Sunday 18 October 2015

the maha karuna meditation of bodhisatta in kannada ಬೋಧಿಸತ್ವರ ಮಹಾ ಕರುಣಾ ಧ್ಯಾನ

ಬೋಧಿಸತ್ವರ ಮಹಾ ಕರುಣಾ ಧ್ಯಾನ :


                ಬೋಧಿಸತ್ವರು ಸಹಾ ಹಿಂದಿನಂತೆಯೇ ಧ್ಯಾನ ಮಾಡುತ್ತಾರೆ ಮತ್ತು ಜೊತೆಗೆ ಈ ರೀತಿಯೂ ಧ್ಯಾನಿಸುತ್ತಾರೆ. ಇಲ್ಲಿರುವ ಸಂಕ್ಷಿಪ್ತ ಮಾಡಿರುವ ಕರುಣಾ ಚಿಂತನೆಯು ಬೋಧಿಸತ್ವ, ಶಾಂತಿದೇವ ಅವರದ್ದಾಗಿದೆ :
                ಎಲ್ಲಾ ಜೀವಿಗಳ ದುಃಖವು ನನಗೆ ಸಿಗಲಿ ಮತ್ತು ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ
                ಎಲ್ಲಾ ಜೀವಿಗಳ ನೋವು ನನಗೆ ಸಿಗಲಿ ಮತ್ತು ಎಲ್ಲಾ ಜೀವಿಗಳು ನೋವುಗಳಿಂದ ಮುಕ್ತರಾಗಲಿ.
                ಎಲ್ಲಾ ಜೀವಿಗಳ ಪಾಪಗಳ ಎಲ್ಲಾ ಫಲಗಳನ್ನು ನಾನು ಅನುಭವಿಸುತಂತಾಗಲಿ ಮತ್ತು ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ
                ಇದುವರೆಗೆ ನಾನು ಗಳಿಸಿದ ಎಲ್ಲಾ ಪುಣ್ಯಗಳ ಫಲದಿಂದ ಸರ್ವಜೀವಿಗಳು ನೋವಿನಿಂದ ಮತ್ತು ಶೋಕದಿಂದ ಮುಕ್ತರಾಗಲಿ.
                ಎಲ್ಲಿಯವರೆಗೆ ಒಂದು ಜೀವಿಯು ದುಃಖದಿಂದ ಇರುವುದು, ಅಲ್ಲಿಯವರೆಗೆ ನಾನು ನಿಬ್ಬಾಣ ಪಡೆಯುವುದಿಲ್ಲ.
                ಎಲ್ಲಾ ರೋಗಿಗಳಿಗೆ ನಾನು ವೈದ್ಯನಾಗಲಿ, ನಾನೇ ಔಷಧಿಯಾಗಲಿ.
                ನಾನು ಬಾಯಾರಿದವರ ನೀರಾಗಲಿ
                ನಾನು ಹಸಿದವರ ಆಹಾರವಾಗಲಿ
                ನಾನು ವಸತಿಹೀನರಿಗೆ ಆಶ್ರಯವಾಗಲಿ
                ನಾನು ದೌಭರ್ಾಗ್ಯವುಳ್ಳವರಿಗೆ ಐಶ್ವರ್ಯವಾಗಲಿ
                ನನ್ನ ದೇಹ ಹೀಗೆಯೇ ನನ್ನ ಎಲ್ಲಾ ಪುಣ್ಯಗಳು, ನನ್ನ ಸರ್ವಸ್ವವು ಎಲ್ಲವನ್ನು ನಾನು ಪರರಿಗೆ ನೀಡಿ ಏನೂ ಇಲ್ಲದವನಾಗುತ್ತೇನೆ.
                ನಿಬ್ಬಾಣವು ಪ್ರಾಪ್ತಿಯಾಗುವುದು ಸರ್ವವೂ ತ್ಯಾಗ ಮಾಡಿದ ಮೇಲೆಯೇ. ಸರ್ವರ ನಿಬ್ಬಾಣವೇ ನನ್ನ ಗುರಿ. ಆದ್ದರಿಂದ ನನ್ನ ಸರ್ವವೂ ತ್ಯಾಗವಾಗಲಿ, ಸರ್ವವನ್ನು ಸರ್ವರಿಗೂ ನೀಡುವಂತಾಗಲಿ.
                ನನ್ನನ್ನು ಹಿಂಸಿಸಿದ, ಅಪಕಾರವೆಸಗಿದ, ನಿಂದಿಸಿದ, ದೋಚಿದ, ನನ್ನ ಹತ್ಯೆ ಮಾಡಲು ಬರುವ ಎಲ್ಲರೂ ಸಹಾ ಸಂಬೋಧಿ ಮತ್ತು ನಿಬ್ಬಾಣವನ್ನು ಪಡೆಯುವಂತಾಗಲಿ.
                ನಾನು ಅನಾಥರಿಗೆ ಅನಾಥ ರಕ್ಷಕನಾಗಲಿ.
                ನಾನು ರಕ್ಷಣೆಯಿಲ್ಲದವರಿಗೆ ಮಹಾ ರಕ್ಷಕನಾಗಲಿ.
                ನಾನು ದಾರಿತಪ್ಪಿದವರಿಗೆ ಮಾರ್ಗದರ್ಶಕನಾಗಲಿ.
                ನಾನು ಮುಳುಗುತ್ತಿರುವವರಿಗೆ ಪ್ರಾಣರಕ್ಷಕನಾಗಲಿ.
                ನಾನು ದಾಟುತ್ತಿರುವವರಿಗೆ ದೋಣಿಯಾಗಲಿ.
                ನಾನು ಕತ್ತಿಲೆಯಲ್ಲಿರುವವರಿಗೆ ಬೆಳಕಾಗಲಿ.
                ನಾನು ಕಾಮಧೇನುವಿನಂತೆ, ಕಲ್ಪವೃಕ್ಷದಂತೆ, ಮಹಾ ಮಂತ್ರದಂತೆ, ಚಿಂತಾಮಣಿಯಂತೆ, ಅಕ್ಷಯ ಪಾತ್ರೆಯಂತೆ ಸರ್ವರಿಗೂ ಸರ್ವಸ್ವವನ್ನು ನೀಡುವಂತಾಗಲಿ.
                ನಾನು ಪೃಥ್ವಿಯಂತೆ ಸರ್ವರಿಗೂ ಆಧಾರವಾಗಿರಲಿ, ಆಕಾಶದಂತೆ ಸರ್ವವನ್ನು ಸಹಿಸುವಂತಾಗಲಿ, ನೀರಿನಂತೆ ಸರ್ವರನ್ನು ಶುದ್ಧಿಗೊಳಿಸಲಿ. ವಾಯುವಿನಂತೆ ಉಸಿರಾಗಲಿ, ತೇಜೋವಿನಂತೆ ಬೆಳಕಾಗಲಿ.
                ಬಂಧಿತರಾಗಿರುವ ಪ್ರಾಣಿಗಳು ಬಿಡುಗಡೆ ಪಡೆಯಲಿ, ಪ್ರಾಣಭಯದಿಂದ ಕೂಡಿದ ಜೀವಿಗಳು ಭಯದಿಂದ ಮುಕ್ತರಾಗಲಿ, ಕುರುಡರು ದೃಷ್ಟಿಯಿನ್ನು ಪಡೆಯುವಂತಾಗಲಿ, ಕಿವುಡರು, ಶಬ್ಧವನ್ನು ಕೇಳುವಂತಾಗಲಿ, ಮೂಕ ಮಾತನಾಡುವಂತಾಗಲಿ, ಹೆಳವರು ನಡೆಯುವಂತಾಗಲಿ, ಗಭರ್ಿಣಿಯರು ಮಹಾಮಾತೆ ಮಾಯಾದೇವಿಯವರ ರೀತಿ ನೋವಿಲ್ಲದೆ ಪ್ರಸರಿಸುವಂತಾಗಲಿ.
                ಹಸಿದವರಿಗೆ ಆಹಾರ ಸಿಗುವಂತಾಗಲಿ. ನಗ್ನರಿಗೆ ವಸ್ತ್ರ ದೊರೆಯುವಂತಾಗಲಿ. ಬಡವರಿಗೆ ಐಶ್ವರ್ಯ ಸಿಗುವಂತಾಗಲಿ. ರೋಗಿಗಳು ಆರೋಗ್ಯ ಹೊಂದುವಂತಾಗಲಿ. ಭಯಸ್ಥರು ನಿಭರ್ಿತಿ ಹೊಂದಲಿ. ಬಂಧಿತರು ಬಿಡುಗಡೆ ಹೊಂದಲಿ. ಸಾಲಗಾರರು ಋಣಮುಕ್ತರಾಗಲಿ. ಬಲಹೀನರು ಶಕ್ತಿಯನ್ನು ಹೊಂದಲಿ. ದಾರಿ ತಪ್ಪಿದವರು ಮಾರ್ಗದರ್ಶನ ಹೊಂದಲಿ. ಶೋಕಭರಿತರು ಅಶೋಕರಾಗಲಿ. ಅನಾಥರು ರಕ್ಷಣೆ ಮತ್ತು ಸೌಲಭ್ಯ ಪಡೆಯಲಿ. ಅಜ್ಞಾನಿಗಳು ಜ್ಞಾನವನ್ನು ಪಡೆಯಲಿ. ದುರ್ಗತಿಯುಳ್ಳವರು ಸುಗತಿ ಪಡೆಯಲಿ. ದುರ್ಜನರು ಶೀಲವಂತರಾಗಲಿ. ಸರ್ವರೂ ಸಂಬೋಧಿಗಳಿಸಲಿ. ಸರ್ವರೂ ನಿಬ್ಬಾಣವನ್ನು ಹೊಂದಲಿ. ಸರ್ವರೂ ಬುದ್ಧತ್ವ ಪ್ರಾಪ್ತಿ ಮಾಡಲಿ.
                ಈ ರೀತಿ ಬೋಧಿಸತ್ವರು ಚಿಂತಿಸಿ, ಕರುಣೆಯಿಂದಲೇ ಸ್ಫೂತರ್ಿ ಪಡೆಯುತ್ತಾರೆ, ಕರುಣೆಯಿಂದಲೇ ಪ್ರೇರಣೆ ಬಲಹೊಂದಿ ಅವರು, ಕರುಣೆಯಿಂದ ತಮ್ಮ ಸರ್ವಸ್ವ ಪರರಿಗೆ ಅಪರ್ಿಸಿ ದಾನಿಯಾಗುತ್ತಾರೆ.
                ಕರುಣೆಯಿಂದಾಗಿ ಅವರು ಯಾರಿಗೂ ಯಾವ ರೀತಿಯಲ್ಲೂ ಹಿಂಸಿಸದೆ ಶೀಲವಂತರಾಗುತ್ತಾರೆ.
                ಕರುಣೆಯಿಂದಾಗಿ ಅವರು ಎಲ್ಲ ಸುಖವನ್ನು ತ್ಯಜಿಸುತ್ತಾರೆ.
                ಕರುಣೆಯಿಂದಾಗಿ ಅವರು ಪ್ರಜ್ಞಾ ಮತ್ತು ಜ್ಞಾನವನ್ನು ಪ್ರಾಪ್ತಿ ಮಾಡುತ್ತಾರೆ.
                ಕರುಣೆಯಿಂದಾಗಿ ಅವರು ಪರರ ತಪ್ಪುಗಳನ್ನು ಸಹಿಸುತ್ತಾರೆ.
                ಕರುಣೆಯಿಂದಾಗಿ ಅವರು ಪರರಿಗಾಗಿ ನೀಡಿದ ಸತ್ಯವಚನ ಪಾಲಿಸುತ್ತಾರೆ.
                ಕರುಣೆಯಿಂದಾಗಿ ಅವರು ಪರಹಿತ ಕಾರ್ಯದಲ್ಲಿ ದೃಢನಿಧರ್ಾರ ತಾಳುತ್ತಾರೆ.
                ಕರುಣೆಯಿಂದಾಗಿ ಅವರು ಸದಾ ಮೈತ್ರಿಯುತ ಮನಸ್ಸಿನಿಂದ ಕೂಡಿರುತ್ತಾರೆ.
                ಕರುಣೆಯಿಂದಾಗಿ ಅವರು ಯಾರಿಂದಲೂ, ಏನನ್ನು, ಎಂದಿಗೂ ಅಪೇಕ್ಷಿಸದೆ ನ್ಯಾಯದಿಂದ ಸಮಚಿತ್ತತೆಯಿಂದ ಇರುತ್ತಾರೆ.
                ಕರುಣೆಯಿಂದಾಗಿ ಸಮಾಧಿಯನ್ನು ಪರಿಪೂರ್ಣಗೊಳಿಸುತ್ತಾರೆ.
                ಈ ರೀತಿ 10 ಪಾರಾಮಿತಗಳನ್ನು ಪರಿಪೂರ್ಣಗೊಳಿಸಿ ಬುದ್ಧರಾಗುತ್ತಾರೆ.
- ಂ - ಂ -
                ಸರ್ವಜೀವಿಗಳು ದುಃಖವೆಲ್ಲದರಿಂದ ಮುಕ್ತರಾಗಲಿ ಅಥವಾ ಸರ್ವಜೀವಿಗಳು ಹಿಂಸಾಭಾವನೆಯಿಂದ ಮುಕ್ತರಾಗಲಿ ಈ ವಾಕ್ಯದಿಂದಲೇ ಧ್ಯಾನಗಳು ಹಂತಗಳನ್ನು ದಾಟಿ ತ್ರೀತೀಯ ಸಮಾಧಿ ಪಡೆಯಬಹುದು. ನಂತರ ಇದರ ಸಹಾಯದಿಂದ ಅವರು ಆಕಾಶ ನಂಚಾಯಾತನದ ಅರೂಪ ಧ್ಯಾನಕ್ಕೆ ನೇರವಾಗಿ ಹೋಗಬಹುದು.
                ಕರುಣಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೇ ಆಗಿದ್ದು ಬೋಧಿಸತ್ವರಿಗೆ ಕೆಲವು ವಿಶೇಷತೆಗಳು ದೊರೆಯುತ್ತದೆ.

ಇಲ್ಲಿಗೆ ಕರುಣಾ ಧ್ಯಾನ ಮುಗಿಯಿತು.

No comments:

Post a Comment