Thursday 21 December 2017

ಆನಾಪಾನಾ ವೇದನಾನುಪಸ್ಸನಾ Anapana vedanaanupassana

                            ಆನಾಪಾನಾ ವೇದನಾನುಪಸ್ಸನಾ :

5. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಪೀತಿ (ಆನಂದ)ವನ್ನು ಅನುಭವಿಸುತ್ತಾ ಉಸಿರು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಇಲ್ಲಿ ಆನಂದವನ್ನು 2 ವಿಧದಲ್ಲಿ ಅನುಭವಿಸಬಹುದು.

1. ಧ್ಯಾನ ವಸ್ತು ವಿಷಯದಿಂದ (ಸಮಥದಿಂದ) 2. ಗೊಂದಲಾತೀತದಿಂದ (ವಿಪಶ್ಶನದಿಂದ) ಇಲ್ಲಿ ಧ್ಯಾನ ವಿಷಯದಿಂದ ಪ್ರಥಮ ಸಮಾಧಿ ಪ್ರಾಪ್ತಿಯಾದಾಗಿನಿಂದ ಆತನು ಆನಂದವನ್ನು ಅನುಭವಿಸಿರುತ್ತಾನೆ. ಇಲ್ಲಿ ಆತನು ಪ್ರಥಮ ಮತ್ತು ದ್ವಿತೀಯ ಧ್ಯಾನದಲ್ಲಿ ಅನುಭವಿಸಿದ ಆನಂದದಲ್ಲಿ ಅನಿತ್ಯತೆ ಕಾಣುತ್ತಾನೆ. ಹೀಗೆ ಆತನು ಗೊಂದಲಾತೀತನಾಗುತ್ತಾನೆ.
ಇಲ್ಲಿ ಆತನು 16 ರೀತಿಯಲ್ಲಿ ಆನಂದವನ್ನು ಉದಯಿಸುವಂತೆ ಮಾಡಬಹುದು. ಹೇಗೆಂದರೆ ಆತನು ಅನಾಪಾನಾಸತಿಯಲ್ಲಿ ಏಕಾಗ್ರತೆಯಿಂದ ಇದ್ದಾಗ, ಯಾವುದೇ ರೀತಿ ಭಂಗಬಾರದ ರೀತಿಯಲ್ಲಿ ಧ್ಯಾನಿಸುತ್ತಿರುವಾಗ ಅದನ್ನು (1) ಅರಿತಾಗ (2) ಗಮನಹರಿಸಿದಾಗ (3) ಗ್ರಹಿಸಿದಾಗ (4) ಸ್ಪಷ್ಟವಾಗಿ ನೋಡಿದಾಗ (5) ಪ್ರತಿಬಿಂಬಿಸಿದಾಗ (6) ನಿರ್ಧರಿಸಿದಾಗ (7) ಶ್ರದ್ಧೆಯಿಂದ ನಿರ್ಧರಿಸಿದಾಗ (8) ಪ್ರಯತ್ನಶೀಲದಿಂದ ಕೂಡಿದಾಗ (9) ಜಾಗ್ರತೆ ಸ್ಥಾಪಿಸಿದಾಗ (10) ಏಕಾಗ್ರತೆಯಲ್ಲಿ ನೆಲೆಸಿದಾಗ (11) ಪ್ರಜ್ಞೆಯಿಂದ ಅರಿತಾಗ (12) ಅಭಿಜ್ಞಾದಿಂದ ಕೂಡಿದಾಗ (13) ಯಾವುದನ್ನು ಅರಿಯಬೇಕೋ ಅದನ್ನು ಅರಿತಾಗ (14) ಯಾವುದನ್ನು ತ್ಯಜಿಸಬೇಕೋ ಅದನ್ನು ತ್ಯಜಿಸಿದಾಗ (15) ಯಾವುದನ್ನು ವೃದ್ಧಿಸಬೇಕೋ ಅದನ್ನು ವೃದ್ಧಿಸಿದಾಗ (16) ಯಾವುದನ್ನು ಸಾಕ್ಷಾತ್ಕರಿಸಬೇಕೋ ಅದನ್ನು ಸಾಕ್ಷಾತ್ಕರಿಸಿದಾಗ ಆನಂದ ಉದಯಿಸುತ್ತದೆ.
ಯಾವಾಗ ಆತನು ಸದಾ ಉದಾತ್ತವಾದ ಆನಂದದಿಂದ ಕೂಡಿರುವನೋ ಆಗ ಆತನಿಂದ ಯಾವುದೇ ಪಾಪ ಆಗುವುದಿಲ್ಲ. ಇದೇ ಆತನ ಶೀಲವಾಗಿರುತ್ತದೆ. ಆಗ ಆತನು ಅಭಂಗ ಏಕಾಗ್ರತೆಯಲ್ಲಿರುತ್ತಾನೆ. ಇದೇ ಆತನ ಸಮಾಧಿಯಾಗಿದೆ. ಈ ಆನಂದವು ಅನಿತ್ಯ, ಅನಾತ್ಮ ಎಂದು ಅರಿಯುತ್ತಾನೆ. ಇದೇ ಆತನ ಪ್ರಜ್ಞೆಯಾಗಿದೆ. ಹೀಗೆ ಆತನು ಸುಶಿಕ್ಷಣವನ್ನು ಪಡೆಯುತ್ತಾನೆ.

ಸಂಕ್ಷಿಪ್ತ ಆನಾಪಾನಾ ವೇದನಾನುಪಸ್ಸನಾ

. ಇಲ್ಲಿ ಸಾಧಕನು ಆನಂದವನ್ನು ಅರಿಯುತ್ತಾ ಅದರ ಅನಿತ್ಯತೆಯನ್ನು ಅರಿಯುತ್ತಾನೆ. ಅದು ಶಾಶ್ವತವಲ್ಲ ಎಂದು ಅರಿಯುತ್ತಾನೆ. ಆಗ ಆತನು ನಿತ್ಯವೆಂಬ ಗ್ರಹಿಕೆ (ನಿಚ್ಚ ಸನ್ಯಾ) ತ್ಯಜಿಸುತ್ತಾನೆ.
. ನಂತರ ವೇದನೆಗಳೆಲ್ಲವೂ ಅವು ಸುಖ ಪೂರ್ವಕವೇ ಆಗಿದ್ದರೂ ಜನ್ಮ ನೀಡುವುದರಿಂದ, ವಿಯೋಗವಾಗುವುದರಿಂದ ಮರೆಯಾಗುವುದರಿಂದಾಗಿ ಅವು ದುಃಖಕರ ಎಂದು ಅರಿತು ಸುಖವೆಂಬ ಗ್ರಹಿಕೆಯನ್ನು (ಸುಖಿ ಸನ್ಯಾ) ತ್ಯಜಿಸುತ್ತಾನೆ.
. ನಂತರ ಸಾಧಕನು ಯಾವುದೆಲ್ಲಾ ವೇದನೆಗಳು ಉದಯಿಸಿ ಮರೆಯಾಗುತ್ತವೆಯೋ ಮತ್ತು ದುಃಖಜಾತವು ಅಗಿರುವುದರಿಂದಾಗಿ ಅವು ನಾನಲ್ಲ, ನನ್ನದಲ್ಲ ಅವು ನನ್ನ ಆತ್ಮವಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಆತನು ಆನಂದವೇ ನನ್ನ ಆತ್ಮ ಎಂಬ ಮಿಥ್ಯಾ ಗ್ರಹಿಕೆಯನ್ನು (ಅತ್ತಸನ್ಯಾ) ತೊರೆಯುತ್ತಾನೆ.
. ಹೀಗಾಗಿ ಆತನು ವೇದನೆಗಳಲ್ಲಿ (ಆನಂದದಲ್ಲಿ) ಯಾವ ಸುಖವನ್ನು ಪಡೆಯಲಾರ. ಆತನು ಆನಂದಿಸುವ ಪ್ರವೃತ್ತಿ ತೊರೆಯುತ್ತಾನೆ.
. ಹೀಗೆ ಆತನು ವಿರಾಗಿಯಾಗುತ್ತಾನೆ, ವೇದನೆಗಳಲ್ಲಿ (ಆನಂದದಲ್ಲಿ) ವಿರಾಗ ಭಾವನೆ ತಾಳುತ್ತಾನೆ, ಹೀಗಾಗಿ ಆತನು ಭಾವೋದ್ರೇಕಗಳನ್ನೆಲ್ಲಾ ತೊರೆಯುತ್ತಾನೆ.
. ನಂತರ ಆತನು ಈ ವೇದನೆಗಳ ಅಂತ್ಯ ಮಾಡಲು ನಿರ್ಧರಿಸುತ್ತಾನೆ (ನಿರೋಧ) ಮತ್ತು ಆತನಲ್ಲಿ ವೇದನೆಗಳು ಉದಯಿಸಲಾರವು. ಏಕೆಂದರೆ ಆತನು ಅವುಗಳ ಸಮುದಾಯ (ಉತ್ಪತ್ತಿ)ವನ್ನೇ ನಿಲ್ಲಿಸಿದ್ದಾನೆ. ಆತನಲ್ಲಿ ಈಗ ಸ್ಪರ್ಶವಾದರೂ ವೇದನೆಗಳು ಉಂಟಾಗುವುದಿಲ್ಲ.
. ಹೀಗೆ ಆತನು ವೇದನೆಗಳನ್ನು (ಆನಂದವನ್ನು) ತ್ಯಜಿಸುತ್ತಾನೆ. ಅವುಗಳಲ್ಲಿ ಅಂಟುವುದಿಲ್ಲ. ಅವುಗಳಿಗೆ ಅತೀತನಾಗುತ್ತಾನೆ. ಹೀಗೆ ಆತನು ಆನಂದದಲ್ಲಿ ಅನುಭವಿಸುತ್ತಾ ಉಸಿರಾಟದ ಧ್ಯಾನದಲ್ಲಿ ವಿಹರಿಸುತ್ತಾನೆ.

6. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಸುಖ (ದಿವ್ಯವಾದ ಸುಖ)ವನ್ನು ಅನುಭವಿಸುತ್ತಾ ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರ ಬಿಡುತ್ತಿದ್ದೇನೆ.

ಆನಂದವು ಸ್ಥೂಲವಾದರೆ ಸುಖವು ಸೂಕ್ಷ್ಮವಾಗಿದೆ. ಆನಂದವನ್ನು ದ್ವಿತೀಯ ಧ್ಯಾನದವರೆಗೆ ಅನುಭವಿಸಿದರೆ, ಸುಖವನ್ನು ತೃತೀಯ ಧ್ಯಾನದವರೆಗೆ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ, ಸುಖವನ್ನು ವಿಪಶ್ಶನ ಧ್ಯಾನದಲ್ಲಿಯೂ ಅನುಭವಿಸಬಹುದಾಗಿದೆ.
ಆನಂದದಂತೆ ಸುಖವನ್ನು ಸಹ 16 ವಿಧದಲ್ಲಿ ಉದಯಿಸಬಹುದಾಗಿದೆ ಮತ್ತು ಸದಾ ಸುಖ ಪೂರ್ವಕದಲ್ಲಿ ಇರುವವನಲ್ಲಿ ಶೀಲ, ಸಮಾಧಿ ಮತ್ತು ಪ್ರಜ್ಞಾವು ನೆಲೆಸಿರುತ್ತದೆ.
ಇಲ್ಲಿ ಸಾಧನೆಯೆಲ್ಲವೂ ಹಿಂದಿನ ಹಂತದಂತೆಯೇ ಅಂದರೆ ಆನಂದವನ್ನು ಅನುಭವಿಸಿದ ರೀತಿಯಲ್ಲಿಯೇ. ಆದರೆ ವ್ಯತ್ಯಾಸವಿರುವುದು ಕೇವಲ ಹಿಂದಿನ ಸಾಧನೆಗೆ ಆನಂದವು ವಸ್ತು ವಿಷಯವಾಗಿತ್ತು. ಇಲ್ಲಿ ಸುಖವು ವಸ್ತು ವಿಷಯವಾಗಿದೆ.

7. ಚಿತ್ತ ಸಂಖಾರಗಳನ್ನು ಅನುಭವಿಸುತ್ತಾ ನಾನು ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರಬಿಡುತ್ತಿದ್ದೇನೆ. ಈ ರೀತಿ ಸುಶಿಕ್ಷಣ ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.

ಇಲ್ಲಿ ಸುಶಿಕ್ಷಣವೆಂದರೆ ಶೀಲ, ಸಮಾಧಿ, ಪ್ರಜ್ಞಾವೇ ಆಗಿದೆ. ಒಳ ಉಸಿರು, ಹೊರ ಉಸಿರಿನ ಜಾಗ್ರತೆಯೇ ಆನಾಪಾನಾಸತಿಯಾಗಿದೆ. ಇಲ್ಲಿ ಚಿತ್ತ ಸಂಖಾರಗಳನ್ನು ವೀಕ್ಷಿಸುವುದೇ ಪ್ರಜ್ಞಾವಾಗಿದೆ. ಇಲ್ಲಿ ಚಿತ್ತಸಂಖಾರಗಳೆಂದರೆ ವೇದನಾ ಮತ್ತು ಸನ್ಯಾ (ಸಞ್ಞಾ) ಆಗಿದೆ. ಈ ವೇದನಾ ಮತ್ತು ಸನ್ಯಾವು ಪಂಚಖಂಧಗಳಲ್ಲಿ ಎರಡಾಗಿದೆ. ಉಳಿದವುಗಳೆಂದರೆ ರೂಪ, ವಿನ್ಯಾನ, ಸಂಖಾರ.
ಇಂದ್ರಿಯ ಮತ್ತು ಇಂದ್ರೀಯಗಳ ಸ್ಪರ್ಶದ ನಂತರದ ಸ್ಥಿತಿಯೇ ವೇದನಾ ಆಗಿದೆ. ವೇದನೆಯೆಂದರೆ ಯಾವ ವೇದನೆಯೆಂದು ಪತ್ತೆಹಚ್ಚುವುದೇ ಸನ್ಯಾ (ಗ್ರಹಿಕೆ)ಯಾಗಿದೆ. ಹಾಗೆಯೇ ಮನಸ್ಸು ಮತ್ತು ಮನಸ್ಸಿನ ವಿಷಯಗಳು ಸಂಪಕರ್ಿಸಿದಾಗ ವೇದನೆ (ಸಂವೇದನೆ) ಉಂಟಾಗುತ್ತದೆ. ಧ್ಯಾನದಲ್ಲೂ ಕಾಯಾನುಪಸ್ಸನಾ ಮತ್ತು ವೇದನೆ ಆನಾಪಾನಾ ಮಾಡುವಾಗ ವೇದನೆಗಳು ಉಂಟಾಗುತ್ತದೆ. ಅವು ಮುಖ್ಯವಾಗಿ 3 ವಿಧವಾಗಿದೆ. ಪ್ರಿಯ (ಸುಖ) ವೇದನೆ, ದುಃಖ (ಅಪ್ರಿಯ) ವೇದನೆ ಮತ್ತು ಪ್ರಿಯ ಅಪ್ರಿಯವಲ್ಲದ (ಸುಖವೂ-ದುಃಖವೂ ಅಲ್ಲದ ವೇದನೆ) ವೇದನೆ. ಇವು ಯಾವ ವೇದನೆಯೆಂದು ಪತ್ತೆಹಚ್ಚುವುದೇ ಗ್ರಹಿಕೆಯಾಗಿದೆ.
ಧ್ಯಾನ ಆಳದಲ್ಲಿ ಸಂಖಾರಗಳು, ವಿನ್ಯಾನವು, ಯೋಚನೆಗಳು ಇರುವುದಿಲ್ಲ. ಆದರೆ ವೇದನೆ ಮತ್ತು ಸನ್ಯಾಗಳು ಇರುತ್ತದೆ. ಹೀಗಾಗಿ ಇವುಗಳ ವೀಕ್ಷಣೆಯೇ ಚಿತ್ತ ಸಂಖಾರಗಳ ವೀಕ್ಷಣೆ ಅಥವಾ ನಿಜವಾದ ವೇದನಾನುಪಸ್ಸನಾವಾಗಿದೆ. ಸನ್ಯಾವು ದೃಷ್ಟಿಗೆ (ಮಿಥ್ಯಾ ದೃಷ್ಟಿಗೆ) ಮೂಲವಾಗಿದೆ. ಉದಾಹರಣೆಗೆ : ಸುಂದರವಾಗಿದೆ ಎಂಬ ಶುಭದೃಷ್ಟಿ, ಸುಖವಾಗಿದೆ ಎಂಬ ಸುಖದೃಷ್ಟಿ, ಇದು ನಾನೇ ಎಂಬ ಆತ್ಮದೃಷ್ಟಿ, ಇದು ನಿತ್ಯ ಎಂಬ ನಿಚ್ಚ ದಿಟ್ಟಿ ಇವೆಲ್ಲವೂ ಗ್ರಹಿಕೆಯಿಂದಲೇ ಉಂಟಾಗುತ್ತದೆ. ಹಾಗೆಯೇ ಪ್ರಜ್ಞಾದಿಂದ ಅಶುಭಾ, ಅನಿತ್ಯಾ, ದುಃಖ ಮತ್ತು ಅನಾತ್ಮವು ಉಂಟಾಗುತ್ತದೆ.
ಇದು ಅಪ್ಪಟವಾದ ವಿಪಸ್ಸನಾ ಧ್ಯಾನವಾಗಿದೆ. ಇಲ್ಲಿ ಸಮಥದ ಪ್ರವೇಶವಿಲ್ಲವಾಗಿದೆ. ವೇದನಾದಿಂದ ಸನ್ಯಾವು ಉಂಟಾಗುತ್ತದೆ. ಹಾಗೆಯೇ ಸನ್ಯಾದಿಂದ ವೇದನಾವು ಸಹಾ ಉಂಟಾಗುತ್ತದೆ. ಸನ್ಯಾದಿಂದ ಮನೋಕ್ಲೇಶವಾದ ದಿಟ್ಟಿ ಉಂಟಾಗುತ್ತದೆ. ಆದರೆ ವೇದನಾದಿಂದ ಇಚ್ಛೆ ಉಂಟಾಗುತ್ತದೆ. ಈ ಇಚ್ಛೆಯೇ ಎಲ್ಲ ಕರ್ಮಗಳ ಮೂಲವಾಗಿದೆ. ಗ್ರಹಿಕೆ ಮತ್ತು ವೇದನೆಗಳು ಮನಸ್ಸಿಗೆ ಕಾರಣವಾಗಿದೆ ಹಾಗು ಸನ್ಯಾವು ಮಾತ್ರ ಮನಸ್ಸಿನ ಅಂತಿಮ ಸ್ಥಿತಿಯಾಗಿದೆ. ಇಲ್ಲಿ ಮತ್ತೊಮ್ಮೆ ವೇದನಾನುಪಸ್ಸನಾ ಆರಂಭವಾಗಬೇಕಾಗುತ್ತದೆ. ಇಲ್ಲಿ ಆನಂದವೇ ಆಗಿರಲಿ, ಸುಖವೇ ಆಗಿರಲಿ ಅದು ವೇದನೆಯೆಂದು ಪರಿಗಣಿಸಲ್ಪಡುತ್ತದೆ. ಅವುಗಳ ವೀಕ್ಷಣೆ ಇಲ್ಲಿ ಆಗುತ್ತದೆ. ಇಲ್ಲಿ ವೇದನೆಗಳ ಉದಯ, ಸ್ಥಾಪನೆ, ಅಳಿವು ಎಲ್ಲವನ್ನೂ ಸಾಧಕ ಅರಿಯುತ್ತಿರುತ್ತಾನೆ.

8. ಚಿತ್ತ ಸಂಖಾರಗಳನ್ನು ಶಾಂತಗೊಳಿಸುತ್ತ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಆತನು ಸುಶಿಕ್ಷಣ ಪಡೆದು ಸಾಧನೆ ಮಾಡುತ್ತಿರುತ್ತಾನೆ. 

ಇಲ್ಲಿ ಚಿತ್ತ ಸಂಖಾರಗಳಾದ ವೇದನೆ ಮತ್ತು ಗ್ರಹಿಕೆಗಳ ಕಡೆ ಕೇಂದ್ರೀಕರಿಸಿ ಆನಾಪಾನಾಸಾಧನೆ ಮಾಡುತ್ತಿರುತ್ತಾನೆ. ಆತನು ವೇದನೆಗಳಿಗೆ ಅನಿತ್ಯ, ಅತೃಪ್ತಿಕಾರಕ (ದುಃಖ) ಮತ್ತು ಅನಾತ್ಮ (ನಾನು ಅಲ್ಲ) ಕಂಡು ಆನಂದದಿಂದ ಮತ್ತು ಸುಖದಿಂದ ವಿಮುಖವಾಗುತ್ತಾನೆ. ಹಾಗೆಯೇ (ಮಿಥ್ಯಾ) ಸನ್ಯಾದಿಂದ ಅಂದರೆ ಶುಭ (ಸುಂದರ) ನಿತ್ಯ, ಸುಖ ಮತ್ತು ಇದೇ ನನ್ನ ಆತ್ಮ, ಇದೇ ನಾನು, ಇದೇ ನನ್ನದು ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ವೇದನೆಗಳ ಮತ್ತು ಸನ್ಯಾಗಳ ಉದಯ ಹೇಗೆ ಆಗುತ್ತವೆ ಎಂಬುದನ್ನು ಅರಿಯುತ್ತಾನೆ. ಹಾಗೆಯೇ ಅವುಗಳ ಅಪಾಯ ಅರಿಯುತ್ತಾನೆ. ಅವುಗಳಲ್ಲಿ ಆಸಕ್ತಿ ಕ್ಷೀಣಿಸಿ ಅವುಗಳಲ್ಲಿ ಆನಂದಿಸದೆ, ವಿರಾಗಿಯಾಗಿ ವೇದನೆಗಳ ಉದಯವನ್ನೇ ತಡೆದು ಈ ರೀತಿಯಾಗಿ ವೇದನೆಗಳ ಅಂತ್ಯಹಾಡಿ ತ್ಯಜಿಸುತ್ತಾನೆ. ಇರುವ ವೇದನೆಗಳನ್ನು ನಿಲ್ಲಿಸುತ್ತಾನೆ. ಹೊಸದಾಗಿ ವೇದನೆ ಉದಯಿಸದಂತೆ ಮಾಡುತ್ತಾನೆ. ಸಮಚಿತ್ತತೆಯನ್ನು ವೃದ್ಧಿಸಿ ವೇದನಾ ಸಮಚಿತ್ತತೆ ಸಾಧಿಸುತ್ತಾನೆ.

ಆನಾಪಾನಾ ವಿಪಸ್ಸನ ಧ್ಯಾನ Anapana vipasana dhyana

                                     ಆನಾಪಾನಾ ವಿಪಸ್ಸನ ಧ್ಯಾನ 


ಆನಾಪಾನಸತಿ ಸುತ್ತದ ವಿವರಣೆ

ಆನಾಪಾನಾ ಕಾಯಾನುಪಶ್ಶನ :

ಭಿಕ್ಷುಗಳೇ, ಆನಾಪಾನಸತಿ ಸಾಧನೆ ಮಾಡಿದರೆ ಮತ್ತು ವೃದ್ಧಿಸಿದರೆ ಅಕುಶಲ ಚೇತಸಿಕಾಗಳನ್ನೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಮಾಡುತ್ತದೆ. ಆನಾಪಾನಸತಿಯು ಶಾಂತಿಯುತವಾದುದು ಮತ್ತು ಉದಾತ್ತವಾದುದು. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ.
ಆನಾಪಾನಸತಿ ವೃದ್ಧಿಸಿದರೆ ಮತ್ತು ಸಾಧನೆ ಮಾಡಿದರೆ ಎಂದರೆ ಉಸಿರಾಟದ ಜಾಗರೂಕತೆಯಲ್ಲಿರುವ ಧ್ಯಾನ ಅಥವಾ ಉಸಿರಾಟದ ಧ್ಯಾನದಲ್ಲಿರುವ ಜಾಗರೂಕತೆ ಎಂದರ್ಥ. ಇದರಲ್ಲಿ ಪದೇ ಪದೇ ತಲ್ಲೀನನಾಗುವುದು ಎಂದು ಅರ್ಥವಾಗಿದೆ.
ಇದು ವೃದ್ಧಿಸಿದಾಗ ಅಕುಶಲ ಚೇತಿಸಿಕಾಗಳೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಯಾಗುತ್ತದೆ ಅಂದರೆ ಯಾವುದೆಲ್ಲವೂ ಅಕುಶಲ ಪ್ರವೃತ್ತಿಗಳು, ಯೋಚನೆಗಳು ಮತ್ತು ಅಕುಶಲ ಸ್ಥಿತಿಗಳು ಇವೆಯೋ ಒಂದೇಬಾರಿಗೆ ನಾಶಗೊಳ್ಳುತ್ತದೆ, ಸ್ತಬ್ದಗೊಳ್ಳುತ್ತದೆ. ಏಕೆಂದರೆ ಕುಶಲ ಚಿತ್ತಗಳ ಸಮಗ್ರತೆಯ ಪ್ರಶಾಂತತೆ ಅಷ್ಟು ಬಲಿಷ್ಠವಾಗಿರುತ್ತದೆ. ಅಷ್ಟು ಪರಿಣಾಮಕಾರಿಯಾದ ಕ್ರಿಯಾಶೀಲತೆ ಅಲ್ಲಿರುತ್ತದೆ.
ಆನಾಪಾನಸತಿಯು ಶಾಂತವಾದುದು ಮತ್ತು ಉದಾತ್ತವಾದುದು ಎಂದರೆ ಧ್ಯಾನದ ವಸ್ತುವಿನ (ವಿಷಯ) ಅರ್ಥದಲ್ಲಿ ಮತ್ತು ಧ್ಯಾನದ ಪರಿಣಾಮದ ಅರ್ಥದಲ್ಲಿ ಹೇಳಲಾಗಿದೆ. ಅಂದರೆ ಉದಾಹರಣೆಗೆ ಅಶುಭ ಧ್ಯಾನವೇ ತೆಗೆದುಕೊಳ್ಳಿ. ಅಲ್ಲಿ ಧ್ಯಾನದ ವಸ್ತುವು ಅಸಹ್ಯವಾಗಿರುತ್ತದೆ. ಕುರೂಪವಾಗಿರುತ್ತದೆ. ಆದರೆ ಪರಿಣಾಮ ಮಾತ್ರ ಅತ್ಯಂತ ಸುಲಾಭಕಾರಿಯಾಗಿದೆ. ಆದರೆ ಆನಾಪಾನಸತಿಯಲ್ಲಿ ಹಾಗಲ್ಲ, ಇಲ್ಲಿ ಧ್ಯಾನದ ವಿಷಯವು ಮತ್ತು ಪರಿಣಾಮವು ಶಾಂತವಾಗಿಯು ಇದೆ ಮತ್ತು ಉದಾತ್ತವಾಗಿಯು ಇದೆ. ಶಾಂತವೆಂದರೆ ಧ್ಯಾನದ ವಸ್ತುವು ಶಾಂತವಾಗಿ, ಸೂಕ್ಷ್ಮವಾಗಿ, ಸುಂದರವಾಗಿದೆ ಮತ್ತು ಶಾಂತತೆಯನ್ನು ನಿಮರ್ಿಸುತ್ತದೆ. ನಿಬ್ಬಾಣದ ಶಾಂತತೆಗೆ ಸಹಾಯಕಾರಿಯಾಗಿದೆ. ಹಾಗೆಯೇ ಶ್ರೇಷ್ಠ ಪರಿಣಾಮಗಳನ್ನು ನೀಡುವುದರಿಂದಾಗಿ ಉದಾತ್ತವಾಗಿದೆ. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ ಎಂದರೆ ನಿಜಕ್ಕೂ ಕಸಿನಾಗಳಂತೆ ಅಥವಾ ಅಶುಭಾ ಧ್ಯಾನಗಳಂತೆ ಬಾಹ್ಯ ವಸ್ತುವಿನ ಅಗತ್ಯವಿಲ್ಲ. ಇದು ವಿಶೇಷವಾಗಿದೆ. ಯಾವುದೇ ದೇವರ ಜಪವಾಗಲಿ, ರೂಪ ಕಲ್ಪನೆಯಾಗಲಿ ಅಗತ್ಯವಿಲ್ಲ. ಆದ್ದರಿಂದ ಇದು ಅಮಿಶ್ರಿತವಾಗಿದೆ, ವಿಶಿಷ್ಟವಾಗಿದೆ. ಆಹ್ಲಾದಕರ ವಿಹಾರ ಎಂದರೆ ಇದರಿಂದ ದೊರಕುವ ಸಮಾಧಿಯ ಸ್ಥಿತಿಯು ಅತ್ಯಂತ ಆಹ್ಲಾದಕರ ಸುಖಗಳಿಂದ ಕೂಡಿರುವುದರಿಂದಾಗಿ ಅಂತಹುದರಲ್ಲಿ ವಿಹರಿಸುವುದರಿಂದ ಇದನ್ನು ಆಹ್ಲಾದಕರ ವಿಹಾರ ಎಂದು ಹೇಳುತ್ತಾರೆ.
ಇಲ್ಲಿ ಭಿಕ್ಷುವು (ಸಾಧಕ)... ಪದ್ಮಾಸನದಲ್ಲಿ ಆಸೀನನಾಗಿ, ದೇಹವನ್ನು ಸ್ಥಿರವಾಗಿಟ್ಟುಕೊಂಡು, ನೇರವಾಗಿಟ್ಟುಕೊಂಡು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಾನೆ.
ಅಂದರೆ ಇಲ್ಲಿ ಸಾಧಕನು ಪದ್ಮಾಸನದಲ್ಲಿ (ಸುಖಾಸನ) ದೇಹವನ್ನು ನೇರವಾಗಿಟ್ಟು ಒಳ ಉಸಿರು ಮತ್ತು ಹೊರ ಉಸಿರಿನಲ್ಲಿಯೇ ಜಾಗರೂಕತೆಯನ್ನು ಪ್ರತಿಷ್ಠಾಪಿಸಿ ಧ್ಯಾನಿಸುತ್ತಿರುತ್ತಾನೆ ಎಂದರ್ಥ.

ಹಂತ-1 : ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 

ಅಂದರೆ ಇಲ್ಲಿ ಉಸಿರಾಟವು ಸಾಮಾನ್ಯವಾಗಿ ದೀರ್ಘವಾಗಿರಬಹುದು ಅಥವಾ ಓಡಿಬಂದು ಹಾಗೆಯೇ ಧ್ಯಾನಕ್ಕೆ ಕುಳಿತಿದ್ದರೆ ಆಗಲೂ ಉಸಿರಾಟ ದೀರ್ಘವಾಗಿರಬಹುದು ಅಥವ ಗಾಬರಿಯಿಂದ ಉಸಿರಾಟ ದೀರ್ಘವಾಗಿರಬಹುದು. ಅಂದರೆ ಉಸಿರನ್ನು ಕಿಬ್ಬೊಟ್ಟೆಯವರೆಗೆ ತೆಗೆದುಕೊಂಡಾಗ ಅದು ದೀರ್ಘ ಉಸಿರಾಟ ಎನಿಸುತ್ತದೆ. ಒಟ್ಟಿನಲ್ಲಿ ಉಸಿರಾಟ ಈ ರೀತಿಯ ದೀರ್ಘ ಉಸಿರಾಟವಿದ್ದಾಗ ಅದನ್ನು ಹಾಗೆಯೇ ಅದು ಇರುವ ಹಾಗೆ ಯತಾಭೂತವಾಗಿ ಹಾಗೆಯೇ ಅರಿಯುವುದು. ಆದರೆ ಯೋಚಿಸುವ ಹಾಗಿಲ್ಲ.
ಉಸಿರಾಟವು ಮೂಗಿನ ತುದಿಗೆ ಅಥವಾ ಮೇಲ್ತುಟಿಗೆ ಸ್ಪಶರ್ಿಸುತ್ತಿರುತ್ತದೆ. ಅಲ್ಲೇ ಅಬಾಧಿತ ಏಕಾಗ್ರತೆಯನ್ನು ನಿಲ್ಲಿಸಬಹುದು ಅಥವಾ ಕೆಲವು ಸಾಧಕರು ಕಿಬ್ಬೊಟ್ಟೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತಾರೆ. ಪ್ರತಿ ಒಳ ಉಸಿರು ಮತ್ತು ಹೊರ ಉಸಿರಿಗೂ ಕಿಬ್ಬೊಟ್ಟೆ ಏರಿಳಿತ ಮಾಡುತ್ತಿರುತ್ತದೆ. ಅಲ್ಲೂ ಸಹ ಮನಸ್ಸು ಕೇಂದ್ರೀಕರಿಸಬಹುದು. ಆಗ ಉತ್ಸಾಹ ಉಂಟಾಗುತ್ತಿರುತ್ತದೆ. ಆನಂದ ಉಂಟಾಗುತ್ತಿರುತ್ತದೆ. ಅವನ್ನೆಲ್ಲಾ ವೃದ್ಧಿ ಮಾಡಬೇಕು. ಆದರೆ ಮೂಗಿನ ತುದಿ ಅಥವಾ ಕಿಬ್ಬೊಟ್ಟೆ ಎಲ್ಲೇ ಆಗಲಿ ಒಂದುಕಡೆ ಮಾತ್ರ ಏಕಾಗ್ರತೆ ಬೆಳೆಸಬೇಕು. ಎರಡುಕಡೆ ಬೆಳೆಸಿದರೆ, ಮನಸ್ಸು ಚದುರಿ ಅಶಾಂತತೆ ಉಂಟಾಗುತ್ತದೆ. ಮಿಕ್ಕ ಎಲ್ಲಾ ವಿಷಯಗಳಿಂದ ಮನಸ್ಸು ವಿಮುಖಗೊಳಿಸಬೇಕು. ಉಸಿರಾಟದ ಗಮನದ ವಿನಃ ಬೇರಾವ ಯೋಚನೆ ಇರಬಾರದು. ಮುಂದೆ ಸಾಧನೆ ಮುಂದುವರೆದಂತೆ ಜಾಗ್ರತಾ ಸ್ಥಿತಿಯು ಸಹಜವಾಗುತ್ತಾ ಹೋಗುತ್ತದೆ.

ಹಂತ-2 : ಉಸಿರಾಟವು ಕಿರಿದಾಗಿದ್ದಾಗ ನಾನು ಕಿರಿದಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾರೆ. 

ಅಂದರೆ ಇಲ್ಲಿ ಉಸಿರಾಟ ಸಾಮಾನ್ಯವಾಗಿ ಕಿರಿದಾಗಿರಬಹುದು ಅಥವಾ ಇಲ್ಲಿ ಉಸಿರಾಟಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ ಅಥವಾ ಉಸಿರಾಟದ ಗಾತ್ರ ಕಿರಿದಾಗಿರಬಹುದು. ಅಂದರೆ ಬಲವಂತವಾಗಿ ಉಸಿರಾಟವನ್ನು ದೀರ್ಘ ಅಥವಾ ಕಿರಿದಾಗಿ ಮಾಡಬಾರದು. ಈ ರೀತಿ ಕಿರಿದಾಗಿ ಉಸಿರಾಟವು ನಡೆಯುತ್ತಿರುವಾಗ ದೇಹವು ಅತ್ಯಂತ ಸಮತೋಲನವಾಗಿ, ಸ್ಥಿರವಾಗಿರುತ್ತದೆ ಮತ್ತು ಅಲುಗಾಡುವುದಿಲ್ಲ. ಉಸಿರಾಟವನ್ನು ಆಡುತ್ತಿದ್ದರೂ ಸಹ ಅದರ ಚಲನೆಯನ್ನು ಬೇರೆಯವರು ಗಮನಿಸಲು ಆಗುವುದಿಲ್ಲ. ಅಂದರೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ಚಲನೆ ಕಾಣದ ರೀತಿ ನಡೆಯುತ್ತಿರುತ್ತದೆ. ಅದು ಹೇಗೇ ನಡೆಯುತ್ತಿರಲಿ ಅದನ್ನು ಹಾಗೆಯೇ ಗಮನಿಸುತ್ತಿರಬೇಕು. ಈ ಸ್ಥಿತಿಯಲ್ಲಿ ಯೋಚನೆಗಳು ನಿಂತಿರುತ್ತದೆ. ಭೂತಕಾಲದಲ್ಲಿಯಾಗಲಿ ಅಥವಾ ಭವಿಷ್ಯತ್ತಿನಲ್ಲಿ ಆಗಲಿ ಮನಸ್ಸು ಚಲಿಸುವುದಿಲ್ಲ.

ಹಂತ-3 : ಇಡೀ (ಉಸಿರಿನ) ದೇಹವನ್ನು ಅನುಭವಿಸಿ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. 

ಇಡೀ ಉಸಿರಿನ ಕಾಯವನ್ನು ಅನುಭವಿಸಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಸ್ಥಾಪಿಸುತ್ತಾನೆ. ಆತನು ಅತ್ಯಂತ ಜಾಗೃತನು ವಿಶ್ಲೇಷಣೆಯಿಂದ ಕೂಡಿರುತ್ತಾನೆ.  ಉಸಿರನ್ನು ಬಿಟ್ಟು ಬೇರೇನನ್ನು ಯೋಚಿಸಲಾರ, ಗ್ರಹಿಸಲಾರ, ಅರಿಯಲಾರ, ಅನುಭವಿಸಲಾರ. ಆತನು ಕೇವಲ ಉಸಿರಿನಲ್ಲೇ ಗಮನವಿಟ್ಟು ಉಸಿರಿನ ಆದಿ ಅಂತ್ಯ ಮತ್ತು ಮಧ್ಯದ ಪ್ರಕ್ರಿಯೆಯ ಎಲ್ಲವನ್ನು ಅರಿಯುತ್ತಾನೆ. ಉಸಿರು ಮೊದಲು ಮೂಗಿನ ತುದಿಯಲ್ಲಿ ಆರಂಭವಾಗುತ್ತದೆ ಮತ್ತು ನಾಭಿಯ ಬಳಿ ಅಂತಿಮವಾಗುತ್ತದೆ. ಮೂಗು ಮತ್ತು ನಾಭಿಯ ಮಧ್ಯದ ಭಾಗವೇ ಮಧ್ಯ (ಅಥವಾ ಹೃದಯ ಮತ್ತು ಪುಪ್ಪಸ). ಆತ ಮೂಗಿನ ತುದಿ ಮಾತ್ರವಲ್ಲ ಅಥವಾ ಎದೆಯ ಭಾಗ ಮಾತ್ರವಲ್ಲ ಅಥವಾ ನಾಬಿಯ ಭಾಗ ಮಾತ್ರವಲ್ಲ, ಆತ ಈ ಮೂರು ಅವಸ್ಥೆಯಲ್ಲೂ ಅಂದರೆ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿಯೂ ಪೂರ್ಣವಾಗಿ ಪ್ರಕ್ರಿಯೆ ಅರಿಯುತ್ತಾನೆ. ಹೀಗೆ ಆತನು ಉಸಿರಿನ ಕಾಯವನ್ನು ಅನುಭವಿಸಿ ಉಸಿರಾಟದಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾನೆ. ಉದಾಹರಣೆಗೆ ತಾಯಿಯು ಮಗುವನ್ನು ತೊಟ್ಟಿಲಲ್ಲಿ ತೂಗಾಡಿಸುತ್ತಾ ಇರುವಾಗ ಬಹಳ ಜಾಗ್ರತೆಯಿಂದ ಇರುತ್ತಾಳೆ. ಮಗುವು ನಿದ್ರಿಸಿದರೂ ಮತ್ತೆ ಎಚ್ಚರಗೊಂಡಾಗ ಎಲ್ಲಿ ಎದ್ದು ಅಥವಾ ನಿಂತು ತೊಟ್ಟಿಲಿನಿಂದ ಬೀಳುವುದೋ ಎಂದು ಮಮತೆಯಿಂದ ಪೂರ್ಣ ಜಾಗ್ರತೆಯಿಂದ ಕೂಡಿ ಕಾಪಾಡುತ್ತಾಳೆ. ತನ್ನ ಗಮನವೆಲ್ಲಾ ಆ ಮಗುವಿನ ಮೇಲೆಯೇ ಇಟ್ಟಿರುತ್ತಾಳೆ. ಆ ಮಗುವಿನ ತೊಟ್ಟಿಲಿನ ಪ್ರತಿ ಅವಸ್ಥೆಯಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾಳೆ. ಹಾಗೆಯೇ ನಾವು ಸಹ ಉಸಿರಾಟದ ಪ್ರತಿ ಸ್ಥಿತಿಯಲ್ಲೂ ಜಾಗ್ರತೆ ಸ್ಥಾಪಿಸಬೇಕಾಗಿದೆ. ಕಾಯವನ್ನು ಅನುಭವಿಸಿ ಅಂದರೆ ವಿಶಾಲ ಅರ್ಥದಲ್ಲಿ ಇಡೀ ಶರೀರದ ರೂಪಕಾಯದಲ್ಲಿ ಮತ್ತು ನಾಮಕಾಯ (ಮನಸ್ಸು)ದಲ್ಲಿ ಅನುಭವಿಸಿ ಉಸಿರಾಡುತ್ತಿದ್ದೇವೆ ಎಂದರ್ಥವಾಗುತ್ತದೆ. ಆದರೆ ಪರಿಣಿತರು ಕೇವಲ ಉಸಿರಿನ ಕಾಯ ಮಾತ್ರ ಎಂದು ಹೇಳುತ್ತಾರೆ.

4. ಆತನು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. ಹೇಗೆಂದರೆ : ನಾನು ಕಾಯಸಂಖಾರ (ದೇಹದ ಚಟುವಟಿಕೆ)ಗಳನ್ನು ಶಾಂತಗೊಳಿಸುತ್ತ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರ ಬಿಡುತ್ತಿದ್ದೇನೆ.

ಇಲ್ಲಿ ಆತನು ದೇಹದ ಚಟುವಟಿಕೆಗಳನ್ನೆಲ್ಲಾ ಶಾಂತಗೊಳಿಸುತ್ತಾನೆ, ನಿಲ್ಲಿಸುತ್ತಾನೆ. ಸೂಕ್ಷ್ಮಗೊಳಿಸುತ್ತಾನೆ ಮತ್ತು ಪರಿಶುದ್ಧಿಗೊಳಿಸುತ್ತಾನೆ.
ಇಲ್ಲಿ ಶರೀರವು ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ ಮತ್ತು ಯೋಚಿಸದೆ ಇರುವಾಗ ಶರೀರದಲ್ಲಿ ನಾನಾ ವಿಧವಾದ ಕಸಿವಿಸಿ, ಒತ್ತಡ, ಕಠಿಣತೆ, ಕ್ಷೊಭೆ, ನೋವು ನಿಲ್ಲುತ್ತದೆ. ಆತನ ದೃಢನಿಧರ್ಾರದಿಂದ ನೋವು ಎಲ್ಲವನ್ನು ಮೀರಿದ್ದರಿಂದ ಶರೀರವು ಶಾಂತವಾಗುತ್ತದೆ, ಪಳಗುತ್ತದೆ, ಮೆದುವಾಗುತ್ತದೆ ತುಂಬಾ ಸೂಕ್ಷ್ಮವಾಗುತ್ತದೆ. ಹೇಗೆಂದರೆ ಒಬ್ಬ ತಲೆಯ ಮೇಲೆ ಭಾರವನ್ನು ಎತ್ತಿಕೊಂಡು ಓಡುವುದು ಅಥವಾ ಬೆಟ್ಟ ಹತ್ತುವುದು ಮಾಡಿದಾಗ ಆತನ ಉಸಿರು ತಾರಕಕ್ಕೆ ಏರುತ್ತದೆ, ಅತಿಯಾಗುತ್ತದೆ. ಮೂಗಿನ ಹೊಳ್ಳೆಗೆ ಉಸಿರು ಜೋರಾಗಿ ಬೀಸುತ್ತದೆ. ದೇಹವೆಲ್ಲಾ ಕ್ಷೊಭೆಗೆ ಗುರಿಯಾಗಿ ದೇಹದಲ್ಲಿ ಅಶಾಂತತೆ ಮೂಡುತ್ತದೆ. ಆದರೆ ಅದೇ ವ್ಯಕ್ತಿ, ಭಾರವನ್ನು ಬಿಸಾಕಿ, ಓಡುವುದನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತಾ ನಂತರ ಸ್ನಾನವನ್ನು ಮಾಡಿ, ತಂಪಾದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಉಸಿರಾಟವನ್ನು ಗಮನಿಸಿದಾಗ ಉಸಿರಾಟವು ತುಂಬಾ ಶಾಂತವಾಗಿ, ಸೂಕ್ಷ್ಮವಾಗಿ ಗೋಚರಿಸುತ್ತದೆ. ಉಸಿರೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದೇರೀತಿಯ ಅನುಭವವು ಆತನಿಗೆ ಕಾಯದ ಸಂಖಾರಗಳನ್ನು ಸೂಕ್ಷ್ಮಗೊಳಿಸುವುದ ರಿಂದಾಗಿ ಉಂಟಾಗುತ್ತದೆ.
ಕಾಯದ ಸಂಖಾರಗಳನ್ನು ಶಾಂತಗೊಳಿಸುವುದು ಅಥವಾ ಸೂಕ್ಷ್ಮಗೊಳಿಸುವುದು ಹೇಗೆ? ಒಂದು ಸಮಾಧಿಯಿಂದ ಹೇಗೆಂದರೆ ಪಂಚನೀವರಣಗಳನ್ನು ಮೀರುವುದರಿಂದಾಗಿ ನಂತರ ಸಮಾಧಿಯ ಹಂತಗಳನ್ನು ದಾಟುತ್ತಿದ್ದಂತೆ ಹಿಂದಿನದಕ್ಕಿಂತ ಈಗಿನ ಸ್ಥಿತಿಯು ಶಾಂತವಾಗಿ, ಸೂಕ್ಷ್ಮವಾಗಿ ಕಾಣುವುದು. ಇದೇರೀತಿ ಪ್ರತಿಯೊಂದು ಹಂತದಲ್ಲೂ ಮೇಲೆ ಹೋಗುತ್ತಿದ್ದಂತೆ ಹಿಂದಿನ ಹಂತವು ಸ್ಥೂಲವಾಗಿ ಕಾಣುತ್ತದೆ. ಈಗಿನ ಹಂತವು ಶಾಂತವಾಗಿ ಸೂಕ್ಷ್ಮವಾಗಿ ಕಾಣುತ್ತದೆ.
ಮತ್ತೊಂದು ವಿಧಾನವೆಂದರೆ ವಿಪಶ್ಶನ ಧ್ಯಾನದಿಂದ ಅಂದರೆ ವಿಪಶ್ಶನ ಧ್ಯಾನದಲ್ಲಿ ಕಾಯ ಸಂಖಾರಗಳು ಸ್ಥೂಲವಾಗಿ ಕಾಣುತ್ತದೆ. ಧಾತುಗಳು ಸೂಕ್ಷ್ಮವಾಗಿ ಕಾಣುತ್ತದೆ. ಹಾಗೆಯೇ ಅರೂಪ ಸಮಾಧಿಗೆ ಹೋಲಿಸಿದರೆ ರೂಪ ಸಮಾಧಿಯು ಸ್ಥೂಲವಾಗಿರುತ್ತದೆ. ಅರೂಪ ಸಮಾಧಿಯು ಸೂಕ್ಷ್ಮವಾಗಿರುತ್ತದೆ. ಆದರೆ ನಾಮ ರೂಪಗಳನ್ನು ಅರಿಯುತ್ತಿರುವಾಗ ಅರೂಪವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೆಯೇ ತ್ರಿಲಕ್ಷಣವನ್ನು ಅರಿಯುವಾಗ ನಾಮರೂಪದ ವಿಶ್ಲೇಷಣೆಯು ಸ್ಥೂಲವಾಗಿ ಕಂಡುಬರುತ್ತದೆ. ಇದೇರೀತಿ ಸಾಧನೆ ಮುಂದುವರೆಯುತ್ತಿರುತ್ತದೆ.
ಗಾಳಿಯ ಬಗ್ಗೆ, ಉಸಿರಾಟದ ಬಗ್ಗೆ ಜಾಗ್ರತೆಯು ಸ್ಥಾಪಿತವಾಗಿ, ನಿಮಿತ್ತಗಳಲ್ಲಿ ಕೌಶಲ್ಯಹೊಂದಿ ಮತ್ತು ಧ್ಯಾನಂಗಗಳಲ್ಲಿ ಕೌಶಲ್ಯ ಹೊಂದಿ, ಸಮಾಧಿಯಲ್ಲಿ ನೈಪುಣ್ಯತೆ ಪಡೆದು, ಹಂತ ಹಂತವು ಶುದ್ಧಿ ಹೊಂದುತ್ತಾನೆ. ಹಂತಹಂತವು ಸೂಕ್ಷ್ಮಕ್ಕೆ ಏರುತ್ತಾನೆ. ಹೇಗೆಂದರೆ ಗಂಟೆಯ ಶಬ್ದದಂತೆ, ಗಂಟೆಯ ಶಬ್ದವು ಹೊರಹೊಮ್ಮಿದಾಗ ಗಂಟೆಯ ಶಬ್ದ ಕೇಳಿಸುತ್ತದೆ. ನಂತರ ಗಾಳಿಯಲ್ಲಿ ಶಬ್ದದ ಕಂಪನಗಳು ಅಲೆಗಳಿಂದಲೂ ಸೂಕ್ಷ್ಮವಾಗಿ ಗಂಟೆ ನಿಂತ ನಂತರವೂ ಕೇಳಿಸುತ್ತಿರುತ್ತದೆ. ಇದೇರೀತಿ ಸೂಕ್ಷ್ಮವನ್ನು ಅವಲಂಬಿಸಿ ಮತ್ತಷ್ಟು ಅಭಿವೃದ್ಧಿ ಆಗುತ್ತಿರುತ್ತದೆ.
ಆಯ್ಕೆಗಳು :
ಇಲ್ಲಿ ಆತನು ಚತುರ್ಥ ಸಮಾಧಿ ಪ್ರಾಪ್ತಿ ಮಾಡಿ ವಿಪಶ್ಶನ ಧ್ಯಾನ ಮಾಡಬಹುದು ಅಥವಾ ಪ್ರಥಮ ಧ್ಯಾನದ ನಂತರವೇ ವಿಪಶ್ಶನವನ್ನು ಪ್ರಾರಂಭಿಸಬಹುದು. ಅಥವಾ ಅರೂಪ ಸಮಾಧಿಯ ನಂತರವೂ ಪ್ರಾರಂಭಿಸಬಹುದು. ವಿಪಶ್ಶನದ ಪ್ರಾರಂಭಕ್ಕೆ ಯಾವ ಸ್ಥಿತಿಯು ಅಡ್ಡಿಯಿಲ್ಲ. ಆದರೆ ಸಮಥ ಧ್ಯಾನ ಮಾತ್ರ ಪ್ರಾರಂಭದಿಂದಲೇ ಆರಂಭಿಸಬೇಕಾಗುತ್ತದೆ.

ಆನಾಪಾನಾ ಸಮಥ ಧ್ಯಾನ anapana samatha jhana

                                    ಆನಾಪಾನಾ ಸಮಥ ಧ್ಯಾನ


ಆನಾಪಾನಾಕ್ಕೆ ಎಂಟು ಮೆಟ್ಟಿಲುಗಳು :

ಈ ಎಂಟು ಮೆಟ್ಟಿಲುಗಳಲ್ಲಿ ನಾವು ಇಡೀ ಸಾಧನೆಯನ್ನೇ ಅಡಕಗೊಳಿಸಬಹುದು. ಇದರಲ್ಲಿ ಆದಿಯಿಂದ ಅಂತ್ಯದವರೆಗಿನ ಮಾಹಿತಿಯಿದೆ. ಇದರಿಂದಾಗಿ ಧ್ಯಾನ ಸ್ಥಿತಿಗಳಲ್ಲದೆ ಆರಿಯ ಮಾರ್ಗಫಲವು ಸಹಾ ಸಿಗುತ್ತದೆ. ಮೊದಲ ನಾಲ್ಕು ಮೆಟ್ಟಿಲುಗಳು ಝಾನ ಸ್ಥಿತಿಗೆ ಕೊಂಡೊಯ್ಯುತ್ತದೆ ನಂತರದ ನಾಲ್ಕು ಸ್ಥಿತಿಗಳು ಅರಿಯಮಾರ್ಗ ಫಲವನ್ನು ನೀಡುತ್ತದೆ. ಅವು ಹೀಗಿವೆ :
ಸಮಥಾ
1. ಎಣಿಕೆಯ ಸಾಧನೆ (ಗಣನ) : ಕೇವಲ ಉಸಿರಾಟದ ಎಣಿಕೆ
2. ಸಂಬಂಧಿಸುವ ಸಾಧನೆ (ಅನುಬಂಧನ) : ಉಸಿರಾಟದ ಗಮನ
3. ಸಂಪರ್ಕ ಸಾಧನೆ (ಪುಸನಾ) : ಉಸಿರಾಟದ ಸ್ಪಶರ್ಿಸುವಿಕೆ
4. ಸ್ಥಿರಗೊಳ್ಳುವ ಸಾಧನೆ (ಥಾಪನ) : ಧ್ಯಾನ ಪ್ರಾಪ್ತಿ
ವಿಪಶ್ಶನಾ
5. ಅರಿಯುವಿಕೆಯ ಸಾಧನೆ (ಸಲ್ಲಕ್ಖಣ) : ವಿಪಶ್ಶನದ ಆರಂಭ
6. ವಿಮುಖವಾಗುವ ಸಾಧನೆ (ವಿವಟ್ಠನಾ) : ಮಾರ್ಗದಲ್ಲಿ ನೆಲಸುವಿಕೆ
7. ಪರಿಶುದ್ಧಿಯಾಗುವ ಸಾಧನೆ (ಪರಿಶುದ್ಧಿ) : ಫಲಪ್ರಾಪ್ತಿ
8. ಪುನರ್ ಅವಲೋಕನ ಸಾಧನೆ (ಪಟಿಪಸ್ಸನಾ) : ಪುನರ್ ವೀಕ್ಷಣೆ

ಅನಾಪಾನ ಸಮಥ ಧ್ಯಾನ :

1. ಎಣಿಕೆ (ಗಣನೆ) : 

ಯೋಚನೆಗಳ ತಡೆಯನ್ನು ಮೀರಲು ಸುಲಭವಾದ ಕ್ರಮವಿದು.  ಇಲ್ಲಿ ಸಾಧಕನು ಉಸಿರಾಟವು ಸ್ಪರ್ಶವಾದೊಡನೆಯೆ ಒಂದು ಎಂದು ಎಣಿಕೆ ಮಾಡುತ್ತಾನೆ. ಹೀಗೆಯೇ ಪ್ರತಿ ಉಸಿರಾಟದ ಸ್ಪರ್ಶದಲ್ಲಿ ಎಣಿಕೆ ಮಾಡುತ್ತಾನೆ. ಆದರೆ ಸಂಖ್ಯೆ 10ನ್ನು ಮೀರಬಾರದು. ಹಾಗಾದರೆ ಅನಾಪಾನಾ ಸ್ಮೃತಿಯು ಭಂಗವಾಗುತ್ತದೆ. ಉಸಿರಾಟದ ಧ್ಯಾನದಲ್ಲಿ ಹಿಡಿತ ಸಿಕ್ಕೊಡನೆ ಆತನು ಎಣಿಸುವುದನ್ನು ನಿಲ್ಲಿಸಬೇಕು. ಕೇವಲ ಉಸಿರಾಟದಲ್ಲಿ ಗಮನವನ್ನು ಕೇಂದ್ರೀಕರಿಸಬೇಕು.

2. ಸಂಬಂಧಿಸುವ ಸಾಧನೆ (ಅನುಬಂಧನ) :

 ಅನುಬಂಧನವೆಂದರೆ ಉಸಿರಾಟದಲ್ಲಿ ತಡೆರಹಿತ ಗಮನ ನೀಡುವಿಕೆ ಆಗಿದೆ. ಇಲ್ಲಿ ಒಳ ಉಸಿರಾಟವು ಮೂಗಿನಿಂದ ಆರಂಭವಾಗುತ್ತದೆ. ಹೃದಯದಲ್ಲಿ ಇದರ ಮಧ್ಯಾವಸ್ಥೆ ಇರುತ್ತದೆ. ಕಿಬ್ಬೊಟ್ಟೆಯಲ್ಲಿ ಇದರ ಅಂತ್ಯವಾಗುತ್ತದೆ. ಹಾಗೆಯೇ ಹೊರ ಉಸಿರಾಟವು ಕಿಬ್ಬೊಟ್ಟೆಯಿಂದ ಆರಂಭವಾಗಿ, ಹೃದಯದಲ್ಲಿ ಮಧ್ಯಾವಸ್ಥೆ ಇದ್ದು ಮೂಗಿನಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಎಲ್ಲಾ ಅವಸ್ಥೆಯಲ್ಲಿ ಕೇಂದ್ರೀಕೃತಗೊಳಿಸಿದರೆ ಮನವು ಚದುರಿಹೋಗುತ್ತದೆ.
ಆಗ ಮನಸ್ಸು ಕ್ಷೊಭೆಗೆ ಒಳಗಾಗುತ್ತದೆ. ಆದ್ದರಿಂದ ಎಲ್ಲಿ ಉಸಿರಾಟ ಸ್ಪರ್ಶವಾಗುತ್ತದೋ ಅಲ್ಲೇ ಎಣಿಕೆ ಮಾಡಬೇಕು. ಹಾಗೆಯೇ ಅನುಬಂಧವು ಸಹಾ ಅದೇ ಸ್ಥಳದಲ್ಲಿ ಆಗಬೇಕು. ಆಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದರೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಬೇಕು.

3. ಸಂಪರ್ಕ ಸಾಧನೆ (ಪುಸಣ) : 

ಇಲ್ಲಿ ಉಸಿರಾಟದ ಸ್ಪರ್ಶವಾಗುವ ಕಡೆ ಸಂಪರ್ಕ ಏರ್ಪಟ್ಟಿರಬೇಕು. ಅಂದರೆ ಮೂಗಿನ ತುದಿಯಲ್ಲಿ ಅಥವಾ ಮೇಲ್ತುಟಿಯ ಭಾಗದಲ್ಲಿ ಕೆಲವೊಂದು ಸಾಧಕರು ಕಿಬ್ಬೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತಗೊಳಿಸುತ್ತಾರೆ. ಆದರೆ ಬಹುಪಾಲು ಸಾಧಕರು ಮೂಗಿನ ತುದಿಯಲ್ಲಿ ಕೇಂದ್ರೀಕೃತಗೊಳಿಸುತ್ತಾರೆ. ಎಲ್ಲೇ ಆಗಲಿ, ಆ ಒಂದು ಸ್ಥಳದಲ್ಲೇ ಕೇಂದ್ರೀಕೃತಗೊಳಿಸಬೇಕು. ಹೇಗೆಂದರೆ ದ್ವಾರಪಾಲಕನಂತೆ, ದ್ವಾರಪಾಲಕನು ಯಾರು ಒಳಹೊಕ್ಕರು ಅಥವಾ ಯಾರು ಹೊರಬಂದರು ಎಂದು ಗಮನ ನೀಡುತ್ತಲೇ ಇರುತ್ತಾರೆ. ಅದೇ ರೀತಿಯಲ್ಲಿ ನಾವು ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಅಂದರೆ ಅದು ಸಂಪಕರ್ಿಸುವಲ್ಲೇ ಗಮನ ನೀಡಬೇಕು. ಹೇಗೆಂದರೆ ಗರಗಸದ ಉದಾಹರಣೆಯಂತೆ. ಒಂದು ಮರದ ತುಂಡನ್ನು ಸಮನಾದ ನೆಲದಲ್ಲಿಟ್ಟು ಆ ಕಡೆ ಈ ಕಡೆ ಗರಗಸದಿಂದ ಕೊಯ್ಯುತ್ತಾರೆ. ಆಗ ಅವರ ಗಮನ ಮರದ ತುಂಡಿನ ಮೇಲೆ ಇರುವುದಿಲ್ಲ. ಹಾಗೆಯೇ ಗರಗಸದ ಮೇಲೆಯೂ ಇರುವುದಿಲ್ಲ. ಕೇವಲ ಗರಗಸವು ಮರದ ತುಂಡನ್ನು ಕತ್ತಿರಿಸುತ್ತಿರುವ ಭಾಗದಲ್ಲಿ ಮಾತ್ರ ನೆಲೆಸಿರುತ್ತದೆ. ಹಾಗೆಯೇ ಸಾಧಕನು ಒಳ ಉಸಿರಿನಲ್ಲಿ ಆಗಲಿ ಅಥವಾ ಹೊರ ಉಸಿರಿನಲ್ಲಿ ಆಗಲಿ ಕೇಂದ್ರೀಕರಿಸದೆ ಉಸಿರುಗಳು ಸ್ಪಶರ್ಿಸುತ್ತಿರುವ ಭಾಗದಲ್ಲಿ ಮಾತ್ರ ಚಿತ್ತವನ್ನು ಕೇಂದ್ರೀಕೃತಗೊಳಿಸುತ್ತಾನೆ.
ಹಾಗೆಯೇ ಆತನು ಯೋಗ್ಯ ಜಾಗರೂಕತೆಯಿಂದಿರುತ್ತಾನೆ, ಯೋಗ್ಯ ಏಕಾಗ್ರತೆಯಿಲ್ಲಿರುತ್ತಾನೆ ಮತ್ತು ಯೋಗ್ಯ ಶ್ರಮವನ್ನು ಪಡುತ್ತಿರುತ್ತಾನೆ. ಹೇಗೆಂದರೆ ಯಾವುದೇ ಯೋಚನೆಗಳನ್ನು ಆತನು ಮಾಡುವುದಿಲ್ಲ. ಹೀಗಾಗಿ ಆತನಿಗೆ ತಡೆಗಳಾವುವು ಇಲ್ಲದೆ ಪಂಚ ನೀವರಣಗಳು ಕ್ಷಯಿಸಿ ಹೋಗುತ್ತದೆ. ತಾತ್ಕಾಲಿಕವಾಗಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಆತನ ಧ್ಯಾನಾಂಗಗಳು ಹರಿತವಾಗುತ್ತದೆ. ಆಗ ಆತನಲ್ಲಿ ಪಂಚನೀವರಣಗಳಾದ ಬೋಗಾಭಿಲಾಷೆ, ದ್ವೇಷ, ಸೋಮಾರಿತನ, ಅವಿಶ್ರಾಂತಿ, ಪಶ್ಚಾತ್ತಾಪ ಮತ್ತು ಸಂದೇಹ ಗಳಿಂದ ಮುಕ್ತನಾಗುತ್ತಾನೆ. ಹಾಗೆಯೇ ಧ್ಯಾನಾಂಗಗಳಿಂದ ಕೂಡಿರುತ್ತಾನೆ. ಧ್ಯಾನಂಗಗಳೆಂದರೆ ವಿತರ್ಕ, ವಿಚಾರ, ಪ್ರೀತಿ, ಸುಖ ಮತ್ತು ಏಕಾಗ್ರತೆ. ಈಗ ವಿವರವಾಗಿ..
.

                                     5 ಧ್ಯಾನಂಗಗಳು : 

ವಿತಕ್ಕ :

 ಸಮಾನ್ಯವಾಗಿ ವಿತರ್ಕವೆಂದರೆ ಯೋಚಿಸುವುದು, ನಿರ್ಧರಿಸುವುದು ಎಂತಿದೆ. ಆದರೆ ಇಲ್ಲಿ ಆ ಪದಕ್ಕೆ ಬೇರೆಯೇ ಅರ್ಥವಿದೆ. ಇಲ್ಲಿ ವಿತಕ್ಕ (ವಿತರ್ಕ)ವೆಂದರೆ ಧ್ಯಾನದ ವಿಷಯಕ್ಕೆ (ಉಸಿರಾಟದಲ್ಲಿ) ಸಮೀಪ ಗಮನ ನೀಡುವಿಕೆ ಅಂದರೆ ಗಮನವನ್ನು ಕೇಂದ್ರೀಕರಿಸುವಿಕೆ. ಉಸಿರಾಟದ ಎಣಿಕೆಯಲ್ಲಿ ಮತ್ತು ಸಂಬಂಧ ಏಪರ್ಾಟು ಆಗುವಲ್ಲಿ ವಿತಕ್ಕವು ಅಷ್ಟಾಗಿ ಬೆಳವಣಿಗೆ ಹೊಂದಿರುವುದಿಲ್ಲ, ಆದರೆ ಸಂಪರ್ಕ ಮತ್ತು ಸ್ಥಿರತೆಯ ಹಂತದಲ್ಲಿ ವಿತಕ್ಕವು ಪೂರ್ಣವಾಗಿ ಅಭಿವೃದ್ಧಿ ಹೊಂದಿರುತ್ತದೆ.

ವಿಚಾರ : 

ವಿಚಾರಕ್ಕೆ ಸಾಮಾನ್ಯ ಅರ್ಥ ಶೋಧನೆ. ತರ್ಕ ವಿಶ್ಲೇಷಣೆಯಿದ್ದರೂ ಇಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ. ಅಂದರೆ ಧ್ಯಾನ ವಿಷಯದಲ್ಲಿ (ಉಸಿರಾಟದಲ್ಲಿ) ಆಳವಾಗಿ ಅರಿಯುವಿಕೆ ಮತ್ತು ಹರಿಯುವಿಕೆ, ವಿತಕ್ಕ ಮತ್ತು ವಿಚಾರವು ಜೊತೆಯಲ್ಲಿಯೇ ಇರುತ್ತದೆ. ಉದಾಹರಣೆಗೆ : ವಿತರ್ಕವು ಚಿತ್ತವನ್ನು ನೋಡಿದರೆ ವಿಚಾರವು ನೋಡುವಷ್ಟೇ ಅಲ್ಲದೆ ಅರಿಯುವ ಕೆಲಸವು ಮಾಡುತ್ತದೆ, ವಿತರ್ಕವು ಭೂಮಿಗೆ ಸ್ಪಶರ್ಿಸುವ ಮಳೆಯ ಹನಿಗಳಾದರೆ, ವಿಚಾರವು ಆ ನೀರನ್ನು ಹೀರುವ ನೆಲವಾಗುತ್ತದೆ. ಒಂದು ದುಂಬಿಯು ಹೂವಿನ ಹತ್ತಿರ ಹೋಗುವಿಕೆ ವಿತರ್ಕವಾದರೆ, ಆ ಹೂವಿನ ಸುತ್ತಲು ತಿರುಗಾಡುವುದು ವಿಚಾರವಾಗುತ್ತದೆ. ಗಂಟೆಯ ಶಬ್ದವು ವಿತರ್ಕವಾದರೆ, ನಂತರದ ಪ್ರತಿಧ್ವನಿ ವಿಚಾರವಾಗುತ್ತದೆ. ಪಕ್ಷಿಯೊಂದು ಬಂಡೆಯಿಂದ ಹಾರಿದಾಗ ವಿತರ್ಕವಾಗುತ್ತದೆ ನಂತರ ದಿಕ್ಕಿನತ್ತ ನಿರಂತರ ಹಾರುವಿಕೆ ವಿಚಾರವಾಗುತ್ತದೆ. ಹೀಗಾಗಿ ವಿತರ್ಕವೆಂದರೆ ಕೇಂದ್ರೀಕೃತಗೊಳಿಸುವಿಕೆ ಮತ್ತು ವಿಚಾರವೆಂದರೆ ನಿರಂತರ ಮುಂದುವರೆಯುವಿಕೆ, ಹರಿಯುವಿಕೆ ಆಗಿದೆ.

ಪೀತಿ (ಆನಂದ) : 

ಪೀತಿ ಎಂದರೆ ಆನಂದ ಎಂದರ್ಥ. ಆದರೆ ಈ ಆನಂದವು ಇಂದ್ರೀಯ ಸುಖಗಳ ಆನಂದಕ್ಕಿಂತ ವಿಭಿನ್ನವಾದುದು ಹಾಗು ಶ್ರೇಷ್ಠವಾದುದು, ಮೀರಿದುದು ಆಗಿದೆ. ಈ ಪೀತಿಯು ಚೇತಸಿಕಾಗಳಲ್ಲಿ ಒಂದಾಗಿದೆ. ಯಶಸ್ಸಿನ ನಂತರದ ಆನಂದ ಅನುಭೂತಿಯಾಗಿದೆ. ಆನಂದವು ಉದಯಿಸಿದಾಗ ಕೂದಲು ಎದ್ದಿರುತ್ತದೆ. ಮಿಂಚಿನಂತೆ ಉದಯಿಸುವ ಕ್ಷಣಿಕ ಆನಂದವು ಇರುತ್ತದೆ. ದೇಹದಲ್ಲಿ ಎಣ್ಣೆಯು ಹರಿಯುವ ರೀತಿ ಪ್ರವಹಿಸುವ ಆನಂದವು ಇರುತ್ತದೆ. ವೇಗವಾಗಿ ಹರಿದು ದೀರ್ಘಕಾಲ ಇರುವಂತಹ ಆನಂದ ಇರುತ್ತದೆ. ಆದರೆ ಇಲ್ಲಿ ಅತ್ಯಂತ ರಭಸವಾಗಿ ಬೀಳುವ ಮಳೆಯಂತೆ ಇರುವ ಆನಂದವಾಗಿರುತ್ತದೆ. ಇದರಿಂದಾಗಿಯೇ ಪ್ರಥಮ ಸಮಾಧಿ ಸಿಗುವುದು.

ಸುಖ (ದಿವ್ಯ ಸುಖ/ಶಾಂತತೆ) :

 ನಾವು ನಿಜವಾದ ದಿವ್ಯ ಸುಖವನ್ನು ಅನುಭವಿಸಿಯೇ ಇಲ್ಲ. ಇದು ಸಿಗುವುದು ಪಂಚ ನೀವರಣಗಳು ನಾಶವಾದ ನಂತರವೇ. ಆದ್ದರಿಂದ ನಾವು ಇದನ್ನು ಕ್ಷಣಿಕವಾಗಿ ಅನುಭವಿಸುತ್ತಿದ್ದೇವೆ. ಯಾವಾಗ ಮನಸ್ಸು ನೀವಾರಣಗಳಿಂದ ಮುಕ್ತವಾಗಿ ಏಕಾಂತತೆ ತಾಳುವುದೋ ಆಗ ಸುಖವು ನೆಲಸುತ್ತದೆ. ನಾವು ಸುಖವನ್ನು ಅನುಭವಿಸಿದಾಗ ಮಾತ್ರ ಆನಂದಕ್ಕೂ ಮತ್ತು ದಿವ್ಯಸುಖಕ್ಕೂ ವ್ಯತ್ಯಾಸ ತಿಳಿಯಬಲ್ಲೆವು. ಪೀತಿ (ಆನಂದ) ಮತ್ತು ಸುಖ (ದಿವ್ಯ ಸುಖ/ಶಾಂತತೆ) ಇವು ಸಹಾ ಜೊತೆಯೇ ಇರುತ್ತದೆ. ಹೇಗೆಂದರೆ ತೇಲುವಿಕೆ ಪೀತಿಯಾದರೆ ನೆಮ್ಮದಿಯು ಸುಖವಾಗಿರುತ್ತದೆ. ಮನಶ್ಶಾಂತಿಯು ಪೀತಿಯಾದರೆ ಏಕಾಗ್ರತೆಯು ಸುಖವಾಗಿರುತ್ತದೆ. ಪೀತಿಯ ಸ್ಥೂಲವಾಗಿದ್ದರೆ ಸುಖವು ಸೂಕ್ಷ್ಮವಾಗಿರುತ್ತದೆ. ಪೀತಿಯು ಸಂಖಾರಗಳಲ್ಲಿ ಒಂದಾದರೆ ಆನಂದವು ವೇದನೆಗಳಲ್ಲಿ ಒಂದಾಗಿದೆ. ಎಲ್ಲಿ ಪೀತಿ (ಆನಂದ) ಬರುತ್ತದೆಯೋ ಅಲ್ಲೆಲ್ಲಾ ಸುಖವಿರುತ್ತದೆ. ಆದರೆ ಸುಖವಿರುವೆಡೆಯಲ್ಲಿ ಆನಂದ (ಪೀತಿ) ಇರಬಹುದು ಅಥವಾ ಇಲ್ಲದೆ ಹೋಗಬಹುದು.

ಏಕಾಗ್ಗತಾ (ಏಕಾಗ್ರತೆ) : 

ಇದನ್ನು ಚಿತ್ತ ಏಕಾಗ್ರತೆಯೆಂದು ಕರೆಯುತ್ತಾರೆ. ಇಲ್ಲಿ ಮನಸ್ಸು ಒಂದೇ ವಿಷಯದ ಮೇಲೆ (ಉಸಿರಾಟ) ನೆಲೆಸಿರುತ್ತದೆ, ಸ್ಥಾಪಿತವಾಗಿರುತ್ತದೆ. ಅಲ್ಲೇ ಕೇಂದ್ರಿಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸ್ಸು ಒಂದು ವಿಷಯದಿಂದ, ವಿಷಯಕ್ಕೆ ಹಾರುತ್ತಿರುತ್ತದೆ. ಪರಿವರ್ತನೆಯಾಗುತ್ತಲೆ ಇರುತ್ತದೆ. ಆದರೆ ಸುಶಿಕ್ಷಣದಿಂದ ಇಲ್ಲಿ ಮನಸ್ಸನ್ನು ಏಕ ವಿಷಯದ (ಉಸಿರಾಟದ) ಮೇಲೆ ನಿಲ್ಲಿಸಿ, ಕೇಂದ್ರೀಕೃತಗೊಳಿಸಿ, ಹರಿಸಿ, ನೆಲೆಸಿ, ಸ್ಥಾಪಿಸಿ ದೀರ್ಘಕಾಲ ಇರುತ್ತೇವೆ. ಇಲ್ಲಿ ಮನಸ್ಸು ಸ್ಥಿರವಾಗಿ, ದೃಢವಾಗಿ ಸುಸ್ಥಾಪಿತವಾಗಿರುತ್ತದೆ.
ಈ ಐದು ಅಂಗಗಳು ಒಟ್ಟಾಗಿ ಸೇರಿದಾಗ, ಪರಸ್ಪರ ಅವಲಂಬನೆಯಿಂದ ಬಲಿಷ್ಠವಾದಾಗ ಏಕ ಕಾರ್ಯಕ್ಕೆ ಕ್ರಿಯಾಶೀಲವಾದಾಗ, ಕುಶಲ ಸ್ಥಿತಿಗಳ ಸಮಗ್ರತೆಯಾದಾಗ ಪ್ರಥಮ ಸಮಾಧಿಗೆ ಸಮೀಪವಾದ ಸಾಮಿಪ್ಯ ಸಮಾಧಿಗೆ ದಾರಿ ಮಾಡಿಕೊಡುತ್ತದೆ. ಈ ಐದು ಅಂಗಗಳು ಎಳೆಗಳಿಂದ ದೊಡ್ಡ ಹಗ್ಗವಾದಂತೆ, ಸ್ಥಂಬಗಳಿಂದ ಕಟ್ಟಡವಿದ್ದಂತೆ, ಈ ಧ್ಯಾನದ ಅಂಗಗಳಿಂದ ಪ್ರಥಮ ಸಮಾಧಿಯು ಲಭಿಸುವುದು.
ಈ ಧ್ಯಾನಾಂಗಗಳು ಪಂಚ ನೀವರಣಗಳಿಗೆ ವಿರುದ್ಧವಾಗಿದೆ. ಯಾವಾಗ ವಿತಕ್ಕವು ಉಸಿರಾಟದಲ್ಲಿ (ಧ್ಯಾನ ವಿಷಯದಲ್ಲಿ) ಕೇಂದ್ರೀಕೃತವಾಗುವುದೋ ಆಗ ಉದ್ದಚ್ಚ (ಅವಿಶ್ರಾಂತಿ) ಮತ್ತು ಕುಕ್ಕುಚ್ಚ (ಚಿಂತೆ, ಪಶ್ಚಾತ್ತಾಪ) ಉದಯಿಸುವುದಿಲ್ಲ ಹಾಗು ಇರುವುದಿಲ್ಲ. ಹಾಗೆಯೇ ವಿಚಾರ (ಹರಿಯುವಿಕೆ)ವು ಕ್ರಿಯಾಬದ್ಧವಾಗಿರುವಾಗ ಸಂಶಯವು ತಾತ್ಕಾಲಿಕವಾಗಿ ನಿಲ್ಲುತ್ತದೆ, ಉದಯಿಸುವುದಿಲ್ಲ, ಇದರಂತೆಯೇ ಪೀತಿ (ಆನಂದ) ಮತ್ತು ಸುಖ (ದಿವ್ಯಸುಖ) ಇದ್ದಾಗ ದ್ವೇಷ ಬೇಸರವಾಗಲಿ, ಜಡತೆ ಸೋಮಾರಿತನವಾಗಲಿ ಇರುವುದಿಲ್ಲ, ಅವೆಲ್ಲವೂ ನಾಶವಾಗುತ್ತದೆ. ಹಾಗೆಯೇ ಏಕಾಗ್ರತೆಯು ನೆಲೆಸಿ ಪೀತಿ, ಸುಖ ಲಭಿಸುತ್ತಿದ್ದಂತೆ ಬೋಗಾಭಿಲಾಷೆಯು ನಾಶವಾಗಿ ಯಾವುದೇ ಪ್ರಾಪಂಚಿಕ ಬಯಕೆಗಳು, ಆನಂದವು ಇರುವುದಿಲ್ಲ. ಹೇಗೆ ಬೆಳಕು, ಕತ್ತಲೆಗಳು ಒಟ್ಟಿಗೆ ಇರಲಾರವೋ ಹಾಗೆಯೇ ಧ್ಯಾನಾಂಗಗಳ ಅಸ್ತಿತ್ವದಿಂದ ಐದು ನೀವರಣಗಳು ನಾಶವಾಗುತ್ತದೆ. ಆಗ ಆತನಿಗೆ ಸಾಲದಿಂದ ಮುಕ್ತವಾದಂತೆ, ರೋಗದಿಂದ ಮುಕ್ತನಾದಂತೆ, ಕಾರಾಗೃಹದಿಂದ  ಮುಕ್ತನಾದಂತೆ, ಗುಲಾಮಗಿರಿಯಿಂದ ಮುಕ್ತನಾದಂತೆ ಮರಳುಗಾಡಿನ ಅಥವಾ ಕಾಡಿನಿಂದ ದಾರಿತಪ್ಪಿ ಮತ್ತೆ ಯೋಗ್ಯ ಪಥದಲ್ಲಿ ಬಂದಂತಹ ಆನಂದ ಪಡೆಯುತ್ತಾನೆ.

ನಿಮಿತ್ತ (ಚಿಹ್ನೆ)ಗಳು :

ನಿಮಿತ್ತಗಳು 3 ವಿಧದಿಂದ ಕೂಡಿವೆ.
1. ಪರಿಕಮ್ಮ ನಿಮಿತ್ತ (ಪ್ರಾಥಮಿಕ ಚಿಹ್ನೆ)
2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ)
3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ)

1. ಪರಿಕಮ್ಮ ನಿಮಿತ್ತ :

 ಇಲ್ಲಿ ಉಸಿರಾಟವೇ ಪರಿಕಮ್ಮ (ಪ್ರಾಥಮಿಕ ಚಿಹ್ನೆಯಾಗಿದೆ), ನಿಮಿತ್ತವಾಗಿದೆ. ಅಂದರೆ ಧ್ಯಾನ ವಸ್ತು (ವಿಷಯ)ವೇ ಪ್ರಾಥಮಿಕ ಚಿಹ್ನೆಯಾಗಿರುತ್ತದೆ. ಇಲ್ಲಿ ಉಸಿರಾಟದಲ್ಲಿ ಚಿತ್ತವು ನೆಲೆಸುವುದರಿಂದ ಇಲ್ಲಿ ಉಸಿರಾಟದ ಮೇಲಿನ ಜಾಗ್ರತೆಯೇ ಪರಿಕಮ್ಮ ನಿಮಿತ್ತ ಆಗಿರುತ್ತದೆ.

2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ) : 

ಯಾವಾಗ ಚಿತ್ತವು ಉಸಿರಾಟದಲ್ಲಿ ನೆಲಸುವುದೋ ಆಗ ಏಕಾಗ್ರತೆಯೂ ಹರಿತವಾಗಿ, ಸ್ಥಿರವಾಗಿ ಸ್ಥಾಪಿಸಲ್ಪಡುತ್ತದೆ. ಉಸಿರಾಟವು ಮೂಗಿನ ಅಥವಾ ಮೇಲ್ತುಟಿಯ ಚರ್ಮದಲ್ಲಿ ಸ್ಥಾಪಿಸಲ್ಪಡುತ್ತದೆ. ದೀರ್ಘಕಾಲ ಅಭಾದಿತ, ನಿವರ್ಿಘ್ನ ಏಕಾಗ್ರತೆಯಿಂದ ದೇಹವು ಶಾಂತವಾಗುತ್ತದೆ. ಉಸಿರಾಟವು ಒಂದೇ ಗತಿಯಲ್ಲಿ ನಡೆಯುತ್ತಿರುತ್ತದೆ. ಅವಿಶ್ರಾಂತಿ ಶಾಂತವಾಗುತ್ತದೆ. ದೇಹವು ವಿಶ್ರಾಂತತೆಯನ್ನು, ಮಣಿಯುವಂತಹ ಮೆದುತನದ ಅನುಭವ ಪಡೆಯುತ್ತದೆ. ನೋವು, ಒತ್ತಡ, ಅವಿಶ್ರಾಂತತೆಯಿಂದ ಮುಕ್ತತೆ ಪಡೆದಾಗ, ಉಸಿರಾಟವು ಅತ್ಯಂತ ಸೂಕ್ಷ್ಮವಾಗಿ ನಡೆಯುತ್ತಿರುತ್ತದೆ. ಆಗ ದೇಹವು ಹಗುರತನದ ಅನುಭೂತಿಯನ್ನು ಪಡೆಯುತ್ತದೆ. ದೇಹವು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಗಂಟೆಯ ಶಬ್ದವು ಬಂದಾಗ ಆ ಶಬ್ದವು ಅಳಿದು ಅಲೆಗಳ ಕಂಪನ ಶಬ್ದವು ಸೂಕ್ಷ್ಮವಾಗಿ ಕೇಳಿದಂತೆ ಸೂಕ್ಷ್ಮವಾದ ಉಸಿರಾಟದ ಅನುಭವವು ಲಭಿಸುತ್ತದೆ. ಉಸಿರಾಟ ಒಂದು ಕ್ಷಣ ನಿಲ್ಲಿಸಿದರೂ ಉಸಿರಾಟ ನಡೆದಂತೆ ಭಾಸವಾಗುತ್ತದೆ. ಮೂಗು ಅಥವಾ ತುಟಿಯ ಚರ್ಮದ ಮೇಲೆ ಅಂತಹುದೆ ಸಂವೇದನೆ ಸಿಗುತ್ತದೆ. ಗೋಪಾಲಕನು ಹಸುಗಳನ್ನು ಮೇಯಿಸಲು ಹೋದಾಗ ಅದರ ಪಾಡಿಗೆ ಅದನ್ನು ಬಿಟ್ಟುಬಿಡುತ್ತಾನೆ. ಆದರೂ ಅವು ಎಲ್ಲೇ ಮೇಯಲಿ, ನೀರು ಕುಡಿಯಲು ಒಂದೇ ಸ್ಥಳಕ್ಕೆ ಬರುತ್ತದೆ. ಅಲ್ಲೇ ಗೋಪಾಲಕನು ಅವನ್ನು ಹಿಡಿಯುತ್ತಾನೆ. ಅದೇರೀತಿಯಲ್ಲಿ ಒಳ ಉಸಿರು ಮತ್ತು ಹೊರ ಉಸಿರು ಸಂಪರ್ಕವಾಗುವ ಸ್ಥಳದ ಸಂವೇದನೆ, ಗಾಳಿಯ ಸಂವೇದನೆಯಲ್ಲಿ ಮನಸ್ಸು ಸ್ವಾಭಾವಿಕವಾಗಿ ನೆಲೆಸುತ್ತದೆ. ಇದೇ ಉಗ್ಗಹ ನಿಮಿತ್ತವಾಗಿದೆ.

3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) : 

ಹೀಗೆ ಸಾಧನೆ ಮಾಡುತ್ತಿರುವಾಗ ಅಲೌಕಿಕ ಅನುಭವಗಳಾಗುತ್ತದೆ. ಅದೇ ಈ ಪಟಿಭಾಗ ನಿಮಿತ್ತ. ಅದೆಂದರೆ ಆತನಿಗೆ ಚಿಹ್ನೆಗಳು (ನಿಮಿತ್ತ) ಗೋಚರವಾಗುತ್ತದೆ. ಆದರೆ ಆ ಚಿಹ್ನೆಗಳು ಎಲ್ಲರಿಗೂ ಒಂದೇರೀತಿಯಾಗಿ ಕಾಣಿಸುವುದಿಲ್ಲ ಅಥವಾ ಸ್ಪರ್ಶವಾಗುವುದಿಲ್ಲ ಅಥವಾ ಅನುಭೂತಿಯಾಗುವುದಿಲ್ಲ.
ಇಲ್ಲಿ ಆಗುವಂತಹ ಅನುಭವಗಳೆಂದರೆ ಹತ್ತಿಯ ಸ್ಪರ್ಶದಂತಹ ಅನುಭವ ಅಥವಾ ರೇಷ್ಮೆಯ ಹತ್ತಿಯಂತಹ ಸ್ಪರ್ಶದ ಅನುಭವ ಅಥವಾ ಗಾಳಿಯ ಹೊಡೆತದಂತಹ ಅನುಭವವಾಗುತ್ತದೆ. ಎಳೆತ, ಸೆಳೆತದಂತಹ ಅನುಭವ ಅಥವಾ ಕೆಲವರಿಗೆ ನಕ್ಷತ್ರ ಅಥವಾ ರತ್ನಗಳ ಗುಂಪಿನಂತೆ, ಮುತ್ತಿನ ಗುಂಪಿನಂತೆ ಅಥವಾ ಹತ್ತಿಯ ಬೀಜದ ಸ್ಪರ್ಶದಂತೆ, ಉಲ್ಲಾಸಯುತ ಗಾಳಿಯ ಸ್ಪರ್ಶದಂತೆ ಅಥವಾ ಕಾಂಡದ ಚೂಪಿನ ಸ್ಪರ್ಶದಂತೆ, ತಂತಿಗಳ ಪಟ್ಟಿಯಂತೆ ಹೂಮಾಲೆಯಂತೆ, ಹೊಗೆಯ ಚಲನೆಯಂತೆ, ಜೇಡರ ಬಲೆಯಂತೆ ಅಥವಾ ಮೋಡದ ಪೊರೆಯಂತೆ ಅಥವಾ ಕಮಲದ ಹೂವಿನಂತೆ ಅಥವಾ ರಥದ ಚಕ್ರದಂತೆ ಅಥವಾ ಚಂದಿರನ ತಟ್ಟೆಯಂತೆ ಅಥವಾ ಸೂರ್ಯನ ತಟ್ಟೆಯಂತೆ ಕಾಣಿಸುವುದು ಅಥವಾ ಸ್ಪಶರ್ಿಸಲ್ಪಡುವುದು.
ಹೀಗೆ ಈ ಪಟಿಭಾಗ ನಿಮಿತ್ತವು ಒಬ್ಬೊಬ್ಬರಿಗೆ ಒಂದು ರೀತಿಯಂತೆ ಅನುಭವಕ್ಕೆ ಬರುತ್ತದೆ. ಏಕೆಂದರೆ ಗ್ರಹಿಕೆಯೇ ಕಾರಣ. ಒಬ್ಬೊಬ್ಬರ ಗ್ರಹಿಕೆ ಒಂದೊಂದು ರೀತಿಯಲ್ಲಿರುವ ಕಾರಣದಿಂದ, ಗ್ರಹಿಕೆಯಿಂದಲೇ ಉದಯಿಸುವ ಚಿಹ್ನೆಯು ಈ ರೀತಿಯಾಗಿ ಗೋಚರಿಸಿದರೆ ಆಶ್ಚರ್ಯವಿಲ್ಲ.
ಉದಾಹರಣೆಗೆ ಒಂದು ದೀಪವನ್ನೇ ತೆಗೆದುಕೊಳ್ಳಿ :-
. ಚಿಟ್ಟೆಗಳಿಗೆ ಅಥವಾ ಕೆಲವು ಕೀಟಗಳಿಗೆ ಈ ದೀಪವು ಅತ್ಯಾಕರ್ಷಕವಾಗಿರುತ್ತದೆ ಎಂದರೆ ಅದನ್ನು ಸ್ಪಶರ್ಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತದೆ.
. ಸಾಮಾನ್ಯ ಜನಕ್ಕೆ ದೀಪ ಬೆಳಕು ನೀಡುವಂತಹುದು ಅಷ್ಟೇ.
. ವಿಜ್ಞಾನಿಗಳಿಗೆ ದೀಪದಲ್ಲಿರುವ ಸಂಯುಕ್ತಗಳು, ಇಂಧನಗಳೆಲ್ಲಾ ತಿಳಿಯುತ್ತದೆ.
ತ. ಸಮಥ ಧ್ಯಾನಿಗೆ ಝಾನ ಪ್ರಾಪ್ತಿಯ ವಸ್ತು ದೀಪವಾದರೆ
ತ. ವಿಪಶ್ಶನ ಧ್ಯಾನಿಗೆ ಅನಿತ್ಯಗೋಚರಕಾರಿ ವಸ್ತುವಾಗಿರುತ್ತದೆ.
ಈ ರೀತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗ್ರಹಿಕೆಯಿರುತ್ತದೆ.


4. ಸ್ಥಿರಗೊಳ್ಳುವ ಸಾಧನೆ (ಥಾಪನ) :

ಈ ನಿಮಿತ್ತಗಳಲ್ಲಿ ನಾವು ಜಾಗರೂಕರಾಗಿರಬೇಕು. ಏಕೆಂದರೆ ಇಲ್ಲಿ ಕಸಿನಾದಲ್ಲಿ ಗೋಚರಿಸುವಂತಹ ನಿಮಿತ್ತಗಳು ಗೋಚರವಾದಾಗ ನಾವು ಅದನ್ನು ಅಲಕ್ಷಿಸಬೇಕು. ಇಲ್ಲವಾದರೆ ಅನಾಪಾನಾಸತಿಯ ಧ್ಯಾನವಾಗದೆ, ಕಸಿನಾದಂತಹ ಧ್ಯಾನಕ್ಕೆ ತಲುಪುವ ಸಂಭವನೀಯತೆ ಇರುತ್ತದೆ. ಅಂತಹ ನಿಮಿತ್ತಗಳೆಂದರೆ ಹೊಳಪುಳ್ಳ ಸೂರ್ಯ, ಚಂದಿರ, ನಕ್ಷತ್ರ, ಮುತ್ತು-ರತ್ನ ಇತ್ಯಾದಿ. ಈ ಗೋಚರ ನಿಮಿತ್ತ ಗೋಚರಿಸಿದರೂ ಅನಾಪಾನಾ ಸಾಧನೆ ಮುಂದುವರೆಸಬೇಕು. ಆದರೆ ಗಾಳಿಯ ಸ್ಪರ್ಶ, ಹತ್ತಿಯ ಸ್ಪರ್ಶಕ್ಕೆ, ಹತ್ತಿಯ ಬೀಜದ ಸ್ಪರ್ಶ, ಹಗುರತನದ ಅನುಭೂತಿ, ಗಾಳಿಯಲ್ಲಿ ತೇಲುವ ಅನುಭೂತಿ ಅಲಕ್ಷಿಸಬಾರದು. ಅಂತಹ ಸ್ಪರ್ಶದ ಅನುಭೂತಿಯಲ್ಲೇ ತಲ್ಲೀನನಾಗಬೇಕು. ಆ ಸ್ಪರ್ಶದ ಅನುಭೂತಿಯಲ್ಲೇ ಮನಸ್ಸು ನೆಟ್ಟು, ಕೇಂದ್ರೀಕರಿಸಿ ಸಾಧನೆ ಮಾಡಬೇಕು. ಇದೇ ಪಟಿಭಾಗ ನಿಮಿತ್ತವಾಗಿದೆ. ಈ ನಿಮಿತ್ತವು ಬಣ್ಣಗಳಿಂದ ಕೂಡಿರುವುದಿಲ್ಲ ಅಥವಾ ಆಕಾರದಿಂದಲೂ ಕೂಡಿರುವುದಿಲ್ಲ. ಈ ಪಟಿಭಾಗ ನಿಮಿತ್ತವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಕೌಶಲ್ಯದಿಂದ ರಕ್ಷಿಸಬೇಕಾಗುತ್ತದೆ. ಹೇಗೆಂದರೆ ಗಭರ್ಿಣಿಯು ತನ್ನ ಪುತ್ರನನ್ನು ರಕ್ಷಿಸುವಂತೆ ಅತ್ಯಮೂಲ್ಯವಾದ ರತ್ನವನ್ನು ಕಾಪಾಡುವ ಹಾಗೆ ಕಾಪಾಡಿ ಹಗಲು-ರಾತ್ರಿ ಧ್ಯಾನಿಸಬೇಕಾಗುತ್ತದೆ. ಮೊದಲಿನ ಉಗ್ಗಹ ನಿಮಿತ್ತಕ್ಕೂ ಪಟಿಭಾಗ ನಿಮಿತ್ತಕ್ಕೂ ವ್ಯತ್ಯಾಸವಿದೆ. ಉಗ್ಗಹ ನಿಮಿತ್ತದಲ್ಲಿ ಯಾವುದೇ ತಪ್ಪಿದ್ದರೂ ಗೋಚರವಾಗುತ್ತಿತ್ತು. ಆದರೆ ಪಟಿಭಾಗ ನಿಮಿತ್ತದಲ್ಲಿ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಆಗ ಸಾಧಕನು ಈ ಪಟಿಭಾಗ ಚಿಹ್ನೆಯನ್ನು ಮೂಗಿನ ತುದಿಯಲ್ಲಿ ಕೇಂದ್ರೀಕರಿಸಿ ಹಿಗ್ಗಿಸಬೇಕು. ನಂತರ ಹಾಗೆಯೇ ಹುಬ್ಬುಗಳ ನಡುವೆ ಅಥವಾ ಹಣೆಯಲ್ಲಿ ಹಾಗೆಯೇ ದೇಹದ ಭಾಗಗಳಲ್ಲಿ ಸ್ಥಾಪಿಸಬೇಕು. ಆಗ ಅಲ್ಲೆಲ್ಲಾ ಗಾಳಿ ತುಂಬಿದ ಅನುಭೂತಿಯಾಗುತ್ತದೆ. ಉದಾಹರಣೆಗೆ ಹಣೆಯಲ್ಲಿ ಕೇಂದ್ರೀಕರಿಸಿದಾಗ ತಲೆಯೆಲ್ಲಾ ಗಾಳಿಯಿಂದ ತುಂಬಿದ ಅನುಭೂತಿಯಾಗುತ್ತದೆ. ಇದೇ ರೀತಿಯಲ್ಲಿ ಇಡೀ ಶರೀರವೆಲ್ಲಾ ಗಾಳಿಯ, ತೇಲುವ, ಸ್ಪಶರ್ಿಕ ಅನುಭೂತಿಯ ಪಟಿಬಾಗ ನಿಮಿತ್ತದಿಂದ ಆವರಿಸಿದಾಗ ಆನಂದ ಮತ್ತು ಸುಖವು ಆತನಲ್ಲಿರುವ ಸೂಕ್ಷ್ಮ ನೀವರಣಗಳು ನಶಿಸಿ ಧ್ಯಾನಂಗಗಳು ಕೂಡಿ ಸಾಮಿಪ್ಯ ಸಮಾಧಿ ಪ್ರಾಪ್ತಿ ಮಾಡುತ್ತಾನೆ.

ಸಮಾಧಿ ಹಂತಗಳು

ಪ್ರಥಮ ಸಮಾಧಿ :

ಸಾಧಕನಲ್ಲಿ ಪಂಚನೀವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಾಚರ) ಸಮಾಧಿ ಪಡೆದಿದ್ದರೂ ಆತನಲ್ಲಿ ಧ್ಯಾನಂಗಗಳು ಇನ್ನೂ ಬಲಿಷ್ಠವಾಗಿ ಬೆಳೆದಿರುವುದಿಲ್ಲ. ಹೇಗೆಂದರೆ ಮಗುವು ಎದ್ದು ಬಿದ್ದು ನಡೆಯುವ ರೀತಿ. ಆದರೆ ಪಂಚ ಧ್ಯಾನಂಗಗಳನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ. ಹೇಗೆಂದರೆ ಯುವಕ ಓಡುವಂತೆ. ಹೇಗೆ ಆತನು ಸ್ಥಿರ ಸಮಾಧಿ (ಪ್ರಥಮ ಸಮಾಧಿ ಗಳಿಸುತ್ತಾನೆ) ಆ ಸ್ಥಿತಿಯಲ್ಲಿ ಆತನ ಮನಸ್ಸು, ಅತ್ಯಂತ ಮೃದು, ಅತ್ಯಂತ ಶಾಂತ, ಏಕಾಗ್ರತೆ, ಕಾರ್ಯಶೀಲತೆ, ಸುಖ, ಆನಂದ, ಮಣಿಯುವಂತಹ ಹಗುರತೆ ಎಲ್ಲವೂ ವೃದ್ಧಿಯಾಗಿರುತ್ತದೆ. ಆತನಿಗೆ ಯಾವ ಶಬ್ದವೂ ಕೇಳಿಸದೆ ಶಬ್ದಕ್ಕೆ ಆತೀತನಾಗಿರುತ್ತಾನೆ. ಪ್ರಥಮ ಸಮಾಧಿಯಲ್ಲಿ ಮಾನಸಿಕವು ಪ್ರಕಾಶಿತವಾಗುತ್ತದೆ, ಮನಸ್ಸು ಪಕ್ವವಾಗುತ್ತದೆ. ಅಪಾರ ಆನಂದದ ವೃದ್ಧಿಯಾಗಿರುತ್ತದೆ.
ಆತನ ಮನಸ್ಸು ಇಂದ್ರೀಯ ಕ್ಷೇತ್ರದಿಂದ ಸಮಾಧಿ ಲೋಕದ ಚಿತ್ತವಾಗಿ ಗೋತ್ರ ಬದಲಾಯಿಸುತ್ತದೆ. ಈ ರೀತಿಯಲ್ಲಿ ಆತನು ರಾಗಾದಿ, ಅಕುಶಲ ಚಿತ್ತಗಳಿಂದ (ನೀವರಣಗಳಿಂದ) ಮುಕ್ತನಾಗಿ ಏಕಾಂತತೆಯಿಂದ ಹುಟ್ಟಿದ ಪೀತಿ, ಸುಖದಿಂದ ಕೂಡಿದ ಪ್ರಥಮ ಸಮಾಧಿಯಲ್ಲಿ ನೆಲೆಗೊಳ್ಳುತ್ತಾನೆ.
ಆತನ ಇಡೀ ಶರೀರದಲ್ಲೆಲ್ಲಾ ಈ ರೀತಿಯ ಅಲೌಕಿಕ ಆನಂದ ಮತ್ತು ಸುಖದ ಏಕಾಗ್ರತೆಯ ಸುಖವನ್ನು ಆತನು ಇಡೀ ಶರೀರದಲ್ಲೆಲ್ಲಾ ಯಾವ ಭಾಗವು ಬಿಡದೆ ಹಬ್ಬಿಸುತ್ತಾನೆ.
ಹೇಗೆಂದರೆ ಸ್ನಾನ ಮಾಡುವವನು ಸೋಪಿನಪುಡಿಯನ್ನು ನೀರಿನಲ್ಲಿ ನೆನೆಸಿ, ಹಿಂಡಿ, ನೊರೆಯುಕ್ಕಿಸಿ ಇಡೀ ಶರೀರದಲ್ಲೆಲ್ಲಾ ನೊರೆ ವ್ಯಾಪಿಸುವ ಹಾಗೆ ಆತನು ತನ್ನ ಪಟಿಭಾಗ ನಿಮಿತ್ತವನ್ನು, ಹಗುರತನವನ್ನು, ಆ ಸಂವೇದನೆಗಳನ್ನು ಇಡೀ ಶರೀರ ವ್ಯಾಪಿಸುತ್ತಾನೆ.

  10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವೀಣ್ಯತೆ .


 ಅದೆಂದರೆ : 1) ಸ್ವಚ್ಛತೆ 2) ಧ್ಯಾನಂಗಗಳ ಮತ್ತು ಪಂಚಬಲಗಳ ಸಮತೋಲನೆ 3) ಚಿಹ್ನೆಗಳಲ್ಲಿ ಕೌಶಲ್ಯತೆ 4) ಸಕಾಲ ಪ್ರಯತ್ನಶೀಲತೆ 5) ಸಕಾಲ ಸಂಯಮ 6) ಸಕಾಲ ಸ್ಫೂತರ್ಿ 7) ಸಕಾಲ ಸಮಚಿತ್ತತೆ 8) ಧ್ಯಾನಿಗಳಲ್ಲದವರ ವರ್ಜನೆ 9) ಧ್ಯಾನಿಗಳೊಂದಿಗೆ ಬೆರೆಯುವಿಕೆ (ಸ್ನೇಹ) 10) ಧ್ಯಾನದಲ್ಲಿ ಸ್ಥಿರನಿಧರ್ಾರ ಕೈಗೊಳ್ಳುವಿಕೆ (ಹೊಂದಿಕೊಳ್ಳುವಿಕೆ, ಬಾಗುವಿಕೆ).
ನಂತರ ಸಾಧಕನು 5 ಹಂತದ ಸಮಾಧಿಯಲ್ಲಿ ನೈಪುಣ್ಯತೆ ಪಡೆಯಬೇಕಾಗುತ್ತದೆ.

1. ಲಕ್ಷ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಧ್ಯಾನ ವಿಷಯದಲ್ಲಿ ಗಮನ ನೀಡುತ್ತಾನೆ. ನಿಮಿತ್ತ ಧ್ಯಾನಂಗಗಳಲ್ಲಿಯೂ ಗಮನ ಕೇಂದ್ರೀಕರಣ.

2. ಪ್ರವೇಶ ಪ್ರಾಪ್ತಿ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಸಮಾಧಿಯ ಪ್ರವೇಶ ಮತ್ತು ಪ್ರಾಪ್ತಿ.

3. ನೆಲೆಸುವ ನಿಧರ್ಾರ ನೈಪುಣ್ಯತೆ :

 ಇಚ್ಛಾಕಾಲ (ದೀರ್ಘಕಾಲ) ಸಮಾಧಿಯಲ್ಲಿ ನೆಲೆಸುತ್ತಾನೆ

4. ನಿರ್ಗಮನ ನೈಪುಣ್ಯತೆ :

 ಇಚ್ಛಿಸಿದಾಗ ಸಮಾಧಿಯಿಂದ ಹೊರಬರುವಿಕೆ.

5. ಪುನರಾವಲೋಕನ ನೈಪುಣ್ಯತೆ : 

ಇಡೀ ಧ್ಯಾನವನ್ನು ಆತನು ಪುನಃ ಅವಲೋಕಿಸುತ್ತಾನೆ, ವಿಮಶರ್ಿಸುತ್ತಾನೆ ಮತ್ತು ವಿಶ್ಲೇಷಿಸುತ್ತಾನೆ.



ದ್ವಿತೀಯ ಸಮಾಧಿ :

ಈ ರೀತಿಯಲ್ಲಿ ಆತನು ಧ್ಯಾನದಲ್ಲಿ ನೈಪುಣ್ಯತೆ ಪಡೆದಾಗ ಆತನು ಅದನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಪೀತಿ, ಸುಖ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಕಂಡುಬರುತ್ತದೆ. ಆಗ ಆತನು ವಿತಕ್ಕ ವಿಚಾರವನ್ನು ಸ್ತಬ್ದಗೊಳಿಸುತ್ತಾನೆ.
ಭಿಕ್ಷುವು ವಿತಕ್ಕ ಮತ್ತು ವಿಚಾರವನ್ನು ಸ್ತಬ್ದಗೊಳಿಸಿ, ಪೀತಿ (ಆನಂದ) ಸುಖ (ದಿವ್ಯಸುಖ) ಮತ್ತು ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯನ್ನು ಪ್ರಾಪ್ತಿ ಮಾಡುತ್ತಾನೆ. ಇದನ್ನು ಸಾಧಿಸಲು ಆತನಿಗೆ ಅಪಾರ ಆಂತರಿಕ ಶ್ರದ್ಧೆಯಿರಬೇಕಾಗುತ್ತದೆ. ಇವು 3 ಅಂಗಗಳಿಂದ ಕೂಡಿರುತ್ತದೆ. ಅಂದರೆ ಆನಂದ, ಸುಖ ಮತ್ತು ಏಕಾಗ್ರತೆ ವಿಭಂಗದ ಪ್ರಕಾರ ಪ್ರಬಲ ಶ್ರದ್ಧೆಯು ಇರುತ್ತದೆ. ಇದರಿಂದ ಸಿಗುವಂತಹ ಸುಖ, ಆನಂದದಿಂದ ಆತನು ನೆಲೆಸಿ ಆತನು ಇಡೀ ಶರೀರದಲ್ಲೆಲ್ಲಾ ಸುಖ, ಆನಂದವನ್ನು ಪ್ರಸರಿಸುತ್ತಾನೆ. ಹೇಗೆಂದರೆ ಆಳವಾದ ಸರೋವರವೊಂದರಲ್ಲಿ ಕೆಳಗಿನಿಂದ ತಂಪಾದ ನೀರು ಉದಯಿಸಿ ಉಕ್ಕಿ ಮೇಲೆ ಸುತ್ತಲೂ ಸರೋವರವನ್ನೆಲ್ಲ ಆವರಿಸಿಬಿಡುತ್ತದೆ. ಅದೇರೀತಿಯಲ್ಲಿ ಸಾಧಕನು, ಪೀತಿ ಸುಖದಿಂದ ಕೂಡಿದ ಏಕಾಗ್ರತೆಯ ಸುಖದಿಂದ ಇಡೀ ಶರೀರವನ್ನು ತೋಯಿಸಿಬಿಡುತ್ತಾನೆ.

ತೃತೀಯ ಸಮಾಧಿ : 

ಆತ ದ್ವಿತೀಯ ಸಮಾಧಿಯಲ್ಲಿ 5 ರೀತಿ ಪ್ರಾವಿಣ್ಯತೆ ಪಡೆಯುತ್ತಾನೆ. ಸಮಾಧಿಯಲ್ಲಿ ಬಹಳಕಾಲ ಲಕ್ಷಕೊಟ್ಟು ಪ್ರವೇಶಿಸಿ, ನೆಲೆಸಿ, ನಿರ್ಗಮಿಸಿ, ಪುನರ್ ಅವಲೋಕನ ಮಾಡುತ್ತಾನೆ. ಆಗ ಆತನಿಗೆ ಪೀತಿ (ಆನಂದ) ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಸುಖ ಹಾಗು ಏಕಾಗ್ರತೆಯು ಸೂಕ್ಷ್ಮವಾಗಿಯು, ಶಾಂತವಾಗಿಯು ಕಂಡುಬರುತ್ತದೆ.
ಆಗ ಆತನು ಪೀತಿ (ಆನಂದ)ಯನ್ನು ಸ್ತಬ್ದಗೊಳಿಸಿದವನಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ. ತನ್ನ ದೇಹದಲ್ಲೆಲ್ಲಾ ಸುಖವನ್ನು (ದಿವ್ಯಸುಖ/ಶಾಂತಿ) ಎಚ್ಚರಿಕೆಯಿಂದ ಅನುಭವಿಸಿದವನಾಗಿ, ಯಾವುದನ್ನು ಆರ್ಯರು ಸಮಚಿತ್ತತೆ ಮತ್ತು ಎಚ್ಚರದಿಂದ ಕೂಡಿದ ಸುಖ ಎನ್ನುವರೋ ಅದನ್ನು ಪ್ರಾಪ್ತಿ ಮಾಡುತ್ತಾನೆ. ಈ ರೀತಿಯ ಪ್ರಶಾಂತತೆಯ ಸುಖದಿಂದ ಆತನು ಇಡೀ ಶರೀರವನ್ನೆಲ್ಲಾ (ತುಂಬಿಸಿ ಆವರಿಸಿಬಿಡುತ್ತಾನೆ), ತೋಯಿಸಿಬಿಡುತ್ತಾನೆ. ಹೇಗೆಂದರೆ ಕಮಲಗಳಿರುವ ಸರೋವರದಲ್ಲಿ ಕಮಲಗಳನ್ನೆಲ್ಲಾ ನೀರು ಆವರಿಸಿರುತ್ತದೆ. ಅಲ್ಲಿರುವ ಯಾವುದೇ ಕಮಲವಿರಲಿ ಅವೆಲ್ಲಾ ನೀರಿನಿಂದ ಆವೃತವಾಗಿರುತ್ತದೆ. ಅದೇರೀತಿಯಲ್ಲಿ ಆತನು ಸುಖವನ್ನು ಶರೀರದಲ್ಲೆಲ್ಲಾ ಆವರಿಸುತ್ತಾನೆ.

ಚತುರ್ಥ ಸಮಾಧಿ :

ನಂತರ ಮತ್ತೆ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷಿಸುವಿಕೆ, ಪ್ರವೇಶ, ನೆಲೆಸುವಿಕೆ, ನಿರ್ಗಮನ, ಅವಲೋಕನ. ಆಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ. ಸಂಪೂರ್ಣ ಜಾಗರೂಕನಾದ ಆತನಿಗೆ ಸಮಚಿತ್ತತೆ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಶಾಂತವಾಗಿ ಕಂಡುಬಂದು ಅದನ್ನು ಸಾಧಿಸುತ್ತಾನೆ. ಸ್ಥೂಲವಾದ ಸುಖವನ್ನು ವಜರ್ಿಸಿ, ಸುಲಭವಾಗಿ ಸಿಗಲಾರದ ಅತ್ಯಂತ ಸೂಕ್ಷ್ಮವಾದ ಪರಿಶುದ್ಧವಾದ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ. ಅದು ಕೇವಲ 2 ಅಂಗಗಳಿಂದ ಕೂಡಿರುತ್ತದೆ. ಅದೆಂದರೆ ಸಮಚಿತ್ತತೆ ಮತ್ತು ಏಕಾಗ್ರತೆ ಈ ಬಗೆಯ ಪರಿಶುದ್ಧ ಸ್ಥಿತಿಯಿಂದ ಆತನು ನೆಲೆಸಿರುತ್ತಾನೆ. ಇಡೀ ಶರೀರದಲ್ಲೆಲ್ಲಾ ಇಂತಹುದೇ ಸ್ಥಿತಿಯಿಂದ ಆವೃತಗೊಳಿಸುತ್ತಾನೆ. ಹೇಗೆಂದರೆ ಒಬ್ಬ ವ್ಯಕ್ತಿ ಕುಳಿತು ಬಿಳಿ ಬಟ್ಟೆಯನ್ನು ಪೂರ್ಣವಾಗಿ ಹೊದ್ದುವಂತೆ ಆತನು ಈ ಪರಿಶುದ್ಧತೆಯಿಂದ ಇಡೀ ಶರೀರವನ್ನು ತೋಯಿಸುತ್ತಾನೆ, ನೆಲೆಸುತ್ತಾನೆ.
ನಂತರ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷ, ಪ್ರವೇಶ, ನೆಲೆ, ನಿರ್ಗಮನ ಮತ್ತು ಅವಲೋಕನ. ಆಗ ಆತನಿಗೆ ರೂಪ ಸಮಾಧಿಯು ಸ್ಥೂಲವಾಗಿ ಕಂಡುಬರುತ್ತದೆ. ಆಗ ಆತನಿಗೆ ಎರಡು ಆಯ್ಕೆಗಳಿರುತ್ತದೆ. ಅರೂಪ ಸಮಾಧಿ ಸಿದ್ಧಿಸುವುದು ಅಥವಾ ವಿಪಶ್ಶನಾ ಧ್ಯಾನವನ್ನು ಆರಂಭಿಸುವುದು.

5. ಅರಿಯುವಿಕೆ (ಸಲ್ಲಖ್ಖಂ) (ಅನಾಪಾನ ವಿಪಶ್ಶನ ಧ್ಯಾನ (ಸಂಕ್ಷಿಪ್ತ)) :

ಇಲ್ಲಿ ಧ್ಯಾನಿಯು ನಾಮ (ಮನಸ್ಸು) ಮತ್ತು ರೂಪ (ಶರೀರ)ವನ್ನು ಅರಿಯುತ್ತಾನೆ. ಆಗ ಆತನಿಗೆ ಆನಾಪಾನಸತಿಗೆ ಶರೀರವೇ ಆಧಾರ ಮತ್ತು ಮನಸ್ಸಿನಿಂದ ಇದರ ಉದ್ಭವ ಆಗಿದೆ ಎಂದು ಅರಿವಾಗುತ್ತದೆ. ಹಾಗೆಯೇ ದೇಹ ಮನಸ್ಸಿನ ಸ್ವರೂಪವು ಅದರ ಹಿಂದಿನ ಕಾರಣಗಳು, ಈಗಿನ ಅಸ್ತಿತ್ವ ಮತ್ತು ಮುಂದಿನ ಪರಿಣಾಮ ಈ ರೀತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಅರಿಯುತ್ತಾನೆ. ನಂತರ ಆತನು ತನ್ನ ಸಂಶಯಗಳನ್ನೆಲ್ಲಾ ನಿವಾರಿಸಿಕೊಳ್ಳುತ್ತಾನೆ. ಆತನಿಗೆ ಈ ದೇಹ ಮತ್ತು ಮನಸ್ಸು ಕ್ಷಣಿಕ. ಅನಿತ್ಯವೆಂಬ ಜ್ಞಾನೋದಯ ಉಂಟಾಗುತ್ತದೆ. ಈ ಶರೀರವೇ ದುಃಖ ಮತ್ತು ಮನಸ್ಸು ಸಹಾ ದುಃಖ ಎಂದು ಅರಿವಿಗೆ ಬರುತ್ತದೆ. ಇಲ್ಲಿ ತನ್ನದು, ತನ್ನ ಆತ್ಮ ಅಥವಾ ನಾನು ಎಂಬುದು ಭ್ರಮೆ ಎಂಬ ಜ್ಞಾನೋದಯ ಉಂಟಾಗುತ್ತದೆ.

6. ವಿಮುಖತೆ (ವಿವಟ್ಠನಾ) :

 ಇಲ್ಲಿ ಸಾಧಕನು 10 ಬಗೆಯ ಅಪೂರ್ಣತೆಗಳನ್ನು ವಜರ್ಿಸುತ್ತಾನೆ. ಇಲ್ಲಿ ಆತನಿಗೆ ಉದಯ ವ್ಯಯದ ಜ್ಞಾನವಾಗಿ ಎಲ್ಲಾ ಸಂಖಾರಗಳು ಭಯಾನಕವಾಗಿ ಕಂಡುಬರುತ್ತದೆ. ಆತನು ಅದರಿಂದ ವಿರಾಗ ತಾಳುತ್ತಾನೆ. ನಿರೋಧವನ್ನುಂಟು ಮಾಡಿ, ಕಲ್ಮಶಗಳನ್ನೆಲ್ಲ ತೊರೆಯುತ್ತಾನೆ. ಹೊಸದಾಗಿ ಯಾವೊಂದು ರೀತಿಯ ಬಂಧನಕ್ಕೂ ಬೀಳದೆ ಸಾಧನೆ ಮಾಡುತ್ತಾನೆ.

7. ಪರಿಶುದ್ಧಿ : 

ಇಲ್ಲಿ ಆತನಿಗೆ ಲೋಕೋತ್ತರ ಫಲ ಪ್ರಾಪ್ತಿಯಾಗುತ್ತದೆ. ವಿಮುಕ್ತಿ ಅಥವಾ ಸಮಚ್ಛೆದಾ ವಿಮುಕ್ತಿ ಗಳಿಸುತ್ತಾನೆ.

8. ಪುನರ್ ಅವಲೋಕನ (ಪಟಿಪಸ್ಸನಾ) :

 ಇಲ್ಲಿ ಆತನು ನಾಶಗೊಳಿಸಿದ ಬಂಧನಗಳ ಇಡೀ ಪ್ರಕ್ರಿಯೆ ಪುನಃ ಪುನಃ ಅವಲೋಕಿಸುತ್ತಾನೆ. ಅಂದರೆ ಎಣಿಕೆಯಿಂದ ಪರಿಶುದ್ದಿಯವರೆಗೂ ಪುನರ್ ಅವಲೋಕನ ಮಾಡುತ್ತಾನೆ.

ಸಮಾಧಿಯ ಲೋಕೋತ್ತರ ಪ್ರಯಾಣ

                               ಸಮಾಧಿಯ ಲೋಕೋತ್ತರ ಪ್ರಯಾಣ :




ಮನಸ್ಸಿನ ಏಕತೆಯೇ ಸಮಾಧಿ, ನಾಲ್ಕು ಸತಿಪಟ್ಠಾನವೇ ಧ್ಯಾನದ ವಿಷಯಗಳು, 4 ಸಮ್ಮಾ ಪ್ರಯತ್ನಗಳೇ ಅವುಗಳ ಸಲಕರಣೆಗಳು. ಇವುಗಳ ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.

ಸಮಾಧಿಯ ಸ್ಥಳ :

ಅದು ಅರಣ್ಯವಾಗಿರಬಹುದು, ಮರದ ಬುಡ, ಗುಹೆ, ಬೆಟ್ಟ, ವಿಹಾರ, ಧ್ಯಾನಮಂದಿರ ಅಥವಾ ಶೂನ್ಯಗೃಹ (ಯಾರು ಇಲ್ಲದ ಮನೆ), ಇವು ಯಾವುದಾದರೂ ಆಗಬಹುದು. ಆದರೆ ಆ ಸ್ಥಳವು ಅತಿ ನಿಶ್ಶಬ್ದವಾಗಿರಬೇಕು. ಹಾಗು ನಿರ್ಜನವಾಗಿರಬೇಕು. ಏಕೆಂದರೆ ಪ್ರಥಮ ಸಮಾಧಿಗೆ ಶಬ್ದವೇ ಶತ್ರು ಎನ್ನುತ್ತಾರೆ. ಆ ಸ್ಥಳವು ವಾಹನಗಳ ಶಬ್ದ, ಸಂಗೀತ, ಹಾಡುಗಳ, ಕಾಖರ್ಾನೆಗಳ ಒಟ್ಟಾರೆ ಸರ್ವರೀತಿಯ ಶಬ್ದಗಳಿಂದ ಮುಕ್ತವಾಗಿರಬೇಕು. ಹಾಗೆಯೇ ಹಾವು ಮುಂತಾದ ಸರಿಸೃಪಗಳಿಂದ ಮುಕ್ತವಾಗಿರಬೇಕು.

ಸಮಾಧಿಯ ಸಕಾಲ :

ಭಿಕ್ಷುಗಳು ಇಡೀ ಜೀವನ ಧ್ಯಾನದಲ್ಲಿ ಕಳೆಯಬೇಕಾಗುತ್ತದೆ. ಆದರೆ ಗೃಹಸ್ಥರು ಪ್ರತಿದಿನ ಕನಿಷ್ಠ ಅರ್ಧಗಂಟೆ ಧ್ಯಾನಿಸುವುದು ಅವರ ಲೌಕಿಕ, ಅಲೌಕಿಕ ಮತ್ತು ಲೋಕೋತ್ತರ ಲಾಭಕ್ಕಾಗಿ ಉತ್ತಮವಾದುದು. ಬೆಳಿಗ್ಗೆ 3 ರಿಂದ 7ರ ತನಕ ಅಥವಾ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಮಾಡಬಹುದು. ಯಾವುದೇ ಕಾಲವಾಗಿರಲಿ, ನಿಗದಿತ ಸಮಯ ಸುಲಾಭಕಾರಿ.
ಸಮಾಧಿಯ ಭಂಗಿ : ಪದ್ಮಾಸನವು ಸವರ್ೊತ್ತಮವಾದುದು. ಇದು ಸಮತೋಲನತೆಗೆ, ಆರೋಗ್ಯಕ್ಕೆ, ಚಳಿಗೆ ಸಹಾಯಕಾರಿಯಾಗಿದೆ. ಸೊಂಟ, ಬೆನ್ನು, ಕುತ್ತಿಗೆ ನೇರವಾಗಿರಬೇಕು. ಕಣ್ಣುಮುಚ್ಚಿದರೆ ಉತ್ತಮ, ಅರ್ಧ ಪದ್ಮಾಸನ ಅಥವಾ ಸುಖಾಸನವು ಧ್ಯಾನಕ್ಕೆ ಉತ್ತಮವೇ ಆಗಿದೆ.

ಸಮಾಧಿಗೆ ಬಾಹ್ಯ ಅಡ್ಡಿಗಳು :

 ಇವು ಧ್ಯಾನಕ್ಕೆ ಬಹಳಷ್ಟು ಬಾರಿ ಅಡ್ಡಿತರುತ್ತದೆ. 

1. ವಾಸಸ್ಥಳ 2. ಕುಟುಂಬ 3. ಪ್ರಯಾಣ 4. ವಿಪರೀತ ಲೌಕಿಕ ಕೆಲಸಗಳು 5. ರೋಗ  6. ಅತಿಯಾಧ ಅಧ್ಯಯನ 7. ಅಲೌಕಿಕ ಧ್ಯಾನ ಶಕ್ತಿಗಳು 8. ಶಬ್ದದ ವಾತಾವರಣ
9. ಲೌಕಿಕರ ಸ್ನೇಹ 10. ಹರಟೆ 11. ನೋವು ಇತ್ಯಾದಿ.

ಆಂತರಿಕ ಅಡ್ಡಿಗಳು

1. ಮಾರನ ಸೈನ್ಯ   2. ಪಂಚ ನೀವರಣ

1) ಮಾರನ ಸೈನ್ಯ :

1. ಕಾಮ : ಇಂದ್ರೀಯ ಬೋಗಾಭಿಲಾಷೆ, ಸ್ತ್ರೀ, ಮಕ್ಕಳು ಐಶ್ವರ್ಯ, ಅಧಿಕಾರಲಾಲಸೆ.
2. ಅರತಿ (ಅತೃಪ್ತಿ) : ಶ್ರೇಷ್ಠ ಧಮ್ಮ ಜೀವನದಲ್ಲಿ ಆನಂದಿಸದಿರುವಿಕೆ.
3. ಹಸಿವು ಮತ್ತು ಬಾಯಾರಿಕೆ : ನಾಲಿಗೆಗೆ ವಶವಾಗುವಿಕೆ
4. ತನ್ಹಾ : ಕಾಯತನ್ಹಾ, ಭವತನ್ಹಾ ಮತ್ತು ವಿಭವತನ್ಹಾ
5. ಜಡತೆ ಮತ್ತು ಸೋಮಾರಿತನ : ಪ್ರಯತ್ನವಿಲ್ಲದಿರುವಿಕೆ
6. ಭಯ : ಹೆದರುವಿಕೆ
7. ಸಂದೇಹ : ತ್ರಿರತ್ನ ಮತ್ತು ತನ್ನಲ್ಲಿ ಸಂದೇಹ
8. ಅಹಂಕಾರ ಮತ್ತು ಕೃತಘ್ನತೆ : ತನ್ನನ್ನು ಶ್ರೇಷ್ಠ ಎಂದು ಭಾವಿಸಿ ಸೇವೆ ಮರೆಯುವಿಕೆ.
9. ಲಾಭ ಕೀತರ್ಿ, ಗೌರವ : ಪ್ರಶಂಸೆಗೆ, ಲೌಕಿಕತೆಗೆ ಹಾತೊರೆಯುವಿಕೆ.
10. ಸ್ವಪ್ರಶಂಸೆ ಮತ್ತು ಪರನಿಂದೆ : ತನ್ನನ್ನು ಹೊಗಳುವಿಕೆ ಪರರ ಹುಳುಕನ್ನು ಹುಡುಕಿ ನಿಂದಿಸುವಿಕೆ.

ಪಂಚ ನೀವರಣಗಳು

1. ಇಂದ್ರೀಯ ಬೋಗದ ಚಿಂತನೆ (ಕಾಮಚ್ಚಂದ)
2. ದ್ವೇಷಿಸುವಿಕೆ (ವ್ಯಾಪಾದ)
3. ಜಡತೆ ಮತ್ತು ಸೋಮಾರಿತನ (ತೀನ ಮತ್ತು ಮಿದ್ದ)
4. ಅವಿಶ್ರಾಂತಿ ಮತ್ತು ಪಶ್ಚಾತ್ತಾಪ (ಉದ್ಧಚ ಮತ್ತು ಕುಕ್ಕುಚ್ಚ)
5. ಸಂದೇಹ (ವಿಚಿಕಿಚ್ಚಾ)

ಧ್ಯಾನಕ್ಕೆ ಪೂರ್ವ ಸಿದ್ಧತೆ :

1. ಶೀಲವಂತ, ತ್ಯಾಗಿಗಳ, ಪ್ರಯತ್ನಶೀಲರ, ಧ್ಯಾನಿಗಳ, ಮೈತ್ರಿವಂತರ, ಪ್ರಜ್ಞಾವಂತರ ಸಹವಾಸದಲ್ಲಿರಬೇಕಾಗುತ್ತದೆ.
2. ಅಧ್ಯಯನ ಮತ್ತು ಚಚರ್ೆ
3. ಮಿತಾಹಾರ
4. ಶೀಲಪಾಲನೆ, ಇಂದ್ರಿಯ ನಿಗ್ರಹ ಮತ್ತು ಕರ್ಮಫಲಗಳ ಅರಿಯುವಿಕೆ,
5. ಪ್ರತಿಯೊಂದು ಕುಶಲದ ಮಹತ್ವ ಮತ್ತು ಧ್ಯಾನದ ಪ್ರತಿಹಂತಗಳ ಅರಿಯುವಿಕೆ ಮತ್ತು ಅಡ್ಡಿಗಳ ನಿವಾರಣೆಗೆ ಸಿದ್ಧವಾಗುವುದು.
6. ಧ್ಯಾನದ ಸ್ಥಳ, ಕಾಲ, ಭಂಗಿಯನ್ನು ನಿಧರ್ಿಷ್ಟಗೊಳಿಸಬೇಕು. ತಾಜಾತನದ ಮನಸ್ಸಿನಿಂದ ಆರಂಭಿಸಬೇಕಾಗುತ್ತದೆ.
ಆನಾಪಾನಾ ಝಾನದ ಆರಂಭ :
ಇಲ್ಲಿ ಸಾಧಕ ಅಥವಾ ಭಿಕ್ಷುವು, ಅರಣ್ಯಕ್ಕೂ ಅಥವಾ ವೃಕ್ಷ ಮೂಲದಲ್ಲೋ ಅಥವಾ ಶೂನ್ಯಗೃಹದಲ್ಲೋ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ತನ್ನ ಶರೀರವನ್ನು ನೇರವಾಗಿಡುತ್ತಾನೆ ಮತ್ತು ಜಾಗರೂಕತೆಯನ್ನು ತನ್ನ ಮುಂದೆ ಸ್ಥಾಪಿಸುತ್ತಾನೆ. ಸದಾ ಒಳ ಉಸಿರು ಮತ್ತು ಹೊರ ಉಸಿರು (ಅನಾ ಮತ್ತು ಅಪಾನ)ನಲ್ಲೇ ಜಾಗ್ರತೆ (ಸತಿ) ಸ್ಥಾಪಿಸುತ್ತಾನೆ.
ಅಂದರೆ ಇಲ್ಲಿ ಒಂದು ನಿಗದಿತ ಕಾಲದಲ್ಲಿ ಅಥವಾ ಭಿಕ್ಷುವಾಗಿದ್ದರೆ ಸದಾಕಾಲ ಅಭ್ಯಸಿಸಬೇಕಾಗುತ್ತದೆ. ಆಗಿನ ಕಾಲದಲ್ಲಿ ಅರಣ್ಯವು ಏಕಾಂತ ಸ್ಥಳವಾಗಿದ್ದರಿಂದ ಅದೇ ವಿವರಣೆ ಇಲ್ಲಿ ನೀಡಿದೆ. ವೃಕ್ಷಮೂಲ ಅಥವಾ ಮರದ ಬುಡವು ಚಳಿ, ಮಳೆ ಮತ್ತು ಬಿಸಿಲಿಗೆ ರಕ್ಷಣೆ ನೀಡುವುದರಿಂದ ಅದನ್ನು ಆಯ್ಕೆ ಮಾಡಬಹುದು ಅಥವಾ ಆಧುನಿಕ ಕಾಲದಂತೆ ಧ್ಯಾನಮಂದಿರ ಅಥವಾ ಶೂನ್ಯಗೃಹ ಅಂದರೆ ಶಬ್ದವಿಲ್ಲದ, ಬೇರೆ ವ್ಯಕ್ತಿಗಳಿಲ್ಲದ ಕಡೆ ಧ್ಯಾನದಲ್ಲಿ ನೆಲೆಸಿ ಸಾಧಿಸಬೇಕಾಗುತ್ತದೆ.
ಆತನು ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನದಲ್ಲಿ ಅಥವಾ ಅರ್ಧ ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ಮತ್ತು ಕತ್ತನ್ನು ಒಟ್ಟಾರೆ ಶರೀರದ ಭಂಗಿ ನೇರವಾಗಿಟ್ಟುಕೊಂಡು ಕುಳಿತು ತನ್ನ ಗಮನವೆಲ್ಲಾ, ತನ್ನ ಮನಸ್ಸನ್ನು ಉಸಿರಿನಲ್ಲೇ ಅಂದರೆ ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಕೇಂದ್ರೀಕೃತಗೊಳಿಸಿ ಜಾಗ್ರತೆಯಲ್ಲಿರಬೇಕು. ಇಲ್ಲಿ ಉಸಿರನ್ನು ಹಿಡಿಯುವುದಾಗಲಿ (ಕುಂಭಕ) ಅಥವಾ ಉಸಿರನ್ನು ಬಿಟ್ಟು ಉಸಿರನ್ನು ಹಿಡಿಯುವುದಾಗಲಿ (ಬಾಹ್ಯ ಕುಂಭಕ) ಮಾಡಬಾರದು. ಅಥವಾ ಒಂದು ಮೂಗಿನ ಹೊಳ್ಳೆಯಿಂದ ಉಸಿರು ತೆಗೆಯುವುದು, ಬಿಡುವುದು ಇತ್ಯಾದಿ. ಉಸಿರಾಟದ ವ್ಯಾಯಾಮಗಳನ್ನು ಮಾಡಬೇಡಿ. ಏಕೆಂದರೆ ಇದು ಉಸಿರಾಟದ ವ್ಯಾಯಾಮವಲ್ಲ, ಬದಲಾಗಿ ಉಸಿರಾಟದ ಧ್ಯಾನವಾಗಿದೆ. ಹಾಗೆಯೇ ಬಲವಂತವಾಗಿ ಉಸಿರಾಟ ಮಾಡುವುದು ಬೇಡ. ಸಹಜ ಸ್ಥಿತಿಯಲ್ಲೇ ಉಸಿರಾಟ ಹೇಗೆ ಒಳಹೋಗುವುದು ಅಥವಾ ಹೊರಬರುತ್ತದೋ ಅದನ್ನು ಹಾಗೆಯೇ ವೀಕ್ಷಿಸಿ, ಅನುಭವಿಸಿ, ಜಾಗ್ರತೆಯಿಂದ ಗಮನಿಸಿ. ಹಾಗೆಯೇ ಉಸಿರಿನ ಜೊತೆಗೆ ರೂಪವನ್ನು (ರೂಪ/ವಿಗ್ರಹ/ಭಾವಚಿತ್ರ) ಕಲ್ಪಸಬೇಡಿ. ಹಾಗೆಯೇ ಜಪವನ್ನು ಮಾಡಬೇಡಿ. ಹಾಗೆ ಮಾಡಿದಾಗ ಅದು ಉಸಿರಾಟದ ಧ್ಯಾನವಾಗದೆ ಕಸಿನಾ ಅಥವಾ ಜಪಧ್ಯಾನವಾಗುತ್ತದೆ. ಆಗ ನೀವು ಅನಾಪಾನಾಸತಿಯ ಅತ್ಯುನ್ನತ ಲಾಭದಿಂದ ವಂಚಿತರಾಗುತ್ತೀರಿ. ಆದ್ದರಿಂದ ಕಡ್ಡಾಯವಾಗಿ ರೂಪ ಅಥವಾ ನಾಮ (ಜಪ) ಸೇರಿಸಬೇಡಿ.
ಉಸಿರಾಟವು ಸಹಜವಾಗಿ ನಡೆಯುತ್ತಿರುತ್ತದೆ. ನೀವು ಸಹಾ ಸಹಜವಾಗಿಯೇ ಅದನ್ನು ಗಮನಿಸುತ್ತಿರಿ. ಮನಸ್ಸಿನಲ್ಲಿ, ಉಸಿರಾಟದಲ್ಲೇ ಕೇಂದ್ರೀಕೃತಗೊಳಿಸಿ. ಉಸಿರಾಟದಲ್ಲೇ ಹರಿಸಿರಿ. ಏಕಾಗ್ರಗೊಳಿಸಿರಿ, ನಿಮ್ಮ ಮನಸ್ಸು ಚದುರದಿರಲಿ, ಚೆಲ್ಲಾಪಿಲ್ಲಿಯಾಗಿ ಚಲಿಸದಿರಲಿ. ಬೇರೆ ವಿಷಯದ ಕಡೆ ಹರಿಯದಿರಲಿ, ಯಾವುದರಿಂದಲೂ ಕ್ಷೊಭೆಗೆ ಒಳಗಾಗಬಾರದು. ಚದುರದ, ಅಬಾಧಿತವಾದ ಏಕಾಗ್ರತೆಯನ್ನು ಉಸಿರಾಟದ ಮೇಲೆ ಹರಿಸಿ, ಮಿಕ್ಕೆಲ್ಲಾ ವಿಷಯದಿಂದ ನಿಮ್ಮ ಮನಸ್ಸು ವಿಮುಖವಾಗಲಿ, ಹಾಗೆಯೇ ಉಸಿರಾಟದಲ್ಲಿ ನಿಮ್ಮ ಮನಸ್ಸು ಒಮ್ಮುಖವಾಗಿರಲಿ.

ಮಾರನ ತಡೆಗಳು :

ಆದರೆ ನಿಮ್ಮ ಮನಸ್ಸು ಸುಶಿಕ್ಷಿತವಾಗಿಲ್ಲದ ಕಾರಣ, ಧ್ಯಾನದಲ್ಲಿ ನೆಲೆಸದ ಕಾರಣ, ಈ ಹಿಂದೆ ಚಂಚಲತೆಗೆ ಒಳಪಟ್ಟ ಕಾರಣದಿಂದ, ಅದು ಉಸಿರಾಟದಲ್ಲಿ ತಲ್ಲೀನವಾಗದು. ಅದು ನಾನಾ ವಿಷಯಗಳಲ್ಲಿ ಚಲಿಸುತ್ತಿರುತ್ತದೆ. ಮೊಲದಂತೆ ಚೆಲ್ಲಾಪಿಲ್ಲಿಯಾಗಿ ಚಲಿಸುತ್ತದೆ. ಮಂಗವು ಒಂದು ವೃಕ್ಷದಿಂದ ಮತ್ತೊಂದು ವೃಕ್ಷಕ್ಕೆ ನೆಗೆಯುವ ಹಾಗೆ ಅದು ಸಹಾ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರುತ್ತಿರುತ್ತದೆ. ನೆಲಕ್ಕೆ ಬಿದ್ದ ಪಾದರಸದಂತೆ ಚದುರಿ ಹೋಗುತ್ತದೆ.
ಇಷ್ಟಕ್ಕೂ ನಮ್ಮ ಮನಸ್ಸನ್ನು ಆಕ್ರಮಿಸುವಂತಹುದು ಯಾವುದು? ಸುಖಪೂರಿತವಾದ ಇಂದ್ರಿಯ ಸುಖಗಳು ಚಿತ್ತಾಕರ್ಷಕವಾಗಿ ಕಾಡುತ್ತದೆ. ಇದು 6 ಇಂದ್ರಿಯಗಳ ಸುಖವೆಂದು ಹೇಳಬಹುದು. ಅಂದರೆ ಕಣ್ಣಿಗೆ ಆಕರ್ಷಕವಾದುದು, ಕಿವಿಗೆ ಆಕರ್ಷಕವಾದುದು, ಮೂಗಿಗೆ ಆಕರ್ಷಕವಾದುದು, ನಾಲಿಗೆಗೆ ಆಕರ್ಷಕವಾದುದು, ದೇಹಕ್ಕೆ ಆಕರ್ಷಕವಾದದ್ದು ಮತ್ತು ಮನಸ್ಸಿಗೆ ಆಕರ್ಷಕವಾದುದ್ದು ಹಾಗೆಯೇ ಹಣ, ಅಧಿಕಾರ, ಕೀತರ್ಿ, ಸ್ತ್ರೀ ಅಥವಾ ಪುರುಷ, ಪುತ್ರರು ಇತ್ಯಾದಿ ಸುಖಗಳ ಯೋಜನೆಗಳು ಬಂದು ಕಾಡುತ್ತದೆ. ಆಗ ಮನಸ್ಸು ಅದರ ಹಿಂದೆ ಹೊರಡುತ್ತದೆ.
ಅಥವಾ ಆರು ಇಂದ್ರೀಯಗಳಿಗೆ ಅಪ್ರಿಯವಾದದ್ದು, ಕಾಡಬಹುದು. ರೂಪದ್ವೇಷ (ಕಣ್ಣಿನ ಮೂಲಕ ದ್ವೇಷಿಸುವಂತಹುದು) ಶಬ್ದದ ದ್ವೇಷ, ವಾಸನೆಯ ದ್ವೇಷ, ಸ್ಪರ್ಶದ ದ್ವೇಷ, ರುಚಿಯ ದ್ವೇಷ, ದ್ವೇಷಿಸುವ ವ್ಯಕ್ತಿಗಳ ಯೋಚನೆ. ಅಪ್ರಿಯ ಸನ್ನಿವೇಶಗಳ ಯೋಚನೆ, ಅಪ್ರಿಯ ವಸ್ತುಗಳ ಯೋಚನೆ, ಭಯದ ಯೋಚನೆ, ಚಿಂತೆ, ಕಾಡಬಹುದು. ಆದರೆ ಪ್ರತಿ ಭಯ ಅಥವಾ ಚಿಂತೆಯ ಹಿಂದೆ ಪ್ರಿಯ ಅಥವಾ ಅಪ್ರಿಯ ಯೋಚನೆ ಇದ್ದೇ ಇರುತ್ತದೆ. ಅಥವಾ ಪಶ್ಚಾತ್ತಾಪ ಉಂಟಾಗಬಹುದು. ಹಿಂದೆ ಮಾಡಿರುವ ಪಾಪ ಅಥವ ತಪ್ಪುಗಳು ಪಶ್ಚಾತ್ತಾಪ ಉಂಟುಮಾಡುತ್ತಿರುತ್ತದೆ. ಹಾಗೆಯೇ ಭವಿಷ್ಯದಲ್ಲಿ ಸಾಧಿಸದಿರುವ ಈಗ ಸಾಧಿಸಲು ಸಾಧ್ಯವಾಗದೆ ಉಂಟಾಗುತ್ತಿರುವ ಪಶ್ಚಾತ್ತಾಪವಾಗ ಬಹುದು. ಅಥವಾ ಧ್ಯಾನದ ಬಗ್ಗೆಯೇ ಬೇಸರವಾಗಬಹುದು. ಜಯ-ಪರಾಜಯ, ಲಾಭ-ನಷ್ಟ, ಸ್ತುತಿನಿಂದ ಇವುಗಳು ಕಾಡಬಹುದು.
ಅಥವಾ ಜಡಸ್ಥಿತಿಯು ಉಂಟಾಗಿ ಅಲಕ್ಷವು ಅತಿಯಾಗಿ ಯತ್ನಶೀಲತೆಯು ನಿಂತೇ ಹೋಗಬಹದು. ನಾಳೆ ಮಾಡೋಣ, ಅನಂತರ ಮಾಡೋಣ, ಮುಂದಿನ ತಿಂಗಳು ಮಾಡೋಣ ಹೀಗೆಯೇ ಸೋಮಾರಿತನ ಉಂಟಾಗಬಹುದು.
ಅಥವಾ ಧ್ಯಾನದ ಮೇಲೆ ಸಂದೇಹ ಉಂಟಾಗಬಹುದು. ತನ್ನ ಮೇಲೆ ಸಂದೇಹ ಉಂಟಾಗಬಹುದು. ಅಥವಾ ತ್ರಿರತ್ನದ ಮೇಲೆ (ಬುದ್ಧ, ಧಮ್ಮ, ಸಂಘ) ಸಂದೇಹ ಉಂಟಾಗಬಹುದು.
ಅಥವಾ ಕಾಲುಗಳು ನೋವನ್ನು ತರಬಹುದು, ದೇಹವನ್ನು, ಉಸಿರನ್ನು ಮತ್ತು ಸಂವೇದನೆಗಳನ್ನು ಯಾವಾಗಲು, ವೀಕ್ಷಿಸದ ಕಾರಣ ಆ ಅನುಭವವನ್ನು ಕಂಡು ಭೀತಿಗೊಳ್ಳಬಹುದು. ವಿಪರೀತ ಸಂದೇಹಕ್ಕೆ ಗುರಿಯಾಗಬಹುದು. ಹಸಿವು, ನೀರಡಿಕೆ ಕಾಡಬಹುದು. ಭಯವು ಉಂಟಾಗಬಹುದು, ಲಾಭ, ಪ್ರಶಂಸೆಗಳ ಬಗ್ಗೆ ಮನವು ಚಲಿಸಬಹುದು.
ಇಂತಹುದೇ ಭೂತಕಾಲದ ಯೋಚನೆಗಳಲ್ಲಿ ಮನಸ್ಸು ಹರಿಯುತ್ತದೆ ಅಥವಾ ಇಂತಹುದೇ ಭವಿಷ್ಯಕಾಲ ಯೋಚನೆಗಳಲ್ಲಿ ಮುಳುಗಬಹುದು ಅಥವಾ ವರ್ತಮಾನದ ನೋವು, ಬೇಸರ, ಜಡತೆ ಕಾಡಬಹುದು.

ಮಾರನ ತಡೆಗಳ ನಿವಾರಣೆ :

ಈ ರೀತಿ ನಿಮಗೆ ಕಾಡುವ ಯೋಚನೆಗಳ ಸಂಗ್ರಹವೇ ಪಂಚನೀವರಣ. ಅಂದರೆ ಇಂದ್ರಿಯಾಸಕ್ತಿ, ದ್ವೇಷ, ಜಡತೆ, ಚಿಂತೆ ಮತ್ತು ಸಂದೇಹ ಹಾಗು ನೋವು ಇವೇ ನಿಮ್ಮನ್ನು ಕಾಡುತ್ತಿರುವುದು. ಇವು ಭೂತಕಾಲದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ಭವಿಷ್ಯದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ವರ್ತಮಾನದಲ್ಲಿ ಬೇಸರ, ಸೋಮಾರಿತನ ಅಥವಾ ಕಾಲುಗಳ ನೋವಿನ ದ್ವೇಷದ ರೂಪದಲ್ಲಿ ಕಾಡಬಹುದು.
ಇವೆಲ್ಲದರಿಂದ ಮೀರಿ ಸಾಧನೆ ಮಾಡುತ್ತೇವೆ ಎಂದು ಸಂಕಲ್ಪಿಸಿ ಹಾಗು ದೃಢ ನಿಧರ್ಾರದಿಂದ ಪ್ರಯತ್ನಶೀಲರಾಗಿ ಮತ್ತು ಯಶಸ್ವಿಗಳಾಗಿ ಆಗಲೇ ನಿಮಗೆ ಜಯ ಸಾಧ್ಯ.
ಇವೆಲ್ಲವೂ ಯೋಚನೆಗಳಾಗಿವೆ, ಇವು ಭೂತಕಾಲದ ನೆನಪುಗಳಾಗಿರುತ್ತವೆ ಅಥವಾ ಭವಿಷ್ಯದ ಯೋಜನೆ ಅಥವಾ ಕನಸುಗಳಾಗಿರುತ್ತದೆ ಅಷ್ಟೇ. ಈ ಯೋಚನೆಗಳನ್ನು ನೀವು ಮೀರಿ ಸಾಧನೆ ಮಾಡಬೇಕು.
ಈ ತಡೆಗಳನ್ನು ಮೀರಬೇಕಾದರೆ ನೀವು ಈ ಹಿಂದೆ ಶೀಲವನ್ನು ಪಾಲಿಸುತ್ತಿರಬೇಕು, ಇಂದ್ರಿಯಗಳ ರಕ್ಷಣೆ (ಸಂಯಮ) ಮಾಡಬೆಕು, ಅಧ್ಯಯನ ಮಾಡಿ ಜ್ಞಾನ ಗಳಿಸಿ ಸಂದೇಹ ಮುಕ್ತವಾಗಿರಬೇಕು. ಸತ್ಸಂಗದಲ್ಲಿ ಇರಲೇಬೇಕು.
ವರ್ತಮಾನದಲ್ಲಿ ತಡೆಗಳ ರಹಿತ ಸ್ಥಿತಿಗೆ ನಿರಂತರ ಶ್ರಮಿಸಬೇಕು. ಪಂಚ ಬಲಗಳನ್ನು ಸಪ್ತಬೋಧಿ ಅಂಗಗಳನ್ನು ವೃದ್ಧಿಗೊಳಿಸಬೇಕು.
ಈ ಹಿಂದೆಯೇ ಅಶುಭ ಧ್ಯಾನ, ಬ್ರಹ್ಮವಿಹಾರ ಧ್ಯಾನ, ಕರ್ಮಫಲ ಚಿಂತನೆ, ಪ್ರಯತ್ನಶೀಲತೆಯ ಮಹತ್ವ, ಅಲೋಕ ಕಸಿನಾ, ಸುಖವೃದ್ಧಿ, ಶ್ರದ್ಧೆ, ಜ್ಞಾನದ ವೃದ್ಧಿ ಮಾಡಿದರೆ ಪಂಚ ತಡೆಗಳು ಬಲಹೀನವಾಗುತ್ತದೆ, ನಾಶವಾಗುತ್ತದೆ.
ಇವೆಲ್ಲವೂ ಯೋಚನೆಗಳಾಗಿವೆ, ಯಾವಾಗ ನೀವು ಯೋಚನೆ ಮೀರುವಿರೋ ಆಗ ನೀವು ತಡೆಗಳನ್ನು ಮೀರುವಿರಿ. ಈ ರೀತಿಯ ಅಕುಶಲ ಯೋಚನೆ ಉಂಟಾದಾಗ ನೀವು ಅವುಗಳ ಉತ್ಪತ್ತಿಯಾಗದಂತೆಯೇ ತಡೆಯಬೇಕು. ಏಕೆಂದರೆ ಪಾಪಯುತವಾದ ಅಕುಶಲ ಯೋಚನೆಗಳು ಪ್ರಾರಂಭ ಸ್ಥಿತಿಯಲ್ಲಿಯೇ ದಮನ ಮಾಡಿದರೆ ಸೂಕ್ತ. ಇಲ್ಲದೇ ಹೋದರೆ ಅವು ನಿಮ್ಮನ್ನು ದಮನಮಾಡಿ ಬಿಡುತ್ತದೆ.


ಕೇವಲ ನಿಮ್ಮ ಯೋಚನೆಗಳನ್ನು ನಿಯಂತ್ರಿಸಿ (ರಕ್ಷಿಸಿರಿ) :

ಶ್ರಾವಸ್ತಿಯಲ್ಲಿ ಒಬ್ಬ ಗೃಹಪತಿ ಪುತ್ರನಿದ್ದನು. ಆ ಯುವಕನು ಧಮರ್ಾಚಾರಿ ಯಾಗಿದ್ದನು. ಭಿಕ್ಷುಗಳಿಗೆ ದಾನ ನೀಡುತ್ತಾ, ಶೀಲ ಪಾಲಿಸುತ್ತಾ ಸದ್ಗೃಹಸ್ಥನಾಗಿದ್ದನು. ಒಮ್ಮೆ ಭಿಕ್ಷುವಿನ ವಚನದಂತೆ ಆತ ತನ್ನ ಐಶ್ವರ್ಯವನ್ನು 3 ಭಾಗ ಮಾಡಿ 1 ಭಾಗವನ್ನು ಉದ್ಯಮದಲ್ಲಿ ಹೂಡಿದನು. ಮತ್ತೊಂದು ಭಾಗವನ್ನು ಕುಟುಂಬ ಪಾಲನೆಗೆ ಮೀಸಲಿಟ್ಟನು. ಮತ್ತು 3ನೆಯ ಭಾಗವನ್ನು ದಾನಕ್ಕೆ ಮೀಸಲಿಟ್ಟು ದಾನಿಯಾದನು. ಇದೇರೀತಿ ದಾನ, ಶೀಲ ಪಾಲಿಸುತ್ತಾ ಆತನಿಗೆ ಆನಂದ ಉಂಟಾಗಿ ಮುಂದೆ ನಾನು ಏನನ್ನು ಮಾಡಬೇಕೆಂದು ಆತ ಕೇಳಿದಾಗ, ತ್ರಿಶರಣು ಪಡೆ ಎಂದು ಭಿಕ್ಷುಗಳು ನುಡಿದರು. ಹಾಗೆಯೇ ಆತನು ತ್ರಿಶರಣು ಪಡೆದು ಮುಂದೆ ಹಾಗೆಯೇ ಪಂಚಶೀಲ ಪಾಲಿಸುತ್ತಾ ಹಾಗೆಯೇ ದಶಶೀಲ ಪಾಲಿಸಲು ಆರಂಭಿಸಿದನು. ನಂತರ ಆತನು ಪ್ರಾಪಂಚಿಕತೆಯಿಂದ ಮುಕ್ತನಾಗಿ ಭಿಕ್ಷುವಾದನು.
ಆತನು ಭಿಕ್ಷುವಾದಾಗ ಆತನಿಗೆ ಅಭಿಧಮ್ಮವನ್ನು ಒಬ್ಬ ಭಿಕ್ಷು ಉಪದೇಶಿಸಿದರು. ಹಾಗೆಯೇ ವಿನಯದ ಗುರುಗಳು ಆತನಿಗೆ ಭಿಕ್ಷುಗಳ ನಿಯಮಗಳನ್ನು ತಿಳಿಸಿ ಅದನ್ನು ನೆನಪಿಡಲು ಮತ್ತು ಪಾಲಿಸಲು ತಿಳಿಸಿದರು. ಆತನು ಚಿಂತಾಕ್ರಾಂತನಾದನು. ಏಕೆಂದರೆ ಶೀಲದ ನಿಯಮಗಳು 227 ಇದ್ದವು. ಜೊತೆಗೆ ಧ್ಯಾನದ ವಿಷಯಗಳು, ಜೊತೆಗೆ ಬೌದ್ಧ ಮನಶಾಸ್ತ್ರ (ಅಭಿಧಮ್ಮದ) ವಿಸ್ತಾರ ವಿಶ್ಲೇಷಣೆ ಬೇರೆ. ಸುತ್ತಗಳ ನೆನಪು ಬೇರೆ ಇಡಬೇಕಿತ್ತು. ಆತನಿಗೆ ಇದಕ್ಕಿಂತ ಗೃಹಸ್ಥ ಜೀವನ ಸ್ವತಂತ್ರ ಎನಿಸಿತು. ಆತನು ಮತ್ತೆ ಗೃಹಸ್ಥನಾಗಲು ಸಿದ್ಧನಾದನು. ಆದರೆ ಅದು ಬಿಡಲಾರದೆ ಇದು ಹಿಡಿಯಲಾರದೆ ಆತನು ತನ್ನ ಮಾನಸಿಕ ಹೊರೆಯಿಂದ ಕುಗ್ಗಿದನು, ಅತೃಪ್ತನಾದನು, ಸಂದೇಹದಿಂದ ಕೂಡಿದನು. ಅಸಂತುಷ್ಟನಾದನು, ಅಸುಖಿಯಾಗಿ ದುರ್ಬಲನಾದನು. ಆತನ ಈ ಚಿಂತೆ, ದುಃಖ ಬುದ್ಧರಿಗೆ ಅರಿವಾಗಿ ಆತನಿಗೆ ಈ ರೀತಿ ಉಪದೇಶ ನೀಡಿದರು.
ನೀನು ಕೇವಲ ಮನಸ್ಸನ್ನು ನಿಯಂತ್ರಿಸಿದರೆ ಅಷ್ಟೇ ಸಾಕು, ನೀನು ಮತ್ತೆ ಏನನ್ನೂ ನಿಯಂತ್ರಿಸುವುದು ಬೇಡ. ಆದ್ದರಿಂದ ಕೇವಲ ನಿನ್ನ ಮನಸ್ಸನ್ನು ಅಕುಶಲಗಳಿಂದ ರಕ್ಷಿಸಿಕೋ.
ಮನಸ್ಸನ್ನು ಗ್ರಹಿಸುವುದು ಅತಿ ಕಷ್ಟಕರ, ಅದು ಅತ್ಯಂತ ಕೋಮಲವು ಮತ್ತು ಅತಿ ಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ.
- ಧಮ್ಮಪದ 36
ನಂತರ ಆ ಯುವ ಭಿಕ್ಷುವು ಅದರಂತೆಯೇ ಸಾಧಿಸಿ ಅರಹಂತನಾಗುತ್ತಾನೆ.
ಹೀಗೆ ಚಿತ್ತದ ರಕ್ಷಣೆ ಅಥವಾ ಯೋಚನೆಗಳ ರಕ್ಷಣೆ ಮಾಡಿದಾಗ ಮಾತ್ರ ನಾವು ಧ್ಯಾನದಲ್ಲಿ ಯಶಸ್ವಿಯಾಗುತ್ತೇವೆ.
ಬುದ್ಧರು ತಮ್ಮ ಬೋಧಿ ಪ್ರಾಪ್ತಿಯ ಮುನ್ನ ಮಾಡಿದ ಮಹಾ ಸಂಕಲ್ಪ ನೆನಪಿಸಿಕೊಳ್ಳಿ.
ನನ್ನ ಚರ್ಮ, ಮಾಂಸ, ಮೂಳೆ ಮತ್ತು ರಕ್ತಗಳೆಲ್ಲವೂ ಒಣಗಿಹೋದರೂ ಸರಿಯೆ, ಸಂಬೋಧಿಪ್ರಾಪ್ತಿಯ ವಿನಃ ನಾನು ಈ ಪದ್ಮಾಸನ ಭಂಗಿಸಲಾರೆ. ಈ ಸ್ಥಳದಿಂದ ಅಲುಗಾಡಲಾರೆ. ಅದರಂತೆಯೇ ಅವರು ಸಹಸ್ರ ವಿಘ್ನಗಳು ಬಾಧಿಸಿದರೂ ಅಲುಗಾಡದೆ ಸಮ್ಮಾ ಸಂಬೋಧಿ ಪ್ರಾಪ್ತಿ ಮಾಡಿದರು.
ನಾವು ಸಹ ಹಾಗೆಯೇ ನಮ್ಮ ಯೋಚನೆಗಳನ್ನು ಗೆಲ್ಲಬೇಕಾಗಿದೆ. ಧ್ಯಾನಸಿದ್ಧಿಗೊಳಿಸ ಬೇಕಾಗಿದೆ. ವಿಶುದ್ಧಿ ಪ್ರಾಪ್ತಿಗೊಳಿಸಬೇಕಾಗಿದೆ. ವಿಮುಕ್ತರಾಗಬೇಕಾಗಿದೆ. ನಿಬ್ಬಾಣ ಪಡೆಯಬೇಕಾಗಿದೆ.

ಯೋಚನೆಗಳೊಂದಿಗೆ ಹೋರಾಟ :

ಒಂದು ನಾವು ಅಕುಶಲ ಯೋಚನೆ ಉಂಟಾಗದಂತೆ ಮನಸ್ಸನ್ನು ರಕ್ಷಿಸಬೇಕಾಗುತ್ತದೆ (ಸಂಯಮ ತಾಳಬೇಕಾಗುತ್ತದೆ).
ಒಂದುವೇಳೆ ಎಂದಾದರೂ ಉದಯಿಸಿದರೆ ಅದನ್ನು ಅಲಕ್ಷಿಸದೆ ವಜರ್ಿಸಬೇಕು. ಅದರಲ್ಲಿಯೆ ದೃಢ ಶ್ರಮಪಟ್ಟು ಯಶಸ್ಸು ಪಡೆಯಬೇಕು. ತಕ್ಷಣ ಉಸಿರಾಟದಲ್ಲಿ ಮನಸ್ಸು ತಿರುಗಿಸಬೇಕು. ಹಾಗೆಯೇ ಮುಂದುವರೆಯಬೇಕು. ನೆನಪಿಡಿ, ಒಬ್ಬನು ಪೂರ್ವದ ಕಡೆ ಪ್ರಯಾಣ ಮಾಡಿದಷ್ಟು ಪಶ್ಚಿಮದಿಂದ ವಿಮುಖನಾಗುತ್ತಾನೆ. ಹಾಗೆಯೇ ನೀವು ಉಸಿರಾಟದಲ್ಲಿ ತಲ್ಲೀನರಾದಷ್ಟು ನೀವು ಅಕುಶಲದಿಂದ ದೂರವಾಗುತ್ತೀರಿ ಅಥವಾ ಈ ಯೋಚನೆಗಳು ಅತಿ ಅಪಾಯಕಾರಿ ಎಂದು ಅಪಾಯ ಪರಿಶೋಧನೆ ಮಾಡಿದಾಗ ಅವು ಅಂತ್ಯಗೊಳಿಸಿ ಅಥವಾ ಅಕುಶಲ ಯೋಚನೆಗಳನ್ನು ಮರೆಯಬೇಕು ಅಥವಾ ಅವುಗಳ ಪ್ರಕ್ರಿಯೆ ವೀಕ್ಷಿಸಿ ಸಮತೋಲನದಿಂದ ಸ್ಥಿರಗೊಳಿಸಬೇಕು ಅಥವಾ ಪ್ರಬಲವಾದ ಬಲಪ್ರಯೋಗದಿಂದ, ದೃಢನಿಧರ್ಾರದಿಂದ, ಶ್ರದ್ಧೆಯಿಂದ ಅವುಗಳ ಅಂತ್ಯ ಮಾಡಿರಿ.
(ಇದರ ವಿವರಕ್ಕಾಗಿ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1 ಓದಿರಿ)
ಛಾವಣಿ ಸರಿಯಿಲ್ಲದ ಮನೆಯಲ್ಲಿ ಮಳೆಯ ನೀರು ನುಗ್ಗುವಂತೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವು ನುಗ್ಗುತ್ತದೆ.
ಛಾವಣಿ ಸರಿಯಿರುವ ಮನೆಯಲ್ಲಿ ಮಳೆಯ ನೀರು ನುಗ್ಗದಂತೆ ಅಭಿವೃದ್ಧಿ ಹೊಂದಿರುವ ಚಿತ್ತದಲ್ಲಿ ರಾಗವು ನುಗ್ಗಲಾರದು ಧಮ್ಮಪದ 13/14
ಹೀಗೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವಷ್ಟೇ ಅಲ್ಲ, ದ್ವೇಷ ಮತ್ತು ಮೋಹಗಳು ಪ್ರವೇಶಿಸುತ್ತದೆ. ಆದ್ದರಿಂದ ನಾವು ಪ್ರಜ್ಞಾದಿಂದ ಮತ್ತು ಸಮಾಧಿಯಿಂದ ಚಿತ್ತಾಭಿವೃದ್ಧಿ ಹೊಂದಿದಾಗ ಯಾವುದೇ ಕೆಟ್ಟ ಯೋಚನೆಗಳು ಉಂಟಾಗಲಾರದು.
ನಿಮ್ಮ ಮನಸ್ಸನ್ನು ನಿಯಂತ್ರಿಸಿ :
ಆರು ಭಿಕ್ಷುಗಳು ಬುದ್ಧರಿಂದ ಧ್ಯಾನದ ವಸ್ತು ಸ್ವೀಕರಿಸಿ ಪರ್ವತದ ಬುಡದ ಬಳಿಯಲ್ಲಿದ್ದ ಹಳ್ಳಿಗೆ ಧ್ಯಾನಿಸಲು ಹೊರಟರು. ಅಲ್ಲಿ ಮಾತಿಕಮಾತೆ ಎಂಬುವಳು ಹಳ್ಳಿಗೆ ಮುಖ್ಯಸ್ಥರಾಗಿದ್ದಳು. ಆಕೆ ಭಿಕ್ಷುಗಳಿಗಾಗಿ ಅವರ ಮಳೆಗಾಲದ ಆಶ್ರಯಕ್ಕಾಗಿ ನೆಲೆ ಮಾಡಿಕೊಟ್ಟಳು. ಭಿಕ್ಷುಗಳು ಅಲ್ಲೇ ಧ್ಯಾನಿಸಿ ವಾಸಿಸತೊಡಗಿದರು.
ಒಮ್ಮೆ ಆಕೆಯು ಭಿಕ್ಷುಗಳಿಂದ ಧ್ಯಾನ ಕಲಿಯಲು ಇಚ್ಛಿಸಿದಳು. ಅವರು ಅಕೆಗೆ 32 ದೇಹ ಭಾಗಗಳನ್ನು ಧ್ಯಾನಿಸುವಂತಹ ಕಾಯಾಗತಸತಿ ಕಲಿಸಿದರು. ಆಕೆಯು ಶ್ರದ್ಧೆಯಿಂದ, ಪ್ರಯತ್ನದಿಂದ ಮತ್ತು ಪ್ರಜ್ಞಾದಿಂದ ದೇಹದ ಅನಿತ್ಯತೆ ಗಮನಿಸಿ ಅನಾಗಾಮಿತ್ವವನ್ನು ಪಡೆದಳು ಮತ್ತು ಅಷ್ಟೇ ಅಲ್ಲ, ಆಕೆ ಅಭಿಜ್ಞಾಶಕ್ತಿಯನ್ನು ಪಡೆದು ದಿವ್ಯಚಕ್ಷುವನ್ನು ಸಂಪಾದಿಸಿದಳು. ಅಂತಹುದನ್ನು ಇನ್ನೂ ಆ ಭಿಕ್ಷುಗಳೇ ಸಂಪಾದಿಸಿರಲಿಲ್ಲ.
ಆಕೆ ತನ್ನ ದಿವ್ಯಚಕ್ಷುವಿನ ಸಹಾಯದಿಂದ ಭಿಕ್ಷುಗಳು ಇನ್ನೂ ಅರಹಂತರಾಗಿಲ್ಲ ಎಂದು ಅರಿತಳು. ಆಕೆಗೆ ಭಿಕ್ಷುಗಳು ಶಾರೀರಿಕವಾಗಿ ದುರ್ಬಲರಾಗಿದ್ದು, ಆದ್ದರಿಂದಲೆ ಅವರ ಮನಸ್ಸಿಗೆ ಶಾಂತಿ ಸಿಕ್ಕಿಲ್ಲ ಎಂದು ಅರಿತು ಆಕೆಯು ಅವರಿಗಾಗಿ ಪುಷ್ಟಿಯುತ ಸ್ವಾದಿಷ್ಟಕರ ಆಹಾರ ಮಾಡಿ ಬಡಿಸಲಾರಂಭಿಸಿದಳು. ಇದರಿಂದಾಗಿ ಭಿಕ್ಷುಗಳು ಶ್ರೇಷ್ಠವಾಗಿ ಅರಹಂತತ್ವ ಪ್ರಾಪ್ತಿ ಮಾಡಿದರು.
ವಷರ್ಾವಾಸ ಮುಗಿದ ನಂತರ ಅವರು ಭಗವಾನರ ಬಳಿಗೆ ಬಂದು ಎಲ್ಲ ವಿಷಯವನ್ನು ಹೇಳಿದರು. ಒಬ್ಬ ಭಿಕ್ಷುವು ಈ ವಿಷಯ ತಿಳಿದು ಅತನು ಅಲ್ಲೇ ಧ್ಯಾನ ವಿಮುಕ್ತಿ ಸಾಧಿಸಲು ಭಗವಾನರಿಂದ ಧ್ಯಾನವಸ್ತು ಪಡೆದು ಆಕೆಯ ಮನೆಯಲ್ಲಿದ್ದು ಧ್ಯಾನವನ್ನು ಆರಂಭಿಸಿದನು. ಆತನಿಗೆ ಇಷ್ಟವಾದ ತಿಂಡಿಗಳೇ ಆಹಾರಗಳೇ ಆಕೆ ಬಡಿಸಿದಾಗ ಆತನಿಗೆ ಆಶ್ಚರ್ಯವಾಯಿತು. ಆತ ಆಕೆಗೆ ವಿಚಾರಿಸಿದಾಗ ಆಕೆ ಆತನ ಮನಸ್ಸು ಓದಿ ಸಿದ್ಧಪಡಿಸಿರುವುದಾಗಿ ಒಪ್ಪಿದಳು.
ಆಗ ಆ ಭಿಕ್ಷುವು ಈ ರೀತಿ ಯೋಚಿಸಿದನು. ನಾನಿನ್ನೂ ಪ್ರಾಪಂಚಿಕನಾಗಿದ್ದೇನೆ, ನನ್ನಲ್ಲಿ ಇನ್ನೂ ಕಶ್ಮಲಗಳಿಂದ ಕೂಡಿದ ಪಾಪಯುತ ಯೋಚನೆಗಳೇ ಉದಯಿಸುತ್ತಿರುತ್ತವೆ. ಆಕೆಯೇನಾದರೂ ಅದನ್ನು ಓದಿದರೆ ನನ್ನ ಬಗ್ಗೆ ಕೆಟ್ಟದಾಗಿ ಯೊಚಿಸುವಳು ಹೀಗೆ ಯೋಚಿಸಿ ಭೀತನಾಗಿ ಆತನು ಜೇತವನಕ್ಕೆ ಹಿಂದಿರುಗಿದನು ಮತ್ತು ಬುದ್ಧರಿಗೆ ಎಲ್ಲಾ ವಿಷಯವನ್ನು ತಿಳಿಸಿದನು. ಆಗ ಬುದ್ಧರು ಆತನಿಗೆ ನಿನ್ನ ಮನಸ್ಸನ್ನು ನಿಯಂತ್ರಿಸು ಎಂದರು.
ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ. ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಎಲ್ಲಾ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದು. ಪಳಗಿಸಲ್ಪಟ್ಟ ಮನಸ್ಸು ಸುಖಕಾರಿ ಎಂದು ನುಡಿದು ಧ್ಯಾನ ವಿಷಯವಲ್ಲದೆ ಮತ್ತೇನೂ ಯೋಚಿಸಬೇಡ ಎಂದು ತಿಳಿಸಿ ಕಳಿಸಿಕೊಟ್ಟರು. (ಧಮ್ಮಪದ 35)
ಈಗ ಆತನು ಮನಸ್ಸನ್ನು ನಿಯಂತ್ರಿಸಿದ್ದರಿಂದಾಗಿ ಪ್ರಶಾಂತವಾಗಿ ಧ್ಯಾನಿಸ ಲಾರಂಭಿಸಿದನು. ಆತನು ಸ್ವಲ್ಪ ಕಾಲದಲ್ಲೇ ಚಿತ್ತಶುದ್ಧಿ ಪಡೆದು ಅರಹಂತನಾದನು.

Tuesday 19 December 2017

ಸತಿಪಟ್ಠಾನ ಸುತ್ತದಲ್ಲಿ ಅನಾಪಾನಾಸತಿ :

ಸತಿಪಟ್ಠಾನ ಸುತ್ತದಲ್ಲಿ ಅನಾಪಾನಾಸತಿ :


ಭಿಕ್ಷುವು ಅರಣ್ಯದಲ್ಲಿ ಹೋಗಿ ಅಥವಾ ಮರದ ಬುಡದಲ್ಲಿ ಕುಳಿತು ಅಥವಾ ಏಕಾಂತ ಸ್ಥಳದಲ್ಲಿ ಪದ್ಮಾಸನದಲ್ಲಿ ಆಸೀನನಾಗಿ ದೇಹವನ್ನು ನೇರಕ್ಕೆ ಇಟ್ಟು ಜಾಗರೂಕತೆಯಲ್ಲಿ ತಲ್ಲೀನನಾಗುತ್ತಾನೆ.

ಅರಿವಿನಿಂದ ಉಶ್ವಾಸ (ಉಸಿರನ್ನು ತೆಗೆದುಕೊಳ್ಳುವುದು) ಮಾಡುತ್ತಾನೆ. ಅರಿವಿನಿಂದ ನಿಶ್ವಾಸ (ಉಸಿರನ್ನು ಹೊರಕ್ಕೆ ಬಿಡುವುದು) ಮಾಡುತ್ತಾನೆ. ಅವನಿಗೆ ಉದ್ದವಾದ ಉಸಿರನ್ನು ವಿಶ್ವಾಸಿಸುವಾಗ ನಾನು ದೀರ್ಘವಾದ ಉಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವಿರುತ್ತದೆ. ಹಾಗೆಯೇ ಉದ್ದವಾದ ಉಸಿರನ್ನು ನಿಶ್ವಾಸಿಸುವಾಗ ನಾನು ದೀರ್ಘವಾದ ಉಸಿರನ್ನು ನಿಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವು ಇರುತ್ತದೆ.

ಅದರಂತೆಯೇ ಕಿರಿದಾದ ಉಶ್ವಾಸ ಮಾಡುತ್ತಿರುವಾಗ ನಾನು ಕಿರಿದಾದ ಉಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ. ಹಾಗೆಯೇ ಕಿರಿದಾದ ನಿಶ್ವಾಸ ಮಾಡುತ್ತಿರುವಾಗ ನಾನು ಕಿರಿದಾಗಿ ನಿಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ.

ದೇಹದಲ್ಲಿ ಇಡೀ ಉಸಿರಾಟದ ಪ್ರಕ್ರಿಯೆಯನ್ನು ಅನುಭವಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಿರುತ್ತಾನೆ.

ಉಸಿರಾಟದ ಪ್ರಕ್ರಿಯೆಯನ್ನು (ದೇಹವನ್ನು) ಶಾಂತಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ. ಉಸಿರಾಟದ ಕಾಯವನ್ನು ಪ್ರಕ್ರಿಯೆಯನ್ನು ಶಾಂತಗೊಳಿಸುತ್ತಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.

ಹೇಗೆ ಕುಶಲಿಯಾದ ಚರಕಿ ಕೆಲಸದವ ಅಥವಾ ಆತನ ಶುಶುಕ್ಷು ಉದ್ದವಾಗಿ ತಿರುಗಿಸುವಾಗ ನಾನು ದೀರ್ಘವಾಗಿ ತಿರುಗಿಸುತ್ತಿದ್ದೇನೆ. ಹಾಗೆಯೇ ಕಿರಿದಾಗಿ ತಿರುಗಿಸುವಾಗ ನಾನು ಕಿರುವಾಗಿ ತಿರುಗಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. ಅದರಂತೆಯೇ ಭಿಕ್ಷುವು ದೀರ್ಘವಾಗಿ ಉಶ್ವಾಸಿಸುವಾಗ ನಾನು ದೀರ್ಘವಾಗಿ ಉಸಿರಾಡುತ್ತಿದ್ದೇನೆ ಎಂದು ಕಿರಿದಾಗಿ ನಿಶ್ವಾಸಿಸುವಾಗ ನಾನು ಕಿರಿದಾಗಿ ನಿಶ್ವಾಸಿಸುತ್ತಿರುವೆ ಎಂದು... ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.

ಹೀಗೆ ಆತನು ಕಾಯಾನುಪಸ್ಸಿಯಾಗಿ ಆಂತರಿಕವಾಗಿ ಅಥವಾ ಬಾಹ್ಯವಾಗಿ ಅಥವಾ ಆಂತರಿಕ ಮತ್ತು ಬಾಹ್ಯಗಳೆರಡರಲ್ಲೂ ಸಹಾ ಆತನು ಉಸಿರಾಟದಲ್ಲಿ ಉದಯಿಸುವ ಸ್ವಭಾವ (ಸಮುದಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಅಳಿಯುವಿಕೆಯ ಸ್ವಭಾವವನ್ನು (ವಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಉದಯವಯ (ಉದಯಿಸುವಿಕೆಯ ಮತ್ತು ಅಳಿಯುವಿಕೆಯ ಸ್ವಭಾವ)ವನ್ನು ಅರಿಯುತ್ತಾನೆ.

ಆಗ ಆತನಲ್ಲಿ ಇಲ್ಲಿ ದೇಹವಷ್ಟೇ ಇದೆ ಎಂಬ ಪ್ರಜ್ಞಾವುಂಟಾಗುತ್ತದೆ. ಪ್ರಜ್ಞಾವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ ಆತನು ಲೋಕದ ಯಾವುದಕ್ಕೂ ಅಂಟದೆ ಸ್ವತಂತ್ರವಾಗಿ ಜೀವಿಸುತ್ತಾನೆ.
ಹೀಗೆ ಭಿಕ್ಷುವು ಕಾಯಾನುಪಸ್ಸಿಯಾಗಿ ಜೀವಿಸುತ್ತಾನೆ.

ಆನಾಪಾನಸತಿ ಸುತ್ತ (ಮಜ್ಜಿಮ ನಿಕಾಯ 118ನೇ ಸುತ್ತ)

ಆದರೆ ಮಜ್ಜಿಮ ನಿಕಾಯದ ಸುತ್ತದಲ್ಲಿ ಅನಾಪಾನಾಸತಿಯು ಇನ್ನೂ ವಿವರವಾಗಿ ಬೋಧಿಸಲಾಗಿದೆ.
.... ಈಗ ಹೇಗೆ ಆನಾಪಾನಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಅನುಸರಿಸಿದರೆ ಮಹತ್ತರ ಲಾಭವಾಗುತ್ತದೆ. ಮಹತ್ತರ ಫಲವು ಸಿಗುತ್ತದೆ?
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ.
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ.
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ.
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಶಾಂತಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಈ ರೀತಿಯಾಗಿ ಆನಾಪಾನಾಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಪಾಲಿಸಿದರೆ ಮಹತ್ಪಲ ದೊರೆಯುತ್ತದೆ ಮತ್ತು ಮಹತ್ ಲಾಭ ದೊರೆಯುತ್ತದೆ. ಆಗ ಕೊನೆಯ ಒಳ ಉಸಿರು ಮತ್ತು ಹೊರ ಉಸಿರುಗಳು ಜಾಗ್ರತೆ ಇರುವಾಗಲೇ ನಿಲ್ಲುತ್ತದೆ.

ಭಿಕ್ಷುಗಳೇ ಆನಾಪಾನಾಸತಿಯನ್ನು ಬೆಳವಣಿಗೆ ಮಾಡಿದರೆ ಮತ್ತು ವೃದ್ಧಿಗೊಳಿಸಿದರೆ ಮಹತ್ಫಲವನ್ನು ನೀಡುತ್ತದೆ ಮತ್ತು ಮಹತ್ಲಾಭವನ್ನು ನೀಡುತ್ತದೆ. ಯಾವಾಗ ಆನಾಪನಾಸತಿಯು ಅಭಿವೃದ್ಧಿಗೊಳ್ಳುತ್ತದೋ ಮತ್ತು ಬೆಳವಣಿಗೆ ಆಗುವುದೋ ಆಗ ಅದು 4 ಸತಿಪಟ್ಟಾನಗಳನ್ನು ಪೂರ್ಣಗೊಳಿಸುತ್ತದೆ. ಯಾವಾಗ ನಾಲ್ಕು ಸತಿಪಟ್ಟಾನಗಳನ್ನು ಅಭಿವೃದ್ಧಿಗೊಳಿಸಿ ಬೆಳವಣಿಗೆ ಮಾಡುವಿರೋ ಆಗ ಅದು 7 ಬೋಧಿ ಅಂಗಗಳ ಬೆಳವಣಿಗೆ ಮೂಡುತ್ತದೆ ಮತ್ತು ಅಭಿವೃದ್ಧಿಗೊಳಿಸುತ್ತದೆ. ಯಾವಾಗ ಸಪ್ತಬೋಧಿ ಅಂಗಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿಗೊಳಿಸುತ್ತವೆಯೋ ಆಗ ಅವು ನಿಜವಾದ ವಿದ್ಯೆ (ಬೋಧಿ) ಮತ್ತು ನಿಜವಾದ ವಿಮುಕ್ತಿ (ನಿಬ್ಬಾಣ) ನೀಡುತ್ತವೆ. 

ಚಿತ್ತವಿಶುದ್ದಿ

                                          ಚಿತ್ತವಿಶುದ್ದಿ


ಸರ್ವ ಪಾಪಗಳನ್ನು ಮಾಡದಿರುವಿಕೆ,
 ಕುಶಲ ಕರ್ಮಗಳನ್ನು ಮಾಡುವಿಕೆ (ಸಂಪಾದಿಸುವಿಕೆ)
 ಚಿತ್ತವನ್ನು ಪರಿಶುದ್ಧಿಗೊಳಿಸುವಿಕೆ ಇದೇ ಬುದ್ಧರ ಶಾಸನವಾಗಿದೆ. 

(ಧಮ್ಮಪದ 183)
ಪಾಪಗಳನ್ನು ಮಾಡದಿರುವಿಕೆ ಮತ್ತು ಕುಶಲ ಕರ್ಮಗಳನ್ನು ಮಾಡುವಿಕೆ ಇವರೆಡು ಶೀಲದಲ್ಲಿ ಅಡಕವಾಗಿದೆ. ಅಥವಾ ಇವರೆಡರಿಂದ ಶೀಲ ನಿಮರ್ಾತವಾಗಿದೆ. ಆದರೆ ಚಿತ್ತವನ್ನು ಪರಿಶುದ್ಧಗೊಳಿಸುವಿಕೆ ಸಮಾಧಿ ಮತ್ತು ಪ್ರಜ್ಞಾಗೆ ಸಂಬಂಧಪಟ್ಟಿದೆ.  ಸಮಾಧಿಯಿಂದ ತಾತ್ಕಾಲಿಕವಾಗಿ ಚಿತ್ತವು ಪರಿಶುದ್ಧಿಯಾಗುತ್ತದೆ. ಆದರೆ ಅದರ ಪ್ರವೃತ್ತಿ ಮತ್ತು ಪ್ರಚನ್ನತೆಗಳು ಸುಪ್ತವಾಗಿಯೇ ಇರುತ್ತದೆ. ಪ್ರಜ್ಞಾಭಾವನದಿಂದ ಚಿತ್ತವು ಪೂರ್ಣವಾಗಿ ವಿಶುದ್ಧಿಯಾಗುತ್ತದೆ.
ಇಲ್ಲಿ ಸಮಾಧಿಯಾನಿಕ ಮತ್ತು ವಿಪಶ್ಶನಯಾನಿಕ ಎಂಬ ಎರಡು ಬಗೆ ಧ್ಯಾನಗಳಿವೆ. ಸಮಾಧಿಯಾನಿಕ ಧ್ಯಾನವು ಚತುರ್ಥಸಮಾಧಿ ಅಥವಾ ಅರೂಪ ಧ್ಯಾನಗಳ ಪರಾಕಾಷ್ಠೆಯಾಗಿದೆ. ಅಲ್ಲಿನ ಸಾಧಕರು ನಂತರ ವಿಪಶ್ಶನ ಪ್ರಾರಂಭಿಸುತ್ತಾರೆ. ಸಮಥಾ ಧ್ಯಾನಗಳನ್ನು ಈಗಾಗಲೇ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1ರಲ್ಲಿ ಪರಿಚಯಿಸಿದ್ದೇವೆ. ಆ ಸಾಧನೆ ಮಾಡಿದವರು ಈಗ ನಂತರ ವಿಪಶ್ಶನ ಧ್ಯಾನವನ್ನು ಪ್ರಾರಂಭಿಸಿ ಮಾರ್ಗ ಮತ್ತು ಫಲಗಳನ್ನು ಪಡೆಯುತ್ತಾರೆ. ಕೆಲವರು ಶೀಲವಿಶುದ್ದಿಯ ನಂತರವೇ ನೇರವಾಗಿ ವಿಪಶ್ಶನ ಪ್ರಾರಂಭಿಸುತ್ತಾರೆ. ಅಂತಹವರಿಗೆ ಸುಖ್ಖ ವಿಪಸ್ಸಕ (ಒಣ ವಿಪಶ್ಶನ ಧ್ಯಾನಿ) ಎನ್ನುತ್ತಾರೆ. ಏಕೆಂದರೆ ಅವರು ಸಮಾಧಿಯ ತೇವಾಂಶವಿಲ್ಲದೆಯೇ ಮಾರ್ಗದಲ್ಲಿದ್ದಾರೆ.

ಸಮಾಧಿ ಸ್ವರೂಪ

ಸಮಾಧಿಯು ಚಿತ್ತ ಏಕಾಗ್ರತೆಯ ಸ್ಥಿತಿಯಾಗಿದೆ. ಇಲ್ಲಿ ಒಂದು ವಿಷಯದ ಮೇಲೆ ಪೂರ್ಣ ಏಕಾಗ್ರವಹಿಸಿ ಮಿಕ್ಕೆಲ್ಲದರಿಂದ ವಿಮುಖರಾಗುತ್ತೇವೆ. ಇದಕ್ಕೆ ಪಾಳಿಯಲ್ಲಿ ಬಹಳಷ್ಟು ಸಮಾನಾರ್ಥಕ ಪದಗಳಿವೆ. ಝಾನ/ಧ್ಯಾನ/ಭಾವನ/ಸಮಾಪತ್ತಿ ಇತ್ಯಾದಿ.
ಎಲ್ಲಾ ಕುಶಲಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ. ಇಲ್ಲಿ ಒಂದೇ ವಿಷಯ ವಸ್ತುವಿನ ಮೇಲೆ ಮನಸ್ಸು ಮತ್ತು ಎಲ್ಲಾ ಮಾನಸಿಕ ಕುಶಲ ಸ್ಥಿತಿಗಳು ಏಕಾಗ್ರವಾಗುವುದರಿಂದ ಇದಕ್ಕೆ ಕುಶಲ ಸ್ಥಿತಿಗಳ ಸಮಗ್ರತೆ ಎನ್ನುವೆವು. ಎಲ್ಲಾ ಮಾನಸಿಕ ಸ್ಥಿತಿಗಳು ಬಾಗುವುದರಿಂದ, ಹಿಂಬಾಲಿಸುವುದರಿಂದ, ಕೇಂದ್ರೀಕೃತವಾಗುವುದರಿಂದ ಸಮವಾಗಿ, ಸರಿಯಾಗಿ, ಏಕ ವಿಷಯದ ಮೇಲೆ ಹರಿಸುವುದರಿಂದ ಇದು ಸಮಾಧಿಯಾಗಿದೆ.
ಸಮಾಧಿಯ ಲಕ್ಷಣವೇನೆಂದರೆ ನೆಲಸುವಿಕೆ ಮತ್ತು ಚದುರಿ ಹೋಗದಿರುವಿಕೆ. ಸಮಾಧಿಯ ಕ್ರಿಯೆಯೆ ಚದುರುವುದನ್ನು ತೆಗೆದುಹಾಕುವಿಕೆ, ಚಿತ್ತದ ಅಚಲತೆಯಿಂದ ಇದು ವ್ಯಕ್ತವಾಗುತ್ತದೆ. ಸಮಾಧಿಗೆ ತತ್ಕ್ಷಣದ ಕಾರಣವೇನೆಂದರೆ ಆನಂದಿಸುವಿಕೆ. ಆನಂದ, ಉತ್ಸಾಹದಿಂದ ಏಕಾಗ್ರವಾದಾಗ ಚಿತ್ತವು ಕಶ್ಮಲಗಳಿಂದ ಮುಕ್ತವಾಗುತ್ತದೆ. ಹೀಗೆ ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಭಾಧಿತವಾಗಿ, ತಡೆಗಳಿಂದ ದೂರವಾಗಿ, ಏಕವಾಗಿ, ಸ್ಥಿರವಾಗಿ, ಶಾಂತಿ ಮತ್ತು ಸುಖಗಳಿಂದ ಮನಸ್ಸು ಕೇಂದ್ರೀಕೃತವಾಗಿ ಸಮನ್ವಯವಾಗಿ, ವರ್ತಮಾನದಲ್ಲಿ ನೆಲೆಸಿ, ವಿಹರಿಸುವಂತಹುದೇ ಸಮಾಧಿಯಾಗಿದೆ.

ಉನ್ನತ ವಿಪಶ್ಶನ (ವಿಪಸ್ಸನ) ಧ್ಯಾನ :

(ಬೌದ್ಧರ) ಧ್ಯಾನಗಳಲ್ಲೇ ಅತ್ಯಂತ ಶ್ರೇಷ್ಠವಾದ ಧ್ಯಾನವು ಇದ್ದರೆ ಅದು ವಿಪಸ್ಸನವೇ ಆಗಿದೆ. ಬೌದ್ಧರ ಧ್ಯಾನಗಳು 2 ವಿಧವಾಗಿವೆ.
1. ಸಮಥ ಧ್ಯಾನಗಳು 2. ವಿಪಸ್ಸನ ಧ್ಯಾನಗಳು.
40 ಬಗೆಯ ಸಮಥ ಧ್ಯಾನಗಳನ್ನು ತಾನು ಈ ಹಿಂದಿನ ಗ್ರಂಥವಾದ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1ರಲ್ಲಿ ವಿವರಿಸಿದೆ. ಈ ಗ್ರಂಥದಲ್ಲಿ ನಾನು ವಿಪಸ್ಸನ ಅದರಲ್ಲೂ ಉನ್ನತ ವಿಪಸ್ಸನ ಅಥವಾ ಸಮಗ್ರ ವಿಪಸ್ಸನ ಧ್ಯಾನವನ್ನು ವಿವರಿಸಲಿದ್ದೇನೆ. ವಿಪಸ್ಸನ ಧ್ಯಾನವು ಬೌದ್ಧರ ಧ್ಯಾನಗಳಲ್ಲೇ ಮುಕುಟವೂ ಹೌದು, ಹೃದಯವೂ ಹೌದು ಮತ್ತು ಬೆನ್ನೆಲುಬು ಸಹಾ ಹೌದು. ಏಕೆಂದರೆ ಅದು ಅನುಪಮೇಯ ವಿಶಿಷ್ಟ, ಪರಮಶ್ರೇಷ್ಠ ಧ್ಯಾನಗಳಾಗಿವೆ. ಬುದ್ಧರ ಬೋಧಿ ಜ್ಞಾನವೆಲ್ಲವೂ ನಮಗೆ ಇದರಿಂದ ವ್ಯಕ್ತವಾಗಿ ತಿಳಿಯುತ್ತದೆ. ಇದನ್ನು ಪಾಲಿಸುತ್ತಿದ್ದಂತೆ ಇದರ ಮಹತ್ವವು ಇನ್ನೂ ಸ್ಪಷ್ಟವಾಗಿ, ಹೆಚ್ಚಾಗಿ ತಿಳಿಯಲ್ಪಡುತ್ತದೆ. ವಿಪಸ್ಸನ ಧ್ಯಾನವು ಅತ್ಯಂತ ಪುರಾತನ ಧ್ಯಾನಗಳಲ್ಲಿ ಒಂದಾಗಿದ್ದು, ಇದು ಬುದ್ಧ ಭಗವಾನರಿಂದ ಸಂಶೋಧಿಸಲ್ಪಟ್ಟಿದೆ.
ವಿ-ಪಸ್ಸನ ಎಂದರೆ ವೀಕ್ಷಿಸುವುದು ಎಂದು ಅರ್ಥವಾಗಿದೆ. ಅಂದರೆ ಸತ್ಯವನ್ನು ಅದು ಹೇಗಿದೆಯೋ ಹಾಗೆ ಯತಾರ್ಥವಾಗಿ ತೋರಿಕೆಯ ಸೀಳಿ ನೋಡುವಿಕೆಯಾಗಿದೆ. ವಿಪಸ್ಸನ ಎಂದರೆ ಸ್ಪಷ್ಟವಾಗಿ ಆಳವಾಗಿ ನೋಡುವುದಾಗಿದೆ. ತಮ್ಮ ಎದುರು ಪ್ರತ್ಯಕ್ಷವಾಗಿ ಸಾಕ್ಷಾತ್ಕಾರ ಮಾಡಿಕೊಳ್ಳುವುದಾಗಿದೆ. ಅಥವಾ ಪರಮಶ್ರೇಷ್ಠ ಜ್ಞಾನ ಪಡೆಯುವುದಾಗಿದೆ. ಇದಕ್ಕೆ ಪ್ರಜ್ಞಾಧ್ಯಾನ ಎಂದು ಕರೆಯುತ್ತಾರೆ. ಅಂತರ್ ದೃಷ್ಟಿಯ ಧ್ಯಾನ ಎಂದು ಕರೆಯುತ್ತಾರೆ. ಬೋಧಿ ಜ್ಞಾನ ಎಂದು ಕರೆಯುತ್ತಾರೆ. ಇಲ್ಲಿ ನಾವು ಸರಣಿಯಾಗಿ ಒಂದರ ನಂತರ ಮತ್ತೊಂದು ಜ್ಞಾನಗಳನ್ನು ಪಡೆಯುತ್ತಾ ಹೋಗುತ್ತೇವೆ.
ವಿಪಸ್ಸನ ಧ್ಯಾನವು ಅತ್ಯವಶ್ಯಕವಾಗಿ ನಮಗೆ ಬೇಕಾಗಿದೆ. ಏಕೆಂದರೆ ನಾವು ದುಃಖದಿಂದ ಪಾರಾಗುವುದಕ್ಕಾಗಿ ಬಂಧನಗಳಿಂದ ಬಿಡುಗಡೆ ಪಡೆಯಲು ಕಶ್ಮಲಗಳಿಂದ ಶುದ್ಧಿ ಹೊಂದಿ ಪರಿಶುದ್ಧತೆ ಪಡೆಯಲು, ಉನ್ನತವಾದ ಆನಂದ, ಸುಖ, ಪ್ರಶಾಂತತೆ ಮತ್ತು ಪರಮಶಾಂತತೆ ಪಡೆಯಲು, ಎಲ್ಲದಕ್ಕಿಂತ ಹೆಚ್ಚಾಗಿ ಸ್ವ-ವೀಕ್ಷಣೆಯಿಂದ ಸ್ವ-ಪರಿವರ್ತನೆ ಹೊಂದಲು, ಸ್ವ-ಪರಿವರ್ತನೆ ಎಂದರೆ ಮೋಹದಿಂದ ಜ್ಞಾನಿಗಳಾಗಲು ಸ್ವಾರ್ಥದಿಂದ ನಿಸ್ವಾಥರ್ಿಗಳಾಗಲು, ದ್ವೇಷದಿಂದ ದಯಾಮಯಿಯಾಗಲು ಲೋಭದಿಂದ ದಾನಿಗಳಾಗಲು, ಮಿಥ್ಯದಿಂದ ಸತ್ಯವಂತರಾಗಲು, ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗಲು, ಅಜ್ಞಾನದ ಕತ್ತಲೆಯಿಂದ ಬೋಧಿಯ ಬೆಳಕಿನತ್ತ ಸಾಗಲು, ಜನ್ಮದಿಂದ ನಿಬ್ಬಾಣದತ್ತ ಸಾಗಲು ನಮಗೆ ವಿಪಸ್ಸನ ಬೇಕೇ ಬೇಕು. ಇದರಿಂದ ಬಹಳಷ್ಟು ರೋಗಗಳಿಂದ ಮುಕ್ತರಾದರೂ ಅದು ಅತ್ಯಲ್ಪ ಲಾಭವಷ್ಟೇ. ಮಿಕ್ಕ ಲಾಭವು ಪರಮ ಲಾಭವಾಗಿದೆ.
ವಿಪಸ್ಸನ ಧ್ಯಾನವು ಭಾರತದಿಂದ ಕಳೆದುಹೋಗಿದ್ದ ಅತ್ಯಮೂಲ್ಯ ರತ್ನವಾಗಿದ್ದು ಅದನ್ನು ಮತ್ತೆ ಭಾರತಕ್ಕೆ ಅಷ್ಟೇ ಅಲ್ಲ, ವಿಶ್ವದ ಎಲ್ಲಾ ಜೀವಿಗಳಿಗೆ ಮತ್ತೆ ತಲುಪಿಸಲು ಎಲ್ಲರ ಸಹಕಾರ ಬೇಕಾಗಿದೆ. ಶ್ರೀಲಂಕ, ಬಮರ್ಾ, ಥಾಯಿಲ್ಯಾಂಡ್ ಮತ್ತು ಲಾವುಸ್ಗಳಲ್ಲಿ ಇಂದು ಜನಪ್ರಿಯ ಧ್ಯಾನವಾಗಿದೆ. ಈಗ ಇಡೀ ವಿಶ್ವದಲ್ಲೆಲ್ಲಾ ಮತ್ತೆ ಬಲಿಷ್ಠವಾಗಿ ಹಬ್ಬುತ್ತಿದೆ. ಈ ಧ್ಯಾನವು ವೈಜ್ಞಾನಿಕವಾಗಿಯು ಅತ್ಯುತ್ತಮ ಎಂದು ಸಾಬೀತಾಗಿ, ವಿಶ್ವದ ಶ್ರೇಷ್ಠ ವೈದ್ಯರ, ಮಾನಸಿಕ ಶಾಸ್ತ್ರಜ್ಞರ ಮತ್ತು ತಂತ್ರಜ್ಞಾನಿಗಳ ಅಭಿಪ್ರಾಯವಾಗಿದೆ. ಈ ಧ್ಯಾನವು ಈಗಾಗಲೇ ಎಲ್ಲಾ ಧರ್ಮದವರು ಪಾಲಿಸಲು ಆರಂಭಿಸಿ ಅದನ್ನು ತಮ್ಮತನವಾಗಿಸಲು ಆರಂಭಿಸಿದ್ದಾರೆ. ಸತ್ಯವನ್ನು ಎಲ್ಲೇ ಇರಲಿ, ಸ್ವೀಕರಿಸುವುದು ಎಲ್ಲಾ ಜ್ಞಾನಿಗಳ ಲಕ್ಷಣವಾಗಿದೆ. ಹಾಗೆಯೇ ಮಿಥ್ಯವನ್ನು ತೊರೆಯುವುದು ಸಹಾ ಎಲ್ಲಾ ಜ್ಞಾನಿಗಳ ಲಕ್ಷಣಗಲ್ಲಿ ಒಂದಾಗಿದೆ. ಸತ್ಪುರುಷರ ಲಕ್ಷಣವೇನೆಂದರೆ ಕೃತಜ್ಞರಾಗಿರುವುದು. ನಾವೆಲ್ಲರೂ ಇದಕ್ಕಾಗಿ ಬುದ್ಧ ಭಗವಾನರಿಗೆ ಸದಾ ಋಣಿಯಾಗಿರಬೇಕಾಗಿದೆ.
ವಿಪಸ್ಸನ ಧ್ಯಾನವು ಪ್ರಧಾನವಾಗಿ 3 ಭಾಗದಿಂದ ಕೂಡಿದೆ. ಶೀಲ, ಸಮಾಧಿ ಮತ್ತು ಪ್ರಜ್ಞಾ. ಅಂದರೆ ಮೊದಲು ಶೀಲ ವಿಶುದ್ಧಿಯಾಗಬೇಕಾಗಿದೆ. ನಂತರ ಚಿತ್ತ ವಿಶುದ್ದಿಯಾಗಬೇಕಾಗಿದೆ. ನಂತರವೆ ಪ್ರಜ್ಞಾ ವಿಶುದ್ಧಿಯಾಗುತ್ತದೆ. ಪ್ರತಿಯೊಂದರಲ್ಲೂ ಮತ್ತೆ ವಿಭಾಗವಾಗಿ ಹಲವಾರು ಹಂತಗಳಾಗುತ್ತವೆ.
ಶೀಲವಿಶುದ್ಧಿ ಎಂದರೆ ಕಾಯ, ವಾಚಾ, ಮಾನಸವಾಗಿ ಪರಿಶುದ್ಧತೆಯಿಂದಿರುವುದು.
ಚಿತ್ತವಿಶುದ್ಧಿ ಎಂದರೆ ಚಿತ್ತದ ಏಕಾಗ್ರತೆಯನ್ನು ಉಸಿರಾಟದ ಮೂಲಕ ಸಾಧಿಸುವುದು. ಪ್ರಜ್ಞಾವಿಶುದ್ದಿ ಎಂದರೆ ನಾಮರೂಪಗಳನ್ನು ವೀಕ್ಷಿಸಿ ಅವುಗಳ ಅನಿತ್ಯ ದುಃಖ, ಅನಾತ್ಮ ವೀಕ್ಷಿಸಿ ಅವುಗಳಲ್ಲಿ ಅಂಟದೆ ಮುಕ್ತರಾಗುವುದು.
ಇದು ಸಂಕ್ಷಿಪ್ತ ವಿವರಣೆಯಾಗಿದೆ. ಮುಂದೆ ವಿವರವಾಗಿ ಅರಿಯೋಣ.

ಜಾಗರೂಕತೆಯಿಂದ ಸ್ಥಾಪನೆ :

ಜಾಗರೂಕನಿಗೆ ಸಮಾಧಿಯು ಸಮೀಪವಾಗಿದೆ. ಅದರಿಂದಾಗಿ ಹೆಚ್ಚು ಹೆಚ್ಚು ಜಾಗರೂಕರಾಗಲು ಪ್ರಯತ್ನಿಸಬೇಕು. ನಾವು ಜಾಗರೂಕರಾದಷ್ಟು ಹೆಚ್ಚು ಶೀಲವಂತರಾಗ ಬಹುದು, ಇಂದ್ರಿಯಗಳನ್ನು ರಕ್ಷಿಸಬಹುದು, ಸಮಾಧಿಯನ್ನು ಪ್ರಾಪ್ತಿಮಾಡಬಹುದು. ಅಕುಶಲಗಳನ್ನು ತಡೆಯಬಹುದು, ಸತ್ಯವನ್ನು ಅರಿಯಬಹುದು. ನೆನಪಿನ ಶಕ್ತಿಯನ್ನು ವಿಕಾಸಿಸಬಹುದು. ಜ್ಞಾನದ ಹಂತಗಳನ್ನು ತಲುಪಬಹುದು. ನಾವು ಸದಾಕಾಲ ಏಕ ವಿಷಯದ ಮೇಲೆ ಧ್ಯಾನಿಸಲು ಸಾಧ್ಯವಾಗದೆ ಹೋಗಬಹುದು. ಆದರೆ ಸದಾಕಾಲ ಜಾಗರೂಕತೆಯಂತು ಸ್ಥಾಪಿಸಬಹುದು. ಆದ್ದರಿಂದ ಜಾಗರೂಕತೆಯು ನಮ್ಮ ಅಸ್ತಿತ್ವದ ಅಂಗವಾಗಿ ಸ್ಥಾಪಿಸಬೇಕು. ಆಗಲೇ ನಮ್ಮ ವಿಕಾಸ ಆರಂಭವಾಗುತ್ತದೆ.
ಮಹಾಸತಿ ಪಟ್ಠಾನ ಸುತ್ತದಲ್ಲಿ ಇದರ ಬಗ್ಗೆ ಈ ರೀತಿಯ ಉಲ್ಲೇಖವಿದೆ.
ಭಿಕ್ಷುವು ನಡೆಯುವಾಗ, ನಾನು ನಡೆಯುತ್ತಿದ್ದೇನೆ ಹಾಗೆಯೇ ನಿಂತಿರುವಾಗ ನಾನು ನಿಂತಿದ್ದೇನೆ, ಹಾಗೆಯೇ ಕುಳಿತಿರುವಾಗ ನಾನು ಕುಳಿತಿದ್ದೇನೆ ಹಾಗೆ ಮಲಗಿರುವಾಗ ನಾನು ಮಲಗಿದ್ದೇನೆ ಹೀಗೆಯೇ ಆತನು ಪ್ರತಿಯೊಂದು ದೈಹಿಕ ಭಂಗಿಯನ್ನು ಅರಿಯುತ್ತಾನೆ.
ಈ ರೀತಿಯಾಗಿ ಆತನು ದೇಹದ ಅರಿಯುವಿಕೆಯನ್ನು ಬಾಹ್ಯದಲ್ಲೂ ಅಥವಾ ಆಂತರ್ಯದಲ್ಲೂ ಅಥವಾ ಹೊರಗೂ, ಒಳಗೂ ಚಿಂತನೆ (ವೀಕ್ಷಣೆ) ಮಾಡುತ್ತಾ ಇರುತ್ತಾನೆ.
ಆತನು ದೇಹದ ಉದಯ ಸ್ವರೂಪ ಅರಿಯುತ್ತಾನೆ. ಅಥವಾ ದೇಹದ ಅಳಿವಿನ ಸ್ವರೂಪ ಅರಿಯುತ್ತಾನೆ ಅಥವಾ ದೇಹದ ಉದಯ ಅಳಿವುಗಳನ್ನು ಚಿಂತಿಸುತ್ತಾನೆ. ಇಲ್ಲಿ ದೇಹವಷ್ಟೇ ಇದೆ ಎಂದು ಜಾಗರೂಕನಾಗಿ, ಪ್ರಜ್ಞಾ ವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ, ಸ್ವತಂತ್ರವಾಗಿ, ಯಾವುದಕ್ಕೂ ಅಂಟದೆ ಜೀವಿಸುತ್ತಾನೆ.
ಹಾಗೆಯೇ ಭಿಕ್ಷುವು ಪೂರ್ಣ ಜಾಗರೂಕವಾಗಿ ನಡೆಯುತ್ತಾನೆ. ತಲೆತಿರುಗಿಸುವಾಗಲಿ, ತನ್ನ ಅಂಗಗಳನ್ನು ಮಲಗುವಾಗ ಆಗಲಿ ಅಥವಾ ಅಂಗಗಳನ್ನು ಚಲಿಸುವಾಗ ಆಗಲಿ, ವಸ್ತ್ರಗಳನ್ನು ಬಳಸುವಾಗ ಆಗಲಿ, ತಿನ್ನುವಾಗ ಆಗಲಿ, ನೀರನ್ನು ಕುಡಿಯುವಾಗ ಆಗಲಿ, ಅಗಿಯುವಾಗ ಆಗಲಿ, ರುಚಿಸುವಾಗ ಆಗಲಿ, ವಿಸಜರ್ಿಸುವಾಗ ಆಗಲಿ, ಚಲಿಸುವಾಗ ಆಗಲಿ, ನಿಂತಿರುವಾಗ ಆಗಲಿ, ಕುಳಿತಿರುವಾಗ ಆಗಲಿ, ಮಲಗಿರುವಾಗ ಆಗಲಿ, ಮಾತನಾಡುವಾಗ ಆಗಲಿ, ನಿಶ್ಶಬ್ದರಿಂದ ಕೂಡಿರುವಾಗ ಆಗಲಿ, ಆತನ ಸರ್ವ ಕ್ರಿಯೆಗಳಲ್ಲಿ ಸರ್ವ ಅವಸ್ಥೆಯಲ್ಲಿ ಸದಾ ಜಾಗರೂಕ ಅರಿವನ್ನು ಪಡೆದಿರುತ್ತಾನೆ.
ಈ ರೀತಿಯಾಗಿ ಆತನು ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ.... ದೇಹವಷ್ಟೇ ಇದೆ ಎಂದು ಜಾಗರೂಕನಾಗಿ, ಪ್ರಜ್ಞಾವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ, ಸ್ವತಂತ್ರವಾಗಿ, ಯಾವುದಕ್ಕೂ ಅಂಟದೆ ಜೀವಿಸುತ್ತಾನೆ.

ಅನುಪಮ ಆನಾಪಾನ (ಸತಿ/ವಿಪಶ್ಶನ) ಧ್ಯಾನ :

ಆನಾಪಾನ ಸತಿ ಅಥವಾ ಆನಾಪಾನಾ ವಿಪಶ್ಶನ ಧ್ಯಾನವು ಎಲ್ಲಾ ಧ್ಯಾನಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ಧ್ಯಾನವು ಶಾಂತಿಯನ್ನು, ಜ್ಞಾನೋದಯವನ್ನು (ಸಂಬೋಧಿ) ಮತ್ತು ವಿಮುಕ್ತಿಯನ್ನು (ನಿಬ್ಬಾಣ) ನೀಡುತ್ತದೆ. ಅಷ್ಟೇ ಅಲ್ಲದೆ ಅಭಿಜ್ಞಾ (ಸಿದ್ಧಿಗಳು) (ಮಾನಸಿಕ ಬಲಾಢ್ಯತೆ), ಯೋಗ್ಯವಾದ ದೃಷ್ಟಿಕೋನ, ಜ್ಞಾನ ಎಲ್ಲವೂ ಸಿಗುತ್ತದೆ. ಈ ಧ್ಯಾನವು ಬುದ್ಧಭಗವಾನರಿಂದ ಸಂಶೋಧಿಸಲ್ಪಟ್ಟಿದೆ. ಇದರ ಪ್ರಭಾವವು ಅನಂತರ 500 ವರ್ಷಗಳ ಬಳಿಕ ಬಂದಂತಹ ಪತಂಜಲಿಯವರ ಮೇಲೆ, ಮತ್ತಿತರ ಭಾರತೀಯ ಧ್ಯಾನಿಗಳ ಮೇಲೆ ಬಿದ್ದಿದೆ. ಅಷ್ಟೇ ಅಲ್ಲ, ಆಧುನಿಕ ಕಾಲದಲ್ಲೂ ಬಹಳಷ್ಟು ದೇಶಗಳಲ್ಲಿ, ವಿವಿಧ ಧಮ್ಮದವರು, ವಿವಿಧ ಸ್ವಾಮೀಜಿಗಳು, ವಿವಿಧ ವೈಜ್ಞಾನಿಕರು, ವೈದ್ಯರು, ಧ್ಯಾನ ಗುರುಗಳು, ತತ್ವಶಾಸ್ತ್ರಜ್ಞರು, ಮಾನಸಿಕ ಶಾಸ್ತ್ರಜ್ಞರು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಮಾನಸಿಕ ಕಲ್ಮಶಗಳನ್ನು ಬಹುಬೇಗ ಪರಿಣಾಮಕಾರಿಯಾಗಿ ಶುದ್ಧಿಗೊಳಿಸುವಂತಹದು, ಮಾನಸಿಕ ರೋಗಿಗಳಿಗೆ ಇದು ಅಮೃತ ಸಮಾನವಾದಂತಹ ಧ್ಯಾನವಾಗಿದೆ. ಅಷ್ಟೇ ಅಲ್ಲದೆ ವಿವಿಧ ರೋಗಗಳು ಇದರಿಂದ ಶಮನವಾಗಿರುವಂತಹ ಹಲವಾರು ಉದಾಹರಣೆಗಳಿವೆ. ಇತ್ತೀಚೆಗೆ ಕೆಲವು ಖೈದಿಗಳು ಈ ಪದ್ಧತಿ ಅನುಸರಿಸಿ ಶುದ್ಧ ವ್ಯಕ್ತಿಗಳಾಗಿ ಪರಿವರ್ತನೆ ಹೊಂದಿದ್ದಾರೆ. ಈ ರೀತಿಯಾಗಿ ಈ

ವಿಪಸ್ಸನ ಧ್ಯಾನವು :


1. ಮಿಥ್ಯಾ ದೃಷ್ಟಿಯಿಂದ ಸಮ್ಮಾ ದೃಷ್ಟಿಯೆಡೆಗೆ
2. ಅಲ್ಪ ಜ್ಞಾನದಿಂದ ಅಭಿಜ್ಞಾದೆಡೆಗೆ
3. ಅಸತ್ಯದಿಂದ ಸತ್ಯದೆಡೆಗೆ
4. ದುಃಖದಿಂದ ಪರಮಸುಖದೆಡೆಗೆ
5. ಅಜ್ಞಾನದಿಂದ ಪರಮ ಸಂಬೋಧಿಯೆಡೆಗೆ
6. ಕಶ್ಮಲಗಳಿಂದ ಪರಿಶುದ್ಧಿಯೆಡೆಗೆ
7. ಬಂದನಗಳಿಂದ ಬಿಡುಗಡೆಯೆಡೆಗೆ
8. ಅಶಾಂತಿಯಿಂದ ಶಾಂತತೆಯೆಡೆಗೆ
9. ಅಹಂಕಾರದಿಂದ ಅನಾತ್ಮದೆಡೆಗೆ
10. ಜನ್ಮದಿಂದ ನಿಬ್ಬಾಣದೆಡೆಗೆ ತಲುಪಿಸುತ್ತದೆ.
ಆದರೆ ಈ ಧ್ಯಾನದ ಪರಿಶುದ್ಧರೂಪ ಹಾಗು ಪೂರ್ಣ ವಿಕಸಿತ ಸ್ವರೂಪ ಬೌದ್ಧ ಧ್ಯಾನಗಳಲ್ಲಿ ಇಲ್ಲೇ ಸಿಗುತ್ತದೆ. 

ಸಪ್ತ ವಿಶುದ್ಧಿಗಳು ಶೀಲವಿಶುದ್ದಿ

                                         ಸಪ್ತ ವಿಶುದ್ಧಿಗಳು


                                          ಶೀಲವಿಶುದ್ದಿ 


ಕರ್ಮಗಳಿಂದ, ದರ್ಶನದಿಂದ ಮತ್ತು ಸತ್ಯದಿಂದ ಶೀಲದಿಂದ, ಉದಾತ್ತ ಜೀವನದಿಂದ ಜೀವಿಗಳು ವಿಶುದ್ದಿ ಹೊಂದುತ್ತವೆ ಹೊರತು ಗೋತ್ರಗಳಿಂದಲ್ಲ, ಐಶ್ವರ್ಯದಿಂದಲ್ಲ.
ಯಾರು ನಿರಂತರ ಶೀಲಾಚಾರಿಯೋ, ಪ್ರಾಜ್ಞನೋ, ಸಮಾಧಿಸಿದ್ಧನೋ ಅಂತಹ ಪರಿಶ್ರಮಿ ಪರಾಕ್ರಮಿ ಮಾತ್ರ ದಾಟಲು ಕಡುಕಷ್ಟವಾಗಿರುವಂತಹ ಪ್ರವಾಹವನ್ನು ದಾಟುತ್ತಾನೆ.
ಶೀಲವಿಶುದ್ದಿಯು ನಿಬ್ಬಾಣ ಸಾಧಿಸುವಿಕೆಯಲ್ಲಿನ ಸಪ್ತವಿಶುದ್ದಿಯಲ್ಲಿ ಪ್ರಥಮ ವಿಶುದ್ದಿಯಾಗಿದೆ. ಹೀಗಾಗಿ ಯಾರು ದುಃಖವನ್ನು ಬಯಸುವುದಿಲ್ಲವೋ ಅವರು ಕಡ್ಡಾಯವಾಗಿ ಶೀಲವನ್ನು ಪಾಲಿಸಬೇಕಾಗಿದೆ. ನಾವಿಂದು ಈ ಜನ್ಮದಲ್ಲಿ ಅನುಭವಿಸುತ್ತಿರುವ ಕೆಲವು ದುಃಖಗಳಿಗೆ ನಮ್ಮ ಹಿಂದಿನ ಜನ್ಮದ ಪಾಪಗಳೇ ಕಾರಣವಾಗಿದೆ.
ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪ ಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ.
ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
ಭಿಕ್ಷುಗಳಲ್ಲಿ ಶೀಲವು ಈ ರೀತಿ ಲಕ್ಷಣಗಳಿಂದ ಕೂಡಿರುತ್ತದೆ. ಹೇಗೆಂದರೆ ಪರಿಶುದ್ಧತೆ, ಪೂರ್ಣ ಬ್ರಹ್ಮಚರ್ಯೆ, ಇಚ್ಛಾಪೂರ್ವಕ ಬಡತನ, ವಿಧೇಯತೆ, ಸರಳತೆ, ನಿಸ್ವಾರ್ಥಸೇವೆ, ಸ್ವನಿಯಂತ್ರಣ, ಸಹನೆ, ಕರುಣೆ ಮತ್ತು ಅಹಿಂಸೆ.
ಶೀಲ ವಿಶುದ್ದಿಯಲ್ಲಿ 4 ಅಂಗಗಳು ಕೂಡಿರಲೇಬೇಕು. ಅದೆಂದರೆ ಪಾತಿಮೋಕ್ಖ ಶೀಲ, ಇಂದ್ರೀಯ ಸಂಯಮ, ಸಮ್ಮಾಜೀವನ ಮತ್ತು ಅವಶ್ಯಕ ವಸ್ತುಗಳನ್ನು ಚೆನ್ನಾಗಿ ಚಿಂತಿಸಿ ಅಂಟದೆ ಬಳಕೆ ಮಾಡುವುದು.
ಶೀಲದಲ್ಲಿ ಆರ್ಯ ಅಷ್ಟಾಂಗ ಮಾರ್ಗದ 3 ಅಂಗಗಳು ಇರುತ್ತದೆ. ಅವೆಂದರೆ:

1. ಸಮ್ಮಾ ವಾಚಾ (ಸಮ್ಯಕ್ ಸಂಭಾಷಣೆ)
2. ಸಮ್ಮಾ ಕಮ್ಮಂತ (ಸಮ್ಯಕ್ ಕರ್ಮ)
3. ಸಮ್ಮಾ ಅಜೀವೋ (ಸಮ್ಯಕ್ ಜೀವನೋಪಾಯ)

1. ಸಮ್ಮಾ ವಾಚಾ (ಸಮ್ಯಕ್ ಸಂಭಾಷಣೆ)


. ಸಮ್ಮಾ ವಾಚಾದಲ್ಲಿ ಸಂಭಾಷಣೆ ಯಾವರೀತಿ ಇರಬೇಕೆಂದು ಭಗವಾನರು ಹೀಗೆ ವಿವರಿಸುತ್ತಾರೆ.
ಸುಳ್ಳಿನಿಂದ ವಿರತನಾಗುವುದು, ಚಾಡಿಯಿಂದ ವಿರತನಾಗುವುದು, ಕಟು ನಿಂದೆಗಳಿಂದ ವಿರತನಾಗುವುದು ಮತ್ತು ಸೋಮಾರಿತನದ ಹರಟೆಗಳಿಂದ ವಿರತನಾಗುವುದು ಇದೇ ಯೋಗ್ಯವಾದ ಸಂಭಾಷಣೆಯಾಗಿದೆ. ಸಾಧಕನು ಸುಳ್ಳನ್ನು ತ್ಯಜಿಸಿ ಆತನು ಸತ್ಯವನ್ನೇ ಹೇಳುತ್ತಾನೆ. ಸತ್ಯವನ್ನೇ ಹಿಡಿಯುತ್ತಾನೆ. ದೃಢವಾಗಿರುತ್ತಾನೆ, ನಂಬಿಕೆಗೆ ಅರ್ಹನಾಗಿರುತ್ತಾನೆ. ಜಗತ್ತಿಗೆ ಮೋಸ ಮಾಡುವುದಿಲ್ಲ. ಚಾಡಿಯಿಂದ ಜನರನ್ನು ಬೇರ್ಪಡಿಸುವುದಿಲ್ಲ. ಬದಲಾಗಿ ಜನರನ್ನು ಐಕ್ಯತೆವುಂಟು ಮಾಡುವ ಮಾತುಗಳನ್ನು ಆಡುತ್ತಾನೆ. ಐಕ್ಯತೆಯಲ್ಲಿ ಆನಂದಿಸಿ ಐಕ್ಯತೆಯನ್ನು ಸೃಷ್ಠಿಸುತ್ತಾನೆ.
ಸಾಧಕನು ಕಟು ಮಾತುಗಳನ್ನು ತ್ಯಜಿಸುತ್ತಾನೆ, ಕಿವಿಗೆ ಇಂಪಾದ ಮಾತುಗಳನ್ನು ಆಡುತ್ತಾನೆ, ಪ್ರೀತಿಯುತ, ಹೃದಯಕ್ಕೆ ಸುಸ್ಪರ್ಶ-ನಾಟುವಂತಹ, ನಮ್ರವಾದ, ಜನರಿಗೆ ಹಿತಕ್ಕಾಗಿಯೇ ಮಧುರ ಮಾತುಗಳನ್ನು ಆಡುತ್ತಾನೆ.
ಸೋಮಾರಿತನದ ಹರಟೆಯನ್ನು ವಜರ್ಿಸುತ್ತಾನೆ. ಕಾಲ ಯೋಗ್ಯವಾದ ಮಾತುಗಳನ್ನು ಆಡುತ್ತಾನೆ, ವಾಸ್ತವವನ್ನು ನುಡಿಯುತ್ತಾನೆ, ಗುರಿಗೆ ಸಂಬಂಧಿಸುವುದನ್ನು ಹೇಳುತ್ತಾನೆ. ಧಮ್ಮವನ್ನು, ವಿನಯವನ್ನು ನುಡಿಯುತ್ತಾನೆ. ಸಂಗ್ರಹ ಯೋಗ್ಯ ಮಾತುಗಳನ್ನು ಆಡುತ್ತಾನೆ. ವಿಚಾರಭರಿತ, ಮೌಲ್ಯಯುತ, ನಿಯಂತ್ರಿತ ಮಾತುಗಳನ್ನು ಆಡುತ್ತಾನೆ. ವ್ಯರ್ಥವಾದ, ಲೋಭಪ್ರೇರಿತ, ದ್ವೇಷಪ್ರೇರಿತ, ಮೋಹಪ್ರೇರಿತ ಮಾತುಗಳನ್ನು ಆಡುವುದಿಲ್ಲ.
ಯಾವುದು ವಾಸ್ತವವೋ, ಸತ್ಯವೋ, ಹಿತವೋ, ಪ್ರಿಯವೋ ಒಪ್ಪುವಂತಹುದೋ, ಕಾಲಯೋಗ್ಯವೋ ಅಂತಹ ಮಾತುಗಳನ್ನು ಆಡುತ್ತಾನೆ.

2. ಸಮ್ಮಾ ಕಮ್ಮಂತ (ಯೋಗ್ಯವಾದ ಕರ್ಮ)

ಇಲ್ಲಿ ಸಾಧಕ ಜೀವಹತ್ಯೆಯಿಂದ ವಿರತನಾಗುವುದು, ಕಳ್ಳತನದಿಂದ ವಿರತನಾಗುವುದು ಮತ್ತು ಅನೀತಿಯುತವಾದ ಕಾಮದಿಂದ ವಿರತನಾಗುತ್ತಾನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚರ್ಯೆ ಪಾಲಿಸುವುದು).
ಇಲ್ಲಿ ಸಾಧಕ ಲೋಕಾನುಕಂಪದಿಂದ, ಜೀವಹತ್ಯೆಯಿಂದ ವಿರತನಾಗುತ್ತಾನೆ. ದಂಡಶಸ್ತ್ರಗಳನ್ನು ತ್ಯಜಿಸುತ್ತಾನೆ. ಹಾಗೆಯೇ ತನಗೆ ನೀಡದುದನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲಾರೀತಿಯ ಕಳ್ಳತನ, ಮೋಸ, ವಂಚನೆಯಿಂದ ಮುಕ್ತನಾಗುತ್ತಾನೆ. ಹಾಗೆಯೇ ಪರಸ್ತ್ರೀಯರನ್ನು ಮಾತೆಯರಂತೆ, ಸೋದರಿಯಂತೆ ಮತ್ತು ಮಕ್ಕಳಂತೆ ಕಾಣುತ್ತಾನೆ. ಹಾಗು ಅನೀತಿಯುತ ಸಂಬಂಧಗಳಲ್ಲಿ ತೊಡಗುವುದಿಲ್ಲ. ಹೀಗೆ ಆತನು ಕಾಯದಲ್ಲಿ ಯೋಗ್ಯವಾದ ಕರ್ಮಗಳಿಂದ ಕೂಡಿರುತ್ತಾನೆ.
ಅದಕ್ಕಾಗಿಯೇ ಭಗವಾನರು ಗ್ರಹಸ್ಥರಿಗೆ ಪಂಚಶೀಲಗಳನ್ನು ಬೋಧಿಸುತ್ತಾರೆ. ಅನ್ಯ ಧರ್ಮಗಳಲ್ಲಿ ಪೂಜೆ, ಪ್ರಾರ್ಥನೆಗಳಿಗೆ ಮೊದಲ ಸ್ಥಾನವಾದರೆ ಬೌದ್ಧರಲ್ಲಿ ಪಂಚಶೀಲಕ್ಕೆ ಪ್ರಥಮ ಆದ್ಯತೆಯಿದೆ. ಇದರಿಂದಾಗಿ ವ್ಯಕ್ತಿ ಸಮಾಜ ಮತ್ತು ಎಲ್ಲರ ಹಿತವಿದೆ.

ಪಂಚಶೀಲವೆಂದರೆ :

 1) ಜೀವಹತ್ಯೆಯಿಂದ 2) ಕಳ್ಳತನದಿಂದ 3) ವ್ಯಭಿಚಾರದಿಂದ 4) ಸುಳ್ಳಿನಿಂದ ಮತ್ತು 5) ಮಾದಕ ದ್ರವ್ಯಗಳಿಂದ ಇಚ್ಛಾಪೂರ್ವಕವಾಗಿ ವಿರತನಾಗುವುದು. ಇದಕ್ಕೆ ಪ್ರತಿಯಾಗಿ, ಕರುಣೆಯಿಂದ, ಪ್ರಮಾಣಿಕತೆಯಿಂದ, ಬ್ರಹ್ಮಚಯರ್ೆಯಿಂದ, ಸತ್ಯದಿಂದ ಮತ್ತು ಸಂಯಮದಿಂದ ಜೀವಿಸುವುದು ಆಗಿದೆ.


3. ಸಮ್ಮಾ ಜೀವನ (ಯೋಗ್ಯವಾದ ಜೀವನೋಪಾಯ) :

 ಇಲ್ಲಿ ಸಾಧಕನು ಪರರಿಗೆ ಅಹಿತವಾಗುವಂತಹ ಯಾವುದೇ ವೃತ್ತಿಯಲ್ಲಿ ತೊಡಗುವುದಿಲ್ಲ. ಉದಾಹರಣೆಗೆ:          1) ಶಸ್ತ್ರಗಳ  2) ಜೀವಿಗಳ ಮಾರಾಟ  3) ಮಾಂಸದ ಮಾರಾಟ 4) ಮದ್ಯಪಾನದ ಮಾರಾಟ 5) ವಿಷವಸ್ತುಗಳ ಮಾರಾಟ ಇವುಗಳಿಂದ ವಿರತನಾಗುತ್ತಾನೆ.

ನಾವೇಕೆ ಶೀಲವಂತರಾಗಬೇಕು?

1. ಶೀಲದಿಂದ ನಾವು ಮನಸ್ಸನ್ನು ನಿಯಂತ್ರಿಸುವುದು ಕಲಿಯುತ್ತೇವೆ. ಇಲ್ಲಿ ಸೂಕ್ಷ್ಮವಾಗಿ ಮನಸ್ಸನ್ನು ನಿಯಂತ್ರಿಸುವುದಕ್ಕಿಂತ ಮೊದಲು ಸ್ಥೂಲವಾದ ಶರೀರ, ಇಂದ್ರೀಯಗಳ ಮತ್ತು ಮಾತುಗಳನ್ನು ನಿಯಂತ್ರಿಸುತ್ತೇವೆ. ಹೀಗಾಗಿ ಬಹುಪಾಲು ಮನಸ್ಸಿನ ನಿಯಂತ್ರಣ ನಾವು ಶೀಲವಂತರಾದಲ್ಲಿ ಸಾಧಿಸಬಹುದು.
2. ನಾವು ಶೀಲವಂತರಾದಷ್ಟು ಪ್ರಜ್ಞಾವಂತರಾಗಬಹುದು. ಇಲ್ಲಿ ನಾವು ನಮ್ಮನ್ನು ವೀಕ್ಷಿಸುತ್ತಿರುತ್ತೇವೆ. ನಮ್ಮ ಯೋಚನೆಗಳು, ಕ್ರಿಯೆಗಳು, ಮಾತುಗಳು ಸರ್ವವನ್ನು ವೀಕ್ಷಿಸಿ, ನಿಯಂತ್ರಿಸಿ, ಕಾರ್ಯತತ್ಪರರನ್ನಾಗಿ ಮಾಡುತ್ತೇವೆ.
3. ನಾವು ಶೀಲವಂತರಾದಷ್ಟು ನಮಗೆ ಪಶ್ಚಾತ್ತಾಪವಿರುವುದಿಲ್ಲ. ಭವಿಷ್ಯದ ಭಯವಿರುವುದಿಲ್ಲ. ಈ ರೀತಿಯಾಗಿ ಪಶ್ಚಾತ್ತಾಪ, ಭಯ, ಚಿಂತೆಗಳಿಂದ ಮುಕ್ತರಾಗಿ ಶಾಂತತೆಯಿಂದ ಇರಬಲ್ಲೆವು. ಪರಲೋಕವನ್ನು ಧೈರ್ಯವಾಗಿ ಎದುರಿಸಬಲ್ಲೆವು (ಹೋಗಬಲ್ಲೆವು).
4. ನಾವು ಶೀಲವಂತರಾದಷ್ಟು ನಾವು ದಯೆಯಿಂದ ಕೂಡಿರುತ್ತೇವೆ. ಪರರ ನೋವನ್ನು ನಮ್ಮ ನೋವಿನಂತೆ ಸಂವೇದಿಸಬಲ್ಲೆವು. ಪರರ ಹಿತವನ್ನು ನಮ್ಮ ಹಿತದಂತೆ ಕಾಣಬಲ್ಲೆವು. ನಿಜವಾದ ಅರ್ಥದಲ್ಲಿ ಮಾನವರಾಗಿರುತ್ತೇವೆ.
5. ನಾವು ಶೀಲವಂತರಾದಷ್ಟು ನಮ್ಮ ಲೋಭ, ದ್ವೇಷ, ಮೋಹ ಮತ್ತು ಭಯಗಳು ಕ್ಷೀಣಿಸುತ್ತಿರುತ್ತವೆ. ಈ ರೀತಿಯಾಗಿ ಸಾಧನೆಯಂತೆ ಮುಂದಿನ ಜನ್ಮದಲ್ಲಿ ಸುಗತಿ, ಬ್ರಹ್ಮಲೋಕ ಇಲ್ಲವೆ ನಿಬ್ಬಾಣ ಸಿಗುತ್ತದೆ.
6. ಈ ಜನ್ಮದಲ್ಲಿ ಗೌರವ, ಧೈರ್ಯ, ನಿಯಂತ್ರತೆ, ಶಾಂತತೆ, ಸುಖ, ಸೌಲಭ್ಯವೆಲ್ಲವೂ ಸಿಗುತ್ತದೆ.
7. ಸೋತಪನ್ನ ಅಥವಾ ಅರಹತ್ವಕ್ಕೆ ಸ್ಥಿತಿಗೆ ಸಹಾಯ
8. ಸಮಾಧಿ ಪ್ರಾಪ್ತಿಗೆ ಸಹಾಯ ಸಿಗುತ್ತದೆ.
9. ಸುಖ್ಯಾತಿಯು ಸಿಗುತ್ತದೆ. ಇತ್ಯಾದಿ...



ಲೋಕದಲ್ಲಿ ಶೀಲವು ಅನುತ್ತರವಾದುದು

ಶೀಲವು ಕಲ್ಯಾಣವನ್ನುಂಟು ಮಾಡುತ್ತದೆ. ಲೋಕದಲ್ಲಿ ಶೀಲವು ಅನುತ್ತರವಾದುದು.
ಈ ಗಾಥೆಯನ್ನು ಬೋಧಿಸತ್ವರು ಹೇಳಿದ್ದಾರೆ. ಬುದ್ಧರು ಹಿಂದಿನ ಜನ್ಮದಲ್ಲಿ ಬೋಧಿಸತ್ವರಾಗಿದ್ದಾಗ, ವಾರಣಾಸಿಯನ್ನು ಬ್ರಹ್ಮದತ್ತನು ಆಳುತ್ತಿದ್ದನು. ಆತನ ಪುರೋಹಿತರೇ ಬೋಧಿಸತ್ವರು. ಮಹಾ ಶೀಲವಂತರು ಮತ್ತು ಜ್ಞಾನಿಗಳು ಆಗಿದ್ದರು. ರಾಜನು ಬೋಧಿಸತ್ವರಿಗೆ ಅಪಾರ ಗೌರವ ನೀಡುತ್ತಿದ್ದರು.
ಒಂದುದಿನ ಬೋಧಿಸತ್ವರಿಗೆ ವಿಚಿತ್ರ ಚಿಂತನೆ ಉಂಟಾಯಿತು. ಅದೆಂದರೆ ಈ ರಾಜ ನನ್ನಲ್ಲಿ ಏನನ್ನು ಕಂಡು ಗೌರವಿಸುತ್ತಿರಬಹುದು, ನನ್ನ ಉತ್ತಮ ಕುಲಕ್ಕೆ ಅಥವಾ ವಿದ್ಯಾಸಂಪನ್ನತೆಗೆ ಅಥವಾ ಉತ್ತಮ ಚಾರಿತ್ರ್ಯಕ್ಕೆ (ಶೀಲ) ಯಾವುದಕ್ಕಾಗಿ ?
ಕೊನೆಗೆ ಆತ ಪರೀಕ್ಷಿಸಲು ಮುಂದಾದರು. ಒಂದುದಿನ ಚಿನ್ನದ ಅಂಗಡಿಯಿಂದ ಒಂದು ನಾಣ್ಯ ಎತ್ತಿಕೊಂಡು ಬಂದರು. ಇವರ ಬಗ್ಗೆ ಗೌರವ ಇದ್ದುದರಿಂದಾಗಿ ಅಂಗಡಿಯವ ಸುಮ್ಮನಿದ್ದನು. ಎರಡನೆಯ ದಿನದಂದು 2 ನಾಣ್ಯಗಳನ್ನು ಎತ್ತಿಕೊಂಡು ಬಂದರು. ಅಂಗಡಿಯವ ಈಗಲೂ ಸುಮ್ಮನಿದ್ದನು. ಮಾರನೆಯದಿನ ಬೋಧಿಸತ್ವರು ಒಂದು ಹಿಡಿ ಚಿನ್ನದ ನಾಣ್ಯಗಳನ್ನು ಎತ್ತಿಕೊಂಡು ಬರುವಾಗ ಆತನು ಇವರನ್ನು ಹಿಡಿದು ಕಳ್ಳತನದ ಆರೋಪ ಹೊರಿಸಿದನು. ರಾಜನ ಬಳಿ ಕರೆತರಲಾಯಿತು.
ರಾಜ : ಬ್ರಾಹ್ಮಣ ಏಕೆ ಇಂತಹ ಕಾರ್ಯ ಮಾಡಿದೆ?
ಬೋಧಿಸತ್ವ : ರಾಜ ನಾನು ಕಳ್ಳನಲ್ಲ.
ರಾಜ : ಹಾಗಾದರೆ ಚಿನ್ನದ ನಾಣ್ಯಗಳನ್ನು ಅಪಹರಿಸಿದ್ದು ಸುಳ್ಳೇ?
ಬೋಧಿಸತ್ವ : ರಾಜ ನೀವು ನನಗೆ ನೀಡುತ್ತಿರುವ ಗೌರವ ನನ್ನ ಚಾರಿತ್ರ್ಯಕ್ಕೋ ಅಥವಾ ಪಾಂಡಿತ್ಯಕ್ಕೋ ಅಥವಾ ಉತ್ತಮ ಕುಲಕ್ಕೋ ಅಥವಾ ನನ್ನ ಸೌಂದರ್ಯಕ್ಕೋ ಸ್ಪಷ್ಟವಾಗಿ ತಿಳಿಯಬೇಕಿತ್ತು.
ರಾಜ : ಓಹ್ ಬ್ರಾಹ್ಮಣ, ನಿನಗೆ ನೀಡುವ ಗೌರವ ಕೇವಲ ನಿನ್ನ ಶೀಲಕ್ಕಾಗಿಯೇ, ನಂತರ ಪಾಂಡಿತ್ಕ್ಕೆ ಮಿಕ್ಕವು ನಮಗೆ ಲೆಕ್ಕಕ್ಕಿಲ್ಲ.
ಬೋಧಿಸತ್ವ : ನನಗೂ ಈಗ ಸ್ಪಷ್ಟವಾಗಿ ತಿಳಿಯಿತು ರಾಜ. ಲೋಕದಲ್ಲಿ ಶೀಲವೇ ಸವರ್ೊತ್ತಮವಾದುದು, ಪ್ರಧಾನವಾದುದು ಎಂದು ತಿಳುವಳಿಕೆ ಮೂಡಿದೆ.
ರಾಜ : ಹಾಗಾದರೆ ನೀನು ಅಪರಾಧಿಯಲ್ಲ. ಹಿಂದಿನಂತೆಯೆ ಯೋಗ್ಯವಾಗಿ ಕೆಲಸ ಮಾಡಿಕೊಂಡಿರು.
ಬೋಧಿಸತ್ವ : ಇಲ್ಲ ಮಹಾರಾಜ, ನಾನು ಗೃಹಸ್ಥನಾಗಿದ್ದು ಪರಿಶುದ್ಧವಾದ, ಪರಿಪೂರ್ಣವಾದ ಸದಾಚಾರ ಪಾಲಿಸಲಾಗುವುದಿಲ್ಲ. ಆದ್ದರಿಂದ ನಾನು ಪಬ್ಬಜಿತನಾಗಲು ಇಚ್ಛಿಸುತ್ತೇನೆ. ನನಗೆ ಅಪ್ಪಣೆ ನೀಡಿ.
ರಾಜನು ದುಃಖದಿಂದ ಕಳುಹಿಸಿಕೊಟ್ಟನು. ಹಿಮಾಲಯಕ್ಕೆ ಹೋಗಿ ದೀರ್ಘಕಾಲ ಶೀಲ, ಸಮಾಧಿ ಪಾಲನೆ ಮಾಡಿದರು. ಎಂಟು ಸಮಾಪತ್ತಿ ಮತ್ತು ಪಂಚ ಅಭಿಜ್ಞಾ ಪ್ರಾಪ್ತಿಮಾಡಿದರು. ನಂತರ ಬ್ರಹ್ಮಲೋಕ ಗಾಮಿಯಾದರು.


ನಮಗೆ ಶೀಲವಂತರಾಗಲು ಅಡ್ಡಿಗಳೇನು?

1. ನಮಗೆ ಯೋಗ್ಯ ಜ್ಞಾನ ಸಿಗದಿರುವುದೇ ಪ್ರಥಮ ಅಡ್ಡಿಯಾಗಿದೆ. ಯಾವಾಗ ನಾವು ಶೀಲದ ಮಹತ್ವತೆ ಮತ್ತು ಪಾಪದ ಭೀಕರತೆ ತಿಳಿಯುವೆವು ಆಗ ನಮಗೆ ಶೀಲದ ಬಗ್ಗೆ ಸಮ್ಮಾಸಂಕಲ್ಪ ಮೂಡುತ್ತದೆ.
2. ನಮ್ಮಲ್ಲಿರುವ ದ್ವೇಷ, ಗುಣ ಅಡ್ಡಿಯಾಗುತ್ತದೆ. ದ್ವೇಷದಿಂದ ಸೇಡು, ಅಸೂಯೆ, ಹಿಂಸೆ, ಅಸಹನೆ, ಕ್ರೂರತ್ವ ಇವುಗಳಿರುವುದರಿಂದಲೇ ನಾವು ಪಾಲಿಸಲು ಸಾಧ್ಯವಾಗುತ್ತಿಲ್ಲ. ಸಮ್ಮಾದೃಷ್ಟಿ, ಮೆತ್ತಾ ಧ್ಯಾನದಿಂದ ಇವನ್ನು ದಾಟಬಹುದು.
3. ನಮ್ಮಲ್ಲಿರುವ ಲೋಭ ಇದರಿಂದಲೇ ನಾವು ಪ್ರಾಣಿಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮಾದಕ ವಸ್ತುಗಳ ಸೇವನೆ ಎಲ್ಲವನ್ನು ಮಾಡಿಬಿಡುತ್ತೇವೆ. ನಮಗೆ ಲೋಭ ಕಡಿಮೆಯಾದಷ್ಟು ನಾವು ಶೀಲವಂತರಾಗುತ್ತೇವೆ. ಪೂರ್ಣವಾಗಿ ಲೋಭರಹಿತರಾದರೆ ಅರಹಂತ ಅಥವಾ ಅನಾಗಾಮಿಗಳಾಗುತ್ತೇವೆ.
4. ಕೆಲವೊಮ್ಮೆ ಸಾಮಾಜಿಕ ವ್ಯವಸ್ಥೆಯು ಕಾರಣವಾಗುತ್ತದೆ. ಭಯದಿಂದ, ಒತ್ತಡದಿಂದ, ವಿವಶತೆಯಿಂದಲೂ ನಾವು ದುಶ್ಶೀಲರಾಗುತ್ತೇವೆ.
5. ನಮ್ಮಲ್ಲಿ ಪಾಪಭೀತಿ ಮತ್ತು ಪಾಪಲಜ್ಜೆಯ ಕೊರತೆಯಿದೆ. ಇದು ತಪ್ಪು ಮಾಡಬಾರದು, ನನ್ನಂತೆ ಪರರು, ಇದನ್ನು ಮಾಡಿದರೆ ದುಃಖವುಂಟಾಗುತ್ತದೆ, ನಿಂದೆ ಸಿಗುತ್ತದೆ, ಶಿಕ್ಷೆಯಾಗುತ್ತದೆ, ದುರ್ಗತಿ ಸಿಗುತ್ತದೆ, ಮತ್ತೆ ಮಾನವ ಜನ್ಮ ಸಿಗಲಾರದು, ಸುಗತಿಯೇ ಸಿಗಲಾರದು, ಜನ್ಮಗಳಿಂದ ಮುಕ್ತನಾಗಲಾರೆ, ಶ್ರೇಷ್ಠ ಪುರುಷನಾಗಲಾರೆ ಈ ರೀತಿಯ ಚಿಂತನೆ ಮಾಡಿದಾಗ ಪಾಪಲಜ್ಜೆ ಮತ್ತು ಪಾಪಭೀತಿ ಮೂಡಿ ಅತನು ಶೀಲವಂತನಾಗುತ್ತಾನೆ.


ಕಾಡಾಗ್ನಿಯಂತೆ ದಹಿಸು ನೀ ಎಲ್ಲಾ ಬಂಧನಗಳನ್ನು

ಒಮ್ಮೆ ಒಬ್ಬ ಭಿಕ್ಷು ಬುದ್ಧರಿಂದ ಧ್ಯಾನದ ವಿಷಯವನ್ನು ಪಡೆದು ಅರಣ್ಯದಲ್ಲಿ ಧ್ಯಾನ ಮಾಡತೊಡಗಿದನು. ಆತನು ಕಠಿಣವಾಗಿಯೆ ಪರಿಶ್ರಮಿಸಿ ಧ್ಯಾನಿಸಿದನು. ಆದರೂ ಧ್ಯಾನದಲ್ಲಿ ಅತ್ಯಲ್ಪ ಲಾಭವನ್ನು ಗಳಿಸಿದನು. ಪರಿಣಾಮವಾಗಿ ಕುಗ್ಗಿದ ಆತನು ನಿರಾಶನಾದನು. ಆತನು ಬುದ್ಧರಿಂದ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಜೇತವನ ವಿಹಾರಕ್ಕೆ ಬರತೊಡಗಿದನು. ದಾರಿಯಲ್ಲಿ ದೊಡ್ಡ ಕಾಡ್ಗಿಚ್ಚು ಹಬ್ಬಿತ್ತು. ಆತನು ಒಂದು ದೊಡ್ಡ ಬೆಟ್ಟವೇರಿದನು. ಅಲ್ಲಿಂದ ಬೆಂಕಿಯನ್ನು ವೀಕ್ಷಿಸಿದನು. ಆ ಬೆಂಕಿಯು ಸಣ್ಣದನ್ನು, ದೊಡ್ಡದನ್ನು, ಯಾವುದನ್ನೂ ಬಿಡದೆ ದಹಿಸುತ್ತಿತ್ತು. ಇದನ್ನು ಕಂಡ ಆತನು ಚಿಂತನೆಗೆ ಜಾರಿದನು. ಹೇಗೆ ಬೆಂಕಿಯು ಎಲ್ಲವನ್ನು ದಹಿಸುತ್ತಿದೆಯೋ ಹಾಗೆಯೇ ನಾನು ಸಹಾ ನನ್ನ ಪ್ರಜ್ಞಾಶಕ್ತಿಯಿಂದ, ವೀರ್ಯಬಲದಿಂದ ಸಣ್ಣ ಮತ್ತು ದೊಡ್ಡ ಬಂಧನಗಳನ್ನೆಲ್ಲಾ ಸುಟ್ಟು ಹಾಕಿದರೆ ಹೇಗೆ?
ಆ ಕ್ಷಣದಲ್ಲೇ ಆತನ ಉದಾತ್ತ ಯೋಚನೆಯು ಬುದ್ಧರಿಗೆ ಗೊತ್ತಾಯಿತು. ಅವರು ತಕ್ಷಣ ತೇಜೋಸ್ವರೂಪಿಯಾಗಿ ಆತನ ಮುಂದೆ ಪ್ರತ್ಯಕ್ಷರಾದರು ಮತ್ತು ಹೀಗೆ ಹೇಳಿದರು: ನೀನು ನಿಜವಾಗಿಯೂ ಯೋಗ್ಯವಾದ ಹಾದಿಯಲ್ಲೇ ಇದ್ದೀಯೆ. ಅದೇರೀತಿ ಚಿಂತಿಸು, ಮುಂದುವರೆಸು, ಹಾಗೇ ಮಾಡು. ಹೇಗೆ ಬೆಂಕಿಯು ಚಿಕ್ಕ ಮತ್ತು ದೊಡ್ಡದೆನ್ನದೆ ಎಲ್ಲವನ್ನು ಸುಟ್ಟು ಹಾಕುವುದೋ ಹಾಗೆಯೇ ಓ ಭಿಕ್ಷು ನೀನು ಹಾಗೇ ಮಾಡು. ಜಾಗರೂಕತೆಯಲ್ಲಿ ಭಯಪಡುವ ಭಿಕ್ಷುವು ಎಲ್ಲಾ ಬಂಧನಗಳನ್ನು ಸುಟ್ಟುಹಾಕುತ್ತಾನೆ.
ಆ ಭಿಕ್ಷು ಸ್ಫೂತರ್ಿ ಹೊಂದಿ, ಧ್ಯಾನಿಸಿ, ಜ್ಞಾನೋದಯ ಹೊಂದಿ ಅರಹಂತತ್ವ ಪಡೆದನು. ಆ ಬುದ್ಧರು ಹೇಳುವ ಗಾಥೆಯಿದು.

ಅಪ್ರಮಾದದಲ್ಲಿ (ಜಾಗರೂಕತೆ) ನಿರತನಾಗರುವ ಭಿಕ್ಷುವು ಪ್ರಮಾದದಲ್ಲಿ (ಅಲಕ್ಷ) ಭಯಪಡುತ್ತಾನೆ. ಸಂಯೋಜನಗಳು ಅಣುವಷ್ಟೇ ಇರಲಿ, ಸ್ಥೂಲವಾಗಿಯೇ ಇರಲಿ ಅಗ್ನಿಯಂತೆ ದಹಿಸುತ್ತಾನೆ. 

(ಧಮ್ಮಪದ 31)

ಬುದ್ಧಘೋಷರವರ ವಿಶುದ್ಧಿ ಮಾರ್ಗ

                             ಬುದ್ಧಘೋಷರವರ ವಿಶುದ್ಧಿ ಮಾರ್ಗ


  ಬುದ್ಧಘೋಷರವರು ಬೋಧಿವೃಕ್ಷದ ಸಮೀಪದ ಘೋಷ ಎಂಬ ಹಳ್ಳಿಯಲ್ಲಿ ಕೆಸೀ ಮತ್ತು ಕೇಸೀಣೀ ಎಂಬ ಬ್ರಾಹ್ಮಣ ದಂಪತಿಗಳಿಗೆ ಕ್ರಿ.ಶ. 5ನೆಯ ಶತಮಾನದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. 7ನೆಯ ವಯಸ್ಸಿಗೆ ಸಕಲ ವೇದಾ ಪಾರಂಗತರಾಗಿದ್ದರು. ವೇದಗಳಲ್ಲಿ ಪ್ರಭುತ್ವ ಪಡೆದಿದ್ದರು. ಒಮ್ಮೆ ಒಬ್ಬ ಬೌದ್ಧಥೇರನೊಂದಿಗೆ ಚಚರ್ೆಯಾಗಿ ಬುದ್ಧರ ಬೋಧನೆಯ ಮಹತ್ವ ಕಂಡು ವೇದಗಳ ನಿಸ್ಸಾರ ಅರಿವಾಗಿ ಬೌದ್ಧ ಭಿಕ್ಷುವಾದರು. ನಂತರ ಗುರುವಿನ ಅಪ್ಪಣೆಯಂತೆ ಸಿಂಹಳ ದ್ವೀಪಕ್ಕೆ ಹೋಗಿ ಅಲ್ಲಿ ಸಿಂಹಳ ಭಾಷೆಯಲ್ಲಿದ್ದ ತಿಪಿಟಕವನ್ನು ಮತ್ತೆ ಪಾಳಿ ಭಾಷೆಗೆ ಅನುವಾದಿಸಲು ಅಪ್ಪಣೆ ಕೇಳಿದರು. ಆಗ ಅಲ್ಲಿದ್ದ ಗುರುಗಳು ಇವರ ವಿದ್ವತ್ತು ಪರೀಕ್ಷಿಸಲು ಗಾಥೆಯನ್ನು ನೀಡಿ ವ್ಯಾಖ್ಯಾನ ಮಾಡಲು ನೀಡಿದರು. ಆ ಗಾಥೆಯ ವ್ಯಾಖ್ಯಾನವೇ ವಿಸುದ್ದಿಮಾಗ್ಗ (ವಿಶುದ್ದಿಮಾರ್ಗ). ಇದೊಂದು ಅಪರೂಪದ ಅದ್ಭುತ ಗ್ರಂಥವಾಗಿದೆ. ಇಡೀ ತಿಪಿಟಕದ ಸಾರವನ್ನೇ ಹಿಂಡಿ ನೀಡಿದ ಹಾಗಿದೆ. ಧ್ಯಾನಾಸಕ್ತರಿಗೆ ಅತ್ಯುತ್ತಮ ಮಾರ್ಗದಶರ್ಿಯಾಗಿದೆ.
ನಂತರ ಗುರುಗಳ ಅಪ್ಪಣೆ ಸಿಗುತ್ತದೆ. ಆಗ ಇವರು ಇಡೀ ತಿಪಿಟಕವನ್ನು 3 ತಿಂಗಳಲ್ಲಿ ಅನುವಾದ ಮಾಡುತ್ತಾರೆ. ನಂತರ ಹಾಗೆಯೇ ತಿಪಿಟಕದ ಬಹುಪಾಲು ವ್ಯಾಖ್ಯಾನವನ್ನು ಇವರು ಮಾಡಿದ್ದಾರೆ.
ಇವರಿಗೆ ಪರೀಕ್ಷಿಸಲು ನೀಡಿದ ಗಾಥೆಯಿದು.
"ಯಾವಾಗ ಜ್ಞಾನಿಯು ಶೀಲದಲ್ಲಿ ಸುಪ್ರತಿಷ್ಠಾಪನೆಯಾಗುವನೋ, ಸಮಾಧಿ ಮತ್ತು ಪ್ರಜ್ಞಾವನ್ನು ಅಭಿವೃದ್ಧಿಗೊಳಿಸುತ್ತಾನೋ ಅಂತಹ ಉತ್ಸಾಹಿ ಮತ್ತು ಮೇಧಾವಿ ಭಿಕ್ಷುವು ಬಲೆಯ ಬಂಧನಗಳ ಬಿಡುಗಡೆಯಲ್ಲಿ ಯಶಸ್ವಿಯಾಗುತ್ತಾನೆ."

ಇಲ್ಲಿ ಈ ಗಾಥೆಯನ್ನು ವಿಸ್ತರಿಸಿ ಬರೆದ ಬುದ್ಧಘೋಷರವರು ಮಜ್ಜಿಮನಿಕಾಯದ 24ನೇ ಸುತ್ತವಾದ ರಥವಿನಿತಸುತ್ತದಂತೆ ನಿಬ್ಬಾಣದ ಹಾದಿಯನ್ನು ರಚಿಸಿದ್ದಾರೆ. ಇದು ನಿಜಕ್ಕೂ ಸಾರ್ವಕಾಲಿಕ ಶ್ರೇಷ್ಠ ಗ್ರಂಥವಾಗಿದೆ.

ರಥವಿನಿತ ಸುತ್ತ :

ಈ ಸುತ್ತದಲ್ಲಿ ಸಾರಿಪುತ್ತರವರು ಪುಣ್ಣ ಮಂಥಾನಿಪುತ್ತರವರನ್ನು ಬೇಟಿಯಾಗಿ ಈರೀತಿ ಪ್ರಶ್ನಿಸಿ ಅವರ ಪ್ರಜ್ಞಾಶಕ್ತಿಯನ್ನು ಪರೀಕ್ಷಿಸುತ್ತಾರೆ.
ಸಾರಿಪುತ್ತ : ನೀವು ಬುದ್ಧಭಗವಾನರ ಬಳಿ ಪರಿಶುದ್ಧವಾದ ಜೀವನ ನಡೆಸುತ್ತಿರುವಿರಾ?
ಪುಣ್ಣ : ಹೌದು ಮಿತ್ರ.
ಸಾರಿಪುತ್ತ : ಹಾಗಾದರೆ ನೀವು ಭಗವಾನರ ಬಳಿ ವಿಶುದ್ಧವಾದ ಜೀವನ ನಡೆಸುತ್ತಿರುವುದು ಶೀಲ ವಿಶುದ್ಧಿಗಾಗಿಯೇನು?
ಪುಣ್ಣ : ಇದಕ್ಕಾಗಿ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಚಿತ್ತವಿಶುದ್ಧಿಗಾಗಿಯೇ?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ದಿಟ್ಟಿ (ದೃಷ್ಟಿ) ವಿಶುದ್ಧಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ...ಮಾಗರ್ಾ ಸಂದೇಹವನ್ನು (ಕಂಕವಿತರಣ ವಿಶುದ್ಧಿ) ದಾಟುವ ವಿಶುದ್ದಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ ಮಾರ್ಗ ಅಮಾರ್ಗ ಜ್ಞಾನ ದರ್ಶನ ವಿಶುದ್ದಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಪಟಿಪದ ಜ್ಞಾನದರ್ಶನ ವಿಶುದ್ಧಿಗಾಗಿಯೇನು? (ಜ್ಞಾನ ಮತ್ತು ದರ್ಶನದ ಹಾದಿಯ ವಿಶುದ್ದಿಗಾಗಿಯೇ?)
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಜ್ಞಾನ ಮತ್ತು ದರ್ಶನದ ವಿಶುದ್ಧಿಗಾಗಿಯೇ?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಮಿತ್ರನೇ ಭಗವಾನರ ಬಳಿ ಯಾವ ಉದ್ದೇಶದಿಂದ ವಿಶುದ್ದ ಜೀವನ ನಡೆಸುತ್ತಿರುವೆ?
ಪುಣ್ಣ : ಮಿತ್ರನೇ, ಅಂಟುವಿಕೆಯ ಸಂಪೂರ್ಣ ನಿರೋಧಕ್ಕಾಗಿ (ನಿಬ್ಬಾಣಕ್ಕಾಗಿ) ನಾನು ಬುದ್ಧ ಭಗವಾನರ ಬಳಿ ವಿಶುದ್ದವಾದ ಜೀವನ ನಡೆಸುತ್ತಿರುವೆ.
ಅಂದರೆ ಇಲ್ಲಿ ಸ್ಪಷ್ಟವಾಗಿ ಗೊತ್ತಾಗುವಂತಹ ಅಂಶ ಏನೆಂದರೆ ವಿಶುದ್ದಮಾರ್ಗದ 7ನೇಯ ಅಂತಿಮ ಹಂತವೂ ಸಹಾ ಗುರಿಯಲ್ಲ. ಇಲ್ಲಿ ಜೀವನದ ಉದ್ದೇಶವೆಂದರೆ ನಿಬ್ಬಾಣ (ಅಸಂಖತದಾತು). ಎಲ್ಲಾ ಬಗೆಯ ಕಲ್ಮಶಗಳಿಂದ, ಅಸ್ತಿತ್ವದಿಂದ, ದುಃಖಗಳಿಂದ, ಜನ್ಮಗಳಿಂದ ಪೂರ್ಣ ವಿಮುಕ್ತಿ. 

Tuesday 12 December 2017

ಸಮ್ಮಾಸಂಕಲ್ಪ (ಯೋಗ್ಯವಾದ ಸಂಕಲ್ಪ/ಯೋಚನೆಗಳು)

ಸಮ್ಮಾಸಂಕಲ್ಪ (ಯೋಗ್ಯವಾದ ಸಂಕಲ್ಪ/ಯೋಚನೆಗಳು) :

                ಸಮ್ಮಾ (ಸಂಯಕ್) ಸಂಕಪ್ಪ (ಸಂಕಲ್ಪ) ಇದಕ್ಕೆ ರೀತಿಯ ಅರ್ಥಗಳನ್ನು ನೀಡಬಹುದು. ಯೋಗ್ಯವಾದ ಸಂಕಲ್ಪ ಅಥವಾ ಯೋಗ್ಯವಾದ ನಿಧರ್ಾರ ಅಥವಾ ಯೋಗ್ಯವಾದ ಆಕಾಂಕ್ಷೆ ಅಥವಾ ಯೋಗ್ಯವಾದ ಚಿಂತನೆ ಅಥವಾ ಯೋಗ್ಯವಾದ ಯೋಚನೆಗಳು. ಇಲ್ಲಿ ಸಾಧಕ ತನ್ನ ಧ್ಯಾನದ ಉಳಿದ ಸಮಯದಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಅಕುಶಲದಿಂದ ಮುಕ್ತನಾಗಲು ಸದಾ ಹಾತೊರೆಯುತ್ತಾನೆ. ಹಾಗೆಯೇ ಸಮ್ಮಾದೃಷ್ಟಿಯಿಂದ ಆತನಿಗೆ ಯೋಗ್ಯವಾದುದನ್ನು ಆರಿಸಲು ನಿಧರ್ಾರ ಶಕ್ತಿಯಿರುತ್ತದೆ. ಹೀಗಾಗಿ ಆತನು ಯೋಗ್ಯವಾದುದನ್ನೇ ಆರಿಸುತ್ತಾನೆ. ಬೋಧಿಯನ್ನು ಮತ್ತು ನಿಬ್ಬಾಣವನ್ನು ಮತ್ತು ಆರ್ಯ ಅಷ್ಠಾಂಗ ಮಾರ್ಗದಲ್ಲಿ ಕ್ರಮಿಸಲು ಸದಾ ಹಾತೊರೆಯುತ್ತಾನೆ ಮತ್ತು ಸಂಕಲ್ಪಸುತ್ತಿರುತ್ತಾನೆ.
                ಭಗವಾನರು ಇದರ ಬಗ್ಗೆ ಹೀಗೆ ಹೇಳಿದ್ದಾರೆ ಭಿಕ್ಷುಗಳೇ, ಯಾವುದು ಸಮ್ಮಾಸಂಕಲ್ಪ? ತ್ಯಾಗ ವೈರಾಗ್ಯದ ಚಿಂತನೆ (ಸಂಕಲ್ಪ) ದ್ವೇಷವನ್ನು ಇಲ್ಲದಂತೆ ಮಾಡುವ (ಸಂಕಲ್ಪ) ಚಿಂತನೆ, ಕ್ರೂರತ್ವ (ಹಿಂಸೆ)ವನ್ನು ಇಲ್ಲದಂತೆ ಮಾಡುವ ಚಿಂತನೆ (ಸಂಕಲ್ಪ) ಇದೇ ಸಮ್ಮಾ ಸಂಕಲ್ಪವಾಗಿದೆ.
                ಸಮ್ಮಾದೃಷ್ಟಿಯು ಜಾಗೃತವಾದಾಗ ಆತನಲ್ಲಿ ಕೇವಲ ಗುರಿಯನ್ನು ಸಾಧಿಸುವಂತಹ ಚಿಂತನೆಗಳೇ ಬರುತ್ತದೆ. ಗುರಿಯನ್ನು ಸಾಧಿಸಲು ಇಲ್ಲಿ ಎರಡು ಪ್ರಬಲ ಅಸ್ತ್ರಗಳಿವೆ.  1. ಪ್ರಜ್ಞಾ 2. ಇಚ್ಛಾಶಕ್ತಿ. ಇವೆರಡರ ಬಲಿಷ್ಠ ಬೆಳವಣಿಗೆಯಲ್ಲಿ ಮಿಕ್ಕವೆಲ್ಲವೂ ಅಡಕವಾಗುತ್ತದೆ.
                ಇಚ್ಛೆಯೇ ಕ್ರಿಯೆಗೆ ಮೂಲ, ಕ್ರಿಯೆಯು ಶೀಲ ಆಗಿರಬಹುದು, ಸಮಾಧಿ ಆಗಿರಬಹುದು, ಮಿಕ್ಕವೇ ಆಗಿರಬಹುದು. ಎಷ್ಟು ಇಚ್ಛೆ ವಿಕಾಸವಾಗುವುದು, ಅಷ್ಟು ಶ್ರಮ ಹರಿಯುತ್ತದೆ. ಆದ್ದರಿಂದಲೇ ಭಗವಾನರು ಸಮ್ಮಾ ಸಂಕಲ್ಪಕ್ಕೆ ಅಷ್ಟೊಂದು ಮಹತ್ವ ನೀಡಿದ್ದಾರೆ.
                ಇಲ್ಲಿ ಸಾಧಕ ತ್ಯಾಗವೈರಾಗ್ಯದಿಂದ ಲೋಭವನ್ನು ನಾಶಪಡಿಸುತ್ತಾನೆ.
                ಮೆತ್ತಾ, ಕರುಣಾ, ಮುದಿತಾದಿಂದ ದ್ವೇಷ, ಕ್ರೂರತ್ವ ಮತ್ತು ಅಸೂಯೆಗಳನ್ನು ನಾಶಪಡಿಸುತ್ತಾನೆ.
ಸಿದ್ಧಾಂತವೇ ಸಾಧನೆಯಲ್ಲ, ಜ್ಞಾನವೇ ಸಾಕ್ಷಾತ್ಕಾರವಲ್ಲ :
                ಬಹಳಷ್ಟು ಜನರು ಓದಿ ಅಥವಾ ಕೇಳಿ ಜ್ಞಾನವನ್ನು ಪಡೆದು ಅದೇ ಅಂತಿಮವೆಂದು ತಿಳಿಯುತ್ತಾರೆ, ಅವರ ನಡವಳಿಕೆಯ ಪ್ರಕಾರ ಜ್ಞಾನ ತಿಳುವಳಿಕೆಗೆ ಹೊರತು ಪಾಲನೆಗಲ್ಲ. ಅವರ ಪ್ರಕಾರ ಸಿದ್ಧಾಂತಕ್ಕೆ ಮತ್ತು ಜ್ಞಾನಕ್ಕೆ ಮಹತ್ವವಿದೆ. ಅಂತಹವರು ಗೌರವಯುತವಾದ ಸಾಧನೆಗೆ ಇಳಿಯುವುದಿಲ್ಲ ಮತ್ತು ಸಾಕ್ಷಾತ್ಕಾರವಾಗಲಿ ಸಾಕ್ಷಾತ್ಕಾರದ ಫಲಕ್ಕಾಗಲಿ ಭಾಗಿಯಾಗುವುದಿಲ್ಲ, ಆದರೆ ನಿಜವಾದ ಪ್ರಜ್ಞಾವಂತರಿಗೆ ಸಿದ್ಧಾಂತಕ್ಕಿಂತ ಸಾಧನೆ ಮುಖ್ಯವಾದುದು ಮತ್ತು ಸಾಕ್ಷಾತ್ಕಾರ ಮತ್ತು ಪಾಲನೆಯೇ ಜ್ಞಾನಕ್ಕಿಂತ ಪ್ರಧಾನವಾದುದು ಆಗಿದೆ. ಅದಕ್ಕೆ ಉದಾಹರಣೆ ಘಟನೆ.
                ಸದ್ವಂಶಸ್ಥರಾದ ಇಬ್ಬರು ಮಿತ್ರರು ಭಿಕ್ಷುಗಳಾದರು. ಅವರಲ್ಲಿ ಒಬ್ಬ ತಿಪಿಟಕದ ಅಧ್ಯಯನದಲ್ಲಿ ತಲ್ಲೀನನಾಗಿ ವಿದ್ವಾಂಸನಾದನು ಮತ್ತು ಚೆನ್ನಾಗಿ ಬೋಧಿಸುತ್ತಿದ್ದನು. ರೀತಿಯಿಂದಾಗಿ ಆತನು 18 ಭಿಕ್ಷುಗಳ ಗುಂಪಿಗೆ ಬೋಧಕನಾದನು. ಆದರೆ ಇನ್ನೊಬ್ಬ ಭಿಕ್ಷುವು ತಿಳಿದಿರುವುದನ್ನು ಚೆನ್ನಾಗಿ ಪಾಲಿಸತೊಡಗಿದನು. ಆತನು ಶೀಲದಲ್ಲಿ ಅತ್ಯಂತ ನಿಷ್ಠಾವಂತನಾದನು. ಸದಾ ಜಾಗ್ರತೆಯನ್ನು ಹೊಂದಿದವನು, ಅತ್ಯಂತ ಪ್ರಯತ್ನಶಾಲಿಯು, ಧ್ಯಾನಸಿದ್ಧನು ಮತ್ತು ಕೊನೆಗೆ ಅರಹಂತನೇ ಆದನು. ವಿಪಶ್ಶನದ ಆಳ ಜ್ಞಾನವನ್ನು ಸಾಕ್ಷಾತ್ಕರಿಸಿದನು, ಮುಕ್ತನಾದನು. ಆದರೆ ಇದು ಪರರಿಗೆ ಗೊತ್ತಾಗಲಿಲ್ಲ.
                ಒಮ್ಮೆ ಜೇತವನದಲ್ಲಿ ಬುದ್ಧಭಗವಾನರು ತಂಗಿದ್ದಾಗ ಅಲ್ಲಿ ಇಬ್ಬರು ಭಿಕ್ಷುಗಳು ಭೇಟಿಯಾದರು. ಮೊದಲನೆಯವ ತನ್ನ ಪಾಂಡಿತ್ಯ ಪ್ರದಶರ್ಿಸಿ, ಎರಡನೆಯ ಭಿಕ್ಷುವನ್ನು ಕೀಳಾಗಿ ಭಾವಿಸಿದನು. ಭಿಕ್ಷುವು ಅತ್ಯಂತ ಕಡಿಮೆ ಸಿದ್ಧಾಂತವನ್ನು ತಿಳಿಸಿದ್ದಾನೆ. ಈತನ ಜ್ಞಾನವು ಅಪಕ್ವವಾಗಿದೆ ಎಂದು ತಿಳಿದು ತನ್ನ ಬಗ್ಗೆ ಅಹಂಭಾವ ವ್ಯಕ್ತಪಡಿಸಿದನು. ಆತನ ಜೊತೆ ವಾದವಿವಾದ ಮಾಡಿ, ಪ್ರಶ್ನಿಸಿ ಆತನಿಗೆ ತೇಜೋಭಂಗ ಮಾಡಲು ಸಿದ್ಧನಾದನು. ಆದರೆ ಹಾಗೆ ಮಾಡಿದರೆ ಆತನಿಗೆ ಅರಹಂತರ ತೇಜೋವಧೆಯ ಪಾಪಕ್ಕೆ ಸಿಲುಕಿ ದೀರ್ಘಕಾಲ ದುಃಖಕ್ಕೆ ಸಿಲುಕುತ್ತಿದ್ದನು. ಆದ್ದರಿಂದ ಬುದ್ಧರಿಗೆ ವಿಷಯ ತಿಳಿದು ಆತನನ್ನು ಸರಿದಾರಿಗೆ ತರಲು ನಿರ್ಧರಿಸಿ ಅವರನ್ನು ಕ್ಷಣವೇ ಭೇಟಿಯಾದರು. ಹಾಗು ಅವರನ್ನು ಭಗವಾನರು ವಿಪಶ್ಶನ ಧ್ಯಾನಗಳ ಮಾರ್ಗ ಮತ್ತು ಫಲಗಳ ಬಗ್ಗೆ ಪ್ರಶ್ನಿಸಿದರು. ಒಣ ಜ್ಞಾನಿಯಾದ ಪಂಡಿತನಿಗೆ ಉತ್ತರಿಸಲು ಆಗಲಿಲ್ಲ. ಆದರೆ ಸಾಧನೆಯಲ್ಲಿ ಪ್ರವೀಣ ಹಾಗು ಅರಹಂತ ಭಿಕ್ಷುವು ಮಾತ್ರ ತನ್ನ ಸಾಕ್ಷಾತ್ಕಾರದ ಅನುಭವದಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದನು.
                ಆಗ ಬುದ್ಧ ಭಗವಾನರು ಅರಹಂತ ಭಿಕ್ಷುವಿಗೆ ತುಂಬ ಪ್ರಶಂಸಿಸಿದರು ಮತ್ತು ಮತ್ತೊಬ್ಬ ಭಿಕ್ಷುವಿಗೆ ಯಾವರೀತಿಯ ಪ್ರಶಂಸೆಯು ಸಿಗಲಿಲ್ಲ. ಆಗ ಭಗವಾನರು ಗಾಥೆಗಳನ್ನು ಹೇಳಿದರು.
                ಒಬ್ಬನು ಪವಿತ್ರ ಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ ಉಚ್ಛರಿಸಲಿ. ಆದರೆ ಅದರಂತೆ ಅನುಸರಿಸದಿದ್ದರೆ ಆತನು ಪರರ ಗೋವುಗಳನ್ನು ಎಣಿಸುವವನಂತೆ ಆತನ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುವುದಿಲ್ಲ.            (ಧಮ್ಮಪದ 19)
                ಪವಿತ್ರ ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ, ಅದರಂತೆ ಅನುಸರಿಸುವವನು ಹಾಗು ರಾಗವನ್ನು, ದ್ವೇಷವನ್ನು ಮತ್ತು ಮೋಹವನ್ನು ತ್ಯಜಿಸುವವನು. ನಿಜವಾಗಿ ಅರಿತವನು, ಸುವಿಮುಕ್ತ ಚಿತ್ತವುಳ್ಳವನು ಆದ ಆತನು ಇಲ್ಲಿಯಾಗಲಿ ಅಥವಾ ನಂತರದ ಕಾಲದಲ್ಲಿಯಾಗಲಿ ಆತನು ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ.  -20
ಸೌಂದರ್ಯದ ನಿಜಸ್ವರೂಪ :
                ರಾಜಗೃಹದಲ್ಲಿ ಸಿರಿಮಾ ಎಂಬ ನರ್ತಕಿಯಿದ್ದಳು. ಆಕೆ ತನ್ನ ಸೌಂದರ್ಯದಿಂದ ಬಹು ಖ್ಯಾತಿ ಪಡೆದಿದ್ದಳು. ಎಲ್ಲೆಡೆ ಆಕೆಯ ಚೆಲುವಿನ ಸುದ್ದಿ ಹಬ್ಬಿತ್ತು. ಆಕೆಯೂ ಸಹ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದಳು. ಈಕೆಯ ಖ್ಯಾತಿಯ ಬಗ್ಗೆ ಕೇಳಿ ಒಬ್ಬ ಯುವಕ ಭಿಕ್ಷು ಮೋಹಗೊಂಡನು. ಆತನು ಆಕೆಯನ್ನು ಕಾಣಲು ಹೋದನು. ಆಗ ಆಕೆ ರೋಗದಿಂದ ಕೂಡಿದ್ದು. ಆದರೂ ಸಹ ಭಿಕ್ಷುಗಳಿಗೆ ವಂದಿಸಿ ಆಹಾರ ನೀಡಿ ಹೊರಟಳು. ಯುವಕ ಭಿಕ್ಷುವು ಹೀಗೆ ಯೋಚಿಸಿದನು ರೋಗದಿಂದ ಇರುವಾಗಲೇ ಹೀಗಿರಬೇಕಾದರೆ ಚೆನ್ನಾಗಿರುವಾಗ ಇನ್ನೆಷ್ಟು ಸುಂದರಳಾಗಿ ಇದ್ದಿರಬಹುದು ಎಂದು ಯೋಚಿಸಿ ಮತ್ತಷ್ಟು ರಾಗಾಸಕ್ತನಾದನು.
                ರಾತ್ರಿಯೇ ಆಕೆಯು ಸತ್ತುಹೋದಳು. ವಿಷಯವನ್ನು ರಾಜ ಬಿಂಬಸಾರನು ಭಗವಾನರಲ್ಲಿಗೆ ಬಂದು ತಿಳಿಸಿದನು. ಭಗವಾನರು ಸತ್ಯದರ್ಶನ ಮಾಡಿಸುವುದಕ್ಕಾಗಿ, ಬಿಂಬಸಾರನಿಗೆ 3 ದಿನಗಳ ಕಾಲ ಆಕೆಯ ಶವವನ್ನು ಸಂಸ್ಕಾರ ಮಾಡದಿರುವಂತೆ ಬುದ್ಧಿವಾದ ನೀಡಿದರು. 4ನೆಯ ದಿನ ಆಕೆಯ ಶರೀರವು ಬಣ್ಣಗೆಟ್ಟು ಊದಿ, ಹುಳುಗಳು ಹೊರಬರಲಾರಂಭಿಸಿತು. ಆಗ ರಾಜನು ಸಿರಿಮಾವನ್ನು 1000 ರೂ.ಗೆ ಮಾರಾಟ ಘೋಷಿಸಿ ಯಾರು ಬೇಕಾದರೂ ಪಡೆಯಬಹುದೆಂದು ಡಂಗೂರ ಸಾರಿದನು. ಆದರೆ ಯಾರೂ ಬರಲಿಲ್ಲ. ಕೊನೆಗೆ ಪುಕ್ಕಟೆಯಾಗಿ ಆಕೆ ಶವ ಸಿಗುವುದೆಂದು ಡಂಗೂರ ಸಾರಿದನು. ಯಾರಿಗೂ ಸಹ ಆಕೆಯ ಶರೀರ ಬೇಕಾಗಿರಲಿಲ್ಲ. ಎಲ್ಲರೂ ಆಕೆ ಬದುಕಿದ್ದಾಗ ಎಷ್ಟು ಆಸೆಪಡುತ್ತಿದ್ದರೋ ಸತ್ತಾಗ ಅಷ್ಟೇ ಅಸಹ್ಯಪಡುತ್ತಿದ್ದರು.
                ಯುವಕ ಭಿಕ್ಷುವಿಗೆ ಸಿರಿಮಾ ಸತ್ತಳೆಂದು ಇನ್ನೂ ತಿಳಿದಿರಲಿಲ್ಲ. ಬುದ್ಧರು ಮತ್ತು ಭಿಕ್ಷುಗಳು ಸಿರಿಮಾಳನ್ನು ಕಾಣಲು ಹೋಗುತ್ತಿದ್ದಾರೆಂದು ಆತನು ಸಂತೋಷದಿಂದ ಅವರೊಂದಿಗೆ ಹೋದನು.
                ಆಗ ಭಗವಾನರು ಆಕೆಯ ಶವವನ್ನು ತೋರಿಸಿ ಭಿಕ್ಷುಗಳೊಂದಿಗೆ ಹೀಗೆ ಹೇಳಿದರು: ಭಿಕ್ಷುಗಳೇ ನೋಡಿ, ಆಕೆ ಜೀವಂತವಾಗಿದ್ದಾಗ ಆಕೆಯನ್ನು ಪಡೆಯಲು ಸಹಸ್ರ ಸಹಸ್ರ ರೂಪಾಯಿಗಳನ್ನು ಸುರಿಯಲು ಸಿದ್ಧರಾದವರು ಈಗ ಪುಕ್ಕಟೆಯಾಗಿ ಪಡೆಯಲು ಸಿದ್ಧವಿಲ್ಲ. ಏಕೆಂದರೆ ಶರೀರವು ಅನಿತ್ಯವಾದುದು. ಕೊಳೆಯುವಂತಹದು. ಅಶುಭವು, ಮರಣದಲ್ಲಿ ಅಂತ್ಯವಾಗುವಂತಹುದು.
                ಸುಂದರವಾದ ಶರೀರವನ್ನು ಗಮನಿಸಿ, ಹುಣ್ಣುಗಳ ರಾಶಿ, ಅಸಹ್ಯತೆ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ, ಸ್ಥಿರವಲ್ಲದ ದೇಹವಿದು.
                ಇದನ್ನು ಕೇಳಿದಾಗ, ನೋಡಿದಾಗ ಯುವಕ ಭಿಕ್ಷುವು ಆಸಕ್ತಿಗಳನ್ನು ತೊರೆದು ಸ್ಥಿರಚಿತ್ತನಾದನು.
ಐಶ್ವರ್ಯವು ಮೂರ್ಖನನ್ನು ನಾಶಮಾಡುತ್ತದೆ
                ಒಮ್ಮೆ ಕೋಶಾಧೀಶನು ಬುದ್ಧರಿಗೆ ವಂದಿಸಲು ಬಂದನು. ಆತ ವಂದಿಸಿ ಭಗವಾನ್ ನಾನು ಬರಲು ತಡವಾಯಿತು. ಏಕೆಂದರೆ ಒಬ್ಬ ಶ್ರೀಮಂತನು ಸತ್ತುಹೋದನು ಮತ್ತು ಆತನಿಗೆ ಯಾರೂ ಮಕ್ಕಳಿಲ್ಲದ ಕಾರಣ ಆತನ ಸ್ವತ್ತೆಲ್ಲವೂ ರಾಜ್ಯಕ್ಕೆ ಸೇರಿತು. ಆತನು ಬದುಕಿರುವತನಕ ಯಾರಿಗೂ ದಾನ ಮಾಡಲಿಲ್ಲ. ಹಾಗು ಸ್ವತಃ ಅನುಭವಿಸಲೂ ಇಲ್ಲ. ಇದಕ್ಕೆ ತಾವೇ ಕಾರಣ ತಿಳಿಸಬೇಕು ಎಂದು ಕೇಳಿಕೊಂಡನು.
                ಆಗ ಭಗವಾನರು ಆತನ ಪೂರ್ವ ಜನ್ಮದ ವೃತ್ತಾಂತ ತಿಳಿಸಿದರು. ಹಿಂದಿನ ಜನ್ಮವೊಂದರಲ್ಲಿಯೂ ಶ್ರೀಮಂತನಾಗಿದ್ದನು. ಒಮ್ಮೆ ಶ್ರೀಮಂತನ ಮನೆಗೆ ಪಚ್ಚೇಕಬುದ್ಧರು ಬಂದಿದ್ದರು. ಆಗ ಆತನು ತನ್ನ ಪತ್ನಿಗೆ ಆಹಾರ ನೀಡಲು ಹೇಳಿದನು. ಆಕೆಗೂ ಆಶ್ಚರ್ಯವಾಯಿತು. ಏಕೆಂದರೆ ಅವಳ ಪತಿಯು ರೀತಿ ಹೇಳಿದ್ದೇ ಆಕೆ ಕಂಡಿರಲಿಲ್ಲ. ಆಕೆ ತಕ್ಷಣ ಪಚ್ಚೇಕ ಬುದ್ಧರಿಗೆ ಆಹಾರ ನೀಡಿದಳು. ಅವರು ಆಹಾರ ತೆಗೆದುಕೊಂಡು ಹೋಗುತ್ತಿರುವಾಗ ಶ್ರೀಮಂತನು ರೀತಿ ಯೋಚಿಸಿದನು. ಓಹ್ ಭಿಕ್ಷುವು ಇದನ್ನು ತಿಂದು ಮಲಗಬಹುದು. ಇದರ ಬದಲು ಇದನ್ನು ಸೇವಕರು ತಿಂದಿದ್ದರೆ ಸ್ವಲ್ಪ ಕೆಲಸ ನಡೆಸುತ್ತಿದ್ದರು ಎಂದು ದಾನ ನೀಡಿ ಪಶ್ಚಾತ್ತಾಪಟ್ಟನು.
                ಹೀಗೆ ಆತನು ಪಚ್ಚೇಕಬುದ್ಧರಿಗೆ ದಾನ ನೀಡಿದ್ದರಿಂದಾಗಿ ಅತನು ಜನ್ಮದಲ್ಲಿ ಶ್ರೀಮಂತನಾದನು. ಆದರೆ ನೀಡಿ ಪಶ್ಚಾತ್ತಾಪ ಪಟ್ಟಿದ್ದರಿಂದಾಗಿ ಆತನು ಯಾವ ಸುಖವನ್ನು ಜನ್ಮದಲ್ಲಿ ಹೊಂದಲು ಸಾಧ್ಯವಾಗಲಿಲ್ಲ.

                ಆತ ಹಿಂದಿನ ಅದೇ ಜನ್ಮದಲ್ಲಿ ತನ್ನ ಸೋದರ ಆಸ್ತಿಯನ್ನು ಕಬಳಿಸಲು ಸೋದರನ ಮಗನನ್ನು ಕೊಂದನು. ಅದರ ಪರಿಣಾಮವಾಗಿ ದೀರ್ಘ ಕಾಲದಲ್ಲಿ ದುಃಖ ಅನುಭವಿಸಿ ಜನ್ಮದಲ್ಲಿ ಅದರ ಪರಿಣಾಮವಾಗಿ ಆತನಿಗೆ ಯಾವುದೇ ಮಕ್ಕಳಾಗಲಿಲ್ಲ ಎಂದು  ಭಗವಾನರು ಕೋಶಲದ ರಾಜನಿಗೆ ತಿಳಿಸಿದರು. ಆಗ ರಾಜರು ಭಗವಾನ್ ಆತ ಬುದ್ಧರು ಉದಯಿಸಿ ಇಂತಹ ಕಾಲದಲ್ಲೂ ಯಾವುದೇ ದಾನ ನೀಡದೆ ಸುವರ್ಣಮಯ ಅವಕಾಶ ಕಳೆದುಕೊಂಡನು ಎಂದರು