Monday 19 September 2016

upasamanussati in kannada (ಉಪಸಮಾನುಸ್ಸತಿ)

ಉಪಸಮಾನುಸ್ಸತಿ

                ಒಂದೇ ಒಂದು ಚಿಂತನೆ, ಓ ಭಿಕ್ಷುಗಳೇ ಅಭಿವೃದ್ಧಿಗೊಳಿಸಿದರೆ, ನಿರಂತರ ಸಾಧಿಸಿದರೆ ಈ ಜಗದಿಂದ ವಿಮುಖಗೊಳಿಸುತ್ತದೆ. ವಿರಾಗವುಂಟು ಮಾಡುತ್ತದೆ. ನಿರೋಧ ಉಂಟುಮಾಡುತ್ತದೆ. ಶಾಂತಿಯನ್ನು, ಧ್ಯಾನವನ್ನು, ಸಂಬೋಧಿಯನ್ನು ಮತ್ತು ನಿಬ್ಬಾಣವನ್ನು ನೀಡುತ್ತದೆ ಮತ್ತು ಯಾವುದದು ಆ ಚಿಂತನೆ? ಅದೇ ಉಪಸಮಾನುಸ್ಸತಿ (ಅಥವಾ ನಿಬ್ಬಾಣದ) ಚಿಂತನೆಯಾಗಿದೆ.
                ಈ ಉಪಸಮಾನುಸ್ಸತಿಯು ಬುದ್ಧಿವಂತರಿಗೆ ನೀಡುವ ಧ್ಯಾನ ವಿಷಯವಾಗಿದೆ. ಏಕೆಂದರೆ ಇದು ಪರರಿಂದ ಮಾಡಲು ಅಸಾಧ್ಯವಾಗಿದೆ. ಇದಕ್ಕೆ ತೀಷ್ಣ ಗ್ರಹಿಕೆ, ಅರಿವು ಬೇಕಾಗಿದೆ. ಆಳವಾದ ಧಮ್ಮಬ್ಯಾಸ ಬೇಕು ಇಲ್ಲದಿದ್ದರೆ ಮಿಥ್ಯಾಗ್ರಹಿಕೆಗಳು ಉಂಟಾಗುವ ಸಾಧ್ಯತೆ ಹೇರಳವಾಗಿರುತ್ತದೆ.
                ಒಂದು ಮಾತು ಗಮನದಲ್ಲಿಡಿ, ಇದು ನಿಬ್ಬಾಣದ ಕುರಿತು ಚಿಂತನೆಯೆ ಹೊರತು ನಿಬ್ಬಾಣದ ಸಾಕ್ಷಾತ್ಕಾರವಲ್ಲ. ಇದರಿಂದ ನೀವು ಸಾಧಕ ಕೇವಲ ಉಪಚಾರ ಸಮಾಧಿ ಪಡೆಯುತ್ತಾನೆ. ಅದು ಪ್ರಥಮ ಸಮಾದಿಗಿಂತ ಕಡಿಮೆಯಾಗಿದೆ.
                ಇಲ್ಲಿ ಸಾದಕನು ತೊಂದರೆ ಉಂಟಾಗದಂತಹ ವಿರುದ್ಧ, ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ಅಕುಶಲ ಯೋಚನೆಗಳನ್ನು ದೂರೀಕರಿಸುತ್ತಾನೆ. ತನ್ನ ಶರೀರ ಮತ್ತು ಮನವನ್ನು ಶಾಂತಗೊಳಿಸುತ್ತಾನೆ. ಪ್ರಶಾಂತತೆಯನ್ನು ಅನುಭವಿಸುತ್ತಾ ಆತನು ನಿಬ್ಬಾಣವನ್ನು ಕುರಿತು ಈ ರೀತಿ ಚಿಂತನೆ ಮಾಡುತ್ತಾನೆ.
                ಓ ಇಲ್ಲಿ ಭಿಕ್ಷುವೊಬ್ಬ, ಶೀಲವಂತನಾಗಿ, ಸಂಯಮಿಯಾಗಿ, ಜಾಗರೂಕನಾಗಿ ಪಂಚನಿವಾರಣಗಳನ್ನು ತ್ಯಜಿಸದವನಾಗಿ, ಪ್ರಥಮ ಸಮಾಧಿ ಪಡೆಯುತ್ತಾನೆ. ಹಾಗೆಯೇ ಚತುರ್ಥ ಸಮಾಧಿ... ನೇವಸನ್ನನಸನ್ಯಾಯಾತನವನ್ನು ಆಯತನ ಪಡೆಯುತ್ತಾನೆ. ನಂತರ ಸೋತಪನ್ನನಾಗಿ ಹಾಗೆಯೇ ಅರಹಂತರಾದಾಗ ಅವರು ನಿಬ್ಬಾಣ ಪ್ರಾಪ್ತಿ ಮಾಡುವರು. ಅವರು ಎಲ್ಲದರ ಅಂತ್ಯ ಮಾಡುವರು. ಲೋಭ, ದ್ವೇಷ, ಮೋಹಗಳ ಹಾಗು ಜನ್ಮ ಮರಣಗಳಿಂದ ಮುಕ್ತರಾಗುವರು. ಅಹಂ ಮತ್ತು ಅಸ್ತಿತ್ವಗಳಿಂದ ಮುಕ್ತರಾಗುವರು ಆ ನಿಬ್ಬಾಣ ಹೇಗಿರುತ್ತದೆ?
                ಅದು ಯಾವುದರಿಂದಲೂ ರಚಿತವಾಗದಂತಹುದು....ಅನಂತ...ಮುಕ್ತ... ಸತ್ಯ... ಪಾರ.... ಗ್ರಹಿಕೆಗೆ ಮೀರಿದ್ದು... ಅಜರ, ಅಮರ... ದುಃಖರಹಿತ... ನಿತ್ಯ... ದಾತುಗಳಿಗೆ ಅತೀತ... ಶಾಂತ.... ಅತ್ಯುನ್ನತ....ಶುಭಕರ... ಭವನಿರೋಧ... ಕ್ಷೇಮಕರ... ಅದ್ಭುತವಾದುದು.... ದುಃಖರಹಿತವಾದುದು... ಶರಣೋತ್ತಮ... ಅಂಟದೆ ಇಂರುವಂತಹ...ಅಂತಿಮ ಸ್ಥಿತಿ... ತೃಷ್ಣಾಕ್ಷಯಸ್ಥಿತಿ, ನಿರೋಧ... ನಿಬ್ಬಾಣ ಆಗಿರುತ್ತದೆ.
                ನಿಬ್ಬಾಣವು... ಯಾವುದರಿಂದಲೂ ರಚಿತವಾಗಿರುವುದಿಲ್ಲ (ದೇಹ, ಮನಸ್ಸು ಮತ್ತು ಜಗತ್ತು) ಮರೆಯಾಗುವಂತಹುದ್ದಾಗಿದೆ. ಅಂದರೆ ಲೋಭ, ದ್ವೇಷ, ಮೋಹ, ಅಹಂ ಸರ್ವದರಿಂದ ಮರೆಯಾಗುತ್ತದೆ. ಸರ್ವಲೋಕಗಳಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ತೃಷ್ಣೆಯಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ಇದು ಆರಿ ಹೋಗುವಿಕೆಯಾಗಿದೆ.
                ಭಗವಾನರ ನುಡಿಯಿಂದ ಕೇಳುವುದಾದರೆ :
                ಭಿಕ್ಷುಗಳೇ, ಯಾವುದರಿಂದಲೂ ರಚಿತವಾದ, ಯಾವುದರಿಂದಲೂ ಕೂಡಿರದ, ಸತ್ಯ... ಆಚೆಯ ದಡ... ಅರಿಯಲು ಕಠಿಣವಾದ... ಮುಪ್ಪಿರದ... ನಿತ್ಯ... ಅಮರವಾದುದು... ಶುಭವಾದದ್ದು... ಪರಮ ಕ್ಷೇಮಕರವಾದುದು... ಅದ್ಭುತವಾದುದು... ಪರಿಶುದ್ಧವಾದುದು... ಪರಿಪೂರ್ಣವಾದುದು... ಅದೇ ನಿಬ್ಬಾಣ.
                ಹೀಗೆ ಆತನು ಚಿಂತಿಸುತ್ತಿರುವಾಗ ನಿಬ್ಬಾಣ ಪ್ರಾಪ್ತಿಗೆ ಸ್ಫೂತರ್ಿ ಪಡೆಯುತ್ತಾನೆ, ಆನಂದಿತನಾಗುತ್ತಾನೆ. ಏಕಾಗ್ರತೆ ಹೊಂದುತ್ತಾನೆ. ಪಂಚನಿವರಣಗಳಿಂದ ದೂರವಾಗುತ್ತಾನೆ. ಉಪಚರ ಸಮಾಧಿ ಪಡೆಯುತ್ತಾನೆ.
ಉಪಶಮನುಸ್ಸತಿಯ ಲಾಭಗಳು :
1.            ಆತನು ಶಾಂತವಾಗಿ ನಿದ್ರಿಸುತ್ತಾನೆ ಮತ್ತು ಶಾಂತವಾಗಿ ಏಳುತ್ತಾನೆ.
2.            ಆತನ ಸವರ್ೆಂದ್ರಿಯಗಳು ಶಾಂತವಾಗಿರುತ್ತದೆ.
3.            ಶ್ರದ್ಧೆಯಿಂದ ಕೂಡಿರುತ್ತಾನೆ ಹಾಗು ಶೀಲವಂತನಾಗಿರುತ್ತಾನೆ.
4.            ಶ್ರೇಷ್ಠತ್ವ ಪ್ರಾಪ್ತಿಗೆ ದೃಢಸಂಕಲ್ಪಿತನಾಗಿ ಸಾಧನೆ ಮಾಡುತ್ತಾನೆ.
5.            ಸುಗತಿ ಪ್ರಾಪ್ತಿ ಮಾಡುತ್ತಾನೆ.
                ಏಕಾಂತತೆಯಲ್ಲಿರುವ ಸವಿರಸವನ್ನು ಮತ್ತು ಉಪಸಮದ ಶಾಂತಿರಸ ಕುಡಿದವನು, ಧಮ್ಮ ಸುಖದ ರಸವನ್ನು ಸೇವಿಸುವವನು ನಿಶ್ಪಾಪಿಯು ಮತ್ತು ಅದುಃಖಿಯು ಆಗುವನು.

ಇಲ್ಲಿ ಉಪಸಮಾನುಸ್ಸತಿ ಮುಗಿಯಿತು

No comments:

Post a Comment