ದೇವತಾನುಸ್ಸತಿ
ಸತ್ಯವನ್ನೇ ನುಡಿ, ಕೋಪಿಸಿಕೊಳ್ಳಬೇಡ,
ಯಾಚಕರಿಗೆ ಸ್ವಲ್ಪವಾದರೂ ದಾನಮಾಡು, ಈ ಮೂರು ಕ್ರಮಗಳಿಂದ ಒಬ್ಬನು ದೇವತೆಗಳ ಹತ್ತಿರ ಹೋಗುವನು - 224 ಧಮ್ಮಪದ
ದೇವತೆಗಳ ಬಳಿ ಹೋಗಬಲ್ಲ ಹಾಗು ಅದಕ್ಕೆ ಬೇಕಾದ ಗುಣಗಳನ್ನು
ಸಂಕ್ಷಿಪ್ತವಾಗಿ ಇಲ್ಲಿ ಹೇಳಿದೆ. ಮಾನವರು ಶ್ರದ್ಧೆ, ಶೀಲ, ದಾನ, ಕಲಿಕೆ ಮತ್ತು
ಪ್ರಜ್ಞಾದಿಂದ ಈ ಪುಣ್ಯಗಳಿಂದ ದೇವತೆಗಳಾಗುವರು. ಇಲ್ಲಿ ಸಾಧಕ ಆ ಸದ್ಗುಣಗಳನ್ನು ತನ್ನಲ್ಲಿ
ವೃದ್ಧಿಸುತ್ತಾ, ನೆನೆಯುತ್ತಾ ದೇವತೆಗಳನ್ನು
ನೆನೆಯುತ್ತಾನೆ. ಹಂತ ಹಂತದಲ್ಲಿರುವ ಆ ದೇವತೆಗಳನ್ನು ನೆನೆಯುತ್ತಾನೆ. ಏಕಾಗ್ರತೆ ಹೊಂದುತ್ತಾನೆ.
ಇದೇ ದೇವತಾನುಸ್ಸತಿಯಾಗಿದೆ.
ಇಲ್ಲಿ ಸಾಧಕನು ತೊಂದರೆಯಾಗದಂತಹ, ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ
ಪದ್ಮಾಸನದಲ್ಲಿ ಕುಳಿತು, ಅಕುಶಲ ಯೋಚನೆಗಳನ್ನು
ದೂರೀಕರಿಸಿ ಈ ರಿತಿ ಚಿಂತಿಸುತ್ತಾನೆ ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ
ದೇವತೆಗಳಿದ್ದಾರೆ, ಪರನಿಮರ್ಾಣರತಿ
ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ
ಮತ್ತು ಬೇರೆಯ ರೀತಿಯ ದೇವತೆಗಳಿದ್ದಾರೆ. ಇವರೆಲ್ಲರ ಬಳಿ ಶ್ರದ್ಧೆ, ಶೀಲ, ಧ್ಯಾನ, ಕಲಿಯುವಿಕೆ,
ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ.
ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಹೀಗೆ ಆತನು ಚಿಂತಿಸುತ್ತಾ ರಾಗ, ದ್ವೇಷ ಮತ್ತು ಮೋಹಗಳಿಂದ ದೂರವಾಗುತ್ತಾನೆ. ಆತನ ಮನಸ್ಸು ಉನ್ನತವಾಗಿ ಧಮ್ಮವನ್ನು
ಅರಿಯುತ್ತಾನೆ, ಆನಂದಿತನಾಗುತ್ತಾನೆ,
ಸುಖದಿಂದ ಕೂಡಿರುತ್ತಾನೆ, ಶಾಂತನಾಗುತ್ತಾನೆ. ಏಕಾಗ್ರತೆಯನ್ನು ಪಡೆಯುತ್ತಾನೆ ಹಾಗು ಉಪಚಾರ ಸಮಾಧಿ ಪಡೆಯುತ್ತಾನೆ.
ಲಾಭಗಳು
1. ಭಿಕ್ಷುವು ದೇವತೆಗಳಿಗೆ ಪ್ರಿಯನಾಗುತ್ತಾನೆ. ಅವರಿಂದ ರಕ್ಷಣೆ
ಪಡೆಯುತ್ತಾನೆ.
2. ಶ್ರದ್ಧೆಯುಳ್ಳವನಾಗುತ್ತಾನೆ.
3. ಆನಂದ, ಶಾಂತತೆ
ವೃದ್ಧಿಯಾಗುವುದು.
4. ಸುಗತಿ ಪ್ರಾಪ್ತಿ ಮಾಡಿಕೊಳ್ಳುತ್ತಾನೆ.
ಈ ಮಾನವ ನಿಜಕ್ಕೂ ಪ್ರಜ್ಞಾನಾದರೆ, ನಿರಂತರ ದೇವತಾನುಸ್ಸತಿ ಮಾಡಲಿ ಅಂತಹುದರಿಂದ ಧನ್ಯವಾಗಲಿ.
ಇದು ದೇವತಾನುಸ್ಸತಿಯಾಗಿದೆ
No comments:
Post a Comment