Monday 19 September 2016

kayagatasati in kannada (ಕಾಯಾಗತಸತಿ)

ಕಾಯಾಗತಸತಿ


                ಭಿಕ್ಷುಗಳೇ, ಯಾರು ಅಮರತ್ವದ ರುಚಿ ನೋಡಿರುವರೋ ಅವರು ಕಾಯಾಗತಸತಿಯ ರುಚಿಯನ್ನು ನೋಡಿರುತ್ತಾರೆ. ಯಾರು ಕಾಯಾಗತಸತಿಯ ರುಚಿಯನ್ನು ನೋಡಿಲ್ಲವೋ ಅವರು ಅಮರತ್ವದ ರುಚಿ ನೋಡಿಲ್ಲ.
                ಇದೇರೀತಿ ಭಗವಾನರು ವಿಭಿನ್ನ ಕಡೆ ಕಾಯಾಗಸತಿಯನ್ನು ಪ್ರಶಂಸಿಸಿದ್ದಾರೆ. ಇದನ್ನು ಮಾಡುವ ರೀತಿ ಮಾತ್ರ ವಿವಿಧ ರೀತಿಯಿಂದ ಭಗವಾನರು ಮಜ್ಜಿಮನಿಕಾಯದ ಕಾಯಾಗತಾಸತಿ ಸುತ್ತದಲ್ಲಿ ಇದನ್ನು ಸಾಧಿಸುವ ಹಂತಗಳು ಈ ರೀತಿ ಬರುತ್ತದೆ.
                (1) ಅನಾಪಾನಾಸತಿ (2) ದೇಹದ ಭಂಗಿಗಳಲ್ಲಿ ಜಾಗರೂಕತೆ (3) ದೇಹದ ವರ್ತನೆಗಳ ಅರಿವು (4) ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ (5) ದೇಹದಲ್ಲಿ ನಾಲ್ಕು ದಾತುಗಳಿವೆ. (6) 10 ರೀತಿಯ ಶವಗಳ ಅಶುಭ ಅರಿಯುವುದು (7) 4 ಹಂತದ ಸಮಾಧಿ ಇವಿಷ್ಟನ್ನು ಹೇಳಿದ್ದಾರೆ.
ಅದರಿಂದ ಒದಗುವ ಫಲಗಳನ್ನು ಹೀಗೆ ಹೇಳಿದ್ದಾರೆ.
1.            ಆತನು ಪ್ರಿಯ, ಅಪ್ರಿಯ ಭಾವನೆಗಳನ್ನು ಮೀರಿರುತ್ತಾನೆ.
2.            ಭಯ ಗೆದ್ದಿರುತ್ತಾನೆ.
3.            ಚಳಿ, ಉಷ್ಣ, ಹಸಿವು, ಬಾಯಾರಿಕೆ, ಸೊಳ್ಳೆ ಮುಂತಾದ ಕೀಟಗಳ ವೇದನೆ, ಬಿಸಿಲು, ವಾಯು, ಮಳೆಗಳ ತೊಂದರೆ, ಸರಿಸೃಪಗಳ ಸರಿದಾಡುವಿಕೆ, ಕೆಟ್ಟ ಮಾತು, ನೋವು, ಹಿಂಸೆ, ಮರಣ ನೋವು ಅವೆಲ್ಲವನ್ನು ಆತ ಸಹಿಸುವ ಶಕ್ತಿ ಆತನಿಗೆ ಸಿಗುತ್ತದೆ.
4.            ತನ್ನ ಇಚ್ಛೆ ಮಾತ್ರದಿಂದ ನಾಲ್ಕನೆಯ ಸಮಾಧಿ ಪ್ರಾಪ್ತಿ ಮಾಡಬಲ್ಲ.
5.            ದೇಹದಿಂದ ಮಾಡುವ ಎಲ್ಲಾ ಪವಾಡ ಸಿದ್ಧಿಯಾಗುತ್ತದೆ.
6.            ದಿವ್ಯ ಕಿವಿ
7.            ದಿವ್ಯ ಚಕ್ಷು.
8.            ಪರಚಿತ್ತ ಅರಿಯುವಿಕೆ
9.            ಪೂರ್ವಜನ್ಮ ಅರಿಯುವಿಕೆ
10.          ಅಸವ ಕ್ಷಯ ಜ್ಞಾನ ಮತ್ತು ನಿಬ್ಬಾಣ ಪ್ರಾಪ್ತಿ.
                ಇಲ್ಲಿ ಕಾಯಾಗತಾಸತಿಯಲ್ಲಿ ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ ಮಾತ್ರ ಇವೆ. ಏಕೆಂದರೆ ಮಿಕ್ಕವು ವಿವಿಧಕಡೆ ವಿವರಿಸಲಾಗಿದೆ. ಇಲ್ಲಿ ಸಾಧಕನು ವೃಕ್ಷ ಮೂಲದಲ್ಲೂ ಅಥವಾ ಅರಣ್ಯದಲ್ಲೂ ಅಥವಾ ಗವಿಯಲ್ಲೂ, ಅಥವಾ ಶೂನ್ಯಗೃಹದಲ್ಲೂ ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ದೇಹದ ಬಗ್ಗೆ ಈ ಚಿಂತನೆ ಮಾಡುತ್ತಾನೆ.
                ಈ ದೇಹದಲ್ಲಿ ತಲೆಗೂದಲು, ಮೈಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆ, ಅಸ್ಥಿಮಚ್ಚೆ, ಮೂತ್ರಪಿಂಡ, ಹೃದಯ, ಪಿತ್ತಕೋಶ, ಶ್ವಾಸದ ಪೊರೆ, ಗುಲ್ಮ, ಶ್ವಾಸಕೋಶ, ಕರುಳು, ವಪೆ, ಉದರ, ಮಲ, ಶ್ಲೇಷ್ಮ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು ಮೆದುಳು ಜಿಡ್ಡಾದ ಕೊಬ್ಬು, ಜೊಲ್ಲು, ಲೋಳೆ, ಕೀಲಿನದ್ರವ ಮತ್ತು ಮೂತ್ರಗಳಿಂದ ಆಗಿದೆ.
                ಹೇಗೆ ಮೂಟೆಯಲ್ಲಿ ಧವಸಧಾನ್ಯಗಳು ಇರುತ್ತವೆಯೋ ಹಾಗೆಯೇ ಚರ್ಮವೆಂಬ ಮೂಟೆಯಲ್ಲಿ ಈ ಎಲ್ಲಾ ಕಶ್ಮಲ ಅಂಗಗಳು ಇವೆ.
                ಬಿಂಬದಂತಿರುವ ಈ ಶರೀರವನ್ನು ನೋಡು, ಇದೊಂದು ವೃಣಗಳಿರುವ ದುರ್ಬಲವಾದ ಪಂಜರ. ಬಯಕೆಗಳ ಗೂಡು
                ಇದು ದ್ರುವವಲ್ಲ, ಶಾಶ್ವತವಲ್ಲ. ಶಾಶ್ವತವಲ್ಲದ ಈ ಕಾಯವು ನಿರರ್ಥಕ ಒಣಗಿದ ಮರದಂತೆ ಭೂಮಿಗೆ ಬಿದ್ದು ಹೋಗುತ್ತದೆ.
                ಅಸ್ತಿಪಂಜರವೆಂಬ ನಗರದ ಗೋಡೆಗಳಿಂದ ಆವೃತವಾಗಿರುವ ಈ ದೇಹ, ಮಾಂಸ, ರಕ್ತಗಳಿಂದ ಲೇಪಿತವಾಗಿದೆ. ಇದರೊಳಗೆ ಜರಾ, ಮೃತ್ಯುಗಳು, ಗರ್ವ, ಈಷರ್ೆ ಮನೆ ಮಾಡಿವೆ.
                ಈ ಕಾಯವು ನೊರೆಯಂತಿದೆ ಎಂಬುದನ್ನು ತಿಳಿದು ಮರಿಚಿಕೆ ಎಂಬ ಅರಿವನ್ನು ಹೊಂದಿ ಮಾರನ ಪುಷ್ಪಗಳನ್ನು ಕತ್ತರಿಸಿ ಹಾಕಿ ಮಾರನ ಕಣ್ಣಿಗೆ ಬೀಳದೆ ಹೋಗು.
                ಈ ಕಾಯವು ಮಡಿಕೆಯಂತಿದೆ ಎಂಬುದನ್ನು ತಿಳಿದು, ಕೋಟೆಯಂತೆ ಚಿತ್ತವನ್ನು ಭದ್ರಪಡಿಸಿಕೊಂಡು, ಪ್ರಜ್ಞಾವೆಂಬ ಆಯುಧದಿಂದ ಮಾರನನ್ನು ಜಯಿಸಿ ತನ್ನನ್ನು ರಕ್ಷಿಸಿಕೊಂಡವ ಯಾವುದಕ್ಕೂ ಅಂಟಿಕೊಂಡಿರುವುದಿಲ್ಲ.
                ಈ ಶರೀರವು ಮಲಿನ್ಯಗಳಿಂದ ಉತ್ಪತ್ತಿಯಾಗುತ್ತದೆ. ಮಲಿನ ವಸ್ತುಗಳಿಂದ ಪೋಷಣೆಗೊಂಡು ಬೆಳೆಯುತ್ತದೆ. ಮಲಿನ ಭಾಗದಿಂದಲೆ ಜನ್ಮಿಸುತ್ತದೆ. ನವರಂಧ್ರಗಳು ಸಹಾ ಮಲಿನವನ್ನೇ ಸ್ರವಿಸುತ್ತದೆ.
                ಈ ಶರೀರದಲ್ಲಿ ಸಹಸ್ರಾರು ಸೂಕ್ಷ್ಮ ಜೀವಿಗಳು, ಕ್ರಿಮಿಗಳು ಇವೆ. ಅನೇಕ ಮೂಳೆಗಳಿಂದ ಕಟ್ಟಲ್ಪಟ್ಟಿದೆ. ಅತ್ಯಂತ ಕುರೂಪವಾಗಿದೆ. ಲೆಕ್ಕವಿಲ್ಲದ ರೋಗ ಉತ್ಪತ್ತಿ ಪ್ರದೇಶವಾಗಿದೆ. ರೋಗಗಳ ಗೂಡಾಗಿದೆ. ನೋವಿನ ಸ್ಥಳವಾಗಿದೆ. ದುಃಖಜನಕವಾಗಿದೆ. ಆದ್ದರಿಂದ ವಿವೇಕಿಯು ಮತ್ತೊಮ್ಮೆ ಶರೀರಧಾರಣೆ ಮಾಡದೆ ಇರಲಿ.
                ಈ ರೀತಿಯ ಚಿಂತನೆಗಳಿಂದ ಕೂಡಿ ಏಕಾಗ್ರಚಿತ್ತವನ್ನು ಪಡೆಯುತ್ತಾನೆ. ನಿವರಣಗಳಿಂದ ಮುಕ್ತನಾಗುತ್ತಾನೆ. ಸಾಮೀಪ್ಯ ಸಮಾಧಿ ಪಡೆಯುತ್ತಾನೆ (ಉಪಚರ ಸಮಾಧಿ)
2.            ಪಯರ್ಾಯ ವಿಧಾನ :
                ಇಲ್ಲಿ ಸಾಧಕನು ದೇಹದ 32 ಅಂಗಗಳನ್ನು ಕ್ರಮವಾಗಿ ಜಪಿಸಬೇಕಾಗುತ್ತದೆ. ಹೇಗೆಂದರೆ ತಲೆಗೂದಲು, ದೇಹ ಕೂದಲು, ಉಗುರು, ಹಲ್ಲು, ಚರ್ಮ... ಅಥವಾ ಮಾಂಸ, ಸ್ನಾಯು, ಅಸ್ತಿ, ಮಜ್ಜೆ, ಮೂತ್ರಪಿಂಡ... ಈ ರೀತಿಯಾಗಿ ಜಪಿಸಬೇಕಾಗುತ್ತದೆ.
                ಕೆಲವು ಸಾಧಕರು ಈ ರೀತಿ ಮತ್ತು 4 ತಿಂಗಳು ಜಪಿಸಿಯೆ ಸೋತಪನ್ನರಾಗಿದ್ದಾರೆ.
3.            ಪಯರ್ಾಯ ವಿಧಾನ : ಮನೋಜಪ : ಇಲ್ಲಿ ಮೇಲಿನಂತೆ ಮನಸ್ಸಿನಲ್ಲಿಯೆ ಜಪಿಸಬೆಕಾಗುತ್ತದೆ.
4.            ಪಯರ್ಾಯ ವಿಧಾನ : ಇಲ್ಲಿ ಈ ರೀತಿ ಧ್ಯಾನಿಸಬೇಕಾಗುತ್ತದೆ. ಉದಾ : ತಲೆಗೂದಲು.
                ತಲೆಕೂದಲು ಸಾಮಾನ್ಯವಾಗಿ ಕಪ್ಪಗಿರುತ್ತದೆ. ಅವುಗಳ ಆಕಾರ ಉದ್ದನೆಯ ಎಳೆಗಳಂತೆ ಇರುತ್ತದೆ. ಅವುಗಳು ಊದ್ವರ್ಾ ದಿಕ್ಕಿನಲ್ಲಿರುತ್ತವೆ. ಅವು ಚರ್ಮದ ಮೇಲಿರುತ್ತದೆ. ಅವುಗಳ ಗಡಿ ಕುತ್ತಿಗೆ ಮಾತ್ರ. ಕೂದಲು ನೆರೆತರೆ ಕುರೂಪವಾಗಿರುತ್ತದೆ. ವಾಸನೆಯು ಅಸಹ್ಯಕರ, ಅದು ಅಹಾರದಲ್ಲಿದ್ದರೆ ಆಹಾರ ತಿನ್ನುವುದಿಲ್ಲ. ಅದರ ಆಕಾರವು ಸಹ್ಯವಲ್ಲ.
ಇಲ್ಲಿ ಗಮನಿಸಿ :
                ವರ್ಣ = ಕಪ್ಪು, ಆಕಾರ = ಉದ್ದನೆಯ ಎಳೆ, ದಿಕ್ಕು = ಊದ್ರ್ವ, ಸ್ಥಳ = ಚರ್ಮದ ಮೇಲೆ, ಗಡಿ = ಕುತ್ತಿಗೆಯವರೆಗೆ ಮಾತ್ರ.
                ಅಸಹ್ಯಭಾವನೆ = ಕಣ್ಣಿನಿಂದ, ಮೂಗಿನಿಂದ, ನಾಲಿಗೆಯಿಂದ, ಆಕಾರದಿಂದ, ವರ್ಣದಿಂದ ಈ ರೀತಿಯಾಗಿ ವರ್ಣ, ಆಕಾರ, ದಿಕ್ಕು, ಸ್ಥಳ, ಗಡಿ ಮತ್ತು ಅಸಹ್ಯೆಯಿಂದ ಧ್ಯಾನಿಸಬೇಕಾಗುತ್ತದೆ. ಹೀಗೆಯೇ ದೇಹ 32 ಅಂಗಗಳನ್ನು ಧ್ಯಾನಿಸಬೇಕು.

ಇಲ್ಲಿಗೆ ಕಾಯಾಗತಸತಿ ಸಂಕ್ಷಿಪ್ತವಾಗಿ ಮುಗಿಯಿತು.

No comments:

Post a Comment