Sunday 25 June 2017

MEDITATION ON MIRAGE ಮರಿಚಿಕೆಯ ಧ್ಯಾನ

ಮರಿಚಿಕೆಯ ಧ್ಯಾನ

                ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನ ವಿಹಾರದಲ್ಲಿ ನೆಲಸಿದ್ದರು. ಆಗ ಒಬ್ಬ ಭಿಕ್ಷುವು ಬುದ್ಧರಿಂದ ಧ್ಯಾನದ ವಿಷಯ ಸ್ವೀಕರಿಸಿ ಧ್ಯಾನ ಮಾಡಲು ಕಾಡಿಗೆ ಹೊರಟನು.
                ಆತನು ಧ್ಯಾನದಲ್ಲಿ ತಲ್ಲೀನನಾದನು, ಅಪಾರವಾಗಿ ಪರಿಶ್ರಮಿಸಿದನು. ಆದರು ಸಹಾ ಆತನು ಏಳಿಗೆಯನ್ನು ಹೊಂದಲಿಲ್ಲ. ಆತನಿಗೆ ನಿರಾಸೆಯಾಯಿತು. ಆಗ ಆತನು ರೀತಿ ಯೋಚಿಸಿದನು ನಾನು ಜೇತವನಕ್ಕೆ ಹಿಂದಿರುಗಿ ಭಗವಾನರಲ್ಲಿ ನನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ಬೇರೊಂದು ಧ್ಯಾನ ವಿಷಯವನ್ನು ಕೋರಿಕೊಂಡು ಆಯ್ಕೆ ಮಾಡಿಕೊಳ್ಳುವೆನು ರೀತಿಯ ಯೋಚನೆಗಳಿಂದ ಆತನು ಜೇತವನಕ್ಕೆ ಹಿಂತಿರುಗುತ್ತಾ ಇದ್ದನು.
                ದಾರಿಯಲ್ಲಿ ಆತನು ಮರಿಚಿಕೆಯನ್ನು ಕಂಡನು. ತನ್ನಲ್ಲಿ ಜಾಗರೂಕತೆಯಿಂದ ವಿಶ್ಲೇಷಿಸಿಕೊಂಡು ಅದು ಕೇವಲ ಭ್ರಮೆ, ವಾತಾವರಣದಿಂದ ಆದುದು, ಹೊರತು ನೀರಲ್ಲ ಎಂದು ಸಮಾಧಾನಪಡುತ್ತಾ ಹಾಗೆಯೇ ಆತನಿಗೆ ಬಗೆಯ ಚಿಂತನೆ ಉದಯಿಸಿತು. ದೇಹವು ಸಹಾ ಭ್ರಮೆಯಾಗಿದೆ, ಅನಿಶ್ಚಿತತೆಯಿಂದ ಕೂಡಿದೆ, ಅಷ್ಟೇ ಅಲ್ಲದೆ ಜನ್ಮ ಜರಾಮರಣಕ್ಕೆ ಕಾರಣವಾಗಿದೆ... ರೀತಿಯಲ್ಲಿ ಮರಿಚಿಕೆಯ ದೇಹದ ಧ್ಯಾನ ಆರಂಭಿಸಿದನು. ಬಹಳ ನಂತರ ಆತನು ಅಚರಾವತಿ ನದಿಯ ಹತ್ತಿರ ಹೋಗಿ ಸ್ನಾನ ಮಾಡಿ ಹತ್ತಿರದಲ್ಲಿರುವ ಮರದ ಬುಡದಲ್ಲಿ ವಿಶ್ರಮಿಸಿದನು. ಆಗ ಆತನಿಗೆ ನದಿಯಲ್ಲಿ ನೊರೆಯನ್ನು ಕಂಡನು. ಆಗ ಆತನಿಗೆ ಮತ್ತೆ ಚಿಂತನೆ ಆರಂಭವಾಯಿತು ಓಹ್ ದೇಹವು ಸಹಾ ನೊರೆಯಂತೆ ಉದಯಿಸಿ ಅಳಿಯುತ್ತದೆ. ಓಹ್ ದೇಹವು ಅಶುಭವಾಗಿದೆ, ಅನಿತ್ಯವಾಗಿದೆ, ದುಃಖಕರವಾಗಿದೆ. ಸದಾ ಪರಿವರ್ತನೆ ಹೊಂದುತ್ತಲೆ ಇರುತ್ತದೆ. ಯೌವ್ವನ ನಶ್ವರ, ಅರೋಗ್ಯ ನಶ್ವರ ಜೀವನ ಅನಿಶ್ಚಿತವಗಿದೆ... ಇವೆಲ್ಲವೂ ಮರಿಚಿಕೆಯಂತೆ... ನೊರೆಯಂತೆ ಕ್ಷಣಿಕವಾಗಿದೆ, ಅನಿತ್ಯವಾಗಿದೆ...
                ಅದೇ ವೇಳೆಯಲ್ಲಿ ಬುದ್ಧ ಭಗವಾನರು ಜೇತವನದ ವಿಹಾರದಲ್ಲಿದ್ದರು. ಅವರಿಗೆ ಭಿಕ್ಷುವಿನ ಸಾಧನೆ ಗಮನಕ್ಕೆ ಬಂದಿತು. ಆಗ ಬುದ್ಧರು ಈತನಿಗೆ ಜ್ಞಾನೋದಯ ಸ್ಥಿರ ಮಾಡಲು ಇದು ಸಕಾಲ ಎಂದು ನಿರ್ಧರಿಸಿ ಭಿಕ್ಷುವಿನ ಮುಂದೆ ಪ್ರತ್ಯಕ್ಷರಾದರು ಹಾಗು ಹೀಗ ಹೇಳಿದರು : ಭಿಕ್ಷು, ನೀನು ಸರಿಯಾದ ದಾರಿಯಲ್ಲಿದ್ದೀಯೆ, ಅದನ್ನೇ ಮುಂದುವರಿಸು, ನಿಜಕ್ಕೂ ದೇಹವು ಮರಿಚಿಕೆಯಂತೆ ಹಾಗು ನೊರೆಯಂತೆ ಅನಿತ್ಯಕರವಾಗಿದೆ ಎಂದು ಹೇಳಿ ಗಾಥೆಯನ್ನು ನುಡಿದರು :
                ನೊರೆಯಂತೆಯೇ ಕಾಯವು ಇದೆ ಎಂದರಿತು
                ಮರೀಚಿಕೆಯಂತಹ ಅವರ ಸ್ವಭಾವವನ್ನು ಗ್ರಹಿಸಿ
                ಮಾರನ (ಇಂದ್ರೀಯಾಭಿಲಾಶೆಯ) ಪುಷ್ಪ ಬಾಣಗಳನ್ನು ಕತ್ತರಿಸಿ
                ಅದೃಷ್ಯನಾಗು ನೀ ಮೃತ್ಯುರಾಜನ ಕಣ್ಣಿನಿಂದಾಗಿ.
- ಧಮ್ಮಪದ 46
                ಗಾಥೆಯ ನಂತರ ಭಿಕ್ಷುವು ಅರಹಂತನಾದನು.
ಸಂಕ್ಷಿಪ್ತ ವ್ಯಾಖ್ಯಾನ : ಬೌದ್ಧರಲ್ಲಿ ಧ್ಯಾನವು ಅನೇಕ ಬಗೆಯಲ್ಲಿವೆ. ಬುದ್ಧಭಗವಾನರು ವ್ಯಕ್ತಿಗಳ ಪ್ರಚನ್ನತೆಗೆ ತಕ್ಕಂತೆ ಧ್ಯಾನ ವಿಷಯವನ್ನು ನೀಡುತ್ತಾರೆ. ಇಲ್ಲಿ ಭಿಕ್ಷುವಿಗೆ ಚಿತ್ತವಿಶುದ್ಧಿಯಾಗಲು ಮೊದಲು ಬೇರೊಂದು ಧ್ಯಾನ ವಿಷಯ ನೀಡುತ್ತಾರೆ. ಇಲ್ಲಿ ಭಿಕ್ಷುವಿಗೆ ಚಿತ್ತವಿಶುದ್ಧಿ ಹೊಂದಿ ಉನ್ನತಿ ಹೊಂದಿದರೂ ಆರ್ಯ ಫಲಗಳನ್ನು ಪಡೆಯಲಿಲ್ಲ. ಆತನ ಗ್ರಹಿಕೆ ಸಾಮಥ್ರ್ಯಕ್ಕೆ ಆತನು ಮರೀಚಿಕೆ ಹಾಗು ನೊರೆಗಳನ್ನು ಕಾಣಲೇಬೇಕಿತ್ತು. ಅದನ್ನು ಮೊದಲೇ ನೀಡಿದ್ದರೆ ಆಗ ಅದು ಅಷ್ಟು ಪ್ರಬಲವಾಗಿ ಪರಿಣಾಮ ಬೀರುತ್ತಿರಲಿಲ್ಲ. ನಂತರ ಭಿಕ್ಷುವು ಸಹಜವಾಗಿ ನಿಮಿತ್ತ (ಚಿಹ್ನೆ)ಗಳನ್ನು ಪಡೆದನು, ಧ್ಯಾನಿಸಿದನು. ಆಗ ಆತನಲ್ಲಿದ್ದ ಚಿತ್ತ ಪರಿಶುದ್ಧತೆ ಹಾಗು ವಿಶ್ಲೇಷಿಸಿಸುವಿಕೆ, ಹಾಗು ಅನಿತ್ಯ ಅರಿಯುವಂತಹ ಪ್ರಜ್ಞಾಶೀಲತೆ ಅಭಿವೃದ್ಧಿಗೊಂಡು ಸಹಾ ಅನಿಧರ್ಾರ ಸ್ಥಿತಿಯಲ್ಲಿರುತ್ತಾನೆ. ಭಗವಾನರಿಗೆ ಇದು ಪರಿವರ್ತನೆ ಮಾಡಲು ಸಕಾಲ ಎಂದು ಭಾವಿಸಿ ಅದಕ್ಕೆ ಅರ್ಹವಾದ ಗಾಥೆಯನ್ನು ನುಡಿದು ಹುರಿದುಂಬಿಸುತ್ತಾರೆ. ಕೊನೆಗೆ ಆತನು ಅರಹಂತನಾಗುತ್ತಾನೆ. ಆತನ ಚಿತ್ತವು ಅಂಟಿಕೊಳ್ಳುವಿಕೆಯಿಂದ ಬಿಡುಗಡೆ ಪಡೆಯಿತು.
                ನೊರೆಯಂತೆ ದೇಹವು ಸದಾ ಪರಿವರ್ತನೆ ಆಗುತ್ತಲೆ ಇರುತ್ತವೆ. ಅದು ಸದಾ ರೋಗದೆಡೆಗೆ, ಮುಪ್ಪಿನೆಡೆಗೆ, ಮರಣದೆಡೆಗೆ ಚಲಿಸುತ್ತಾ ಪರಿವರ್ತನೆ ಹೊಂದುತ್ತಿರುತ್ತದೆ. ಮರೀಚಿಕೆಯಂತೆ ಅದು ಆತ್ಮರಹಿತವಾಗಿದೆ. ನಮ್ಮದಲ್ಲದ್ದಾಗಿದೆ, ನಾನುರಹಿತವಾಗಿದೆ. ಇವೆಲ್ಲವನ್ನು ಸಾಧಕ ಅರಿತಾಗ ಮಾರನ (ಅಜ್ಞಾನದ) ವಶಕ್ಕೆ ಸಿಲುಕುವುದಿಲ್ಲ, ದೇಹಾಸಕ್ತಿ, ಭೋಗಾಭಿಲಾಷೆ, ದೇಹದ ಮಮತ್ವಗಳೆಂಬ ಪುಷ್ಪ ಬಾಣಗಳನ್ನು ಆತನು ಪ್ರಜ್ಞಾಯುಧದಿಂದ ಕತ್ತರಿಸಿ. ಮರಣವನ್ನು (ಮೃತ್ಯುರಾಜ) ಜಯಿಸಿ ಅಮರತ್ವ ಪ್ರಾಪ್ತಿಮಾಡುತ್ತಾರೆ. ರೀತಿಯಲ್ಲಿ ಆತನು ಮೃತ್ಯುವಿನ ಕಣ್ಣಿಗೆ ಬೀಳುವುದಿಲ್ಲ

No comments:

Post a Comment