Saturday 21 April 2018

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿಯನ್ನು, ಕರುಣೆಯನ್ನು ಮುದಿತಾವನ್ನು ಹಾಗು ಉಪೇಕ್ಷವನ್ನು ಅಭಿವೃದ್ಧಿಗೊಳಿಸುವುದರಿಂದ ಅದರದೆ ವಿಶಿಷ್ಟ ಲಾಭ ಸಿಗುತ್ತದೆ.  ನಮ್ಮ ಅಭ್ಯುದಯದ ಸಾಮಥ್ರ್ಯದಂತೆ ನಮ್ಮ ದುಃಖವು ಕ್ಷೀಣವಾಗುತ್ತದೆ. ಹಾಗು ಪರರನ್ನು ನಾವು ದುಃಖದಿಂದ ಮುಕ್ತರಾಗಲು ಸಹಾಯ ಮಾಡಬಹುದು.
ಆದರೆ ಈ ದುಃಖವೇ ನಮಗೆ ಬೀಗದ ಕೈಯಾಗಿದೆ. ಬುದ್ಧರ ಬೋಧನೆಯಲ್ಲಿನ ಮೈತ್ರಿಯು ಕೇವಲ ಏನನ್ನೂ ಬೆಳೆಸುವಂತಹದಲ್ಲ, ಅಥವ ಅದು ಕೇಳಲು ಚೆನ್ನಾಗಿದೆ ಎಂದು ಅಥವಾ ಕುಟುಂಬದ ಮೌಲ್ಯವೆಂದಾಗಲಿ ಅಥವಾ ಸಂತುಷ್ಟತೆಯ ಯೋಚನೆಗಳಿಂದಾಗಲಿ ಅಲ್ಲ. ಈ ನಾಲ್ಕು ಬ್ರಹ್ಮವಿಹಾರಗಳು (ಪರಮ ದಿವ್ಯ ಸ್ಥಿತಿಗಳು) ಬುದ್ಧಭಗವಾನರ ನಾಲ್ಕು ಸತ್ಯಗಳಿಗೆ ಕೊಂಡೊಯ್ಯುವ ದಾರಿಯಾಗಿದೆ ಅದಕ್ಕೆ ತುಂಬ ಸಮೀಪವಾಗಿದೆ.
ಬುದ್ಧರ ಬೋಧನೆಯಲ್ಲಿ ದುಃಖವು ಈರೀತಿಯಿದೆ :
ಜನ್ಮ, ರೋಗ, ಮುಪ್ಪು, ಮರಣಗಳು ದುಃಖ,
ಶೋಕ, ನೋವು ಪಶ್ಚಾತ್ತಾಪ ಚಿಂತೆಗಳು ದುಃಖ
ಪ್ರಿಯರ ವಿಯೋಗ, ದುಃಖ
ಅಪ್ರಿಯದ ಆಗಮನ ದುಃಖ
ಒಟ್ಟಿನಲ್ಲಿ ದೇಹ ಮನಸ್ಸಿನ ಆಸಕ್ತಿಯೆ ದುಃಖ
ಈ ದುಃಖ ಅಥವಾ ಅತೃಪ್ತಿಕರವು ಬುದ್ಧಭಗವಾನರ ಅರ್ಥದಲ್ಲಿ ಪಾಪವೆಂದಲ್ಲ, ಆದರೆ ಅವು ಅಸುಖದೆಡೆಗೆ (ದುಃಖಕ್ಕೆ) ಕರೆದೊಯ್ಯುತ್ತದೆ.  ದುಃಖದ ನಾಶವನ್ನು ಮಾಡಬೇಕಾದರೆ, ದುಃಖದ ಸ್ವರೂಪವನ್ನು, ಅದರ ಉತ್ಪತ್ತಿಯನ್ನು, ಅದರ ನಿರೋಧವನ್ನು ಹಾಗು ಅದರ ಮಾರ್ಗವನ್ನು ಅರಿಯಬೇಕಾಗುತ್ತದೆ ಹಾಗು ಅದರಂತೆ ನಡೆಯಬೇಕಾಗುತ್ತದೆ.
ಇದರ ಪ್ರಧಾನ ಸಾಧನೆಯು ನಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸುವುದು ಮತ್ತು ಧ್ಯಾನದ ಮೂಲಕ ದುಃಖದ ಅಂತ್ಯಗೊಳಿಸುವುದು.
ಬೌದ್ಧರಲ್ಲಿ ಧ್ಯಾನವೆಂದರೆ ಕಠಿಣ ಚಿಂತನೆ (ಬಲಯುತ ಮಾನಸಿಕ ಸಂಘರ್ಷವಲ್ಲ)ಯಲ್ಲ. ಧ್ಯಾನದ ಅರ್ಥ ಶಾರೀರಿಕ ಹಾಗು ಮನಸ್ಸನ್ನು ಶಾಂತಗೊಳಿಸುವುದು ಹಾಗು ತನ್ನ ಆಂತರಿಕದ ಉತ್ಪತ್ತಿ ಹಾಗು ನಷ್ಟಗಳನ್ನು ಅರಿತು ನಿಸ್ಸಾರವನ್ನು ಮೀರಿ ಹೋಗುವುದು. 
ಅದರಲ್ಲಿ ಪ್ರಾಥಮಿಕವಾಗಿ ಉಸಿರಾಟ ಧ್ಯಾನ ಬರುತ್ತದೆ (ಪ್ರಾಣಾಯಮವಲ್ಲ). ಅದರಲ್ಲಿ ಮನಸ್ಸನ್ನು ಉಸಿರಿನ ಪ್ರವೇಶ ಹಾಗು ನಿರ್ಗಮನದ ಕಡೆಗೆ ಕೇಂದ್ರೀಕೃತಗೊಳಿಸಬೇಕಾಗುತ್ತದೆ. ನಂತರ ಹಾಗೆ ಮುಂದುವರೆದ ನಂತರ ಶಾರೀರದ ಹಾಗು ಮನಸ್ಸಿನ ಸೂಕ್ಷ್ಮಾತೀಸೂಕ್ಷ್ಮ ಕ್ರಿಯೆಗಳನ್ನು ಅರಿಯಬೇಕಾಗುತ್ತವೆ.
ಮೈತ್ರಿಯು ಧ್ಯಾನದ ಕ್ಷೇತ್ರದಲ್ಲಿ ಪ್ರಾಥಮಿಕ ಅವಸ್ಥೆಯಷ್ಟೆ. ಆದರೆ ಇದೇ ಪರಮೋತ್ತರ ಹಂತವಲ್ಲ. ಆದರೆ ಇದು ಅಲಕ್ಷ್ಯ ಮಾಡುವಂತಹುದು ಅಲ್ಲ. ಇದರಿಂದ ಶಾಂತತೆಯು ಆನಂದವು ಉಂಟಾಗಿ ಮುಖ್ಯವಾದ ಮಾನಸಿಕ ವಿಷವಾದ ಹಗೆತನ, ಹಿಂಸೆ, ಕೋಪಗಳನ್ನು ನಾಶ ಮಾಡುತ್ತದೆ. ಹಾಗು ಒಬ್ಬರು ಮಾನಸಿಕ ಸ್ಥಿತಿಗಳನ್ನು ಅರಿಯುತ್ತಾ ಅಂಟಿಕೊಳ್ಳುವಂತಹ ಮಹೋನ್ನತೆಗೇರುತ್ತಾನೆ.
ಮೈತ್ರಿಯಿಂದ ಸಾಮಾಜಿಕ ಲಾಭಗಳು ಆಗುವುದರ ಜೊತೆಗೆ ಸಾಧನೆಗಾರನಿಗೆ ಅಥವ ಸಾಧನೆಗಾತಿಗೆ ಮತ್ತು ಸರ್ವಜೀವಿಗಳ ದುಃಖದ ವಿಮುಕ್ತಿಯ ಮಾರ್ಗವು ಅರಿವಾಗುತ್ತದೆ. 

ಮೈತ್ರಿಧ್ಯಾನ

ಮೈತ್ರಿಧ್ಯಾನ


ಮೈತ್ರಿಯನ್ನು ಮೊದಲು ನಿಮ್ಮ ಮೇಲೆ ಪ್ರಸರಿಸಿಕೊಳ್ಳಿ. ನೀವು ನಿಮ್ಮ ಮೇಲೆ ಪ್ರೀತಿ (ಹಿತಭಾವ) ತಾಳದಿದ್ದರೆ ಪರರಿಗೆ ಹೇಗೆ ಪ್ರೀತಿಸಬಲ್ಲಿರಿ? ಆದ್ದರಿಂದ ಮೊದಲು ನಿಮಗೆ ನೀವು ಮಿತ್ರರಾಗಿ. ನಿಮ್ಮ ಮೇಲೆ ನೀವು ಅನಾರೋಗ್ಯಕರ ಪಾಪಯುತ ಕೀಳರಿಮೆ ಬೆಳೆಸಿಕೊಳ್ಳಬೇಡಿ.  ಮಾನವನ ಸ್ವರೂಪವು ಮಾನವನ ಸ್ವರೂಪವೇ. ಯಾರೊಬ್ಬರು ಪೂರ್ಣವಾಗಿ ಒಳ್ಳೆಯವರೆ ಅಲ್ಲ (ಬುದ್ಧ ಹಾಗು ಅರಹಂತರನ್ನು ಬಿಟ್ಟು). ಅಥವಾ ಯಾರು ಸಹಾ ಪೂರ್ಣವಾಗಿ ಪಾಪಿಗಳು ಅಲ್ಲ. ನೀವು ಏನಾದರೂ ತಪ್ಪು ಮಾಡಿದರೆ ನೀವು ಅದಕ್ಕೆ ಚಿಂತೆಪಟ್ಟು ನೀವು ಪಾಪಿಗಳಂತೆ ವ್ಯಕ್ತಿತ್ವ ನಿಮರ್ಾಣ ಮಾಡಬೇಕಾಗಿಲ್ಲ. ಬದಲಾಗಿ ಯೋಗ್ಯ ಅರಿವು ಪ್ರಾಪ್ತಿ ಮಾಡಿ ಸರಿಯಾದ ಅವಕಾಶದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಿ. ನೀವು ಹಿಂದಿನದಕ್ಕೆ ಪಶ್ಚಾತ್ತಾಪ ಪಡಬೇಡಿ. ಭವಿಷ್ಯದ ಬಗ್ಗೆ ಚಿಂತೆಯು ಪಡಬೇಡಿ. ನಿಮ್ಮ ಆಂತರಿಕದ ಕಡೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಕೀಳರಿಮೆ ಹಾಗು ಅಹಂಕಾರಗಳನ್ನು ನಾಶಮಾಡಿ. ನೀವು ಅಂತಹ ಸ್ಥಿತಿಯನ್ನು ತಲುಪಿ ಅಲ್ಲಿ ಕೆಟ್ಟ ಯೋಚನೆಗಳು ಉತ್ಪತ್ತಿಯೇ ಆಗದಿರಲಿ.
ನೀವು ಪರರಿಗೆ ನಿಮ್ಮಲ್ಲಿರುವುದನ್ನು ಮಾತ್ರ ಕೊಡಬಲ್ಲಿರಿ. ನೀವು ಅನುಭವಿಸಲಾಗದಂತಹುದು ನೀವು ಕೊಡಲಾರಿರಿ. ನಿಮ್ಮ ಮೇಲೆ ಮೈತ್ರಿಯನ್ನು ಪ್ರಸರಿಸಿದಲ್ಲಿ ನಿಮ್ಮ ಯೋಗ್ಯತೆ ಏರುತ್ತದೆ. ನಿಮ್ಮ ಉನ್ನತಿಯ ಸಂತುಷ್ಟತೆಯ ಜೊತೆಯಲ್ಲೇ ಪರರ ಉನ್ನತಿಯಲ್ಲಿ ಆನಂದಿಸಿ ಹಾಗು ಮಾನವ ಕುಲಕ್ಕೆ ಸೇವೆಮಾಡಿ. ಎಂದೂ ನೀವು ನಿಮ್ಮನ್ನು ಅತ್ಯುತ್ತಮವಾಗಬಲ್ಲಿರಿ ಎಂದು ಅರಿಯಬಲ್ಲಿರೋ ಹಾಗೆಯೇ ಪರರು ಸಹಾ ಅತ್ಯುತ್ತಮತೆಯನ್ನು ಸಾಧಿಸಬಲ್ಲರು ಎಂದು ಸಹಾ ಅರಿಯುವಿರಿ.
ಮೈತ್ರಿಯು ಕೋಪಕ್ಕೆ ಅತ್ಯುತ್ತಮ ಔಷಧ. ಮೈತ್ರಿಯು ತಮ್ಮಲ್ಲೇ ಕೋಪಗೊಳ್ಳುವವರಿಗೆ ಔಷಧವೂ ಸಹ. ನಾವು ನಮ್ಮ ಮೈತ್ರಿಯನ್ನು ಎಲ್ಲ ಜೀವಿಗಳ ಮೇಲೆ ಸ್ವತಂತ್ರವಾಗಿ, ಅತೀಮವಾಗಿ, ಅಗಾಧವಾಗಿ ಪ್ರಸರಿಸೋಣ.
ಮೈತ್ರಿಯು ಸ್ಥಿರವಾದದ್ದು. ಆದರೆ ಹಿಡಿದುಕೊಂಡಿರುವಂತದಲ್ಲ (ಅಂಟಿಕೊಳ್ಳುವುದಿಲ್ಲ).
ಮೈತ್ರಿಯು ಅಚಲವಾದುದು, ಆದರೆ ಬಂಧನಯುತವಲ್ಲ.
ಮೈತ್ರಿಯು ಗಂಭೀರ ಸಭ್ಯವಾದುದು, ಕಠಿಣವಾದುದಲ್ಲ.
ಮೈತ್ರಿಯು ಸಹಾಯಕರವಾದುದು, ಆದರೆ ತಲೆಹಾಕುವುದಂತಹುದಲ್ಲ.
ಮೈತ್ರಿಯು ಶ್ರೇಷ್ಠವಾದುದು (ಗಂಭೀರ) ಆದರೆ ಅಹಂಕಾರರಹಿತವಾದುದು.
ಮೈತ್ರಿಯು ಕ್ರಿಯಾತ್ಮಕವಾದುದು, ನಿರಾಶಜನಕವಲ್ಲ (ಅಕ್ರಿಯಾತ್ಮಕವಲ್ಲ).
ದ್ವೇಷವು ಸಂಕುಚಿತಗೊಳಿಸುವಂತಹುದು, ಆದರೆ ಮೈತ್ರಿಯು ಸ್ವತಂತ್ರಗೊಳಿಸುವಂತಹುದು.
ದ್ವೇಷವು ದುಃಖವನ್ನುಂಟುಮಾಡುತ್ತದೆ, ಆದರೆ ಮೈತ್ರಿಯು ಶಾಂತಿ (ಆನಂದ)ಯನ್ನು ನೀಡುತ್ತದೆ.
ದ್ವೇಷವು ಉದ್ರೇಕಿಸುತ್ತದೆ, ಆದರೆ ಮೈತ್ರಿಯು ಪ್ರಶಾಂತತೆಯನ್ನು ನೀಡುತ್ತದೆ.
ದ್ವೇಷವು ಬೇರ್ಪಡಿಸುತ್ತದೆ. ಆದರೆ ಮೈತ್ರಿಯು ಒಂದಾಗಿಸುತ್ತದೆ.
ದ್ವೇಷವು ಅಡಚಣೆಯನ್ನುಂಟು ಮಾಡುತ್ತದೆ, ಆದರೆ ಮೈತ್ರಿಯು ಸಹಾಯ ಮಾಡುತ್ತದೆ.
ಮೈತ್ರಿಯು ಶ್ರೇಷ್ಠ ದೃಷ್ಟಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಚಿಂತನೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠವಾಚಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಕಾರ್ಯಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಜೀವನಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಪ್ರಯತ್ನಶೀಲತೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಎಚ್ಚರಿಕೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಸಮಾಧಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ನಮಗೆ ಪರಸ್ಪರ ಸೇವೆ ಮತ್ತು (ಆತಿಥ್ಯ) ದಾನ ಮನೋಭಾವದಿಂದಿರಿ ಎಂದು ಬೋಧಿಸುತ್ತದೆ. ಮೈತ್ರಿಯು ನಮಗೆ ಸಿಹಿಯಾಗಿ (ಪ್ರಿಯವಾಗಿ) ಮತ್ತು ಸರ್ವರೂ ಒಪ್ಪುವಂತಹ ನುಡಿಗಳನ್ನು ಆಡುವಂತೆ ತಿಳಿಸುತ್ತದೆ. ಮೈತ್ರಿಯು ನಮಗೆ ಪರಸ್ಪರ ಹೊಡೆದಾಡದೆ ಜಗಳವಾಡದೆ, ಪರಸ್ಪರ ಉನ್ನತಿಗೆ ಶ್ರಮಿಸುವಂತೆ ಬೋಧಿಸುತ್ತದೆ. ನಾವು ನಮ್ಮ ಮೈತ್ರಿಯನ್ನು ನಮಗೆ ದ್ವೇಷಿಸುವಂತವರ ಮೇಲೆಯೂ ಪ್ರಶಂಸಿಸುತ್ತೇವೆ. ನಮ್ಮ ಈಗಿನ ಶತ್ರು ನಮಗೆ ಹಿಂದಿನ ಜನ್ಮದಲ್ಲಿ ಒಮ್ಮೆ ತಾಯಿಯಾಗಿರಬಹುದು, ತಂದೆಯಾಗಿರಬಹುದು, ಸೋದರಿ ಅಥವಾ ಸೋದರಿಯಾಗಿರಬಹುದು. ಆದ್ದರಿಂದ ನಾವು ಇದನ್ನು ಚಿಂತಿಸಬೇಕು.
ಈ ವ್ಯಕ್ತಿಯು ಹಿಂದೆ (ಹಿಂದಿನ ಜನ್ಮದಲ್ಲಿ) ತಾಯಿಯಾಗಿರುವಾಗ ನನ್ನನ್ನು ಹೆತ್ತಳು. ತನ್ನ ಗರ್ಭದಲ್ಲಿ ಕಾಪಾಡಿಕೊಂಡಿದ್ದಳು. ನಾನು ಮಗುವಾಗಿದ್ದಾಗ ಆಕೆ ಅಸಹ್ಯವಿಲ್ಲದೆ ನನಗೆ ಶುಚಿಗೊಳಿಸಿದ್ದಾಳೆ. ಆಕೆ ನನ್ನೊಂದಿಗೆ ಆಟವಾಡಿದ್ದಾಳೆ. ಪಾಲನೆ ಮಾಡಿದ್ದಾಳೆ ಮತ್ತು ನನ್ನನ್ನು ತನ್ನ ಬಾಹುಗಳಲ್ಲಿ ಪ್ರೀತಿಯಿಂದ ಎತ್ತಿಕೊಂಡಿದ್ದಾಳೆ.
ಹಾಗೆ ನನ್ನನ್ನು ಆಳವಾದ ಪ್ರೀತಿಯಿಂದ (ವಾತ್ಸಲ್ಯ) ಸಲಹಿದ್ದಾಳೆ.  ಈ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ನನಗೆ ತಂದೆಯಾಗಿರುವಾಗ, ಆತನು ನನಗಾಗಿ ಅತ್ಯಂತ ಶ್ರಮಪಟ್ಟು ಪ್ರಾಣವನ್ನು ಒತ್ತೆಯಿಟ್ಟು ಐಶ್ವರ್ಯ ದುಡಿದು ಸಲಹಿದ್ದಾನೆ. ನನಗೆ ಕ್ಷೇಮವನ್ನು ಕೊಟ್ಟಿದ್ದಾನೆ.
ನನಗೆ ಹಿಂದಿನ ಜನ್ಮಗಳಲ್ಲಿ ಇವರು ಸೋದರ, ಸೋದರಿ, ಮಗ ಅಥವಾ ಮಗಳು ಆಗಿದ್ದಾಗ ನನಗೆ ಮೈತ್ರಿಯಿಂದ ಕಂಡು, ಕಾಪಾಡಿ ಪ್ರತಿಕ್ಷಣದಲ್ಲೂ ನನ್ನ ಹಿತಕ್ಕಾಗಿ ಸಹಾಯಿಸಿದ್ದಾರೆ. ಆದ್ದರಿಂದ ನಾನು ಅವರ ಮೇಲೆ ಕೋಪಗೊಳ್ಳುವುದು ಅನ್ಯಾಯವಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಅವರು ಕ್ಷುಲ್ಲುಕವಾಗಿ ವತರ್ಿಸಿದ್ದಾರೆಂದು ಅವರು ಹಿಂದೆ ಮಾಡಿದ ಮೈತ್ರಿಯು ಮರೆಯಲಾರೆವು ಎಂದು ಚಿಂತಿಸಬೇಕಾಗುತ್ತದೆ.
ಕೋಪವು ಉತ್ಪತ್ತಿಯಾದಾಗ ನಾವು ಪ್ರತಿಯಾಗಿ ಅನಿತ್ಯತೆಯನ್ನು ಧ್ಯಾನಿಸಬೇಕಾಗುತ್ತದೆ ಹೀಗೆ :
ಆ ವ್ಯಕ್ತಿಯು ಈಗ ಪೂರ್ಣವಾಗಿ ಬದಲಿಸಿದ್ದಾನೆ, ದೇಹದಲ್ಲಿಯೂ ಹಾಗು ಮಾನಸಿಕವಾಗಿಯೂ. ನಾನು ಅಲ್ಲಿ ಯಾವುದರ ಮೇಲೆ ಕೋಪಗೊಳ್ಳಲಿ? ನಾನು ಉಗುರಿನ ಮೇಲೆ, ಕೂದಲಿನ ಮೇಲೆ, ಹಲ್ಲು ಅಥವಾ ಚರ್ಮದ ಮೇಲೆ ಕೋಪಗೊಳ್ಳಲೆ?
ಈ ವಿಧದಿಂದ ನಮಗೆ ಬೇರೊಬ್ಬನ ಮೆಲೆ ಕೋಪಿಸಿಕೊಳ್ಳಬಾರದು ಎಂದು ಅರಿವಾಗುತ್ತದೆ. ಆದರೆ ನಮ್ಮ ಯೋಚನೆಗಳು ಹಾಗು ವೇದನೆಗಳನ್ನು ಬದಲಿಸಬೇಕಾಗುತ್ತದೆ.  ಆದ್ದರಿಂದ ಮೈತ್ರಿಯನ್ನು ಮೊದಲು ನಮ್ಮ ಮೇಲೆ ಪ್ರಾರಂಭಿಸಿರಬೆಕು. ನೀವು ಹೀಗೆ ಧ್ಯಾನಿಸಿ :
ನಾನು ದುಃಖದಿಂದ ವಿಮುಕ್ತನಾಗಲಿ ಮತ್ತು ಸದಾ ಸುಖಿಯಾಗಿರಲಿ.
ನನ್ನ ಸುಖ ಕ್ಷೇಮ ಬಯಸುವ ಎಲ್ಲರೂ ಸಹಾ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ತಟಸ್ಥ (ಮಿತ್ರರೂ ಅಲ್ಲದೆ, ಶತ್ರುವು ಅಲ್ಲದೆ)ರಾಗಿರುವ ಎಲ್ಲರೂ ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ಯಾರು ದ್ವೇಷಿಸುವರೋ (ಶತ್ರು) ಅವರು ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ಈ ನಗರದಲ್ಲಿ ವಾಸಿಸುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ದೂರದಲ್ಲಿ (ಸುತ್ತಲಿನ ಸರ್ವರು) ವಾಸಿಸುತ್ತಿರುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಎಲ್ಲಾ ಜೀವಿಗಳು ಎಲ್ಲೇ ಇರಲಿ, ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ
ಇಡೀ ಬ್ರಹ್ಮಾಂಡ (ಪೂರ್ಣ ವಿಶ್ವ)ದಲ್ಲಿರುವ ಸಕಲ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ.
ಯಾವ ಯಾವ ಜೀವಿಗಳು ದುರ್ಬಲವಾಗಿವೆಯೋ, ಅಥವಾ ಬಲಿಷ್ಠವಾಗಿವೆಯೋ, ಸೂಕ್ಷ್ಮವಾಗಿವೆಯೋ ಅಥವಾ ಸ್ಥೂಲವಾಗಿವೆಯೋ, ಉದ್ಧವಾಗಿವೆಯೊ, ಅಗಲವಾಗಿವೆಯೋ, ಅಥವಾ ಮಧ್ಯಮ ಪ್ರಮಾಣದ್ದೂ. ಯಾವುವು ಕಣ್ಣಿಗೆ ಗೋಚರಿಸುವಂತಹುದೂ ಅಥವಾ ಅಗೋಚರವೋ, ಯಾವುವು ಹತ್ತಿರ ವಾಸಿಸುತ್ತಿವೆಯೋ ಅಥವಾ ದೂರ ವಾಸಿಸುತ್ತಿವೆಯೋ ಯಾವುವು ಜನ್ಮಿಸಿವೆಯೋ, ಅಥವಾ ಯಾವುದು ಜನ್ಮಿಸುವುವೋ ಅವೆಲ್ಲಾ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ. ಸುಖಕರ ಮನವನ್ನು ಹೊಂದುವಂತಾಗಲಿ.
ಯಾರೂ ಸಹ ಪರರಿಗೆ ವಂಚಿಸದಿರಲಿ, ಯಾರು ಯಾರಿಗೂ ಸಹಾ ಕೀಳಾಗಿ ಕಾಣದಿರಲಿ, ಕೋಪದಿಂದಾಗಲಿ ಅಥವಾ ದ್ರೋಹದಿಂದಾಗಲಿ, ಯಾರಿಗೂ ಸಹಾ ಹಿಂಸಾಯುತ (ಅಹಿತ)ವಾಗಿ ಯೋಚಿಸದಿರಲಿ.
ತಾಯಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಗುವನ್ನು ಹೇಗೆ ರಕ್ಷಿಸುವಳೊ, ಅದೇ ರೀತಿಯಾದ ಅಸೀಮ ಹೃದಯವನ್ನು ಸರ್ವಜೀವಿಗಳ ಮೇಲೆ ಬೆಳೆಸುವಂತಾಗಲಿ.
ಮೈತ್ರಿಯಿಂದ ಇಡೀ ಜಗತ್ತನ್ನೇ ಯಾವತಡೆ (ಅಪ್ರಿಯ)ವಿಲ್ಲದೆ ಮೇಲೆ, ಕೆಳಗೆ, ಸುತ್ತಲು (ಸೂರ್ಯನಂತೆ) ಪ್ರಸರಿಸಲಿ.
ಶ್ರೀಲಂಕ (ಸಿಂಹಳ)ದ ಸಂಪ್ರದಾಯದ ಮಂತ್ರವಂತೂ ಮೈತ್ರಿ ಸಾಧನೆಗೆ ಉತ್ತಮವಾದ ತಳಹದಿಯಾಗಿದೆ :
ಅಹಂ ಅವೇರೂ ಹೊಮಿ
ನಾನು ದ್ವೇಷದಿಂದ ಮುಕ್ತನಾಗಲಿ
ಅಬ್ಯಾಪಾಚ್ಚೊ ಹೊಮಿ
ನಾನು ಹಿಂಸೆ ಭಾವನೆಯಿಂದ ಮುಕ್ತನಾಗಲಿ
ಅನಿಘೋ ಹೊಮಿ
ನಾನು ಶಾರೀರಿಕ ಮತ್ತು ಮಾನಸಿಕ ಕ್ಲೇಷಗಳಿಂದ ಮುಕ್ತನಾಗಲಿ.
ಸುಖಿ ಅತ್ತನಂ ಪರಿಹರಾಮಿ
ನಾನು ನನ್ನ ಸುಖವನ್ನು ರಕ್ಷಿಸಿಕೊಳ್ಳಲಿ
ಸಬ್ಬೆ ಸತ್ತಾ ಅವೇರಾ ಹೊನ್ತು
ಸಬ್ಬೆ ಸತ್ತಾ ಅಬ್ಯಾಪಾಜೋ ಹೊನ್ತು
ಸಬ್ಬೆ ಸತ್ತಾ ಅನಿಪ್ಪೋ ಹೊನ್ತು
ಸಬ್ಬೆ ಸತ್ತಾ ಅತ್ತನಂ ಪರಿಹರಂತು
ಎಲ್ಲಾ ಜೀವಿಗಳೂ ದ್ವೇಷರಹಿತರಾಗಲಿ
ಎಲ್ಲಾ ಜೀವಿಗಳು ಹಿಂಸಾರಹಿತವಾಗಲಿ
ಎಲ್ಲಾ ಜೀವಿಗಳೂ ದುಃಖರಹಿತರಾಗಲಿ
ಎಲ್ಲಾ ಜೀವಿಗಳೂ ತಮ್ಮ ತಾವು (ಸುಖವನ್ನು) ರಕ್ಷಿಸಿಕೊಳ್ಳುವಂತಾಗಲಿ.
ಈ ಚಿಂತನೆಗಳು ಮತ್ತು ಧ್ಯಾನಗಳು ಬೌದ್ಧರ ಸಂಪ್ರದಾಯದಲ್ಲಿರು ವಂತಹುದು.
ನಾವು ಹೀಗೆ ಹೇಳಬಹುದು, ಏನೆಂದರೆ ಬೌದ್ಧರ ಶೀಲಕ್ಕೆ ಮೈತ್ರಿಯೇ ತಳಹದಿ. ಒಂದು ರೀತಿಯಲ್ಲಿ ಎಲ್ಲಾ ಮತಧರ್ಮಗಳು ಸಹಾ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹಾಗು ಸುಖದ ಯೋಚನೆಗಳನ್ನು ಪ್ರಸರಿಸುತ್ತದೆ. ಆದ್ದರಿಂದ ಇದು ಕೇವಲ ಬೌದ್ಧರಿಗೆ ಸೀಮಿತವಾಗಿಲ್ಲ. (ಆದರೆ ಬೌದ್ಧರಲ್ಲೆ ಅದು ಪೂರ್ಣ ಪರಿಶುದ್ಧ, ಪರಿಪೂರ್ಣ ರೂಪದಲ್ಲಿದೆ)
ಆದರೆ ಬುದ್ಧರ ಹಾದಿಯನ್ನು ಹಿಂಬಾಲಿಸುವವರು ದುಃಖವನ್ನು ಅಂತ್ಯಗೊಳಿಸುತ್ತಾರೆ. ಮೈತ್ರಿ ಧ್ಯಾನವು ತಳಹದಿಯಷ್ಟೇ ಅಲ್ಲದೆ, ಎಚ್ಚರಗೊಳಿಸಿ ದುಃಖದಿಂದ ಮುಕ್ತರಾಗಲು ಸಹಾಯಿಸುತ್ತದೆ.
ನಾವು ನಿಮಗೆ ಈ ಕೆಳಕಂಡ ಪವಿತ್ರ ವಾಕ್ಯಗಳನ್ನು ನಿಮ್ಮ ದಿನಚರಿಯಿಂದ ಪ್ರಾರಂಭಿಸಿ ಇದನ್ನು ಧ್ಯಾನಿಸಿ ಎನ್ನುವೆವು.
ಕರುಣಯುತ ಪ್ರೀತಿಯು ಹಂಚಿಕೊಳ್ಳುವಿಕೆ
ನಾನು ಸುಖಿಯಾಗಿರಲಿ, ಕ್ಷೇಮವಾಗಿರಲಿ, ಶಾಂತವಾಗಿರಲಿ, ಹಾಗು ಉನ್ನತನಾಗಲಿ.
ನನಗೆ ಯಾವ ಹಾನಿಯು ಸಂಭವಿಸದಿರಲಿ.
ನನಗೆ ಯಾವ ಕಷ್ಟಗಳು ಬಾರದಿರಲಿ
ನನಗೆ ಯಾವ ತೊಂದರೆಗಳೂ ಬರದಿರಲಿ
ಮತ್ತು ನಾನು ಯಶಸ್ಸನ್ನು ತಲುಪಲಿ
ನಾನು ಸಹನೆಯುಳ್ಳವನಾಗಲಿ,
ಧೈರ್ಯವಂತನಾಗಲಿ, ಜ್ಞಾನಿ ಯಾಗು ದೃಢನಾಗಲಿ ಮತ್ತು ಎಲ್ಲಾ ಕಷ್ಟಗಳನ್ನು ತೊಂದರೆಗಳನ್ನು ಹಾಗು ಸೋಲುಗಳನ್ನು ದಾಟಿಹೋಗಲಿ.
ನನ್ನ ಪೋಷಕರು ಸುಖಿಯಾಗಿರಲಿ, ಕ್ಷೇಮವಾಗಿರಲಿ,
ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಆಗದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಗುರುಗಳು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಕುಟುಂಬವು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಮಿತ್ರರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಯಾರು ನನಗೆ ಮಿತ್ರರಲ್ಲವೋ ಅವರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನಿಮ್ಮ ಧ್ಯಾನವನ್ನು ಮುಂದುವರಿಸಲು (ಅಭಿವೃದ್ಧಿಗೊಳಿಸಲು) ನೀವು ಈ ಮೇಲಿನ ಯೋಚನೆಯಲ್ಲಿ (ಭಾವನೆಯಲ್ಲಿ) ಮೈತ್ರಿಯಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಹಾಗು ಪ್ರತಿಯೊಂದು ಜೀವಿಗೂ ಪ್ರತಿಯೊಂದು ದಿಕ್ಕಿಗೂ ಹರಡಬೇಕು.
ನಾವು ಎಲ್ಲಾ ಜನರು ಈ ಮೈತ್ರಿಯ ಧ್ಯಾನ, ಆದರಣೆಯಿಂದ ಲಾಭ ಪಡೆಯಲೆಂದು ಆಶಿಸುತ್ತೇವೆ ಮತ್ತು ಈ ಬೌದ್ಧರ ಹಾರೈಕೆಯ ಗಾಥೆಯಿಂದ ಮುಕ್ತಾಯ ಮಾಡುತ್ತೇವೆ.
ದುಃಖವು ಇದ್ದರೂ ದುಃಖಿತನು ಇಲ್ಲದಿರಲಿ,
ಭಯವಿದ್ದರೂ, ಭೀತಿಗೊಳ್ಳುವವನು ಇಲ್ಲದಿರಲಿ,
ಶೋಕವು ಇದ್ದರೂ, ಶೋಕಪಡುವವನು ಇಲ್ಲದಿರಲಿ,
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ ಹಾಗು ಸುಖಿಯಾಗಿರಲಿ.

ಮೈತ್ರಿಯ 11 ಲಾಭಗಳು

ಮೈತ್ರಿಯ 11 ಲಾಭಗಳು

ಮೈತ್ರಿಯ ಲಾಭಗಳು
1. ಸುಖವಾಗಿ ನಿದ್ರಿಸುತ್ತಾನೆ (ಮಲಗಿದ ಒಂದೆರಡು ನಿಮಿಷದಲ್ಲೇ ನಿದ್ರೆ)
2. ಸುಖವಾಗಿ ಏಳುತ್ತಾನೆ (ಎದ್ದ ನಂತರ ಪ್ರಶಾಂತವಾಗಿ ಅಥವಾ ಆನಂದದಿಂದ ಇರುತ್ತಾನೆ)
3. ಕೆಟ್ಟ ಕನಸುಗಳನ್ನು ಕಾಣುವುದಿಲ್ಲ (ಸುಂದರವಾದ ಅತೀಂದ್ರಿಯ ಕನಸುಗಳು ಬೀಳಬಹುದು)
4. ಮನುಷ್ಯರಿಗೆ ಪ್ರಿಯನಾಗುತ್ತಾನೆ (ಜನಪ್ರಿಯ)
5. ಅಮನುಷ್ಯರಿಗೂ ಪ್ರಿಯವಾಗುತ್ತಾನೆ (ಪ್ರಾಣಿಗಳಿಗೆ ಮತ್ತು ಮುಂತಾದ ಜೀವಿಗಳಿಗೂ ಪ್ರಿಯನಾಗುತ್ತಾನೆ).
6. ದೇವ, ದೇವತೆಗಳಿಗೆ ಪ್ರಿಯನಾಗಿ ಅವರಿಂದ ರಕ್ಷಣೆ.
7. ಅಗ್ನಿ ವಿಷ ಮತ್ತು ಆಯುಧಗಳಿಂದ ಅಪಾಯವಿಲ್ಲ.
8. ಮನಸ್ಸು ಅತಿಬೇಗ ಏಕಾಗ್ರವಾಗುತ್ತದೆ.
9. ನಿಮ್ಮ ಮುಖಭಾವವು ಸುಂದರವಾಗುತ್ತದೆ ಮತ್ತು ಶಾಂತಿ ತೇಜಸ್ಸುಗಳಿಂದ ಕೂಡುತ್ತದೆ.
10. ಸಾಯುವಾಗ ಅಶಾಂತಿಯಿಂದ ಸಾಯುವುದಿಲ್ಲ.
11. ನಿಬ್ಬಾಣ ಪ್ರಾಪ್ತಿಗೆ ಸಹಾಯ. (ನಿಬ್ಬಾಣ ಪ್ರಾಪ್ತಿ ಇಲ್ಲವಾದರೆ ಬ್ರಹ್ಮ ಲೋಕ ಪ್ರಾಪ್ತಿ).

Sunday 18 March 2018

ನಿಬ್ಬಾಣ nibbana in kannada

 ನಿಬ್ಬಾಣ

ನಿಬ್ಬಾಣಂ ಪರಮ ಸುಖಂ
ನಿಬ್ಬಾಣವು ಸರ್ವರ ಅಂತಿಮ ಗುರಿಯಾಗಿದೆ. ಬುದ್ಧರ ಸರ್ವ ಬೋಧನೆಯು ಪೂರ್ಣವಾಗಿ ತರ್ಕಭರಿತವಾಗಿದ್ದರೂ ನಿಬ್ಬಾಣವು ಮಾತ್ರ ತಕರ್ಾತೀತವಾಗಿದೆ. ಇದು ಲೋಕೋತ್ತರ ಧಮ್ಮವಾಗಿದ್ದು, ಗೋತ್ರಭು ಜ್ಞಾನವು ಮಾತ್ರ ನಿಬ್ಬಾಣವನ್ನು ಅರಿಯುತ್ತದೆ. ನಿಬ್ಬಾಣವು ಅನಿವರ್ಾಚ್ಯವಾಗಿದೆ. ಇದು ಮಾತಿನಿಂದ ಆಗಲಿ, ಪದಗಳಿಂದಾಗಲಿ, ವಾಕ್ಯಗಳಿಂದಾಗಲಿ, ಗ್ರಂಥಗಳಿಂದಾಗಲಿ ವಿವರಿಸಲಾಗದು. ಅದು ದೇಹಕ್ಕೆ ಅತೀತ, ಮನಸ್ಸಿಗೂ ಅತೀತ, ಇಂದ್ರೀಯಗಳಿಗೂ ಅತೀತ, ಸಮಾಧಿ ಸ್ಥಿತಿಗಳಿಗೂ ಅತೀತವಾದುದು. ಸರ್ವಲೋಕಗಳಿಗೂ ಅತೀತವಾದುದು. ಅದು ಸ್ವತಃ ಅನುಭವಿಸುವಂತಹುದು ಸ್ವತಃ ಅರಿಯುವಂತಹುದು, ಪದಗಳಿಂದ ವಿವರಿಸಿದಷ್ಟು ಅದನ್ನು ತಪ್ಪಾಗಿ ಅಥರ್ೈಸಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ನಿಬ್ಬಾಣವನ್ನು ಲೋಕೋತ್ತರ ಮಾರ್ಗದಲ್ಲಿರುವವರು ಮಾತ್ರ ಸಾಕ್ಷಾತ್ಕರಿಸಬಹುದು.
ನಿಬ್ಬಾಣವನ್ನು ಶೂನ್ಯತಾ ಎನ್ನುತ್ತಾರೆ. ಏಕೆಂದರೆ ಇದು ಲೋಭ, ದ್ವೇಷ ಮತ್ತು ಮೋಹಗಳಿಂದ ಶೂನ್ಯವಾಗಿರುತ್ತದೆ. ಅಷ್ಟೇ ಅಲ್ಲ, ಸ್ಥಿತಿಗಳಿಗೆ ಅತೀತವಾಗಿರುತ್ತದೆ. ಅಂದರೆ ಎಲ್ಲಾ ಸ್ಥಿತಿಗಳಿಗೆ 3 ಅವಸ್ಥೆಗಳಿರುತ್ತದೆ. ಉದಯಿಸುವಿಕೆ, ಅಳಿಯುವಿಕೆ ಮತ್ತು ಬದಲಾಗುವಿಕೆ. ಆದರೆ ನಿಬ್ಬಾಣದಲ್ಲಿ ಈ 3 ಅವಸ್ಥೆಗಳಿರುವುದಿಲ್ಲ. ಆದ್ದರಿಂದ ಇದು ಸ್ಥಿತಿಗೆ ಅತೀತ ಶೂನ್ಯವಾಗಿದೆ. ನಿಬ್ಬಾಣವನ್ನು ನಿಮಿತ್ತರಹಿತ (ಅನಿಮಿತ್ತ) ಎನ್ನುತ್ತಾರೆ. ಏಕೆಂದರೆ ಲೋಭ ನಿಮಿತ್ತವಾಗಲಿ, ದ್ವೇಷ ನಿಮಿತ್ತವಾಗಲಿ, ಮೋಹ ನಿಮಿತ್ತವಾಗಲಿ ಯಾವುದೇ ನಿಮಿತ್ತಗಳು ಅಲ್ಲಿರುವುದಿಲ್ಲ. ನಿಬ್ಬಾಣವನ್ನು ಅಪ್ಪನಿಹಿತೊ ಅಂದರೆ ಆಸೆರಹಿತ ಎನ್ನುತ್ತಾರೆ. ಇದು ಎಲ್ಲಾರೀತಿಯ ಬಯಕೆಗಳಿಂದ ತನ್ಹಾಗಳಿಂದ, ಯೋಚನೆಗಳಿಂದ, ಗ್ರಹಿಕೆಗಳಿಂದ, ವೇದನೆಗಳಿಂದ ಮುಕ್ತವಾಗಿದೆ.
ನಿಬ್ಬಾಣವು ವೀಕ್ಷಿಸುವಂತಹುದ್ದಾಗಿದೆ, ನಿಬ್ಬಾಣವು ಅಮರವಾದುದು, ಆನಂತವಾದುದು, ಸ್ಥಿತಿಗೆ ಅತೀತವಾದುದು ಮತ್ತು ಅನುಪಮೇಯವು ಅನುತ್ತರವು ಆಗಿದೆ.
ಒಟ್ಟಾರೆ ಅದನ್ನು ಹೀಗೆ ವಿವರಿಸಬಹುದು.
ನಿಬ್ಬಾಣದ ನಕಾರಾತ್ಮಕ ವರ್ಣನೆ (ನಿಬ್ಬಾಣದಲ್ಲಿ ಏನಿಲ್ಲ?)
* ನಿಬ್ಬಾಣವು ಪೂರ್ಣವಾಗಿ ದುಃಖರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಹಂರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಲೋಭರಹಿತವಾದುದು
ನಿಬ್ಬಾಣವು ಪೂರ್ಣವಾಗಿ ದ್ವೇಷರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಮೋಹರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಕಶ್ಮಲರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಜನ್ಮರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ತನ್ಹಾರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಸ್ತಿತ್ವರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅರಚಿತವಾದುದು
* ನಿಬ್ಬಾಣವು ಅಭೂತವಾದುದು (ಅನುಪತ್ತಿ)
* ನಿಬ್ಬಾಣವು ಅಜಾತವಾದುದು (ಹುಟ್ಟಿಲ್ಲದ)
* ನಿಬ್ಬಾಣವು ಅಕತವಾದುದು (ಸ್ಥಿತಾತೀತವಾದುದು) (ಅವಸ್ಥೆಗೆ ಅತೀತ/ಗತಿಗೆ ಅತೀತ) (ಅನವಲಂಬಿತ/ಅಕಾರಣಿಯ)
* ನಿಬ್ಬಾಣವು ಜನ್ಮರಹಿತವಾದುದು
* ನಿಬ್ಬಾಣವು ಜರಾರಹಿತವಾದುದು
* ನಿಬ್ಬಾಣವು ಜರೆರಹಿತವಾದುದು
* ನಿಬ್ಬಾಣವು ಮರಣರಹಿತವಾದುದು
* ನಿಬ್ಬಾಣವು ಭಯರಹಿತವಾದುದು
* ನಿಬ್ಬಾಣವು ಉಪಾದಿರಹಿತವಾದುದು (ಬಂಧಗಳಿಲ್ಲದುದು).
* ನಿಬ್ಬಾಣದಲ್ಲಿ ಆತ್ಮವಿಲ್ಲ, ಜೀವಾತ್ಮವಿಲ್ಲ, ಪರಮಾತ್ಮವೂ ಇಲ್ಲ (ಏಕೆಂದರೆ ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ದೇವರಿಲ್ಲ ಮತ್ತು ಇದು ದೇವರ ಜೊತೆ ಸಂಗಮವೂ ಅಲ್ಲ (ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ಬ್ರಹ್ಮನಾಗಲಿ ಅಥವಾ ಪರಬ್ರಹ್ಮನಾಗಲಿ ಇಲ್ಲ (ಇವೆಲ್ಲದಕ್ಕಿಂತ ಅತೀತ ಸ್ಥಿತಿ).
* ನಿಬ್ಬಾಣವೆಂದರೆ ಮೃತ್ಯುವೂ ಅಲ್ಲ, ಶಾಶ್ವತವಾಗಿ ಇರುವುದೂ ಅಲ್ಲ.
* ನಿಬ್ಬಾಣವೆಂದರೆ ಸ್ವರ್ಗವಲ್ಲ, ಬ್ರಹ್ಮನೊಂದಿಗೆ ಐಕ್ಯವೂ ಅಲ್ಲ.
ನಿಬ್ಬಾಣದ ಸಕಾರಾತ್ಮಕ ವರ್ಣನೆ :
* ನಿಬ್ಬಾಣವು ಪರಮಸುಖಕರವಾದುದು
* ನಿಬ್ಬಾಣವು ಧ್ರುವವಾದುದು
* ನಿಬ್ಬಾಣವು ಶುಭವಾದುದು
* ನಿಬ್ಬಾಣವು ಕ್ಷೇಮಕರವಾದುದು
* ನಿಬ್ಬಾಣವು ಕೇವಲ (ಅದ್ವಿತೀಯವಾದುದು)
* ನಿಬ್ಬಾಣವು ಅಮರವಾದುದು
* ನಿಬ್ಬಾಣವು ಅನಂತವಾದುದು
* ನಿಬ್ಬಾಣವು ಅನುಪಮೇಯವಾದುದು
* ನಿಬ್ಬಾಣವು ಅನುತ್ತರವಾದುದು
* ನಿಬ್ಬಾಣವು ಪಾರವು (ಆಚೆಯದು)
* ನಿಬ್ಬಾಣವು ಪರ (ಪರಮಶ್ರೇಷ್ಟವಾದುದು)
* ನಿಬ್ಬಾಣವು ಪರಾಯಣವಾದುದು (ಶರಣು ಹೊಂದುವಂತಹದು)
* ನಿಬ್ಬಾಣವು ತಾಣ (ರಕ್ಷಿತವಾದುದು)
* ನಿಬ್ಬಾಣವು ಸಿವ (ಸುಖಕರವಾದುದು)
* ನಿಬ್ಬಾಣವು ಅನಾಲಯ (ಆಲಯವಿಲ್ಲದುದು/ನಿವಾಸವಿಲ್ಲದುದು)
* ನಿಬ್ಬಾಣವು ಅಕ್ಷರವಾದುದು (ನಾಶರಹಿತ)
* ನಿಬ್ಬಾಣವು ವಿಶುದ್ಧವಾದುದು (ಪರಿಪೂರ್ಣ ಪರಿಶುದ್ಧವಾದುದು)
* ನಿಬ್ಬಾಣವು ಲೋಕೋತ್ತರವಾದುದು (ಲೋಕಗಳಿಗೆ ಅತೀತವಾದುದು)
* ನಿಬ್ಬಾಣವು ಮುಕ್ತಿ
* ನಿಬ್ಬಾಣವು ವಿಮುಕ್ತಿ
* ನಿಬ್ಬಾಣವು ಶಾಂತಿ
* ನಿಬ್ಬಾಣವು ಪರಮಶಾಂತಿ
ಬುದ್ಧರಿಂದ ನಿಬ್ಬಾಣದ ವರ್ಣನೆ
ಓ ಭಿಕ್ಷುಗಳೇ, ಹುಟ್ಟಿಲ್ಲದ (ಅಜಾತ), ಉದಯರಹಿತವಾದ (ಅಭೂತ), ಅನಿಮರ್ಿತ (ಅಕತ) ಮತ್ತು ಸ್ಥಿತಿಯಿಲ್ಲದ/ಅಕಾರಣಿಯ/ಅನವಲಂಬಿತ (ಅಸಂಖತ)ವಾದ ಸ್ಥಿತಿಯೊಂದಿದೆ. ಓ ಭಿಕ್ಷುಗಳೇ ಒಂದುವೇಳೆ ಅಜಾತವಾದ, ಅಭೂತವಾದ, ಅಕತವಾದ, ಅಸಂಖತವಾದ ಈ ಸ್ಥಿತಿಯು ಇಲ್ಲದಿದ್ದರೆ ಹುಟ್ಟಿನಿಂದ, ಉದಯಿಸುವಿಕೆಯಿಂದ, ನಿಮರ್ಿತವಾದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿರುತ್ತಿರಲಿಲ್ಲ. ಹುಟ್ಟಿಲ್ಲದ, ಉದಯರಹಿತವಾದ ಅನಿಮರ್ಿತ, ಅನವಲಂಬಿತ ಸ್ಥಿತಿಯಿಲ್ಲದ ಸ್ಥಿತಿ ಇರುವುದರಿಂದಲೇ ಹುಟ್ಟಿನಿಂದ, ಉದಯಿಸುವಿಕೆಯಿಂದ ನಿಮರ್ಿತಗಳಿಂದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿದೆ.
ಎಲ್ಲಿ ಭೌತಿಕವು ಇಲ್ಲವೋ, ಮಾನಸಿಕತೆಯು ಇಲ್ಲವೋ, ಅದು ಈ ಲೋಕವು ಅಲ್ಲ, ಪರಲೋಕವೂ ಅಲ್ಲವೋ, ಇವೆರಡೂ ಅಲ್ಲವೋ, ಸೂರ್ಯನಾಗಲಿ, ಚಂದ್ರನಾಗಲಿ ಅಲ್ಲವೋ, ಎಲ್ಲಿ ಉದಯಿಸುವಿಕೆ ಇಲ್ಲವೋ, ಮುಂದುವರೆಯುವಿಕೆಯು ಇಲ್ಲವೋ, ನಿರಂತರತೆ ಇಲ್ಲವೋ, ಎಲ್ಲಿ ಸಾವಿಲ್ಲವೋ ಅಥವಾ ಪುನರ್ಜನ್ಮವಿಲ್ಲವೋ, ಯಾವುದಕ್ಕೂ ಆಧಾರವಾಗಿಲ್ಲವೋ, ಯಾವುದೋ ಬೆಳವಣಿಗೆಯಿಲ್ಲವೋ, ಯಾವುದೇ ಬೆಂಬಲವಿಲ್ಲವೋ ಇದೇ ದುಃಖದ ಅಂತ್ಯವಾಗಿದೆ, ನಿಬ್ಬಾಣವಾಗಿದೆ.
ಎಲ್ಲಿ ಯಾವುದು ಇಲ್ಲವೊ, ಎಲ್ಲಿ ಏನನ್ನು ಹಿಡಿಯಲಾರರೋ....
ವಿಮುಕ್ತ ಚಿತ್ತವು ಯಾವುದಕ್ಕೂ ಅಂಟಲಾರದು ಅಂದರೆ ನಿಬ್ಬಾಣ.
ಎಲ್ಲಿ ಪೃಥ್ವಿಯಿಲ್ಲವೋ, ಜಲವಿಲ್ಲವೋ, ಅಗ್ನಿಯಿಲ್ಲವೋ, ಗಾಳಿಯಿಲ್ಲವೋ ಅನಂತ ಆಕಾಶವಿಲ್ಲವೋ, ಅರಿವಿನ ಅನಂತತೆಯಿಲ್ಲವೋ, ಏನೂ ಇಲ್ಲವೆಂಬ ಸಮಾಧಿ ಸ್ಥಿತಿ ಅಲ್ಲವೋ, ಗ್ರಹಿಕೆಯಿಲ್ಲ, ಗ್ರಹಿಕೆಯಿಲ್ಲದೆಯೂ ಇಲ್ಲ ಅಲ್ಲವೋ, ಅದು ಈ ಲೋಕವಲ್ಲ, ಪರಲೋಕವೂ ಅಲ್ಲ. ಚಂದ್ರನೂ ಅಲ್ಲ, ಸೂರ್ಯನೂ ಅಲ್ಲ, ಅಲ್ಲಿ ಬರುವಿಕೆ ಆಗಲಿ, ಹೋಗುವಿಕೆಯಾಗಲಿ ಇಲ್ಲ. ಅಥವಾ ನಿಲ್ಲುವಿಕೆಯೂ ಅಲ್ಲ, ಅದಕ್ಕೆ ಯಾವುದೇ ಆಧಾರವಿಲ್ಲ, ಯಾವುದೇ ಬೆಂಬಲವಿಲ್ಲ. ಇದೇ ದುಃಖದ ಅಂತ್ಯವಾಗಿದೆ (ನಿಬ್ಬಾಣ).
ಹೇಗೆ ಜ್ವಾಲೆಯು ಆರಿಹೋದಾಗ, ಜ್ವಾಲೆಯನ್ನು ವಿವರಿಸಲಾಗದೋ ಅದೇರೀತಿಯಲ್ಲಿ ಅರಹಂತರು ನಾಮರೂಪಗಳಿಂದ ಮುಕ್ತರಾದಾಗ ಅವರನ್ನು ವಿವರಿಸಲಾಗುವುದಿಲ್ಲ.
...ಅವರನ್ನು ಅಳತೆ ಮಾಡಲು ಆಗುವುದಿಲ್ಲ, ಯಾವಾಗ ಎಲ್ಲವೂ ಹೋಗುತ್ತದೋ, ಆಗ ಎಲ್ಲಾರೀತಿಯ ಗುತರ್ಿಸುವಿಕೆಗಳೂ ಹೋಗುತ್ತದೆ.
ಯಾವಾಗ ಹಳೆಯ ಸ್ಥಿತಿಗಳೆಲ್ಲವೋ ಆಳಿಸಲಾಗಿದೆಯೋ ಮತ್ತು ಹೊಸದು ಉದಯಿಸಲಾರವೋ ಅಂತಹ ಚಿತ್ತಕ್ಕೆ ಮುಂದಿನ ಜನ್ಮವಿರಲಾರದು. ಬೀಜವು ಸುಟ್ಟು ಹಾಕಲ್ಪಟ್ಟಿದೆ. ತನ್ಹಾವು ಉದಯಿಸಲಾರದು, ಅಂತಹ ಜ್ಞಾನಿಗಳು ದೀಪದಂತೆ ಆರಿ (ನಂದಿ) ಹೋಗುತ್ತಾರೆ.
ಕಾಯವು ಚೂರಾಗಿ, ಗ್ರಹಿಕೆಯು ಅಳಿಸಿಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಇಲ್ಲವಾಗಿ, ವಿನ್ಯಾನವು ತನ್ನ ಕೊನೆಯನ್ನು ಮುಟ್ಟುತ್ತದೆ.
ಸಾರಿಪುತ್ತರ ಹೇಳಿಕೆ
ಲೋಭದ ನಾಶ, ದ್ವೇಷದ ನಾಶ ಮತ್ತು ಮೋಹದ ನಾಶ, ಮಿತ್ರನೇ ಇದೇ ನಿಬ್ಬಾಣವಾಗಿದೆ.
ನಿಬ್ಬಾಣದ ವಿಧಗಳು :
ಕಿಲೇಶ ಪರಿನಿಬ್ಬಾಣ ಮತ್ತು ಖಂದ ಪರಿನಿಬ್ಬಾಣ ಎಂದು ಎರಡು ವಿದಗಳಿವೆ.
ಕಿಲೇಶ ಪರಿನಿಬ್ಬಾಣ : ಕಿಲೇಶ (ಕ್ಲೇಷ) ಪರಿನಿಬ್ಬಾಣದಲ್ಲಿ ಅರಹಂತರ ರಾಗ, ದ್ವೇಷ ಮತ್ತು ಮೋಹಗಳು ನಾಶವಾಗುತ್ತದೆ, ಇನ್ನಿಲ್ಲವಾಗುತ್ತದೆ. ಮತ್ತೆ ಹುಟ್ಟುವುದಿಲ್ಲ. ಆದರೆ ಪಂಚಖಂಧಗಳು (ದೇಹ ಮತ್ತು ಮನಸ್ಸು) ಇರುತ್ತದೆ. ಅಂದರೆ ಮರಣದವರೆಗೂ ಇರುತ್ತದೆ. ಇದಕ್ಕೆ ಇನ್ನೊಂದು ಹೆಸರಿದೆ (ಸ. ಉಪಾದಿಸೇಸ ನಿಬ್ಬಾಣ) ಉಪಾದಿಗಳು (ಪಂಚಖಂಧಗಳು) ಶೇಷವಿರುವ ನಿಬ್ಬಾಣ ಎನ್ನುತ್ತಾರೆ. ಅಥವಾ ಪರಿನಿಬ್ಬಾಣ ಎನ್ನುತ್ತಾರೆ.
ಖಂದ ಪರಿನಿಬ್ಬಾಣ : ಖಂದ ಪರಿನಿಬ್ಬಾಣದಲ್ಲಿ ಅರಹಂತರು ತಮ್ಮ ಅಂತಿಮಾವಸ್ಥೆಯಲ್ಲಿ ಪಂಚಖಂಧಗಳನ್ನು ಬಿಟ್ಟುಬಿಡುತ್ತಾರೆ. ಅವು ನಾಶವಾಗುತ್ತವೆ, ಇನ್ನಿಲ್ಲವಾಗುತ್ತದೆ, ಮತ್ತೆ ಹುಟ್ಟಲಾರದು. ಅವರಲ್ಲಿ ಈ ಮೊದಲೇ ಕ್ಲೇಶಗಳು (ರಾಗ, ದ್ವೇಷ ಮತ್ತು ಮೋಹಗಳು) ನಾಶವಾಗಿರುತ್ತದೆ. ಈಗ ಪಂಚಖಂಧಗಳು ಇನ್ನಿಲ್ಲವಾಗುತ್ತವೆ. ಮತ್ತೆ ಉದಯಿಸಲಾರದು. ಇದಕ್ಕೆ ಇನ್ನೊಂದು ಹೆಸರೇ (ಅನುಪಾದಿಸೇಸ ನಿಬ್ಬಾಣ ಅಥವಾ ಪರಿನಿಬ್ಬಾಣ ಎನ್ನುತ್ತಾರೆ).
ನಿಬ್ಬಾಣ ಸಂಬಂಧ ಪಟ್ಟ ಪ್ರಶ್ನೆಗಳು ಮತ್ತು ಉತ್ತರಗಳು :
1. ನಿಬ್ಬಾಣವೆಂದರೆ ಶಾಶ್ವತವಾಗಿ ಇರುವಿಕೆಯೇ?
ಖಂಡಿತವಾಗಿ ಅಲ್ಲ, ಏಕೆಂದರೆ ನಾನು ಎಂಬುದೇ ಇಲ್ಲದಿರುವಾಗ ಇದು ಅನ್ವಯಿಸುವುದಿಲ್ಲ.
2. ಹಾಗಾದರೆ ಮೃತ್ಯುವೇ ? ನಶಿಸುವಿಕೆಯೇ ?
ಖಂಡಿತವಾಗಿ ಅಲ್ಲ. ಮೃತ್ಯುವೆಂದರೆ ತಾತ್ಕಾಲಿಕ ಜೀವನದ ತಾತ್ಕಾಲಿಕ ಕೊನೆಯಾಗಿದೆ. ಇಲ್ಲಿ ಇದು ಅಮರತ್ವ ಆಗಿರುವಾಗ ಮೃತ್ಯುವಾಗಲಿ, ನಶಿಸುವಿಕೆಯಾಗಲಿ ಇಲ್ಲ.
3. ನಿಬ್ಬಾಣವು ಇಲ್ಲವಾಗುವಿಕೆಯೇ ? ಶೂನ್ಯವೇ ?
ಆಕಾಶ ಮತ್ತು ನಿಬ್ಬಾಣಗಳೆರಡು ಧ್ರುವವಾದುದು ಮತ್ತು ಬದಲಾಗದ್ದು, ಇದು ಶಾಶ್ವತವಾದದ್ದು. ಏಕೆಂದರೆ ಇವು ಏನನ್ನೂ ಒಳಗೊಂಡಿಲ್ಲ. ಇವು ಕಾಲಾತೀತವಾದದ್ದು. ಆಕಾಶ ಇಲ್ಲದ ಸ್ಥಿತಿಯಾದರೆ, ನಿಬ್ಬಾಣ ಇದೆ, ಇಲ್ಲದಿದ್ದರೆ ಇರುವ ಸ್ಥಿತಿಗಳಿಂದ ಮುಕ್ತಿಯಾಗುತ್ತಿರಲಿಲ್ಲ. ಆದರೆ ಇದೆ ಎಂದು ಪಂಚಖಂಧಗಳನ್ನು, ಸಮಾಧಿ ಸ್ಥಿತಿಗಳನ್ನು ನೆನಪಿಸಿಕೊಂಡರೆ ಅದು ಇಲ್ಲವೆನ್ನಬೇಕಾಗುತ್ತದೆ.
4. ನಿಬ್ಬಾಣವು ಪರಮಸುಖ ಹೇಗೆ ?
ನಿಬ್ಬಾಣವು ಪರಮಸುಖ. ಹೇಗೆಂದರೆ ದುಃಖವು ಇಲ್ಲದಿರುವುದರಿಂದಾಗಿ, ಹೊರತು ಇಂದ್ರೀಯ ಸುಖಗಳಿಲ್ಲ, ಸಮಾಧಿ ಸುಖಗಳು ಅಲ್ಲ. ಅಷ್ಟೇ ಅಲ್ಲ, ಇದು ಅನುಭವಿಸುವಂತಹುದು ಅಲ್ಲ. ಅಂದರೆ ವೇದನೆಯಲ್ಲ, ವೇದನೆಗೆ ಅತೀತ ಸ್ಥಿತಿಯಾಗಿದೆ. ಅನುಭವಿಸಲಾರದ ಸ್ಥಿತಿಯಾಗಿದ್ದರಿಂದಲೆ ಇದು ಪರಮ ಸುಖವಾಗಿದೆ. ಅಷ್ಟೇ ಅಲ್ಲ, ಯಾವುದೆಲ್ಲವನ್ನು ನಾವು ಅನುಭವಿಸುವೆವೋ ಆ ಎಲ್ಲಾ ಸುಖಗಳು ದುಃಖವೆಂದು ಆರ್ಯರಿಂದ ಪರಿಗಣಿಸಲ್ಪಡುತ್ತದೆ.
5. ನಿಬ್ಬಾಣಕ್ಕೆ ನಾವು ನಾನು ಎಂದು ಅಥವಾ ಆತ್ಮ ಅಥವಾ ದೇವರು ಎಂದು ಕರೆಯಬಹುದೇ ?
ಖಂಡಿತವಾಗಿಯೂ ತಪ್ಪು. ಏಕೆಂದರೆ ನಾನು ಅಥವಾ ದೇವರು ಅಥವಾ ಆತ್ಮಗ್ರಹಿಕೆ ಮಾಡುವವರು ಪಕ್ಷಪಾತಿಗಳಾಗಿರುತ್ತಾರೆ. ಅವರು ನಿಜವಾದ ಸತ್ಯವೀಕ್ಷಕ ರಾಗಿರುವುದಿಲ್ಲ. ಅಂದರೆ ಅವರಲ್ಲಿ ಲೋಭ ಮತ್ತು ಮೋಹವಿರುತ್ತದೆ. ಅಂತಹವರಿಗೆ ನಿಬ್ಬಾಣವೇ ದೊರಕುವುದಿಲ್ಲ. ಅಂತಹ ಎಲ್ಲಾ ದೃಷ್ಟಿಗಳು ಸಂಶಯ ದಾಟುವ ವಿಶುದ್ಧಿಯಲ್ಲೇ ತಡೆಯಲ್ಪಡುತ್ತವೆ ಮತ್ತು ಸತ್ಯ ವೀಕ್ಷಣೆಯ ಬಗ್ಗೆ ಮಜ್ಜಿಮ ನಿಕಾಯ 1ನೇ ಸುತ್ತದಲ್ಲೇ ಬಹು ಚೆನ್ನಾಗಿ ವಿವರಿಸಲಾಗಿದೆ.
6. ನಿಬ್ಬಾಣ ಎಲ್ಲಿದೆ ?
ನಿಬ್ಬಾಣವು ಎಲ್ಲಿಯೂ ಇಲ್ಲ, ಅದನ್ನು ಯಾರು ಎಲ್ಲೇ ಇರಲಿ, ಶೀಲ, ಸಮಾಧಿ, ಪ್ರಜ್ಞಾ ಸ್ಥಾಪಿಸಿದಾಗ ಅದನ್ನು ಸಾಕ್ಷಾತ್ಕರಿಸಬಹುದು. ಹೇಗೆ ಜ್ವಾಲೆಯು ಎಲ್ಲಿಯೂ ಇರುವುದಿಲ್ಲವೋ ಬೆಂಕಿಕಡ್ಡಿ ಗೀರಿದಾಗ ಹುಟ್ಟುವುದೋ ಹಾಗೇ ಕೆಲವು ಅಗತ್ಯ ಸ್ಥಿತಿಗಳು ಪೂರೈಕೆಯಾದಾಗ ನಿಬ್ಬಾಣ ದಶರ್ಿಸಬಹುದು.
7. ನಿಬ್ಬಾಣವನ್ನು ಪ್ರಾಪ್ತಿ ಮಾಡುವುದು ಯಾವುದು?
ಈ ಪ್ರಶ್ನೆಯು ಪಕ್ಕಕ್ಕೆ ಇಡುವಂತಹದ್ದಾಗಿದೆ. ಏಕೆಂದರೆ ನಾನು, ನನ್ನದು, ನನ್ನ ಆತ್ಮ ಈ ಎಲ್ಲಾ ಭಾವನೆಗಳ ಸಂಶಯ ನಿವಾರಣೆಯದಾಗಲೇ ನಿಬ್ಬಾಣ ಪ್ರಾಪ್ತಿಯಾಗುವುದು ಆ ಅರ್ಥದಲ್ಲಿ. ನಾನು ಎಂಬುದು ಇಲ್ಲ. ಆತ್ಮ ಎಂಬುದು ಇಲ್ಲ. ಇವೆಲ್ಲ ಈ ಹಿಂದಿನ ಹಂತಗಳಲ್ಲಿ ವಿವರಿಸಲಾಗಿದೆ. ವ್ಯಾವಹಾರಿಕವಾಗಿ ಹೇಳಬೇಕಾದರೆ ಅರಹಂತರು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಪಾರಮಾಥರ್ಿಕವಾಗಿ ಹೇಳಬೇಕಾದರೆ ನಿಬ್ಬಾಣವಿದೆ, ಆದರೆ ಮಾನವ ಅದರಲ್ಲಿ ಪ್ರವೇಶಿಸಲಾರ/ಹುಡುಕಲಾರ. ಮಾರ್ಗವಿದೆ, ಆದರೆ ಯಾವ ಪ್ರಯಾಣಿಕನಿಲ್ಲ ಎಂದು ಹೇಳಬೇಕಾಗುತ್ತದೆ.
8. ಪ್ರತಿಯೊಬ್ಬರ ಗುರಿ ನಿಬ್ಬಾಣವೇಕೆ ಆಗಬೇಕು?
ಇಲ್ಲಿ ಎಲ್ಲರಿಗೂ ನಿಬ್ಬಾಣ ಕಡ್ಡಾಯವಾಗಿ ಗುರಿ ಎಂದು ಹೇಳುತ್ತಿಲ್ಲ. ಅದು ವ್ಯಕ್ತಿಗತ ಸ್ವತಂತ್ರ್ಯವಾಗಿದೆ. ಯಾರು ಯಾವುದನ್ನು ಬೇಕಾದರೂ ಗುರಿ ಇಟ್ಟುಕೊಳ್ಳಬಹುದು. ಆದರೆ ಎಲ್ಲದರ ಪರಿಣಾಮ, ಫಲಿತಾಂಶ ಮೊದಲು ಸುಖ, ನಂತರ ದುಃಖ ಸಿಗುತ್ತಿರುತ್ತದೆ. ಅವರಿಗೆ ಅದೇ ಇಷ್ಟವಾದರೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಪ್ರಜ್ಞಾವಂತರ ಗುರಿ ಮಾತ್ರ ನಿಬ್ಬಾಣ ಆಗಿರುತ್ತದೆ. ಏಕೆಂದರೆ ಅವರು ಪುನಃ ದುಃಖ ಜಾಲಕ್ಕೆ ಸಿಲುಕಲು ಇಚ್ಛಿಸುವುದಿಲ್ಲ.
ನಿಬ್ಬಾಣದ ವಿಷಯದಲ್ಲಿ ಗೊಂದಲ ಮೂಡದಿರಲು ಒಂದು ಸಣ್ಣ ಕಥೆ
ಸದಾ ನೀರಿನಲ್ಲಿದ್ದ ಮೀನಿಗೆ ಒಮ್ಮೆ ದೂರದ ಪ್ರಾಂತ್ಯದ ಆಮೆಯು ಸಿಗುತ್ತದೆ. ಆ ಆಮೆಯು ತಾನು ನೆಲದಿಂದ ಬಂದೆ ಎಂದು ಹೇಳುತ್ತದೆ.
ಮೀನು : ಆ ನೆಲವು (ಭೂಮಿ) ಹೇಗಿರುತ್ತದೆ ?
ಆಮೆ : ಅದು ಒಣಗಿರುತ್ತದೆ.
ಮೀನು : ಅಂದರೆ ಅದರ ಅರ್ಥವೇನು ?
ಆಮೆ : ಅಲ್ಲಿ ತೇವಾಂಶವಿರುವುದಿಲ್ಲ
ಮೀನು : ಅಂದರೆ ಅಲ್ಲಿ ತಂಪಿರುತ್ತದೆಯೆ?
ಆಮೆ : ಹೌದು ಮತ್ತು ಅಲ್ಲ
ಮೀನು : ಏನು ನೀನು ಹೇಳುತ್ತಿರುವುದು ಅಸಂಬದ್ಧವಾಗಿದೆ. ಅಲ್ಲಿ ಅಲೆಗಳಿವೆಯೇ?
ಆಮೆ : ಇಲ್ಲ ಅಲ್ಲಿ ಈಜಾಡುವುದು ಸಾಧ್ಯವಿಲ್ಲ
ಮೀನು : ಈಜಾಡಲು ಸಾಧ್ಯವಿಲ್ಲವೇ? ಅಂತಹುದು ಯಾವುದೂ ಇಲ್ಲ. ಅಲ್ಲಿ ಮೀನುಗಳು ಇವೆಯೇ ?
ಆಮೆ : ಇಲ್ಲ, ಪ್ರಾಣಿಗಳು ಇವೆ ಮತ್ತು ಕಟ್ಟಡಗಳಿವೆ, ಮಾನವರಿದ್ದಾರೆ.
ಮೀನು : ಅವೆಂದರೆ ಏನು? ಹೋಗಲಿ ನೆಲದಲ್ಲಿ ತಂಪಿದೆಯೆ, ಮೃದುತನವಿದೆಯೇ ಹೇಳು.
ಆಮೆ : ಇಲ್ಲ, ಒರಟುತನವಿದೆ, ಕೆಲವೊಮ್ಮೆ ತಂಪು, ಕೆಲವೊಮ್ಮೆ ಬಿಸಿಲು ಇರುತ್ತದೆ.
ಮೀನು : ನಾನು ನಂಬುವುದೇ ಇಲ್ಲ. ನೀನು ದೊಡ್ಡ ಸುಳ್ಳುಗಾರ. ನೀನು ನನಗೆ ಮಾತನಾಡಿಸಬೇಡ.
ಆಗ ಆಮೆಯು ಇದರ ಬಳಿ ಚಚರ್ೆಯೆ ವ್ಯರ್ಥ ಎಂದು ತಿಳಿದು ನೆಲದೆಡೆ ಹೊರಟಿತು.
ಹೀಗೆ ನಿಬ್ಬಾಣವು ಅನುಭವ ವೇದ್ಯ ಹೊರತು ಚಚರ್ೆಯ ವಿಷಯವಲ್ಲ. ಸಾಕ್ಷಾತ್ಕರಿಸುವ ವಿಷಯವಾಗಿದೆ