ರೀತಿಯಾಗಿ ವಿಂಗಡಿಸಬಹುದು.

                .               ಆರೋಗ್ಯಕರ ಲಾಭಗಳು
                .               ಲೌಕಿಕ ಲಾಭಗಳು ಮತ್ತು ವ್ಯಕ್ತಿ ವಿಕಸನ ಲಾಭಗಳು
                .               ಅಲೌಕಿಕ ಲಾಭಗಳು
                ಗಿ.       ಲೋಕೋತ್ತರ ಲಾಭಗಳು ಮತ್ತು ಬುದ್ಧತ್ವ
.               ಧ್ಯಾನದ ಆರೋಗ್ಯಕರ ಲಾಭಗಳು :
                ಮಾನವ ಇಂದು ಇಂದ್ರೀಯ ಸುಖಗಳಿಗೆ ದಾಸನಾಗಿ, ಅದನ್ನು ಪ್ರಾಪ್ತಿಗೊಳಿಸಲು ಹಣ ಗಳಿಕೆಯ ಹಿಂದೆ ಬಿದ್ದು, ನಿರಂತರ ಅತೃಪ್ತನಾಗಿ, ನಾನಾ ಒತ್ತಡಗಳಿಗೆ ಗುರಿಯಾಗಿ ರೋಗಿಯಾಗಿದ್ದಾನೆ. ಸದಾ ಸುಖಗಳ ಹಿಂದೆ ಬಿದ್ದು ಅದರ ಪ್ರಾಪ್ತಿಗೆ ಹೊರಟಾಗ ವಿರೋಧಗಳನ್ನು ಎದುರಿಸಲಾರದೆ, ಕುಪಿತನಾಗಿ ಕ್ರೋಧವುಳ್ಳವನಾಗಿ, ಚಿಂತಿತನಾಗಿ, ಭಯಗೊಂಡು ಮಾನಸಿಕ ಅಸ್ಥಿರವುಳ್ಳವನಾಗಿ ವ್ಯವಸ್ಥಿತ ಬದುಕಿನಿಂದ ಬಿದ್ದು ಶಾರೀರಿಕವಾಗಿ, ಮಾನಸಿಕವಾಗಿ, ನೈತಿಕವಾಗಿ, ಬೌದ್ಧಿಕವಾಗಿ ಹಾಳಾಗಿದ್ದಾನೆ.  ಮಾನವನಿಗೆ ಕೆಲಸಗಳನ್ನು ನಿರ್ವಹಿಸಲು ಅಸಮರ್ಥಗೊಂಡಾಗ, ಅಥವಾ ಇಷ್ಟಗಳು ಕೈಗೂಡದೆ ಹೋದಾಗ ಅಥವಾ ನಿರಂತರ ಕಷ್ಟಗಳು ಸಮಸ್ಯೆಗಳು ಬಂದಾಗ ಆತನು ಕ್ರೋಧವುಳ್ಳವನಾಗುತ್ತಾನೆ, ಚಿಂತಿತನಾಗುತ್ತಾನೆ. ಭಯಗೊಳ್ಳುತ್ತಾನೆ. ಹೀಗೆ ಒತ್ತಡಗಳು ಹೆಚ್ಚಾಗಿ ಅವಿಶ್ರಾಂತಿಯು ತಲೆದೋರುತ್ತದೆ. ಕ್ಷೊಭೆಯಿಂದ ಮನಸ್ಸು ಕೂಡ ಅನೇಕ ರೋಗಗಳು ತಲೆದೋರುತ್ತವೆ. ಆದರೆ ಧ್ಯಾನದಿಂದ ಅವೆಲ್ಲಾ ರೋಗಗಳು ಇನ್ನಿಲ್ಲವಾಗುತ್ತದೆ.
1.            ಮೊದಲಿಗೆ ಆಳವಾದ ವಿಶ್ರಾಂತಿಯು ದೊರೆತು ಒತ್ತಡಗಳಿಂದ ಮುಕ್ತನಾಗುತ್ತಾನೆ. ಆತನು 10 ನಿಮಿಷ ಧ್ಯಾನ ಮಾಡಲಿ ಅದು ಪರಿಣಾಮಕಾರಿಯಾಗಿರುತ್ತದೆ.
2.            ಖಿನ್ನತೆ, ಚಿಂತೆ, ಭಯದಿಂದ ಮನಸ್ಸು ದೂರವಾಗುತ್ತದೆ. ಕೋಪ ನಿಯಂತ್ರಣಕ್ಕೆ ಬರುತ್ತದೆ.
3.            ಧ್ಯಾನದ ವಿಶ್ರಾಂತಿಯುತ ಆನಂದ, ಶಾಂತತೆಯಿಂದಾಗಿ, ದೇಹದಲ್ಲಿ ಅಟ್ರಿನಾಲಿನ್ ಮತ್ತಿತರ ಹಾಮರ್ೊನ್ಗಳಾದ, ಸೆರೊಟೊನಿನ್ ಮತ್ತು ಎಂಡೊಪಿನ್ಗಳ ಸ್ರವಿಕೆಯಾಗುತ್ತದೆ. ಹಾಗು ಈ ರೀತಿಯ ರಾಸಾಯನಿಕ ಸ್ರವಿಕೆಯಿಂದಾಗಿ ಶರೀರವು ಪ್ರಪುಲ್ಲಿತವಾಗಿ, ರೋಗ ನಿರೋಧಕ ಶಕ್ತಿ ವೃದ್ಧಿಗೊಂಡು, ಹೃದಯಬಡಿತ ಆರೋಗ್ಯದ ಹಂತದಲ್ಲಿದ್ದು, ಆಮ್ಲಜನಕವು ಹೆಚ್ಚಾಗಿ ದೇಹಕ್ಕೆ ದೊರೆತು, ರಕ್ತಚಲನೆ ಬಾಧರಹಿತವಾಗಿ ಚಾಲನೆಗೊಂಡು ರಕ್ತ ಒತ್ತಡವು ಸಾಮಾನ್ಯ ಸ್ಥಿತಿಗೆ ಬರುತ್ತದೆ.  ಮಾಂಸಖಂಡಗಳ ಬಿಗಿವು ಸಡಿಲವಾಗುತ್ತದೆ. ದೇಹವು ಸಮತೋಲನ ಸ್ಥಿತಿಗೆ ಬರುತ್ತದೆ.
4.            ರಕ್ತದಲ್ಲಿನ ಲಾಕ್ಟೆಟ್ನ್ನು ಕಡಿಮೆ ಮಾಡುತ್ತದೆ.
5.            ಮೈಗ್ರೆನ್ನಂತಹ ತಲೆನೋವು ವಾಸಿಯಾಗುತ್ತದೆ.
6.            ನಿದ್ರಾರಹಿತತೆ ದೂರವಾಗಿ, ಸುಖನಿದ್ರೆ ಪ್ರಾಪ್ತಿಯಾಗುತ್ತದೆ ಮತ್ತು ಸುಂದರ ಸ್ವಪ್ನಗಳನ್ನು ಕಾಣುತ್ತಾರೆ.
7.            ಹೃದಯ ರೋಗವನ್ನು ಕಡಿಮೆ ಮಾಡುತ್ತದೆ.
8.            ದೇಹ ತೂಕವನ್ನು ಇಳಿಸುತ್ತದೆ.
9.            ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ.
10.          ಮಾನಸಿಕ ನಿಯಂತ್ರಣ ಹೆಚ್ಚಿಸುತ್ತದೆ.
11.          ಬುದ್ಧಿಮಾಂಧ್ಯತೆ ಮತ್ತು ಮರೆವು ನಿವಾರಿಸುತ್ತದೆ.
12.          ದುಶ್ಚಟಗಳಿಂದ ಮುಕ್ತಿ ದೊರಕಿಸುತ್ತದೆ.
13.          ನಕರಾತ್ಮಕ ಯೋಚನೆಗಳಿಂದ ವಿಮುಕ್ತಿ ನೀಡಿಸುತ್ತದೆ.
14.          ದೇಹದ ಕಾಂತಿ ಮತ್ತು ಮುಖದ ಪ್ರಸನ್ನತೆ ತೇಜಸ್ಸು ಹೆಚ್ಚಿಸುತ್ತದೆ.
15.          ಅಲಜರ್ಿ, ಆಥ್ರರ್ಿಟಿಸ್ ನಂತಹ ದೀರ್ಘಕಾಲಿಕ ವ್ಯಾಧಿಗಳು ಗುಣವಾಗುತ್ತದೆ.
16.          ಕಣ್ಣಿನ ದೃಷ್ಟಿ ಸರಿಹೋಗುತ್ತದೆ.
17.          ಸ್ತ್ರೀರೋಗಗಳು ನಿವಾರಣೆಯಾಗುತ್ತವೆ.
18.          ದೇಹ ನಿರೋಧಕ ಶಕ್ತಿ ವೃದ್ಧಿಯಾಗಿ ವೈರಸ್ನ ಚಟುವಟಿಕೆ ಕ್ಷೀಣವಾಗುತ್ತದೆ. ಇತ್ಯಾದಿ...
.               ಧ್ಯಾನದ ಲೌಕಿಕ ಲಾಭಗಳು ಮತ್ತು ವ್ಯಕ್ತಿ ವಿಕಸನ ಲಾಭಗಳು:
                ಧ್ಯಾನಿಗೆ ಅನೇಕ ವಿಧವಾದ ಲೌಕಿಕ ಲಾಭಗಳಾಗುತ್ತವೆ. ಆದರೆ ಆಳವಾದ ಧ್ಯಾನಿಗೆ ಮಾತ್ರ ಕೆಳಕಂಡ ಲಾಭಗಳಾಗುತ್ತವೆ.
1.            ಎಲ್ಲಾ ರೀತಿಯ ಶಾರೀರಿಕ ಮಾನಸಿಕ ಮತ್ತು ಭೌದ್ಧಿಕ ಸಮತೋಲನ ಏರ್ಪಡುತ್ತದೆ.
2.            ಮನಸ್ಸಿಗೆ ವಿಶ್ರಾಂತಿ, ಸುಖ, ಆನಂದ ಮತ್ತು ಶಾಂತಿ ಸಿಗುತ್ತದೆ.
3.            ಮನಸ್ಸನ್ನು ನಿರ್ವಹಿಸುವ ಜ್ಞಾನ ಸಿಗುತ್ತದೆ.
4.            ಇಚ್ಛಾಶಕ್ತಿಯನ್ನು ವೃದ್ಧಿಸುತ್ತವೆ ಮತ್ತು ಪ್ರಬಲ ಶ್ರದ್ಧೆಯುತ ವ್ಯಕ್ತಿತ್ವ ನಿಮರ್ಾಣವಾಗುತ್ತದೆ.
5.            ಮಾನಸಿಕ ಶಕ್ತಿ ಸಂವರ್ಧನೆಯಾಗಿ ಅತ್ಯಂತ ದೃಢನಿಧರ್ಾರದ ವ್ಯಕ್ತಿಯಾಗುತ್ತಾರೆ ಮತ್ತು ಪ್ರಯತ್ನಶಾಲಿಗಳಾಗುತ್ತಾರೆ.
6.            ನೈತಿಕತೆಗೆ ವಾಲುತ್ತಾರೆ. ಸಚಾರಿತ್ರ್ಯವಂತರಾಗುತ್ತಾರೆ.
7.            ಅತ್ಯಂತ ಎಚ್ಚರಿಕೆವುಳ್ಳವರಾಗಿದ್ದು, ಸ್ಮೃತಿವಂತರಾಗಿ ಜ್ಞಾಪಕಶಕ್ತಿಯು ವೃದ್ಧಿಯಾಗುತ್ತದೆ.
8.            ಪ್ರತಿಯೊಂದು ಕಾರ್ಯವು ಏಕಾಗ್ರತೆಯಿಂದ ಮತ್ತು ಸುವ್ಯವಸ್ಥೆಯಿಂದ ಮಾಡುತ್ತಾರೆ.
9.            ಅತ್ಯಂತ ಮೇಧಾವಿಗಳಾಗಲು ಮನಸ್ಸು ಸಿದ್ಧವಾಗುತ್ತದೆ, ಜ್ಞಾನಿಗಳಾಗುತ್ತಾರೆ. ತೋರಿಕೆಯ ಆಚೆಯದನ್ನು ಕಾಣುವ ಸಾಮಥ್ರ್ಯ ಲಭಿಸುತ್ತದೆ. ವ್ಯವಸ್ಥಿತವಾಗಿ ಕಾರ್ಯಶೀಲತೆ ಹೆಚ್ಚಳ ಮತ್ತು ಸ್ವಸಂಶೋಧಕರಾಗುತ್ತಾರೆ.
10.          ಅತ್ಯಂತ ಶಾಂತಚಿತ್ತರಾಗಿದ್ದು, ಏನೋ ಹೋದರೂ ಕಳವಳವಿಲ್ಲ, ವಿಲಾಪವಿಲ್ಲ. ಏನೇ ಲಭಿಸಿದರೂ ಸಂತೋಷವಿಲ್ಲ, ಕುಣಿದಾಡುವಿಕೆ ಇಲ್ಲ. ಕೋಪವಿಲ್ಲ, ಚಿಂತೆ-ಭಯಗಳು ಮೊದಲೇ ಇಲ್ಲ. ಆತ ಸಮಚಿತ್ತತೆಯುಳ್ಳ ಸ್ಥಿತಪ್ರಜ್ಞಾತೆ ಪಡೆದಿರುತ್ತಾನೆ, ಲೋಭರಹಿತರಾಗುತ್ತಾರೆ.
11.          ವಿಶ್ವಭಾತೃತ್ವವುಳ್ಳವರಾಗಿ ಸರ್ವಮಾನವರಲ್ಲಿ, ಸರ್ವಜೀವಿಗಳಲ್ಲಿ ಭೇದಭಾವ ಕಾಣದೆ ಸರ್ವರಲ್ಲಿ ಒಂದಾಗಿ ನಿಸ್ವಾರ್ಥ ಪ್ರೀತಿ ಮತ್ತು ದ್ವೇಷರಹಿತ ಪ್ರೀತಿ ಮತ್ತು ಜ್ಞಾನಯುತ ಪ್ರೀತಿ ಹಂಚುತ್ತಾರೆ.
12.          ವಿದ್ಯಾಥರ್ಿಗಳಲ್ಲಿ ಜಾಗರೂಕತೆ, ಸ್ಮರಣಶಕ್ತಿ, ಜ್ಞಾನ ಪ್ರೇಮವುಂಟಾಗುತ್ತದೆ. ಏಕಾಗ್ರತೆ ಹರಿತವಾಗಿ ಜ್ಞಾಪಕಶಕ್ತಿ ಮತ್ತು ಜ್ಞಾನ ಎರಡೂ ವೃದ್ಧಿಯಾಗುತ್ತದೆ.
13.          ಎಲ್ಲಾ ಬಗೆಯ ವೃತ್ತಿಯವರಲ್ಲಿ ಒತ್ತಡವಿಲ್ಲದೆ ಕಾರ್ಯಮಾಡುವ ಸಾಮಥ್ರ್ಯ ಹೆಚ್ಚುತ್ತದೆ.
14.          ಮನಶುದ್ಧತೆ, ಮನಪರಿವರ್ತನೆ ಮತ್ತು ಮನೋವಿಕಾಸವಾಗುತ್ತದೆ.
15.          ಅಪಾರ ಸಹನೆಯು ವೃದ್ಧಿಯಾಗಿ, ಕ್ಷಮಾಶೀಲವಂತರು ಆಗುತ್ತಾರೆ.
16.          ಇಂದ್ರೀಯಗಳ ಚಟುವಟಿಕೆ ಮತ್ತು ಮನಸ್ಸಿನ ಕಾರ್ಯಶೀಲತೆ ಅರ್ಥವಾಗಿ ಚಾಪಲ್ಯವು ನೀಗಿ, ಚಟಗಳಿಂದ ಮತ್ತು ದುಶ್ಚಟಗಳಿಂದ ಪಾರಾಗಿ ನಿಯಂತ್ರಿತ ಮನಸ್ಸನ್ನು ಪಡೆಯುತ್ತಾರೆ.
17.          ಗಮನಹರಿಸುವ ಸಾಮಥ್ರ್ಯ ಹೆಚ್ಚಳವಾಗುತ್ತದೆ.
18.          ಶರೀರದ ಮೇಲೆ, ಅಂಗಾಗಗಳ ಮೇಲೆ ಹತೋಟಿ ಸಿಗುತ್ತದೆ.
.               ಧ್ಯಾನದ ಅಲೌಕಿಕ ಲಾಭಗಳು (ಅಭಿಜ್ಞಾ)
                ಧ್ಯಾನದ ಅಲೌಕಿಕ ಲಾಭಗಳು ಅತ್ಯಂತ ಆಳವಾಗಿ ಧ್ಯಾನ ಮಾಡುವವರಿಗೆ ಮತ್ತು ಕನಿಷ್ಠ ಚತುರ್ಥ ಸಮಾಧಿ ಪ್ರಾಪ್ತಿ ಮಾಡಿದವರಿಗೆ ಮಾತ್ರ ಲಭಿಸುತ್ತದೆ. ಇವು ನಂಬಲು ಕಷ್ಟವಾದರೂ, ಸತ್ಯವಾಗಿದೆ. 
1.            ಧ್ಯಾನಿಗೆ ಮನೋಲ್ಲಾಸ, ಹಗುರತನದ ಭಾವನೆ ಮತ್ತು ದಿವ್ಯ ಆನಂದ ಹಾಗು ಪರಮಶಾಂತತೆಯ ಅನುಭೂತಿಯುಂಟಾಗುತ್ತದೆ.
2.            ಮಾನಸಿಕ ಕಲ್ಮಶಗಳನ್ನು, ತಡೆಗಳನ್ನು ದಾಟಿರುವುದಕ್ಕಾಗಿ ಅವರಿಗೆ ಸ್ವತಂತ್ರತೆಯ, ಆರೋಗ್ಯದ, ಮುಕ್ತಿಯ, ಸರಿದಾರಿಗೆ ಬಂದಂತಹ ದಿವ್ಯಸುಖ ಲಭಿಸುತ್ತದೆ.
3.            ದಿವ್ಯಸ್ವಪ್ನ, ದಿವ್ಯಾನುಭವ, ಧ್ಯಾನದಲ್ಲಿ ಬೆಳಕುಗಳನ್ನು, ದಿವ್ಯದರ್ಶನ, ಹಗುರತನ, ಇಡೀ ಶರೀರದಲ್ಲಿ ಆನಂದದ ಅನುಭವವುಂಟಾಗುತ್ತದೆ. ಭವಿಷ್ಯದ ಘಟನೆಗಳು ಮೊದಲೇ ಗೊತ್ತಾಗುವಿಕೆ ಇವೆಲ್ಲಾ ಲಭಿಸುತ್ತದೆ.  ಧ್ಯಾನಿಯಲ್ಲಿ ಜನರಿಗೆ ಗೌರವ ಮೂಡುತ್ತದೆ. ಆತನ ಕೀತರ್ಿಯು ಹಬ್ಬುತ್ತದೆ.
4.            ಆತನ ಮನಸ್ಸು, ಪ್ರಶಾಂತವಾಗುತ್ತದೆ, ಪರಿಶುದ್ಧವಾಗುತ್ತದೆ, ಸುಸಂಸ್ಕೃತ ವಾಗುತ್ತದೆ, ಕಲ್ಮಶರಹಿತವಾಗುತ್ತದೆ, ತಿಳಿಯಾಗುತ್ತದೆ. ಪಾಪರಹಿತವಾಗುತ್ತದೆ. ಕೌಶಲ್ಯಯುತವಾಗಿ, ಮೆದುವಾಗಿ, ಮಣಿಯು ವಂತಾಹದ್ದಾಗುತ್ತದೆ, ಕಾರ್ಯಶೀಲವಾಗುತ್ತದೆ, ದೃಢವಾಗುತ್ತದೆ ಮತ್ತು ಪರಮಶಾಂತವಾಗಿರುತ್ತದೆ, ಅಕ್ಷೊಭ್ಯವಾಗಿರುತ್ತದೆ. ಈ ರೀತಿಯ ಮನಸ್ಸಿನಿಂದ ಆತನು ವಿಭಿನ್ನರೀತಿಯ ಪವಾಡಗಳನ್ನು ಮಾಡುವವನು ಆಗುತ್ತಾನೆ.
5.            ಆತನು ಅನೇಕ ಶರೀರಗಳನ್ನು ಏಕಕಾಲದಲ್ಲಿ ಪಡೆಯುವವನಾಗುತ್ತಾನೆ. ಹಾಗೆಯೇ ಒಬ್ಬನು ಆಗುತ್ತಾನೆ.
6.            ಮಾಯವಾಗುತ್ತಾನೆ, ಹಾಗೆಯೇ ಪ್ರತ್ಯಕ್ಷವಾಗುತ್ತಾನೆ.
7.            ಯಾವರೀತಿಯ ಅಡ್ಡಿ ಇಲ್ಲದೆ ಗೋಡೆ, ಪರ್ವತಗಳನ್ನು ತೂರಿ ಹೋಗುತ್ತಾನೆ.
8.            ಗಾಳಿಯಲ್ಲಿ ಹಾರುತ್ತಾನೆ, ಆಕಾಶದಲ್ಲಿ ನಡೆಯುತ್ತಾನೆ, ನಿಲ್ಲುತ್ತಾನೆ, ಪಕ್ಷಿಯಂತೆ ಹಾರಿ ಹೋಗುತ್ತಾನೆ.
9.            ನೀರಿನಲ್ಲಿ ನಡೆಯುತ್ತಾನೆ.
10.          ಭೂಮಿಯಲ್ಲಿ ಮುಳುಗುತ್ತಾನೆ.
11.          ಚಂದ್ರನನ್ನು ಮುಟ್ಟುವಂತಹವನು ಆಗುತ್ತಾನೆ.
12.          ಶರೀರದ ರೂಪಗಳನ್ನು ಬದಲಾಯಿಸಿ ಇಚ್ಛಿತ ರೂಪ, ಶರೀರಗಳನ್ನು ಪಡೆಯುತ್ತಾನೆ.
13.          ರೋಗಗಳನ್ನು ನಿಯಂತ್ರಿಸುತ್ತಾನೆ ಮತ್ತು ವಾಸಿ ಮಾಡುತ್ತಾನೆ.
14.          ಮುಪ್ಪನ್ನು ಇಚ್ಛಿಸಿದರೆ ದೂರವಿಡುತ್ತಾನೆ.
15.          ಇಚ್ಛಿಸಿದರೆ ಕಲ್ಪಕಾಲ ಜೀವಿಸುತ್ತಾನೆ.
16.          ದಿವ್ಯವಾದ ಕಿವಿಯಿಂದ ಮಾನವರ, ದೇವತೆಗಳ, ಬ್ರಹ್ಮರ, ಎಲ್ಲರ ವಾಣಿಯನ್ನು ಕೇಳಬಲ್ಲವನಾಗುತ್ತಾನೆ. ಹತ್ತಿರದ ದೂರದ ಸೂಕ್ಷ್ಮವಾಗಿರುವ ಪ್ರಬಲವಾದ ಶಬ್ದಗಳನ್ನೆಲ್ಲಾ ಆಲಿಸುವಂತಾಗುತ್ತಾನೆ.
17.          ಪರರ ಮನಸ್ಸುಗಳನ್ನು ಓದುವಂತಹವನು ಆಗುತ್ತಾನೆ. ಇವರ ಮನಸ್ಸು ರಾಗದಿಂದ, ದ್ವೇಷದಿಂದ, ಮೋಹದಿಂದ, ಅಥವಾ ಏಕಾಗ್ರತೆಯಿಂದಿದೆ, ಸ್ವತಂತ್ರದಿಂದಿದೆ, ಸ್ನೇಹದಿಂದಿದೆ ಎಂದೆಲ್ಲಾ ಅವರ ಮನಸ್ಸಿನ ಯೋಚನೆಗಳನ್ನು ಸ್ಥಿತಿ ಅರಿಯುವಂತಾಗುತ್ತಾರೆ.
18.          ಹಾಗೆಯೇ ಹಿಂದಿನ ಜನ್ಮಗಳನ್ನು ಅರಿಯುತ್ತಾರೆ. 1, 2, ಅಥವಾ 100, 1000 ಅಥವಾ ಕಲ್ಪ, ಅಥವಾ ಹಲವಾರು ಕಲ್ಪಗಳಷ್ಟು ಹಿಂದಿನ ಜನ್ಮಗಳನ್ನು ಸ್ಮರಿಸುತ್ತಾರೆ. ಎಲ್ಲಿ ಹುಟ್ಟಿ, ಏನಾಗಿ, ನಂತರ ಏನಾದೆವು ಎಂದೆಲ್ಲಾ ಕಾಣುತ್ತಾರೆ.
19.          ನಂತರ ದಿವ್ಯಚಕ್ಷುವಿನಿಂದ ಕೆಟ್ಟ ಮತ್ತು ಒಳ್ಳೆಯ ಕರ್ಮಗಳಿಗೆ ಫಲಗಳನ್ನು ಕಾಣುತ್ತಾರೆ. ಈ ರೀತಿ ಮಿಥ್ಯಾದೃಷ್ಟಿಯಿಂದ, ಕುಕರ್ಮದಿಂದ, ಕೆಟ್ಟ ಮನಸ್ಸಿನಿಂದ ಮತ್ತು ಕುವಾಚದಿಂದ ಈ ರೀತಿಯ ಹೀನಸ್ಥಿತಿ ದೊರಕಿತ್ತು. ಅಥವಾ ಆ ರೀತಿಯ ಸಮ್ಮದೃಷ್ಟಿಯಿಂದ, ಸುಕರ್ಮದಿಂದ ಸುಮನಸ್ಸಿನಿಂದ ಮತ್ತು ಸುವಾಚದಿಂದ ಈ ಸುಗತಿ ಲಭಿಸುವುದು ಎಂದೆಲ್ಲಾ ಕರ್ಮ ನಿಯಮ ಅರಿಯುತ್ತಾರೆ.
20.          ಹಾಗೆಯೇ ಭವಿಷ್ಯವನ್ನು ಅರಿಯುತ್ತಾರೆ. ಮುಂದೆ ತಾವು ಅಥವಾ ಪರರು ಎಲ್ಲೆಲ್ಲಿ ಹುಟ್ಟುಬಹುದು ಅಥವಾ ಮುಂದಿನ ಬುದ್ಧರು ಯಾರು ಎಂದೆಲ್ಲಾ ಅರಿಯಬಹುದು.
21.          ಇಚ್ಛಿಸಿದಂತೆ ನಡೆಯುವ ಪವಾಡ ಪಡೆಯುತ್ತಾರೆ.
22.          ಮನಸ್ಸಿನ ಪೂರ್ಣ ನಿಯಂತ್ರಣ, ಪೂರ್ಣ ನಿಗ್ರಹ ಮತ್ತು ಪೂರ್ಣ ಮನೋಪ್ರಭುತ್ವ ಪಡೆಯುತ್ತಾರೆ.
23.          ಇಚ್ಛಿಸಿದ್ದನ್ನು ಸೃಷ್ಠಿಮಾಡುತ್ತಾರೆ.
24.          ಸಶರೀರಿಯಾಗಿ ಬ್ರಹ್ಮಲೋಕ, ಸ್ವರ್ಗಲೋಕ, ಇತರ ಲೋಕಗಳಿಗೆ ಕ್ಷಣಾರ್ಧದಲ್ಲಿ ಹೋಗುತ್ತಾರೆ ಮತ್ತು ಬರುತ್ತಾರೆ ಇತ್ಯಾದಿ...
                ಈ ಬಗೆಯ ಪವಾಡಗಳನ್ನು ಸಾಧಿಸಲು 10 ಕಸಿನಾ ಧ್ಯಾನಗಳನ್ನು ಸಮಥಾ, ಮತ್ತು ಅರೂಪ ಸಮಾಧಿಗಳನ್ನು ಸಿದ್ಧಿಸಬೇಕಾಗುತ್ತದೆ. ಬುದ್ಧರ ಶಿಷ್ಯರಿಗೆ ಇವುಗಳಲ್ಲಿ ಹೇರಳವಾದ ಪ್ರಭುತ್ವವಿರುತ್ತದೆ. ಆದರೆ ಬುದ್ಧರಿಗಂತೂ ಮಿತಿಯಿಲ್ಲದ ಅಪಾರ ಪ್ರಭುತ್ವ ಮತ್ತು ಶಕ್ತಿಯಿರುತ್ತದೆ. ಆದ್ದರಿಂದಲೇ ಬುದ್ಧರಿಗೆ ಸಾಟಿ ಮತ್ತೊಬ್ಬ ಬುದ್ಧರೇ ಆಗಿರುತ್ತಾರೆ ಹೊರತು ಯಾವುದೇ ಸಾಮಾನ್ಯಸಿದ್ಧರಲ್ಲ. ಏಕೆಂದರೆ ಅದಕ್ಕೆ ಬೇಕಾಗುವಷ್ಟು ಪುಣ್ಯ, ಸಾಧನೆ, ಸಮಾಧಿಗಳನ್ನು ಜನ್ಮ ಜನ್ಮದಲ್ಲಿ ಗಳಿಸಿರುತ್ತಾರೆ.
ಗಿ.       ಧ್ಯಾನದ ಲೋಕೋತ್ತರ ಲಾಭಗಳು ಮತ್ತು ಬುದ್ಧತ್ವ :
ಲೋಕೋತ್ತರ ಲಾಭಗಳು :
1.            ಇಲ್ಲಿ ಸಾಧಕನು ನಾಲ್ಕು ಆರ್ಯ ಸತ್ಯಗಳ ದರ್ಶನ ಪಡೆಯುತ್ತಾನೆ, ಸಂಬೋಧಿಯನ್ನು ಪ್ರಾಪ್ತಿ ಮಾಡುತ್ತಾನೆ.
2.            ಸಪ್ತ ವಿಶುದ್ಧಿ ಸಾಧಿಸುತ್ತಾನೆ.
3.            ವಿಮುಕ್ತಿ ಪಡೆಯುತ್ತಾನೆ.
4.            ತ್ರಿಲಕ್ಷಣ ಜ್ಞಾನ ಪಡೆಯುತ್ತಾನೆ.
5.            ಮಾರ್ಗ ಮತ್ತು ಫಲ ಪಡೆಯುತ್ತಾನೆ.
6.            ನಿಬ್ಬಾಣವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆ.
7.            ಜನ್ಮಗಳ ಅಂತ್ಯ ಮಾಡುತ್ತಾನೆ.
8.            ಜನನ, ಮರಣದ ಚಕ್ರವ್ಯೂಹದಿಂದ ಬಿಡುಗಡೆ ಪಡೆಯುತ್ತಾನೆ.
9.            ಸರ್ವ ದುಃಖಗಳ ನಿಶ್ಯೇಷ ಅಂತ್ಯ ಮಾಡುತ್ತಾನೆ.
10.          ಅರಹಂತನಾಗುತ್ತಾನೆ.
ಬುದ್ಧತ್ವ :
                ಬುದ್ಧತ್ವ ಸಾಧಾರಣವಾದುದಲ್ಲ. ಅದನ್ನು ಸಾಧಿಸಲು ಏಕಜನ್ಮ ಸಾಕಾಗುವುದಿಲ್ಲ. ಅಸಂಖ್ಯಾತ ಕಾಲದಲ್ಲಿ ಅಸಂಖ್ಯಾತ ಜನ್ಮಗಳಲ್ಲಿ ನಿರಂತರ ದಾನ, ಶೀಲ, ಸಮಾಧಿ, ಪ್ರಜ್ಞಾ, ಬಲ ಮತ್ತು 30 ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಗುತ್ತದೆ. ಪ್ರಜ್ಞಾ ಮತ್ತು ಕರುಣೆಯ ಪರಿಪೂರ್ಣ ಸಂಗಮ ಮಾಡಬೇಕಾಗುತ್ತದೆ. ಅದಕ್ಕೆ ಮುನ್ನ ಬೋಧಿಸತ್ವನಾಗಲು 8 ಅರ್ಹ ಗುಣಗಳನ್ನು ಪಡೆಯಬೇಕಾಗುತ್ತದೆ. ಇವೆಲ್ಲಕ್ಕೂ ಧ್ಯಾನವು ಒಂದು ಪ್ರಮುಖ ಅಂಗವೇ ಆಗಿದೆ. ಪರಮಪೂಜ್ಯ ಬುದ್ಧ ಘೋಷರವರ ಪ್ರಕಾರ ನಾಲ್ಕು ಬ್ರಹ್ಮವಿಹಾರದ ಧ್ಯಾನದಿಂದ ದಶಪಾರಾಮಿ ಪೂರ್ಣವಾಗುತ್ತದೆ.
                ಬೌದ್ಧರಲ್ಲದವರು ಕೇವಲ ಆರೋಗ್ಯ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ, ಅಥವಾ ಅಲೌಕಿಕ ಗುರಿಯಿಂದ ಸಾಧನೆ ಮಾಡುತ್ತಾರೆ ಅಥವಾ ಕಾಲ್ಪನಿಕ ದೇವರಲ್ಲಿ ಧ್ಯಾನ ಮಾಡುತ್ತಾರೆ.
                ಆದರೆ ಬೌದ್ಧರು ಸಮ್ಮ ಸಂಬೋಧಿ ಪ್ರಾಪ್ತಿ ಮತ್ತು ನಿಬ್ಬಾಣ ಪ್ರಾಪ್ತಿಗೆ ಸಾಧನೆ ಮಾಡುತ್ತಾರೆ. ಅಂದರೆ ತಮ್ಮ ವಿಮುಕ್ತಿಗೆ ಸರ್ವಜೀವಿಗಳ ಹಿತಕ್ಕಾಗಿ ಮತ್ತು ದುಃಖವಿಮುಕ್ತಿಗಾಗಿ, ಸುಖಕ್ಕಾಗಿ ಹಾಗು ಕರುಣಾ ಪ್ರಜ್ಞಾಗಳ ಪರಿಪೂರ್ಣ ವಿಕಾಸಕ್ಕಾಗಿ ಬುದ್ಧತ್ವಕ್ಕಾಗಿ ಧ್ಯಾನ ಮಾಡುತ್ತಾರೆ.
ಧ್ಯಾನದ ವಿಧಗಳು :
                ಚಿತ್ತ ಏಕಾಗ್ರತೆಯ ಸ್ಥಿತಿಯೇ ಸಮಾಧಿಯಾಗಿದ್ದು, ಇದನ್ನು ಸಾಧಿಸಲು ಹಲವಾರು ವಿಧಗಳಿವೆ. ಬುದ್ಧರು ವ್ಯಕ್ತಿಯ ಪ್ರಚನ್ನತೆಗೆ ತಕ್ಕಂತೆ ಧ್ಯಾನ ವಿಷಯ ನೀಡುತ್ತಿದ್ದರು. ಧ್ಯಾನಗಳಿಗೆ ಸಂಬಂಧಿಸಿದಂತೆ ಸತಿಷಟ್ಠಾನ ಸುತ್ತ, ಅನಾಪಾನಸತಿಸುತ್ತ ಮತ್ತು ತಿಪಿಟೇತರ ಪಾಳಿ ಗ್ರಂಥಗಳಾದ ವಿಮುಕ್ತಿ ಮಾಗ್ಗ, ವಿಶುದ್ಧಿ ಮಾಗ್ಗಗಳಲ್ಲಿ ನಮಗೆ ಮಾಹಿತಿ ದೊರೆಯುತ್ತದೆ. ಕೆಲವರು ಬುದ್ಧ ಭಗವಾನರ ಧ್ಯಾನಗಳನ್ನು ಸಮಥ ಮತ್ತು ವಿಪಶ್ಶನ ಎಂದು ವಿಂಗಡನೆ ಮಾಡುತ್ತಾರೆ. ಭಗವಾನರೇ 'ಭಿಕ್ಷುಗಳೇ ಝಾನ ಮಾಡಿ' ಎಂದು ಹೇಳಿದ್ದಾರೆ. ಎರಡೂ ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಸ್ಮೃತಿಯನ್ನು, ಎಚ್ಚರಿಕೆಯನ್ನು, ಪ್ರಶಾಂತತೆಯನ್ನು ಮತ್ತು ಅಂತರಜ್ಞಾನವನ್ನು ನೀಡುವಂತಹ ಈ ಧ್ಯಾನಗಳು ನಿಜಕ್ಕೂ ಅತ್ಯಮೂಲ್ಯವಾಗಿವೆ.
                ಬುದ್ಧರಲ್ಲಿ 50ಕ್ಕೂ ಹೆಚ್ಚು ಸ್ಮೃತಿ ಬೆಳೆಸುವಂತಹ ಧ್ಯಾನ ವಿಧಾನಗಳಿವೆ. ಹಾಗು ಸಮಾಧಿಯನ್ನು ವೃದ್ಧಿಸುವ 40 ಬಗೆಯ ಧ್ಯಾನಗಳಿವೆ. ಟಿಬೆಟ್ ಸಂಪ್ರದಾಯದಲ್ಲಂತು 1000 ಬಗೆಯ ಕಸಿನ ಮಂಡಲ ಧ್ಯಾನಗಳಿವೆ. ಬಹುಶಃ ಇಷ್ಟು ಬಗೆಯ ವಿನೂತನ, ಫಲಕಾರಿ, ಅಕಲ್ಪಿತ ಧ್ಯಾನಗಳು ಬೇರೆ ಯಾವ ಧರ್ಮದಲ್ಲೂ ಇಲ್ಲ. ಅನ್ಯ ಧಮ್ಮದಲ್ಲಿ ಧ್ಯಾನದ ಉದ್ದೇಶ ದೇವರಲ್ಲಿ ಐಕ್ಯವಾಗುವಿಕೆ ಅಥವಾ ಆತ್ಮಸಾಕ್ಷಾತ್ಕಾರ ಅಥವಾ ಆರೋಗ್ಯ, ದೀಘರ್ಾಯುವಿಗೆ ಮಾತ್ರ ಸಂಬಂಧಿಸುತ್ತದೆ. ಬೌದ್ಧರಲ್ಲಿ ಇದು ಅವನ್ನೆಲ್ಲಾ ದಾಟುತ್ತದೆ. ದೇವರ ಅಸ್ತಿತ್ವ ಅಲ್ಲಗಳೆದು, ಆತ್ಮ ನಂಬಿಕೆಯೇ ಸಮಸ್ಯೆಗೆ ಕಾರಣವೆಂದು ತಿಳಿಸಿ, ನಿಜ ಅಸ್ತಿತ್ವವನ್ನು ತೋರಿಕೆಯ ಆಚೆ ನೋಡುವಂತಹ, ಸತ್ಯವನ್ನು ಅದು ಹೇಗಿದೆಯೋ ಹಾಗೆಯೋ ನೋಡುವ ವಿಪಶ್ಶನ ನಿಜಕ್ಕೂ ಅನುಪಮೇಯವಾಗಿದೆ. ವೈಜ್ಞಾನಿಕವಾಗಿದೆ ಮತ್ತು ಪರಿಣಾಮಾತ್ಮಕವಾಗಿದೆ.
                ಬುದ್ಧಭಗವಾನರು ಸತಿಪಟ್ಟಾನದಲ್ಲಿ ಈ ಕೆಳಕಂಡ ಬಗೆಯ ಧ್ಯಾನಗಳನ್ನು ವಿವರಿಸುತ್ತಾರೆ.
.               ಕಾಯಾಗತಾ ಸ್ಮೃತಿಯಲ್ಲಿ
                1.            ಅನಾಪಾನಾಸತಿ (ಉಸಿರಾಟದ ಧ್ಯಾನ)
                2.            ದೇಹದ ಭಂಗಿಗಳ ಜಾಗರೂಕತೆ
                3.            ಜಾಗರೂಕತೆ ಮತ್ತು ಅರಿವಿನ ಸಂಗಮ
                4.            ದೇಹದ ಸ್ವರ್ಶ ಅರಿವು
                5.            ಧಾತುಗಳ ಸಾಕ್ಷಾತ್ಕಾರ
                6.            ಅಶುಭ ಧ್ಯಾನಗಳು
.               ವೇದಾನುಪಶ್ಶನ (ಸಂವೇದನೆಗಳ ಅರಿವು)
.               ಚಿತ್ತಾನುಪಶ್ಶನ (ಚಿತ್ತದ ಸ್ಥಿತಿಗಳ ಅರಿವು)
ಗಿ.       ದಮ್ಮಾನುಪಶ್ಶನ (ಚಿತ್ತ ವೃತ್ತಿಗಳ ಸೂಕ್ಷ್ಮ ಅರಿವು)
                1.            ಧ್ಯಾನ ತಡೆಗಳು
                2.            ಅಸ್ತಿತ್ವದ ಐದು ರಾಶಿಗಳು
                3.            ಇಂದ್ರೀಯಗಳ ಸಂಕೋಲೆಗಳು
                4.            ಸಪ್ತ ಬೋದಿ ಅಂಗಗಳ ವೃದ್ಧಿ
                5.            ನಾಲ್ಕು ಆರ್ಯ ಸತ್ಯಗಳ ಸಾಕ್ಷಾತ್ಕಾರ
                ಹಾಗು ಭಗವಾನರು ಧೀಘನಿಖಾಯ ಮತ್ತು ಮಜ್ಜಿಮನಿಕಾಯದಲ್ಲಿ ಅಶುಭಾ ಧ್ಯಾನವನ್ನು ವಿವರಿಸಿದ್ದಾರೆ. ಅಂಗುತ್ತರ ನಿಖಾಯದಲ್ಲಿ ಮೊದಲು ಆರು ಅನುಸ್ಸತಿಗಳನ್ನು (ಬುದ್ಧ, ಧಮ್ಮ ಸಂಘ, ಶೀಲ, ತ್ಯಾಗ, ದೇವ) ವಿವರಿಸಿದ್ದಾರೆ. ಅಂಗುತ್ತರದಲ್ಲಿ ಆಗಾಗ ಮರಣಾನುಸ್ಸತಿಯನ್ನು ಬೋಧಿಸಿದ್ದಾರೆ. ಮಜ್ಜಿಯನಿಖಾಯದಲ್ಲಿ ಕಾಯಗತಾಸತಿ ಮತ್ತು ಹಲವಾರು ಕಡೆ ಅನಾಪಾನಸತಿ ವಿವರಿಸಿದ್ದಾರೆ. ನಿಬ್ಬಾಣದ ಸ್ಮೃತಿಯನ್ನು ಅದು ಅನುಭವ ವೇದ್ಯವಾದುದ್ದರಿಂದ ಒಂದೆರಡು ಪುಟ ವಿವರಣೆ ಮಾತ್ರ ಸಿಗುತ್ತದೆ.
                ಬ್ರಹ್ಮ ವಿಹಾರಗಳಾದ ಮೈತ್ರಿ, ಕರುಣಾ, ಮುದಿತಾ ಮತ್ತು ಉಪೇಕ್ಷೆಯನ್ನು ಅಪರಿಮಿತ ಸ್ಥಾನಗಳೆಂದು ವಿವರಿಸಿದ್ದಾರೆ.
                ಚತುರ್ಥ ಸಮಾಧಿಯ ನಂತರ ಅರೂಪ ಸಮಾಧಿಗಳನ್ನು ವಿವರಿಸಿದ್ದಾರೆ.
                ಅಲ್ಲಲ್ಲಿ ಆಹಾರೆ ಪತಿಕೂಲ ಸನ್ಯಾ ವಿವರಿಸಿದ್ದಾರೆ.
                ಧಾತುಗಳ ವಿಭಜನೆ ಸತಿಪಟ್ಟಾನದಲ್ಲಿ ವಿವರಿಸಲಾಗಿದೆ. 10 ಕಸಿನಾಗಳಿಗೆ ಅಂತಹ ಮಹತ್ವವನ್ನು ನೀಡಲಾಗಿಲ್ಲ. ಏಕೆಂದರೆ ಅವು ಶಾಂತಸ್ಥಿತಿ, ಮತ್ತು ಅತೀಂದ್ರಿಯ ಮಾನಸಿಕ ಶಕ್ತಿಗಳಾದ ಪವಾಡಕ್ಕೆ ಕೊಂಡೊಯ್ಯುವಂತಹು ದ್ದಾಗಿದೆ, ಹೊರತು ಸಂಬೋಧಿ ಮತ್ತು ನಿಬ್ಬಾಣಕ್ಕೆ ಅಷ್ಟು ಸಹಕಾರಿಯಾಗಿಲ್ಲ.
                ಪರಮಪೂಜ್ಯ ಅರಹಂತ ಉಪತಿಸ್ಸಾರವರ ವಿಮುಕ್ತಿಮಾಗ್ಗ ಮತ್ತು ಪರಮಪೂಜ್ಯ ಭದಂತಚಾರ್ಯ ಬುದ್ಧಘೋಷರವರು ತಮ್ಮ ವಿಶುದ್ಧಿ ಮಾರ್ಗದಲ್ಲಿ ತುಂಬ ಚೆನ್ನಾಗಿ, ಸರ್ವಕಾಲಿಕ ಅತ್ಯುತ್ತಮ ಧ್ಯಾನಗ್ರಂಥ ರಚಿಸಿದ್ದಾರೆ. ಅವು ವಸ್ತು ವಿಷಯದಲ್ಲಿ ಆಗಲಿ ಅಥವಾ ಶೈಲಿಯಲ್ಲಾಗಲಿ ಅಸಮಾನವಾಗಿದೆ.
ಧ್ಯಾನದ ಪರಿಣಾಮ :
                ಈ ಧ್ಯಾನಗಳು ಎಲ್ಲಿ ಕರೆದೊಯ್ಯುತ್ತವೆ ಎಂಬುದನ್ನು ಬುದ್ಧರು ವಿವರಿಸಿದ್ದಾರೆ. ಉದಾಹರಣೆಗೆ 10 ಅಶುಭಾಗಳು ಪ್ರಥಮ ಸಮಾಧಿ 8 ಅನುಸ್ಮೃತಿಗಳು ಆಹಾರಪತಿಕೂಲ ಸನ್ಯಾ ಮತ್ತು ಧಾತು ವಿಶ್ಲೇಷಣ ಇವು ಹೆಚ್ಚೆಂದರೆ ಸಾಮಿಪ್ಯ ಸಮಾಧಿ ಪಡೆಯುತ್ತಾರೆ. ಆದರೆ ಇವುಗಳ ಬಂಧನಗಳನ್ನು ಕತ್ತರಿಸಿ ಲೋಕೋತ್ತರ ಫಲ ನೀಡುವಂತದ್ದಾಗಿದೆ ಮತ್ತು ಲೋಭರಹಿತ ರಾಗುತ್ತಾರೆ.
                ಮೆತ್ತಾ, ಕರುಣಾ ಮತ್ತು ಮುದಿತಾಗಳು ತಿತ್ರೀಯ ಸಮಾಧಿ ಪಡೆಯುತ್ತಾರೆ ಹಾಗು ದ್ವೇಷರಹಿತರಾಗುತ್ತಾರೆ.
                ಅನಾಪಾನಾಸತಿ, ಬುದ್ಧಾನುಸತಿ ಮತ್ತು 10 ಕಸಿಣಾಗಳಿಂದ ಚತುರ್ಥ ಸಮಾಧಿ ಪಡೆಯುತ್ತಾರೆ. ಪರಮಶಾಂತತೆ ಹಾಗು ದಿವ್ಯಶಕ್ತಿ ಮತ್ತು ಸಿದ್ಧಿಗಳು ಪಡೆಯುತ್ತಾರೆ.
                4 ಅರೂಪ ಸಮಾಧಿಗಳಿಂದ ಚತುರ್ಥ ಮೀರಿದ 5, 6, 7, 8 ಸಮಾಪತ್ತಿ ಪಡೆಯುತ್ತಾರೆ.
                ಕೆಲವರು ಸಮಥ ಸಿದ್ದಿಸಿ ವಿಪಶ್ಶನ ಪ್ರಾರಂಭಿಸುತ್ತಾರೆ. ಕೆಲವರು ವಿಪಶ್ಶನದ ನಂತರ ಸಮಾಥ ಸಾಧಿಸುತ್ತಾರೆ. ಕೆಲವರು ಜೊತೆಯಲ್ಲೇ ಎರಡೂ ಸಾಧಿಸುತ್ತಾರೆ.
                ಆದರೆ ವಿಪಶ್ಶನ ಸಾಧನೆಯಿಂದ ಲೋಕೋತ್ತರ ಮಾರ್ಗ ಮತ್ತು ಲೋಕೋತ್ತರ ಫಲಗಳನ್ನು ಪ್ರಾಪ್ತಿಮಾಡಿ ನಿಬ್ಬಾಣ ಸಾಕ್ಷಾತ್ಕರಿಸುತ್ತಾರೆ.
ಯಾರಿಗೆ ಯಾವ ಧ್ಯಾನ
1.            ಕೋಪ ಹೆಚ್ಚಿರುವವರಿಗೆ ವರ್ಣಗಳ ಕಸಿನ ಮತ್ತು ಬ್ರಹ್ಮವಿಹಾರಗಳು ನೀಡಲಾಗುತ್ತದೆ.
2.            ರಾಗ ಹೆಚ್ಚಿರುವವರಿಗೆ ಅಶುಭಾಧ್ಯಾನ ಮತ್ತು ಕಾಯಾಗತಾಸ್ಮೃತಿ ನೀಡಲಾಗುತ್ತದೆ.
3.            ಚದುರಿದ ಚಿತ್ತದವರಿಗೆ ಅನಾಪಾನಸ್ಮೃತಿ ನೀಡಲಾಗುತ್ತದೆ.
4.            ಭಕ್ತಿಯಿಂದ ಕೂಡಿರುವವರಿಗೆ ತ್ರಿರತ್ನ ಅನುಸತಿ ಹಾಗು ಶೀಲ, ತ್ಯಾಗ ಮತ್ತು ದೇವತಾ ಅನುಸ್ಮೃತಿ ನೀಡಲಾಗುತ್ತದೆ.
5.            ಜ್ಞಾನವುಳ್ಳವರಿಗೆ ಮರಣಾನುಸ್ಮೃತಿ, ನಿಬ್ಬಾಣಾನುಸ್ಮೃತಿ, ಧಾತು ವಿಶ್ಲೇಷಣ, ಆಹಾರೆ ಪತಿಕೂಲ ಸನ್ಯಾ ನೀಡಲಾಗುತ್ತದೆ.
6.            ಚತುರ್ಥ ಸಮಾಧಿ ಸಿದ್ಧಿಸಿದವರಿಗೆ ಅರೂಪ ಧ್ಯಾನ ನೀಡುತ್ತಾರೆ.


7.            ಎಲ್ಲರಿಗೂ ಅನಾಪಾನಾ ಸ್ಮೃತಿ, ಮೈತ್ರಿ ಮತ್ತು ವಿಪಶ್ಶನ ಧ್ಯಾನ ನೀಡಲಾಗುತ್ತದೆ.

1 comment:

  1. ಈ ವಿಚಾರ ಅಮೂಲ್ಯವಾದ ವಿಚಾರ ತಿಳಿಸಿದ್ದಕ್ಕೆ ಕೋಟಿ ಧನ್ಯವಾದಗಳು

    ReplyDelete